nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು

    August 2, 2026

    ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸ್ತನ್ಯಪಾನ ಅತ್ಯಗತ್ಯ: ಸಿ. ದೀಪಾ ಕರೆ

    August 2, 2026

    ತುಮಕೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಯಶಸ್ವಿ ತೆರೆ

    August 2, 2026
    Facebook Twitter Instagram
    ಟ್ರೆಂಡಿಂಗ್
    • ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು
    • ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸ್ತನ್ಯಪಾನ ಅತ್ಯಗತ್ಯ: ಸಿ. ದೀಪಾ ಕರೆ
    • ತುಮಕೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಯಶಸ್ವಿ ತೆರೆ
    • ತುಮಕೂರು: 30ನೇ ವಾರ್ಡಿನ ಗಾರೇನರಸಯ್ಯ ನಕಟ್ಟೆ ಸ್ವಚ್ಛತಾ ಕಾರ್ಯ: ಪಾಲಿಕೆ ಸಿಬ್ಬಂದಿ, ನಾಗರಿಕ ಹಿತರಕ್ಷಣಾ ಸಮಿತಿ ಭಾಗಿ
    • ಲಿಂಕ್ ಕೆನಾಲ್, ಭೂಸ್ವಾಧೀನ ವಿರೋಧಿಸಿ ಆ. 6ರಿಂದ ಮೂರು ದಿನಗಳ ಸತ್ಯಾಗ್ರಹ: ಎಐ ಡೇಟಾ ಕೇಂದ್ರಗಳಿಂದ ಪರಿಸರ, ಉದ್ಯೋಗಕ್ಕೆ ಆತಂಕ ಆರೋಪ
    • ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಮಹಾಂತ ಶಿವಯೋಗಿ ಜಯಂತಿ ಹಾಗೂ ವ್ಯಸನ ಮುಕ್ತ ದಿನಾಚರಣೆ
    • ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ
    • ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು
    ಲೇಖನ August 2, 2026

    ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು

    By Ganesh TumkuruAugust 2, 2026No Comments4 Mins Read
    kumar pernaje.jpg

    ಹಣ್ಣು ಎಂದಾಕ್ಷಣ ಇದೀಗ ವಿದೇಶಿ ಹಣ್ಣುಗಳದ್ದೇ ಹವಾ ನಮ್ಮ ಕಾಡು ಹಣ್ಣುಗಳ ಔಷಧೀಯ ಗುಣಗಳ ಮುಂದೆ ಇದೇನು ಅಲ್ಲ ಮುಂದೊಂದು ದಿನ ಇವುಗಳ ಬಗ್ಗೆಯೂ ಆಂದೋಲನ ಮಾಡಬೇಕಾಗಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ ಹಣ್ಣುಗಳ ಒಳಗೆ ಏನು ಅಡಗಿದೆ….?

    ನಾವು ತಿನ್ನುವ ಹಣ್ಣುಗಳು ನಿಜವಾಗಿಯೂ ಸುರಕ್ಷಿತವೇ….? ಅಂದು ಹಣ್ಣು ಅದಾಗಿಯೇ ಹಣ್ಣಾಗುತ್ತಿತ್ತು ಇಂದು ಹೊಟ್ಟೆಯಲ್ಲಿ ಹುಣ್ಣಾಗುತ್ತಿವೆ ಇದೊಂದು ಕಾಡು ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು ಗೊತ್ತಿದ್ದರೆ ಹಣ್ಣಿನ ಹೆಸರಿನ ಜೊತೆ ತಿಂದ ಅನುಭವವನ್ನು ಹಂಚಿಕೊಳ್ಳಿ.

    ಬದುಕಿನಲ್ಲಿ ಎಲ್ಲಾ ಯಶಸ್ಸಿಗೂ ಮೂರು ಔಷಧಿಗಳಿವೆ ಒಂದು ವಿದ್ಯೆ ಇನ್ನೊಂದು ದುಡಿಮೆ ಮತ್ತೊಂದು ತಾಳ್ಮೆ ಜೀವನದ ಖುಷಿಯನ್ನು ನಾವು ನಮ್ಮಲ್ಲೇ ಕಂಡುಕೊಳ್ಳಬೇಕು ಇದು ಇನ್ನೆಲ್ಲೋ ಸಿಗುವುದಿಲ್ಲ ಯಾವಾಗಲೂ ಎಲ್ಲಾ ನೋವನ್ನು ದೇವರು ನಮಗೆ ಯಾಕೆ ದುಃಖ ನೀಡುತ್ತಾನೆ ಎಂದು ನಿಜ ಹೇಳಬೇಕೆಂದರೆ ಒಂದು ವಸ್ತುವಿನ ಖುಷಿಯ ಕೀಲಿ ಕೈ ಜೀವನ ನಮ್ಮಲ್ಲೇ ಇರಬೇಕು.

    ಇದು ಹುಳಿ ಹಣ್ಣು ಇದರಲ್ಲಿ ಸಿ — ವಿಟಮಿನ್ ಹೇರಳವಾಗಿದ್ದು ಕಣ್ಣಿನ ದೃಷ್ಟಿ ಬಗ್ಗೆ ಉತ್ತಮ ಔಷಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವು ಫೈಬರ್ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಅತ್ಯಂತ ಹೆಚ್ಚಿಸುತ್ತದೆ.

    ಚಿಕ್ಕ ಮಕ್ಕಳಿಗಂತೂ ಅತ್ಯಂತ ರುಚಿಕರ ಹಣ್ಣು, ರಸ್ತೆ ಬದಿ ಶಾಲಾ ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಈ ಗಿಡಗಳನ್ನು ನೆಟ್ಟು ಹಣ್ಣಿನ ಗೊಂಚಲು ಗೊಂಚಲು ಮರ ತುಂಬಾ ಸೆರಗು ಹೊದ್ದಂತೆ ಕಾಣುವುದೇ ಚಂದ ಒಂದು ಗೊಂಚನಲ್ಲಿ 25 ರಿಂದ 50 ಹಣ್ಣುಗಳನ್ನು ಹೊಂದಿದ್ದು ಅತ್ಯಾಕರ್ಷಕ ಬಣ್ಣವೂ ಕೂಡ ಆಗಿದೆ ಇದು ಬೀಮ್ ಪುರುಳಿ ಅಂಜೂರ ಅತ್ತಿ ಹಣ್ಣುಗಳಂತೆ ಇದೊಂದು ವಿಧದ ಕಾಡು ಹಣ್ಣು, ಕಡಿಮೆ ಕ್ಯಾಲರಿ ಹೊಂದಿದ್ದು ತೂಕವನ್ನು ಇಳಿಸಲು ಸಹಾಯವಾಗುತ್ತದೆ ಅಲ್ಲದೆ ಸಾರು, ಉಪ್ಪಿನಕಾಯಿ ಮುಂತಾದ ಆಹಾರಗಳನ್ನು ತಯಾರಿಸಲಾಗುತ್ತಿದ್ದು ಪೊಟ್ಯಾಶಿಯಂ ಚೆನ್ನಾಗಿ ಕೊಟ್ಟಾಗ ಇನ್ನಷ್ಟು ಸಿಹಿ ಗುಣವನ್ನು ಹೊಂದುತ್ತದೆ.

