nammatumakuru

    Subscribe to Updates

    Get the latest creative news from FooBar about art, design and business.

    What's Hot

    ತೋವಿನಕೆರೆ ಗ್ರಾ.ಪಂ. ಬಿಲ್‌ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾ ಲೋಕಾಯುಕ್ತ ಬಲೆಗೆ

    October 16, 2025

    21 ಗ್ರಾಮ ದೇವತೆಗಳ ಉತ್ಸವ:  ಅದ್ದೂರಿಯಾಗಿ ನಡೆದ ದೊಡ್ಡಮ್ಮದೇವಿ ಮಂಡಲ ಪೂಜೆ

    October 16, 2025

    ನೂತನ ಔರಾದ್ ಕ್ರೀಡಾಂಗಣಕ್ಕೆ ಅಮರೇಶ್ವರ ಹೆಸರಿಡಿ: ಮುಖ್ಯಮಂತ್ರಿಗೆ ಜಾನಸನ್ ಘೋಡೆ ಮನವಿ

    October 16, 2025
    Facebook Twitter Instagram
    ಟ್ರೆಂಡಿಂಗ್
    • ತೋವಿನಕೆರೆ ಗ್ರಾ.ಪಂ. ಬಿಲ್‌ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾ ಲೋಕಾಯುಕ್ತ ಬಲೆಗೆ
    • 21 ಗ್ರಾಮ ದೇವತೆಗಳ ಉತ್ಸವ:  ಅದ್ದೂರಿಯಾಗಿ ನಡೆದ ದೊಡ್ಡಮ್ಮದೇವಿ ಮಂಡಲ ಪೂಜೆ
    • ನೂತನ ಔರಾದ್ ಕ್ರೀಡಾಂಗಣಕ್ಕೆ ಅಮರೇಶ್ವರ ಹೆಸರಿಡಿ: ಮುಖ್ಯಮಂತ್ರಿಗೆ ಜಾನಸನ್ ಘೋಡೆ ಮನವಿ
    • ಗೂಡ್ಸ್‌ ಆಟೋ ಪಲ್ಟಿಯಾಗಿ 15 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ: ಆ್ಯಂಬುಲೆನ್ಸ್ ನಾಪತ್ತೆ!
    • ಎಲೆಕ್ಟ್ರೋಕೆಮಿಸ್ಟ್ರಿ ಕುರಿತು ವಿಶೇಷ ಉಪನ್ಯಾಸ
    • ಮನುವಾದಿಗಳ ಸಂಚಿನಿಂದ ಸಮಾಜ ಬದಲಾವಣೆ ಸಾಧ್ಯವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
    • ಪಕ್ಷನಿಷ್ಠೆಗೆ ಜೈಲುವಾಸ ಆಯ್ಕೆ ಮಾಡಿಕೊಂಡೆ: ರಹಸ್ಯ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್
    • ಸಂತೆ ಮೈದಾನದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ | 6ನೇ ದಿನವೂ ರೈತರ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪರಿಶಿಷ್ಟರ ಸಮಸ್ಯೆ ಆಲಿಸದ ಡಿವೈಎಸ್‌ ಪಿ, ಪಿಎಸ್ ಐ: ಕುಂದುಕೊರತೆ ಸಭೆಗೆ ಆಗಮಿಸಿದ ಎಎಸ್ ಪಿ
    ಕುಣಿಗಲ್ October 15, 2025

    ಪರಿಶಿಷ್ಟರ ಸಮಸ್ಯೆ ಆಲಿಸದ ಡಿವೈಎಸ್‌ ಪಿ, ಪಿಎಸ್ ಐ: ಕುಂದುಕೊರತೆ ಸಭೆಗೆ ಆಗಮಿಸಿದ ಎಎಸ್ ಪಿ

    By adminOctober 15, 2025No Comments2 Mins Read
    kunigal

    ಕುಣಿಗಲ್‌: ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪುರುಷೋತ್ತಮ್ ಮಂಗಳವಾರ ಕುಣಿಗಲ್ ಪೊಲೀಸ್ ಠಾಣೆಗೆ ಬಂದು ಪರಿಶಿಷ್ಟರ ಕುಂದುಕೊರತೆ ಆಲಿಸಿದರು.

