ಔರಾದ: ನೂತನವಾಗಿ ಸಂತಪುರ ಆಸ್ಪತ್ರೆಗೆ ಆಗಮಿಸಿರುವ ಡಾ.ಸಿದ್ದಾರೆಡ್ಡಿ ಅವರಿಗೆ ಭೀಮವಾದ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ತುಕಾರಾಮ ಹಸನ್ಮುಖಿ, ಆರೋಗ್ಯ ಸೇವೆ ಎಂದರೆ ಮಾನವೀಯತೆಗೂ, ಸಮಾಜ ಸೇವೆಗೂ ಸಮಾನ. ನಮ್ಮ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ನಿಮ್ಮಂತಹ ಜ್ಞಾನ, ಅನುಭವ ಹಾಗೂ ಸೇವಾ ಮನೋಭಾವವುಳ್ಳ ವೈದ್ಯರು ಸಂತಪುರ ಆಸ್ಪತ್ರೆಗೆ ಆಗಮಿಸಿರುವುದು ನಮಗೆ ಸಂತಸದ ವಿಷಯ ಎಂದರು.
ಇದೇ ವೇಳೆ ಭೀಮವಾದ ದಸಂಸ ತಾಲೂಕು ಸಂಚಾಲಕ ತುಕಾರಾಮ ಹಸನ್ಮುಖಿ, ಮಲ್ಲಿಕಾರ್ಜುನ ಜೋನ್ನೇಕೆರಿ, ಕಾಶೀನಾಥ ಗಾಯಕವಾಡ, ಅನಿಲ ಬಿರಾದರ, ಓಂಕಾರ್ ಮೇತ್ರೆ, ರತಿಕಾಂತ್ ಪಾಟೀಲ್, ಸಂಜುಕುಮಾರ್ ಸೇಂಬೆಳ್ಳೆ ಇದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC