ಪಾವಗಡ: ಶ್ರೀ ರಾಮಕೃಷ್ಣ ಸೇವಾಶ್ರಮ , ಪಾವಗಡ ಹಾಗೂ ಇನ್ಫೋಸಿಸ್ ಫೌಂಡೇಶನ್ ಪ್ರವಾಹ ಪರಿಹಾರ ಕಾರ್ಯದ ಮುಂದುವರಿ ಭಾಗವಾಗಿ, ಲಕ್ಷಾಂತರ ರೂಪಾಯಿ ಬೆಲೆಬಾಳುವ ವಿದ್ಯಾಭ್ಯಾಸದ ಸಾಮಗ್ರಿಗಳನ್ನು ಆಂಧ್ರಪ್ರದೇಶದ ಕಡಪ, ಚಿತ್ತೂರ್, ತಿರುಪತಿ ಪ್ರವಾಹದ ಪ್ರದೇಶಗಳಿಗೆ ನೀಡಲಾಯಿತು.
ಸರಿಸುಮಾರು 126 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ಸಾಮಗ್ರಿಗಳನ್ನು ವಿತರಿಸಲು ಏರ್ಪಾಡು ಮಾಡಲಾಗಿದೆ. ಕಂಪ್ಯೂಟರ್ ಗಳು, ನೋಟ್ ಬುಕ್ಸ್, ಮೇಜು, ಬೆಂಚುಗಳು, ಅಡುಗೆಪಾತ್ರೆಗಳು, ನೀರಿನ ಬಾಟಲಿಗಳು ಸೇರಿದಂತೆ ನಾನಾ ರೀತಿಯ ಶಿಕ್ಷಣ ಪರಿಕರಗಳನ್ನು ಎರಡು ಬೃಹತ್ ಲಾರಿಗಳಲ್ಲಿ ರವಾನಿಸಲಾಯಿತು.
ಸ್ವಾಮಿ ಜಪಾನಂದಜೀ ರವರ ನೇತೃತ್ವದಲ್ಲಿ ಈ ಯೋಜನೆ ಕಳೆದ ಹಲವಾರು ತಿಂಗಳುಗಳಿಂದ ಏಕ ಪ್ರಕಾರವಾಗಿ ನಡೆಯುತ್ತಿದೆ. ಇಂದು ಎಲ್ಲಾ ಪರಿಕರಗಳನ್ನು ಹೊತ್ತ ವಾಹನ ಕಡಪದ ಕಡೆಗೆ ಹೊರಟಿತು .
ಈ ಸಂದರ್ಭದಲ್ಲಿ ಆಶ್ರಮದ ಸೇವಾವೃತ್ತಿಗಳಾದ ಸುಧೇಶಬಾಬುಜಿ, ಲೋಕೇಶ್ ದೇವರಾಜ್ ಹಾಗೂ ಬೆಂಗಳೂರ ಶ್ರೀ ರಾಮಕೃಷ್ಣ ಮಠದ ಸ್ವಯಂ ಸೇವಕರು ಭಾಗವಹಿಸಿದ್ದರು .
ವರದಿ: ನಂದೀಶ, ಕೊತ್ತೂರು ನಿಡಗಲ್ ಹೋಬಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB