nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮೂಲಭೂತ ಮೌಲ್ಯಗಳಲ್ಲಿ ಬಸವಣ್ಣನವರ ಸಮಾನತೆ, ನ್ಯಾಯ, ಮಾನವೀಯತೆಯ ಸಂದೇಶವಿದೆ: ಡಾ.ಜಿ.ಪರಮೇಶ್ವರ

    April 21, 2026

    ಬಸವಣ್ಣನವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ: ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್

    April 21, 2026

    ಕೃಷಿ ಇಲಾಖೆಯ 890 ಹುದ್ದೆಗಳಿಗೆ ಅರ್ಜಿ ಆಹ್ವಾನ: ಮೇ 10 ಅರ್ಜಿ ಸಲ್ಲಿಸಲು ಕೊನೆಯ ದಿನ

    April 21, 2026
    Facebook Twitter Instagram
    ಟ್ರೆಂಡಿಂಗ್
    • ಮೂಲಭೂತ ಮೌಲ್ಯಗಳಲ್ಲಿ ಬಸವಣ್ಣನವರ ಸಮಾನತೆ, ನ್ಯಾಯ, ಮಾನವೀಯತೆಯ ಸಂದೇಶವಿದೆ: ಡಾ.ಜಿ.ಪರಮೇಶ್ವರ
    • ಬಸವಣ್ಣನವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ: ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್
    • ಕೃಷಿ ಇಲಾಖೆಯ 890 ಹುದ್ದೆಗಳಿಗೆ ಅರ್ಜಿ ಆಹ್ವಾನ: ಮೇ 10 ಅರ್ಜಿ ಸಲ್ಲಿಸಲು ಕೊನೆಯ ದಿನ
    • ಗುಬ್ಬಿ ಸಮೀಪ ಭೀಕರ ಅಪಘಾತ: ಎಲೆಕ್ಟ್ರಿಕ್ ಕಾರು ಡಿಕ್ಕಿಯಾಗಿ 12 ವರ್ಷದ ಬಾಲಕ ಸಾವು
    • ಪ್ರಧಾನಿ ಮೋದಿ ಜೊತೆಗಿನ ‘ರಹಸ್ಯ’ ಮಾತುಕತೆ ಏನಿತ್ತು? ಗುಟ್ಟು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ
    • 50 ಮಹಿಳಾ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್; ಖತರ್ನಾಕ್ ಉದ್ಯಮಿ ಕೃಪಲಾನಿ ಅರೆಸ್ಟ್!
    • ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧಿಸಿಲ್ಲ, ಬಿಜೆಪಿ ಸುಳ್ಳು ಹೇಳುತ್ತಿದೆ: ಸಿಎಂ ಸಿದ್ದರಾಮಯ್ಯ ಕಿಡಿ
    • ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ 1.25 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರು ಖರೀದಿಗೆ ಸರ್ಕಾರ ಅಸ್ತು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗೃಹ ಸಚಿವರನ್ನು ಮೆಚ್ಚಿಸಲು ಸಾರ್ವಜನಿಕ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರಾ ಎತ್ತಿನಹೊಳೆ ಅಧಿಕಾರಿಗಳು!?
    ತುಮಕೂರು October 31, 2024

    ಗೃಹ ಸಚಿವರನ್ನು ಮೆಚ್ಚಿಸಲು ಸಾರ್ವಜನಿಕ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರಾ ಎತ್ತಿನಹೊಳೆ ಅಧಿಕಾರಿಗಳು!?

    By adminOctober 31, 2024No Comments2 Mins Read
    basavegowda

    ತುಮಕೂರು:   ಗೃಹ ಸಚಿವರನ್ನು ಮೆಚ್ಚಿಸಲು ಸಾರ್ವಜನಿಕ ಜೀವನದ ಜೊತೆಗೆ ಎತ್ತಿನಹೊಳೆ  ಅಧಿಕಾರಿಗಳು ಚೆಲ್ಲಾಟ ವಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಜಟ್ಟಿ ಅಗ್ರಹಾರ ನಾಗರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎತ್ತಿನಹೊಳೆ C E ವರದಯ್ಯ ಎಸಿ ರೂಮ್ನ ಲ್ಲಿ, ಜಮೀನು ಕಳಕೊಂಡ ರೈತರು ಬೀದಿಲ್ಲಿ, ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ ಪರ್ಸೆಂಟೇಜ್ ದುಡ್ಡು ಸೂಟ್ಕೇಸ್ ನಲ್ಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    Provided by
    Provided by

    ಮುಖ್ಯ ಕಾಲುವೆ ಕಾಮಗಾರಿಗಳಲ್ಲಿ ಪ್ರಮುಖವಾಗಿ ಇರಕಸಂದ್ರ ಕಾಲೋನಿ ಮತ್ತು ಲಕ್ಕೇನಹಳ್ಳಿ ಭಾಗದ ಕಾಮಗಾರಿಗಳಲ್ಲಿ ಯಾವುದೇ Third party Quality Control Team ಇಲ್ಲದೆ ಅಧಿಕಾರಿಗಳು ನೂರಾರು ಕೋಟಿ ಬಿಲ್ಲುಗಳು ಪಾವತಿ ಮಾಡಿದ್ದಾರೆ ಅಂತ ನಾಗರಾಜು ಆರೋಪಿಸಿದ್ದಾರೆ.

    ನಿಯಮಗಳನ್ನ ಪಾಲಿಸದೆ ಎಗ್ಗಿಲ್ಲದೆ ಹಗಲು ರಾತ್ರಿ ಬ್ಲಾಸ್ಟಿಂಗ್ ಮಾಡಿ ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡಲಾಗುತ್ತಿದೆ. ಈ ಬಗ್ಗೆ ಗಮನ ಹರಿಸದೇ ಅಧಿಕಾರಿಗಳು  ಕಣ್ಮುಚ್ಚಿ ಬೆಚ್ಚನೆ ಕುಳಿತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಿದರೆ ಎತ್ತಿನಹೊಳೆ ಯೋಜನೆಯ ಬಂಡವಾಳ ಹೊರಬೀಳಲಿದೆ.   ಲಕ್ಕೇನಹಳ್ಳಿ ಭಾಗದ ಕಾಮಗಾರಿಗಳಲ್ಲಿ ಯಾವುದೇ Third party Quality Control Team ಇಲ್ಲದೆ ನೂರಾರು ಕೋಟಿ ಬಿಲ್ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

    ಮಧುಗಿರಿ ಕಾರ್ಯಪಾಲಕ ಅಭಿಯಂತರರಾದ ಬಸವೇಗೌಡ ರವರು ಕಚೇರಿಯಲ್ಲಿ ಕಾಣಸಿಗುವುದೇ ಅಪರೂಪ,  ಫೋನ್ ಕರೆ ಸ್ವೀಕರಿಸುವುದಿಲ್ಲ ಹೀಗಿರುವಾಗ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ರೈತರ ಸಮಸ್ಯೆ ಅಂತ್ಯಗೊಳಿಸಲು ಇವರಿಂದ ಸಾಧ್ಯವೇ? ಅಂತ ನಾಗರಾಜು ಪ್ರಶ್ನಿಸಿದ್ದಾರೆ.

    ಮುಖ್ಯ ಇಂಜಿನಿಯರ್ ವರದಯ್ಯರನ್ನ ಅಧಿಕಾರಿ ವರ್ಗ ಪರದಾಡುವಂತೆ ಮಾಡಿದ್ದಾರೆ. ಎಲ್ಲೆಲ್ಲೂ ಡಂ ಡಂ ಡಂ ಶಬ್ದ ಕೇಳಿ ಬರುತ್ತಿದ್ದರೂ ಅಧಿಕಾರಿಗಳು  ಕ್ಯಾರೇ, ಅನ್ನುತ್ತಿಲ್ಲ ಕಾಮಗಾರಿ ಓಕೆ. ಪರಿಹಾರ ಬಂದಿಲ್ಲ ಯಾಕೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ರೈತರ ಖಾತೆಗೆ ಹಣ ಬರದೆ ಅವಾರ್ಡ್ ಆಗ್ದೇ ನಿಮಗೆ ಕೆಲಸ ಮಾಡೋ ಅಧಿಕಾರ ಕೊಟ್ಟವರು ಯಾರು?  ಹಾಡ ಹಗಲೇ ಬ್ಲಾಸ್ಟಿಂಗ್ ಮಾಡಲು ಅವಕಾಶ ನೀಡಿದ್ದಾರಾ..? ಎತ್ತಿನಹೊಳೆ ಅಧಿಕಾರಿ AEE ಅಶ್ವತ್ಥ್ ಕುಮಾರ್ EE ಮುರಳಿಧರ್  ಎಂದು ನಾಗರಾಜು ಪ್ರಶ್ನಿಸಿದ್ದಾರೆ.

    ಬ್ಲಾಸ್ಟಿಂಗ್ ನಿಂದಾಗಿ ಗ್ರಾಮಕ್ಕೆ  ದಪ್ಪ ದಪ್ಪ ಕಲ್ಲುಗಳು ಬಿದ್ದಿವೆ. ಇದರಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ.  ನೀಲಗೊಂಡನಹಳ್ಳಿ ಸುತ್ತ ಮುತ್ತಿನ ಗ್ರಾಮಸ್ಥರು  ಆತಂಕದಲ್ಲಿದ್ದಾರೆ.  ಮಧ್ಯಾಹ್ನ ಸಿಡಿಸಿದ ಸಿಡಿ ಮದ್ದು ನೀಲಗೊಂಡನಹಳ್ಳಿ ಅಂಗಡಿ ಸೀಟ್ ಮನೆಗಳಿಗೆ ಸಿಡಿದಿದೆ.  ಸಿಡಿಮದ್ದಿನಿಂದ ಬಿದ್ದ ಕಲ್ಲುಗಳಿಂದ ಕೂದಲು  ಎಳೆಯಲಿ ವೃದ್ಧರು ಸಾರ್ವಜನಿಕರು ಪಾರಾಗಿದ್ದಾರೆ.  ಅತಿಯಾದ ಸ್ಪೋಟಕ ಶಬ್ದದಿಂದ ಮಕ್ಕಳು ಗರ್ಭಿಣಿಯರು ಆತಂಕದಲ್ಲಿದ್ದಾರೆ ಎಂದು ನಾಗರಾಜು ತಿಳಿಸಿದ್ದಾರೆ.

    ಹಲವು ಬಾರಿ AEE ಅಶ್ವತ್ಥ್ ಕುಮಾರ್ ಅವರಿಗೆ ಫೋನ್ ಮಾಡಿದರು ಅವರು ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದಾರೆ.  ರೈತರ ಖಾತೆಗೆ ಪರಿಹಾರದ ಹಣ ಜಮೆಯಾಗದಿದ್ದರೂ ದೌರ್ಜನ್ಯದಿಂದ ಕಾಮಗಾರಿ ಮುಗಿಸಲು ಏಜೆನ್ಸಿಗಳು (ಗುತ್ತಿಗೆದಾರರು ) ಮುಂದಾಗಿದ್ದಾರೆ ಎಂದು  ಅವರು ಆಕ್ರೋಶ ವ್ಯಕ್ತಪಡಿಸಿದರು.

    ಅವಾರ್ಡ್ ಆಗದೆ ಅಕ್ರಮವಾಗಿ ರೈತರ ಜಮೀನಿನಲ್ಲಿ ನಿರ್ಮಿಸಲು ಸಹಕಾರಿ ಆಗಿದ್ದಾರ ಎತ್ತಿನಹೊಳೆ ಅಧಿಕಾರಿಗಳು ಎನ್ನುವ ಅನುಮಾನ ಸೃಷ್ಟಿಯಾಗಿದೆ.  ಮಳೆಯಿಂದ ಕಾಮಗಾರಿಯ ಗುಣಮುಟ್ಟ ಅನಾವರಣವಾಗಿದೆ.  ಕಾಮಗಾರಿ ಪ್ರಗತಿಯಂತದಲ್ಲಿರುವಾಗಲೇ ಹಲವು ಕಡೆ ಕುಸಿತವಾಗಿದೆ ಎಂದು ಅವರು ಹೇಳಿದರು.

    ಮುಖ್ಯ ಇಂಜಿನಿಯರ್ ವರದಯ್ಯ, ಎಇಇ,ಇಇ, ಸೈಟ್ ಗೆ ಬಾರದ ಹಿನ್ನೆಲೆ ಅಧಿಕಾರಿಗಳಿಗೆ ಸುಗಮ ದಾರಿ ಸಿಕ್ಕಿದಂತಾಗಿದೆ.  ಕಳಪೆ ಕಾಮಗಾರಿ ಕೇಂದ್ರ ಸಂಸ್ಥೆಗಳಿಂದ ತನಿಖೆ ಆಗಬೇಕಾಗಿದೆ. ದಾಖಲೆಗಳೊಂದಿಗೆ ಈ ಬಗ್ಗೆ ದೂರು ನೀಡುವುದಾಗಿ ಸಾಮಾಜಿಕ ಕಾರ್ಯಕರ್ತ ಜಟ್ಟಿ ಅಗ್ರಹಾರ ನಾಗರಾಜು ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಮೇವು ಲಭ್ಯತೆ ಪರಿಶೀಲಿಸಿ: ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಅಭಿಯಾನ ಕುರಿತು ಚರ್ಚೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್

    April 20, 2026

    ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!

    April 19, 2026

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಮೂಲಭೂತ ಮೌಲ್ಯಗಳಲ್ಲಿ ಬಸವಣ್ಣನವರ ಸಮಾನತೆ, ನ್ಯಾಯ, ಮಾನವೀಯತೆಯ ಸಂದೇಶವಿದೆ: ಡಾ.ಜಿ.ಪರಮೇಶ್ವರ

    April 21, 2026

    ಕೊರಟಗೆರೆ: ನಮ್ಮ ದೇಶದ ಸಂವಿಧಾನಕ್ಕೆ ತನ್ನದೇ ಆದ ಮಹತ್ವವಿದೆ ಅದರ ಮೂಲಭೂತ ಮೌಲ್ಯಗಳಲ್ಲಿ ಬಸವಣ್ಣನವರ ಸಮಾನತೆ, ನ್ಯಾಯ ಮತ್ತು ಮಾನವೀಯತೆಯ…

    ಬಸವಣ್ಣನವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ: ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್

    April 21, 2026

    ಕೃಷಿ ಇಲಾಖೆಯ 890 ಹುದ್ದೆಗಳಿಗೆ ಅರ್ಜಿ ಆಹ್ವಾನ: ಮೇ 10 ಅರ್ಜಿ ಸಲ್ಲಿಸಲು ಕೊನೆಯ ದಿನ

    April 21, 2026

    ಗುಬ್ಬಿ ಸಮೀಪ ಭೀಕರ ಅಪಘಾತ: ಎಲೆಕ್ಟ್ರಿಕ್ ಕಾರು ಡಿಕ್ಕಿಯಾಗಿ 12 ವರ್ಷದ ಬಾಲಕ ಸಾವು

    April 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.