    ಡಿವೈಎಸ್‌ ಪಿ ಮತ್ತು ಅಮೃತೂರು ಪಿಎಸ್‌ ಐ ದಲಿತರ ಸಮಸ್ಯೆಗಳಿಗೆ ಸ್ಪಂದಿಸದೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಭಾನುವಾರ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟರ ಕುಂದುಕೊರತೆ ಸಭೆಯನ್ನು ದಲಿತ ಮುಖಂಡರು ಬಹಿಷ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ ಪಿ ಭೇಟಿ ನೀಡಿದ್ದರು.


    Provided by
    Provided by
    Provided by

    ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರು, ಇತ್ತೀಚೆಗೆ ತಾಲ್ಲೂಕಿನ ಹೆಗ್ಗಡತಿಹಳ್ಳಿ, ಚಾಕೇನಹಳ್ಳಿ, ಕೊಡವತ್ತಿ, ಹೊನ್ನಮಾಚನಹಳ್ಳಿ ಮತ್ತು ವಾಣಿಗೆರೆಗಳಲ್ಲಿ ನಡೆದಿರುವ ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಡಿವೈಎಸ್‌ ಪಿ ಓಂಪ್ರಕಾಶ್ ಮತ್ತು ಅಮೃತೂರು ಪಿಎಸ್‌ ಐ ವರ್ತನೆಗಳನ್ನು ಖಂಡಿಸಿ ಮಾಹಿತಿ ನೀಡಿದರು.

    ಪೊಲೀಸ್ ಅಧಿಕಾರಿಗಳು ದಲಿತರೊಂದಿಗೆ ಸೌಜನ್ಯದಿಂದ ವರ್ತಿಸದೆ, ಪೂರ್ವಾಗ್ರಹ ಪೀಡಿತರಾಗಿ ವರ್ತಿಸುತ್ತಿದ್ದಾರೆ. ನ್ಯಾಯ ಕೇಳಲು ಹೋದವರಿಗೆ ಬೆದರಿಕೆ ಹಾಕಿ ಠಾಣೆಯಿಂದ ಹೊರಗಟ್ಟುತ್ತಿದ್ದಾರೆ ಎಂದು ದೂರಿದರು.

    ಸಮಸ್ಯೆಗಳನ್ನು ಆಲಿಸಿದ ಎಎಸ್‌ ಪಿ ಪುರುಷೋತ್ತಮ್, ಕೆಳ ಹಂತದ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ತೋರದ ಕಾರಣ ಸಮಸ್ಯೆಗಳು ಹೆಚ್ಚಾಗಿದೆ. ಇನ್ನೂ ಡಿವೈಎಸ್‌ ಪಿ ಸ್ಥಳಗಳಿಗೆ ತೆರಳಿ, ಸಮಸ್ಯೆಗಳನ್ನು ಅರಿತು ಕಾರ್ಯನಿರ್ವಹಿಸಿದಾಗ ಸಮಸ್ಯೆಗಳು ಕಡಿಮೆಯಾಗುತ್ತದೆ. ಜನಸ್ನೇಹಿ ವರ್ತನೆ ರೂಢಿಸಿಕೊಳ್ಳಬೇಕು. ದಲಿತ ಮುಖಂಡರು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಲ್ಲಿರುವ ಪರಿಶಿಷ್ಟರ ಕಾಲೋನಿಗಳಿಗೆ ತೆರಳಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ಕಾನೂನು ಇರುವುದೇ ಸಮಸ್ಯೆಗಳನ್ನು ಬಗೆಹರಿಸಿ ಶಾಂತಿ, ವ್ಯವಸ್ಥಿತ ಸಮಾಜ ನಿರ್ಮಾಣಕ್ಕೆ ಎಂದರು.

    ಡಿವೈಎಸ್‌ಪಿ ಓಂ ಪ್ರಕಾಶ್ ಮಾತನಾಡಿ, ಕಾನೂನು ಪ್ರಕಾರ ಕಾರ್ಯನಿರ್ವಹಿಸುವಾಗ ಕೆಲವರಿಗೆ ಅನುಕೂಲವಾಗಿದೆ. ಕೆಲವರಿಗೆ ಅನಾನುಕೂಲವಾಗಿದೆ ಎಂದರು.

    ತಾಲ್ಲೂಕಿನಲ್ಲಿ ಹತ್ತುಹದಿನೈದು ವರ್ಷದಿಂದ ಬೇರುಬಿಟ್ಟಿರುವ ಪೊಲೀಸರನ್ನು ಮೊದಲು ವರ್ಗಾವಣೆ ಮಾಡಿ ಎಂದು ದಲಿತ ಮುಖಂಡ ಬಿ.ಜಿ.ಶ್ರೀನಿವಾಸ್‌ ಆಗ್ರಹಿಸಿದರು.

    ಸಿಪಿಐ ಮಾಧ್ಯನಾಯಕ್‌, ನವೀನ್ ಗೌಡ ಹಾಗೂ ದಲಿತ್ ನಾರಾಯಣ್, ರಾಮಲಿಂಗಯ್ಯ, ರಾಜು, ಮಡಕೆಹಳ್ಳಿ ರಾಮಕೃಷ್ಣ, ಪ್ರಶಾಂತ್ಕವಿ, ಬಿ.ಜಿ ಗಂಗಾಧರ್, ರಾಮಚಂದ್ರಯ್ಯ ಶ್ರೀನಿವಾಸ್‌ ಹಾಜರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಮಾರ್ಕೋನಹಳ್ಳಿ ಜಲಾಶಯದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವ ಪತ್ತೆ: ಮತ್ತಿಬ್ಬರ ಶವಕ್ಕಾಗಿ ಮುಂದುವರಿದ ಶೋಧ

    October 9, 2025

    ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ: ಆರೋಪಿಯ ಬಂಧನ

    October 8, 2025

    ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ:  ಇಬ್ಬರು ಸ್ಪಾಟ್ ಡೆತ್, ವೃದ್ಧೆಗೆ ಗಂಭೀರ ಗಾಯ

    October 7, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ತೋವಿನಕೆರೆ ಗ್ರಾ.ಪಂ. ಬಿಲ್‌ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾ ಲೋಕಾಯುಕ್ತ ಬಲೆಗೆ

    October 16, 2025

    ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಗ್ರಾಮದ ವಾಸಿಯಾದ ಟಿ.ಕೆ.ಮೊಹಮ್ಮದ್ ಅದೇ ಗ್ರಾಮದ ಮಂಜಮ್ಮ ಎಂಬುವವರ ಹೆಸರಿನಲ್ಲಿದ್ದ ಮನೆ…

    21 ಗ್ರಾಮ ದೇವತೆಗಳ ಉತ್ಸವ:  ಅದ್ದೂರಿಯಾಗಿ ನಡೆದ ದೊಡ್ಡಮ್ಮದೇವಿ ಮಂಡಲ ಪೂಜೆ

    October 16, 2025

    ನೂತನ ಔರಾದ್ ಕ್ರೀಡಾಂಗಣಕ್ಕೆ ಅಮರೇಶ್ವರ ಹೆಸರಿಡಿ: ಮುಖ್ಯಮಂತ್ರಿಗೆ ಜಾನಸನ್ ಘೋಡೆ ಮನವಿ

    October 16, 2025

    ಗೂಡ್ಸ್‌ ಆಟೋ ಪಲ್ಟಿಯಾಗಿ 15 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ: ಆ್ಯಂಬುಲೆನ್ಸ್ ನಾಪತ್ತೆ!

    October 16, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.