ಸರಗೂರು: ಶಾಸಕ ಅನೀಲ್ ಚಿಕ್ಕಮಾದು ಅವರ 33ನೇ ವರ್ಷದ ಹುಟ್ಟು ಹಬ್ಬವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಆಚರಣೆ ಮಾಡಿದರು.
ಪಟ್ಟಣದ ಮಹಾವೀರ ಸರ್ಕಲ್ ಬಳಿ ಶಾಸಕ ಅನಿಲ್ ಚಿಕ್ಕಮಾದು ರವರಿಗೆ ಸರಗೂರು ಕಾಂಗ್ರೆಸ್ ಪಕ್ಷದ ಮತ್ತು ಯೂತ್ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮದ ಮುಖಂಡರು ಸೇರಿ ಪಟಾಕಿ ಸಿಡಿಸಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಹುಟ್ಟು ಹಬ್ಬದ ಪ್ರಯುಕ್ತ ಶಾಸಕ ಅನಿಲ್ ಚಿಕ್ಕಮಾದು ತಾಲ್ಲೂಕಿನ ನಾಡದೇವತೆ ಶ್ರೀ ಚಿಕ್ಕದೇವಮ್ಮನ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ಆರ್ಶೀವಾದ ಪಡೆದು, ನಂತರ ಸಾರ್ವಜನಿಕ ಆಸ್ಪತ್ರೆ ಗೆ ಹೊರರೋಗಿಗಳಿಗೆ ಹಣ್ಣುಗಳನ್ನು ಹಂಚಿದರು. ಬಳಿಕ ಪಟ್ಟಣದ ಮಹಾವೀರ ಸರ್ಕಲ್ ಬಳಿ ಇರುವ ಶ್ರೀ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಕಾರ್ಯಕರ್ತರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಅನಿಲ್ ಚಿಕ್ಕಮಾದು ,ಕಾರ್ಯಕರ್ತರು ಜೊತೆ ಗೂಡಿ ಕೇಕ್ ಯನ್ನು ಕತ್ತರಿಸಿ ಕಾರ್ಯಕರ್ತರ ಜೊತೆಗೆ ಖುಷಿ ಹಂಚಿಕೊಂಡರು. ಬಳಿಕ ಮಾತನಾಡಿದ ಅವರು, ತಾಲ್ಲೂಕಿನ ಜನತೆ ನನ್ನ ತಂದೆಗೆ ಹೇಗೆ ಪ್ರೀತಿ, ವಿಶ್ವಾಸ ತೋರಿಸಿದ್ದಿರೋ ಅದೇ ರೀತಿ ನನಗೂ ಪ್ರೀತಿ ತೋರಿಸಿ ಸಹಕಾರ ನೀಡಿದ್ದಿರಿ ಎಂದು ಧನ್ಯವಾದಗಳನ್ನು ತಿಳಿಸಿದರು.
ಇನ್ನೂ ಅನಿಲ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಹುಭಾಷಾ ನಟರಾದ ಕಿಚ್ಚ ಸುದೀಪ್ ರವರು ಆನೀಲ್ ಚಿಕ್ಕಮಾದುರವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ವಿಡಿಯೋ ಮೂಲಕ ತಿಳಿಸಿದದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಹಾಗೂ ವಾಟ್ಸಾಪ್ ಗಳಲ್ಲಿ ಕಾರ್ಯಕರ್ತರು ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜ್, ಸರಗೂರು ಪ.ಪಂ.ಸದಸ್ಯರು ಶ್ರೀನಿವಾಸ, ಚಲುವಕೃಷ್ಣ, ಹೇಮಾವತಿ ರಮೇಶ್, ಪ್ರಧಾನಕಾರ್ಯದರ್ಶಿ ಚಲುವರಾಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ರವಿ, ಭಾಗ್ಯಲಕ್ಷ್ಮಿ ನಿಂಗರಾಜು, ಬ್ಲಾಕ್ ಕಾಂಗ್ರೆಸ್ ವಕ್ತಾರ ಬಸವರಾಜು, ಹಾದನೂರು ಗ್ರಾ.ಪಂ.ಸದಸ್ಯರು ಶಿವಲಿಂಗಯ್ಯ, ರತ್ನಮ್ಮ ರಾಜೇಶ್, ಶಿವರಾಜ್ ಅರಸು, ಬಿ.ಮಟಕೇರಿ ಗ್ರಾಪಂ ಸದಸ್ಯ ಬೆಟ್ಟಸ್ವಾಮಿ, ಮುಖಂಡರು ಪ್ರಭುಸ್ವಾಮಿ, ನಾಗಯ್ಯ ಕೆಂಡಗಣಸ್ವಾಮಿ, ಹಾದನೂರು ಪುಟ್ಟಸ್ವಾಮಿ, ಸುರೇಶ್, ಮಧುಸೂದನ್, ಸಿದ್ದರಾಜು ಹೂವಿನಕೊಳ, ನಾಗರಾಜು, ಮಹೇಶ್ ಬಂಕವಾಡಿ, ಸಿದ್ದರಾಜುದೇವಲಾಪುರ, ರೈತಪ್ರತಾಪ್, ಸೋಮುಶೇಖರ್, ನಾಗಣ್ಣ, ಶೇಸಾ, ರಮೇಶ್ ಸರಗೂರು, ಸೂರ್ಯ ಮಸಹಳ್ಳಿ, ಹುಣಸಹಳ್ಳಿನಾಗರಾಜು, ಯೊಗೇಶ್, ಪ್ರಭು ಇನ್ನೂ ಮೊದಲಾದವರು ಭಾಗವಹಿಸಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB