ತುಮಕೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಆತನ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಯ ಮರ್ಡರ್ ಮಾಡಿರುವ ಘಟನೆ ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಕಾಡುಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ಶಂಕರಮೂರ್ತಿ(50) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಪತ್ನಿ ಸುಮಂಗಳ, ಪ್ರಿಯಕರ ನಾಗರಾಜು ಎಂಬುವನಿಂದ ಕೃತ್ಯ ಜೂನ್ 24ರಂದು ನಡೆದಿದೆ.
ಶಂಕರಮೂರ್ತಿ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ದೊಣ್ಣೆಯಿಂದ ಹೊಡೆದು, ಕುತ್ತಿಗೆ ಮೇಲೆ ಕಾಲಿಟ್ಟು ಭೀಕರವಾಗಿ ಕೊಂದು ಹಾಕಲಾಗಿತ್ತು.
ತಿಪಟೂರು ನಗರದ ಕಲ್ಪತರು ಕಾಲೇಜಿನ ಗರ್ಲ್ಸ್ ಹಾಸ್ಟೆಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಸುಮಂಗಳ, ಪಕ್ಕದ ಕರಡಾಳುಸಂತೆ ಗ್ರಾಮದ ನಾಗರಾಜು ಜೊತೆ ಪ್ರೀತಿಸುತ್ತಿದ್ದಳು.
ಕೊಲೆ ಮಾಡಿದ ಬಳಿಕ ಮೃತದೇಹವನ್ನ ಗೋಣಿಚೀಲದಲ್ಲಿ ತುಂಬಿ 30 ಕಿಲೋಮೀಟರ್ ದೂರ ಸಾಗಿಸಿರುವ ದುಷ್ಕರ್ಮಿಗಳು, ತುರುವೇಕೆರೆ ತಾಲೂಕಿನ ದಂಡನಿಶಿವರ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ಬಾವಿಯೊಂದಕ್ಕೆ ಎಸೆದಿದ್ದರು.
ಪೊಲೀಸ್ ಠಾಣೆಯಲ್ಲಿ ಮೊದಲಿಗೆ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದ ನೊಣವಿನಕೆರೆ ಪೊಲೀಸರು, ಅನುಮಾನಗೊಂಡು ಬಳಿಕ ಶಂಕರಮೂರ್ತಿಯ ತೋಟದ ತೆರಳಿ ಪರಿಶೀಲಿಸಿದ್ದರು.
ಅಲ್ಲಿ ಶಂಕರಮೂರ್ತಿ ಮಲಗಿದ್ದ ಹಾಸಿಗೆ ಮೇಲೆ ಖಾರದ ಪುಡಿ ಹಾಗೂ ವ್ಯಕ್ತಿಯೊಬ್ಬರನ್ನ ಎಳೆದಾಡಿದ್ದ ಗುರುತು ಪೊಲೀಸ ರಿಗೆ ಪತ್ತೆಯಾಗಿತ್ತು. ಅನುಮಾನ ಬಂದು ತನಿಖೆಯನ್ನ ಪೊಲೀಸ್ರು ಚುರುಕುಗೊಳಿಸಿದ್ದರು.
ಪತ್ನಿ ಸುಮಂಗಳನ್ನ ವಿಚಾರಣೆ ನಡೆಸಿ ಸಿಡಿಆರ್ ಪರಿಶೀಲಿಸಿದ್ದ ವೇಳೆ ಕೃತ್ಯ ಬಯಲಿಗೆಬಂದಿದೆ. ಈ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW