ತುಮಕೂರು: ಕರ್ನಾಟಕ ಲೋಕಸೇವಾ ಆಯೋಗವು ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಚಿತ್ರಕಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪದವೀಧರ 230 ಹುದ್ದೆಗಳು ಮತ್ತು ಡಿಪ್ಲೋಮೋ 230 ಹುದ್ದೆಗಳು, ಒಟ್ಟು 460 ಹುದ್ದೆಗಳ “ಅಂತಿಮ ಆಯ್ಕೆಪಟ್ಟಿ” ಯನ್ನು ಜರೂರಾಗಿ ಪ್ರಕಟಿಸುವ ಮೂಲಕ ಅರ್ಹ ಚಿತ್ರಕಲಾ ಪದವಿ ಮತ್ತು ಚಿತ್ರಕಲಾ ಡಿಪ್ಲೋಮಾ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಬೇಕು ಎಂದು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ ಒತ್ತಾಯಿಸಿದೆ.
ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಸರ್ಕಾರದ ಒಂದು ಅಂಗಸಂಸ್ಥೆಯಾದ “ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ”ವು ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ದಿನಾಂಕ:03-11-2016 ರಲ್ಲಿ ಚಿತ್ರಕಲಾ ಪದವೀಧರರಿಗೆ 230, ಚಿತ್ರಕಲಾ ಡಿಪ್ಲೋಮಾದವರಿಗೆ 230, ಒಟ್ಟು 460 ಚಿತ್ರಕಲಾ ಶಿಕ್ಷಕರ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗ ದ ಮೂಲಕ ಅರ್ಜಿ ಯನ್ನು ಕರೆದಿತ್ತು. ಅರ್ಜಿಗಳನ್ನು ಸ್ವೀಕರಿಸಿದ ನಂತರ ಅರ್ಹತಾ ಪಟ್ಟಿಯನ್ನು ಪ್ರಕಟಿಸಿ ದಾಖಲೆಗಳನ್ನು ಪರಿಶೀಲಿಸಿತ್ತು. ನಂತರ ದಿನಾಂಕ:27-10-2021 ರಂದು ಚಿತ್ರಕಲಾ ಶಿಕ್ಷಕರು ಪದವೀಧರ 230 ಹುದ್ದೆಗಳ “ತಾತ್ಕಾಲಿಕ ಆಯ್ಕೆ ಪಟ್ಟಿ”ಯನ್ನು ಮತ್ತು ದಿನಾಂಕ:25-11-2021 ರಂದು ಚಿತ್ರಕಲಾ ಶಿಕ್ಷಕರು ಡಿಪ್ಲೋಮೋದವರ 230 ಹುದ್ದೆಗಳ “ತಾತ್ಕಾಲಿಕ ಆಯ್ಕೆಪಟ್ಟಿ”ಯನ್ನು ಪ್ರಕಟಿಸಿದ ಕರ್ನಾಟಕ ಲೋಕಸೇವಾ ಆಯೋಗವು ಆಕ್ಷೇಪಣೆ ಸಲ್ಲಿಸುವವರಿಗೆ 7 ದಿನ ಕಾಲಾವಕಾಶ ನೀಡಿತ್ತು. ಆದರೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದೇ ವಿಳಂಬ ವಾಗಿದೆ ಎಂದು ಸಂಘ ಹೇಳಿದೆ.
“ಅಂತಿಮ ಆಯ್ಕೆಪಟ್ಟಿ” ಪ್ರಕಟಿಸುವ ಕಾರ್ಯ ಪ್ರಕ್ರಿಯೆಯು ಮಂದಗತಿಯಲ್ಲಿ ತುಂಬಾ ವಿಳಂಬವಾಗುತ್ತಿದೆ. ಆಯ್ಕೆಪಟ್ಟಿಯನ್ನು ಅತಿ ತುರ್ತಾಗಿ ಪ್ರಕಟಿಸಲು ಕರ್ನಾಟಕ ಲೋಕಸೇವಾ ಆಯೋಗವು ಮುಂದಾಗಬೇಕು ಅರ್ಹ ಚಿತ್ರಕಲಾ ಪದವಿ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ತುಮಕೂರಿನ “ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ ಒತ್ತಾಯಿಸಿದೆ.
ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ ಅಧ್ಯಕ್ಷರಾದ ನಟರಾಜು.ಜಿ.ಎಲ್, ಪ್ರಧಾನ ಕಾರ್ಯದರ್ಶಿಯಾದ ಯತೀಶ್ ಕುಮಾರ್, ಉಪಾಧ್ಯಕ್ಷರಾದ ಪವನ್.ಆರ್. ಹಾಗೂ ಸಂಘದ ಪದಾಧಿಕಾರಿಗಳು, ಕಲಾವಿದರಾದ ಮಾಲತೇಶ್ ಎನ್.ಎಂ, ಅನೀಲ್ ಕುಮಾರ್ ರವರು ಚಿತ್ರಕಲಾ ಪದವಿ ಮತ್ತು ಡಿಪ್ಲೋಮಾ ಅಭ್ಯರ್ಥಿಗಳ ಪರವಾಗಿ ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು. ಇವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ವರದಿ: ಯತೀಶ್ ಕುಮಾರ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB