nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಾರವಾರ:  ಅಬಕಾರಿ ಇಲಾಖೆಯಿಂದ 90 ಲಕ್ಷ ಮೌಲ್ಯದ ಮದ್ಯಸಾರ, ವಾಹನ ವಶ

    February 26, 2026

    ಕಾರವಾರ:  ಜನಗಣತಿ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ: ಜಿಲ್ಲಾಧಿಕಾರಿ

    February 26, 2026

    ಧಾರವಾಡ: ಜಿಲ್ಲಾಮಟ್ಟದ 12 ನೇ ಜನತಾ ದರ್ಶನ,  ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್

    February 26, 2026
    Facebook Twitter Instagram
    ಟ್ರೆಂಡಿಂಗ್
    • ಕಾರವಾರ:  ಅಬಕಾರಿ ಇಲಾಖೆಯಿಂದ 90 ಲಕ್ಷ ಮೌಲ್ಯದ ಮದ್ಯಸಾರ, ವಾಹನ ವಶ
    • ಕಾರವಾರ:  ಜನಗಣತಿ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ: ಜಿಲ್ಲಾಧಿಕಾರಿ
    • ಧಾರವಾಡ: ಜಿಲ್ಲಾಮಟ್ಟದ 12 ನೇ ಜನತಾ ದರ್ಶನ,  ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್
    • ಬಳ್ಳಾರಿ:   ಮಾ.1 ರಂದು ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ
    • ಬಳ್ಳಾರಿ: ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂಸದ ಈ.ತುಕಾರಾಮ್
    • ಬಳ್ಳಾರಿ: ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಜನರ ಅಭಿವೃದ್ಧಿ ಸಾಧ್ಯ: ಸಂಸದ ಈ.ತುಕಾರಾಮ್
    • ಗಿರೀಶ್ ಹೆಚ್.ಎನ್. ಅವರಿಗೆ ರಾಜ್ಯಪಾಲರಿಂದ ಡಾಕ್ಟರೇಟ್ ಪದವಿ ಪ್ರಧಾನ
    • ಶಿವಮೊಗ್ಗದಲ್ಲಿ ಶಾಲಾ ಬಾಲಕನ ಭೀಕರ ಹತ್ಯೆ: 7 ಅಪ್ರಾಪ್ತರ ಬಂಧನ, 15 ಲಕ್ಷ ರೂ. ಪರಿಹಾರ ಘೋಷಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ‘ನಾಟಕ ಮನೆ ತುಮಕೂರು’: ಎರಡು ದಿನಗಳ ನಾಟಕೋತ್ಸವ, ರಂಗಸಂವಾದ, ರಂಗಗೌರವ, ರಂಗಾಭಿನಂದನೆ ಸಂಪನ್ನ
    ತುಮಕೂರು February 18, 2025

    ‘ನಾಟಕ ಮನೆ ತುಮಕೂರು’: ಎರಡು ದಿನಗಳ ನಾಟಕೋತ್ಸವ, ರಂಗಸಂವಾದ, ರಂಗಗೌರವ, ರಂಗಾಭಿನಂದನೆ ಸಂಪನ್ನ

    By adminFebruary 18, 2025No Comments1 Min Read
    mandya ramesh

    ತುಮಕೂರು: ನಗರದ ಡಾ.ಗುಬ್ಬಿ ವೀರಣ್ಣಕಲಾ ಕ್ಷೇತ್ರದಲ್ಲಿ ನಾಟಕ ಮನೆ ತುಮಕೂರು ಹಮ್ಮಿಕೊಂಡ ಎರಡು ದಿನಗಳ ನಾಟಕೋತ್ಸವದ ಸಮಾರೋಪ ಸಮಾರಂಭ ಯಶಸ್ವಿಯಾಗಿ ಮೂಡಿಬಂದಿತು.

    ನಟ, ನಿರ್ದೇಶಕರಾದ ಮಂಡ್ಯ ರಮೇಶ್ ರವರು ತುಮಕೂರಿನ ರಂಗಕರ್ಮಿಗಳು, ರಂಗಾಸಕ್ತ ಪ್ರೇಕ್ಷಕರ ಜೊತೆ ರಂಗಸಂವಾದವನ್ನು ನಡೆಸಿಕೊಟ್ಟರು.


    Provided by
    Provided by

    ರಂಗಸಂವಾದದಲ್ಲಿ ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕರಾದ ಎಸ್.ನಾಗಣ್ಣ, ಕಲಾಶ್ರೀ ಡಾ.ಲಕ್ಷ್ಮಣದಾಸ್, ರಂಗ ನಿರ್ದೇಶಕರಾದ ಎಸ್.ಎ.ಖಾನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಪ್ಪ, ನಿರ್ದೇಶಕರಾದ ನಟರಾಜ್ ಹೊನ್ನವಳ್ಳಿ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾದ ಬಾ.ಹ.ರಮಾಕುಮಾರಿ, ಡಮರುಗ ರಂಗಸಂಸ್ಥೆಯ ಮೆಳೇಹಳ್ಳಿ ದೇವರಾಜು, ನಾಟಕ ಮನೆ ಮಹಾಲಿಂಗು ಮತ್ತುಇನ್ನೂ ಹಲವಾರು ರಂಗಕರ್ಮಿ ಗೆಳೆಯರು ಭಾಗವಹಿಸಿ ಪ್ರಸ್ತುತ ರಂಗಭೂಮಿಯ ಸ್ಥಿತಿ–ಗತಿಗಳ ಬಗ್ಗೆ ಚರ್ಚೆ ನಡೆಸಿದರು.

    ವರ್ತಮಾನಕ್ಕೆರಂಗಭೂಮಿ ಹೇಗೆ ತೆರೆದುಕೊಳ್ಳಬೇಕು, ವರ್ತಮಾನದ ಸವಾಲುಗಳನ್ನು ಎದುರಿಸುವುದು ಹೇಗೆ ಮತ್ತು ರಂಗಭೂಮಿಯ ನಿರಂತರತೆಯನ್ನುಕಾಪಾಡಿಕೊಂಡು ಹೋಗುವುದು ಹೇಗೆ, ತುಮಕೂರಿನ ರಂಗಭೂಮಿಯ ಸವಾಲುಗಳು ಏನು, ಬಯಲುಸೀಮೆ ರಂಗಾಯಣದ ಅಗತ್ಯ, ಪ್ರಾಮುಖ್ಯತೆ ಎಂಬ ಹಲವಾರು ರಂಗವಿಷಯಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿದರು. ನಂತರ ನಾಟಕಮನೆ ಮಹಾಲಿಂಗುರವರು ಮಂಡ್ಯ ರಮೇಶ್ ರವರಿಗೆ ರಂಗಗೌರವವನ್ನು ನೀಡಿದರು.

    ನಟರಾಜ್ ಹೊನ್ನವಳ್ಳಿರವರು ಮಾತನಾಡಿ, ಬಯಲುಸೀಮೆ ರಂಗಾಯಣದ ಅಗತ್ಯ, ಅದರ ನಿರ್ವಹಣೆ ಮತ್ತು ಅದರ ವಿಸ್ತಾರತೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಂತರ ಕಾರ್ಯಕ್ರಮದ ಅಧ್ಯಕ್ಷರಾದಎಸ್.ನಾಗಣ್ಣ ಮಾತನಾಡಿ, ತುಮಕೂರಿನಲ್ಲಿ ರಂಗಭೂಮಿ ಅನುಭವಿಸುತ್ತಿರುವ ಹಿನ್ನಡೆಯ ಬಗ್ಗೆ ಮಾತನಾಡಿ, ಚೇತರಿಕೆಗೆ ಬೇಕಾದ ಅಂಶಗಳನ್ನು ಒತ್ತಿ ಹೇಳಿದರು.

    ಕೊನೆಯಲ್ಲಿ ಮಂಡ್ಯರಮೇಶ್ ಮಾತನಾಡಿ ನಾಟಕ ಮನೆ ಮಹಾಲಿಂಗು ಜೊತೆಗಿನ 25 ವರ್ಷಗಳ ಗೆಳೆತನದ ಬಗ್ಗೆ ಮಾತನಾಡಿ, ರಂಗಗೌರವ ನೀಡಿದ್ದಕ್ಕೆ ನಾಟಕ ಮನೆ ತುಮಕೂರು ಮತ್ತುತುಮಕೂರಿನ ರಂಗಕರ್ಮಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

    ವೇದಿಕೆಯಲ್ಲಿ ಎಸ್.ನಾಗಣ್ಣ, ಸಿದ್ದಲಿಗಂಪ್ಪ, ನಾಟಕಮನೆ ಮಹಾಲಿಂಗು, ಬಾ.ಹ.ರಮಾಕುಮಾರಿ, ಸಿ.ವಿ.ಮಹದೇವಯ್ಯ, ಡಾ.ಬಸವರಾಜು, ನಟರಾಜ್ ಹೊನ್ನವಳ್ಳಿ, ಮೆಳೇಹಳ್ಳಿ ದೇವರಾಜು, ಪ್ರಕಾಶ್ಎನ್.ಆರ್. ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಬಜೆಟ್ ಅಧಿವೇಶನದಲ್ಲಿ ಒಳಮೀಸಲು ಜಾರಿಗೊಳಿಸಿ: ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

    February 24, 2026

    ಅಂತರರಾಜ್ಯ ಜ್ಯುವೆಲರಿ ಸುಲಿಗೆಕೋರರ ಸೆರೆ:  ಕೃತ್ಯ ನಡೆದ 12 ತಾಸಿನೊಳಗೆ ಆರೋಪಿಗಳ ಬೆನ್ನಟ್ಟಿ ಬಂಧನ

    February 24, 2026

    ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು, ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ: ನಿಖಿಲ್ ಕುಮಾರಸ್ವಾಮಿ ಕರೆ

    February 22, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಕಾರವಾರ:  ಅಬಕಾರಿ ಇಲಾಖೆಯಿಂದ 90 ಲಕ್ಷ ಮೌಲ್ಯದ ಮದ್ಯಸಾರ, ವಾಹನ ವಶ

    February 26, 2026

    ಕಾರವಾರ: ಜೊಯಿಡಾ ತಾಲೂಕಿನ ರಾಮನಗರದಲ್ಲಿರುವ ಧಾರವಾಡ–ಗೋವಾ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಬಳಿ ಒಂದು ಟಾಟಾ ಕಂಪನಿಯ ಟ್ಯಾಂಕರ್ ನೋಂದಣಿ…

    ಕಾರವಾರ:  ಜನಗಣತಿ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ: ಜಿಲ್ಲಾಧಿಕಾರಿ

    February 26, 2026

    ಧಾರವಾಡ: ಜಿಲ್ಲಾಮಟ್ಟದ 12 ನೇ ಜನತಾ ದರ್ಶನ,  ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್

    February 26, 2026

    ಬಳ್ಳಾರಿ:   ಮಾ.1 ರಂದು ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ

    February 26, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.