    ಈ ಅಪರೂಪದ ಕಾಡು ಹಣ್ಣನ್ನು ಕನ್ನಡದಲ್ಲಿ ಕೋಳಿಜುಟ್ಟು ಹಣ್ಣು (Koli juttu hannu), ಕೋಳಿ ಕುಕ್ಕೆ (Koli Kukke) ಅಥವಾ ಮೈಂದಪುಳಿ (Mayndapuli) ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು Baccaurea courtallensis. ಮಲಯಾಳಂನಲ್ಲಿ ಇದನ್ನು ಮೂಟ್ಟಿಪಳಂ (Mootipazham) ಅಥವಾ ಮೂಟ್ಟಿಪುಳಿ ಎಂದು ಕರೆಯಲಾಗುತ್ತದೆ. ಇದು ಭಾರತದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಮಾತ್ರ ಕಂಡುಬರುವ ಒಂದು ವಿಶಿಷ್ಟವಾದ ಹಣ್ಣಿನ ತಳಿಯಾಗಿದೆ. ಈ ಮರದ ವಿಶೇಷತೆಯೆಂದರೆ ಇದರ ಹಣ್ಣುಗಳು ಕೊಂಬೆಗಳಲ್ಲಲ್ಲದೆ, ನೇರವಾಗಿ ಮರದ ಕಾಂಡದ ಬುಡದಲ್ಲಿ ಗೊಂಚಲು ಗೊಂಚಲಾಗಿ ಬೆಳೆಯುತ್ತವೆ.

    ಪಶ್ಚಿಮ ಘಟ್ಟಗಳ ಅಪರೂಪದ ಕಾಡು ಹಣ್ಣಿನ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಬೆಳೆಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಮಣ್ಯ ಸಮೀಪ ಬಿಳಿ ನೆಲೆಯ ವಾಸ್ತು ತಜ್ಞ ಎಸ್. ಪ್ರಸಾದ್ ಮುನಿಯಂಗಳವರ ತೋಟದಲ್ಲಿ ನೂರಕ್ಕೂ ಮಿಕ್ಕಿ ಹಣ್ಣಿನ ಗಿಡಗಳನ್ನು ನರ್ಸರಿಯಿಂದ ತಂದು ಗಿಡಕ್ಕೆ ಹತ್ತು ನಡಿ ಮೂರು ವರ್ಷಗಳ ಹಿಂದೆ ನಾಟಿ ಮಾಡಿದ್ದರು. ಹೆಚ್ಚಿನ ಆರೈಕೆ ಬೇಡದೆ ಇದ್ದು ಚೆನ್ನಾಗಿ ಬೆಳೆದು ಇದೀಗ ಫಲ ಭರಿತ ಹಣ್ಣುಗಳು ಜೂನ್ ಜುಲೈ ತಿಂಗಳಲ್ಲಿ ಕಾಣಿಸಿಕೊಂಡಿದೆ. ನೇರಳೆ ಹಣ್ಣಿನಂತೆ ಇದನ್ನು ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಣ್ಣು ಇದಾಗಿದ್ದು.ಇದನ್ನು ಎಲ್ಲೂ ಇಷ್ಟೊಂದು ಮಟ್ಟಕ್ಕೆ ಬೆಳೆಯಲಿಲ್ಲ

    ಕಾಡಲ್ಲಷ್ಟೇ ಇದು ಇದ್ದು ಇದೀಗ ನಾಡಿಗೆ ಬಂದು ಫಲವನ್ನು ಕಂಡಿದೆ.
    ನಮ್ಮ ಪಶ್ಚಿಮ ಘಟ್ಟಗಳು ಅಪರೂಪದ ಜೀವವೈವಿಧ್ಯಗಳ ತವರೂರು. ಇಲ್ಲಿನ ದಟ್ಟವಾದ ಮಳೆಕಾಡುಗಳ ನಡುವೆ ಸಂಚರಿಸುವಾಗ ಪ್ರಕೃತಿಯ ಅದೆಷ್ಟೋ ಅದ್ಭುತಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಅಂತಹ ವಿಸ್ಮಯಗಳಲ್ಲಿ ಅತ್ಯಂತ ಆಕರ್ಷಕ ಹಾಗೂ ಅಪರೂಪದ್ದು

    ಕಾಂಡದ ತುಂಬ ಹಣ್ಣುಗಳ ವೈಭವ!

    ಸಾಮಾನ್ಯವಾಗಿ ಗಿಡ-ಮರಗಳು ಕೊಂಬೆಗಳಲ್ಲಿ, ಚಿಗುರೆಲೆಗಳ ನಡುವೆ ಹೂ ಬಿಟ್ಟು ಕಾಯಿ ಕಚ್ಚುವುದನ್ನು ನಾವು ನೋಡಿದ್ದೇವೆ. ಆದರೆ ಕೋಳಿ ಕುಕ್ಕೆ ಮರದ ವೈಶಿಷ್ಟ್ಯವೇ ಬೇರೆ! ಸಸ್ಯವಿಜ್ಞಾನದಲ್ಲಿ ‘ಕೌಲಿಫ್ಲೋರಸ್’ (Cauliflorous) ಎಂದು ಕರೆಯಲಾಗುವ ಈ ಪ್ರಕ್ರಿಯೆಯಲ್ಲಿ, ಹಣ್ಣುಗಳು ಕೊಂಬೆಗಳಲ್ಲಲ್ಲದೆ ನೇರವಾಗಿ ಮರದ ಪ್ರಮುಖ ಕಾಂಡದ ಮೇಲೆಯೇ ಬಿಡುತ್ತವೆ.

    ಮಧ್ಯಮ ಗಾತ್ರದಲ್ಲಿ ಅಂದರೆ ಸುಮಾರು ೧೦ ರಿಂದ ೧೮ ಮೀಟರ್ಗಳಷ್ಟು ಎತ್ತರಕ್ಕೆ ಬೆಳೆಯುವ ಈ ಮರದ ಬೂದು ಬಣ್ಣದ ತೊಗಟೆಯ ಮೇಲೆ ಸಣ್ಣ ಸಣ್ಣ ಗಂಟುಗಳಂತಹ ರಚನೆಗಳಿರುತ್ತವೆ. ಆಗಸ್ಟ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಈ ಮರಗಳು ಹೂ ಬಿಡಲು ಆರಂಭಿಸುತ್ತವೆ. ಮೊದಲು ರಕ್ತಗೆಂಪು ಬಣ್ಣದ ಗಂಡು ಮತ್ತು ಹೆಣ್ಣು ಹೂವುಗಳು ಪ್ರತ್ಯೇಕವಾಗಿ ಕಾಂಡದಿಂದ ಹೊರಬರುತ್ತವೆ. ಗಂಡು ಹೂಗೊಂಚಲುಗಳು ಇಡೀ ಕಾಂಡದಾದ್ಯಂತ ಹರಡಿಕೊಂಡಿದ್ದರೆ, ಹೆಣ್ಣು ಹೂಗೊಂಚಲುಗಳು ಹೆಚ್ಚಾಗಿ ಕಾಂಡದ ಬುಡಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ನಂತರ ಇವು ದಟ್ಟವಾದ ಕ್ರಿಮ್ಸನ್ (ಗಾಢ ಕೆಂಪು) ಬಣ್ಣದ ದೊಡ್ಡ ಹಣ್ಣಿನ ಗೊಂಚಲುಗಳಾಗಿ ಬದಲಾಗಿ, ಇಡೀ ಮರದ ಬುಡವನ್ನು ಕೆಂಪು ಹಾಸಿನಂತೆ ಕಂಗೊಳಿಸುವಂತೆ ಮಾಡುತ್ತವೆ.

    ವನ್ಯಜೀವಿಗಳ ಹಸಿವು ನೀಗಿಸುವ ಮರ

    ಕೋಳಿ ಕುಕ್ಕೆ ಹಣ್ಣುಗಳು ಕೇವಲ ನೋಡಲು ಸುಂದರ ಮಾತ್ರವಲ್ಲ, ಕಾಡಿನ ಜೀವಚಕ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ಚಿಗುರೆಲೆಗಳು ಮತ್ತು ಹಣ್ಣುಗಳು ಕಾಡಿನ ಅನೇಕ ವನ್ಯಜೀವಿಗಳಿಗೆ ಪ್ರಮುಖ ಆಹಾರ. ಪಶ್ಚಿಮ ಘಟ್ಟಗಳ ವಿಶಿಷ್ಟ ಪ್ರಾಣಿಗಳಾದ ನೀಲಗಿರಿ ಲಂಗೂರ್ಗಳು, ಸಿಂಹಬಾಲದ ಕೋತಿಗಳು (Lion–tailed Macaques) ಮತ್ತು ಕಾಡಾನೆಗಳು ಈ ಮಾಗಿದ ಹಣ್ಣುಗಳನ್ನು ಅತ್ಯಂತ ಇಷ್ಟಪಟ್ಟು ತಿನ್ನುತ್ತವೆ.

    ಹುಳಿ-ಸಿಹಿಯ ರುಚಿ ಮತ್ತು ವೈದ್ಯಕೀಯ ಗುಣ

    ಮಾನವರಿಗೂ ಈ ಹಣ್ಣು ತಿನ್ನಲು ಯೋಗ್ಯವಾಗಿದೆ. ಇದರ ಗಟ್ಟಿಯಾದ ಕೆಂಪು ಸಿಪ್ಪೆಯನ್ನು ಸುಲಿದರೆ ಒಳಗೆ ಬಿಳಿ ಅಥವಾ ತಿಳಿ ಗುಲಾಬಿ ಬಣ್ಣದ ರಸಭರಿತವಾದ ತಿರುಳು (Pulp) ಸಿಗುತ್ತದೆ. ಇದು ಹುಳಿ ಮತ್ತು ಸಿಹಿಯ ಅದ್ಭುತ ಮಿಶ್ರಣದ ರುಚಿ ಹೊಂದಿರುತ್ತದೆ. ಸ್ಥಳೀಯ ಗಿರಿಜನರು ಹಾಗೂ ಮಲೆನಾಡಿನ ಜನರು ಇದನ್ನು ತಾಜಾ ಹಣ್ಣಾಗಿ ತಿನ್ನುತ್ತಾರೆ. ಇನ್ನು ಪೂರ್ತಿಯಾಗಿ ಹಣ್ಣಾಗದ ಕಾಯಿಗಳು ತೀವ್ರವಾದ ಹುಳಿ ಹೊಂದಿರುವುದರಿಂದ ಇವುಗಳಿಂದ ಸಾಂಪ್ರದಾಯಿಕ ಉಪ್ಪಿನಕಾಯಿ, ಚಟ್ನಿ ಹಾಗೂ ತಂಪು ಪಾನೀಯಗಳನ್ನು (Squash) ಸಿದ್ಧಪಡಿಸಲಾಗುತ್ತದೆ.

    ಸ್ಥಳೀಯ ಬುಡಕಟ್ಟು ವೈದ್ಯ ಪದ್ಧತಿಯಲ್ಲಿ ಈ ಮರಕ್ಕೆ ವಿಶೇಷ ಸ್ಥಾನವಿದೆ. ಇದರ ತಾಜಾ ತಿರುಳು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ, ಭೇದಿ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಮರದ ಬೂದು ಬಣ್ಣದ ತೊಗಟೆಯ ಕಷಾಯವನ್ನು ಚರ್ಮದ ಗಾಯಗಳನ್ನು ಬೇಗನೆ ಗುಣಪಡಿಸಲು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಇದರ ಬೇರುಗಳನ್ನು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (ಡಯಾಬಿಟಿಸ್) ನೈಸರ್ಗಿಕವಾಗಿ ನಿಯಂತ್ರಿಸಲು ಬಳಸುವ ಉಲ್ಲೇಖಗಳೂ ಇವೆ.

    ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ಹೆಮ್ಮೆ

    ಕೋಳಿ ಕುಕ್ಕೆ ಮರವು ಕೇವಲ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಮಳೆಕಾಡುಗಳಿಗೆ ಮಾತ್ರ ಸೀಮಿತವಾದ (Endemic) ಅಪರೂಪದ ತಳಿಯಾಗಿದೆ. ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಹಿಡಿದು ಕೇರಳ ಮತ್ತು ತಮಿಳುನಾಡಿನ ಕನ್ಯಾಕುಮಾರಿಯವರೆಗಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಾತ್ರ ಇವು ನೈಸರ್ಗಿಕವಾಗಿ ಬೆಳೆಯುತ್ತವೆ. ಸೀಮಿತ ಪರಿಸರ ಮತ್ತು ಅರಣ್ಯ ನಾಶದ ಕಾರಣದಿಂದಾಗಿ, ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘ (IUCN) ತನ್ನ ಕೆಂಪು ಪಟ್ಟಿಯಲ್ಲಿ ಇದನ್ನು ‘ಅಳಿವಿನಂಚಿನಲ್ಲಿರುವ ಹತ್ತಿರದ ತಳಿ’ (Near Threatened) ಎಂದು ವರ್ಗೀಕರಿಸಿದೆ.

    ಪ್ರಕೃತಿಯ ಈ ಅಪರೂಪದ ಕೊಡುಗೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅಪರೂಪದ ಹಣ್ಣುಗಳನ್ನು ಇಷ್ಟಪಡುವ ಕೆಲವು ಪ್ರಗತಿಪರ ರೈತರು ಇದನ್ನು ತಮ್ಮ ಮನೆಹಿತ್ತಲು ಹಾಗೂ ತೋಟಗಳಲ್ಲಿ ಬೆಳೆಸಲು ಆಸಕ್ತಿ ತೋರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಬೀಜದಿಂದ ಅಥವಾ ಕಸಿ (Grafting) ಮಾಡಿದ ಗಿಡಗಳನ್ನು ನೆಟ್ಟರೆ, ಅವು ಕಾಂಡದ ಮೇಲೆ ಹಣ್ಣು ಬಿಡಲು ಸುಮಾರು ೪ ರಿಂದ ೬ ವರ್ಷಗಳು ಬೇಕಾಗುತ್ತವೆ. ಪಶ್ಚಿಮ ಘಟ್ಟದ ಇಂತಹ ಅಪರೂಪದ ಸಸ್ಯಸಂಕುಲದ ರಕ್ಷಣೆ ಅಗತ್ಯವಾಗಿದೆ.

    ಚಿತ್ರ ಬರಹ: ಕುಮಾರ್ ಪೆರ್ನಾಜೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    Ganesh Tumkuru
    • Website

    Related Posts

    ತ್ಯಾಜ್ಯವಲ್ಲ ಕರಟ, ರೈತರಿಗೆ ಬಂಪರ್ ಹಣ! ಕೊಬ್ಬರಿ ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಬೆಳೆಗಾರರ ಮೊಗದಲ್ಲಿ ಮಂದಹಾಸ

    July 19, 2026

    ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ

    July 17, 2026

    ಮನೆಗೆ ಮರು ಪೇಂಟಿಂಗ್ ಮಾಡಿಸುವಾಗ ಈ ತಪ್ಪುಗಳನ್ನು ಮರೆತೂ ಮಾಡಬೇಡಿ!

    July 13, 2026

    Leave A Reply Cancel Reply

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು

    August 2, 2026

    ಹಣ್ಣು ಎಂದಾಕ್ಷಣ ಇದೀಗ ವಿದೇಶಿ ಹಣ್ಣುಗಳದ್ದೇ ಹವಾ ನಮ್ಮ ಕಾಡು ಹಣ್ಣುಗಳ ಔಷಧೀಯ ಗುಣಗಳ ಮುಂದೆ ಇದೇನು ಅಲ್ಲ ಮುಂದೊಂದು…

    ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸ್ತನ್ಯಪಾನ ಅತ್ಯಗತ್ಯ: ಸಿ. ದೀಪಾ ಕರೆ

    August 2, 2026

    ತುಮಕೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಯಶಸ್ವಿ ತೆರೆ

    August 2, 2026

    ತುಮಕೂರು: 30ನೇ ವಾರ್ಡಿನ ಗಾರೇನರಸಯ್ಯ ನಕಟ್ಟೆ ಸ್ವಚ್ಛತಾ ಕಾರ್ಯ: ಪಾಲಿಕೆ ಸಿಬ್ಬಂದಿ, ನಾಗರಿಕ ಹಿತರಕ್ಷಣಾ ಸಮಿತಿ ಭಾಗಿ

    August 2, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.