Author: admin

ಕೊರಿಯನ್ ಸೂಪರ್ ಸ್ಟಾರ್ ಮಾ ಡಾಂಗ್ ಸಿಯೋಕ್ ವಿವಾಹವಾಗಲಿದ್ದಾರೆ. ವಧು ಅವನ ಗೆಳತಿ ಯಿ ಜಂಗ್ ಹ್ವಾ. ಅವರು ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಮುಂದಿನ ತಿಂಗಳು ಮದುವೆ ನಡೆಯಲಿದೆ. 2021ರಲ್ಲಿ ಇಬ್ಬರೂ ನೋಂದಣಿ ಮಾಡಿಕೊಂಡಿದ್ದಾರೆ. ಡಾನ್ ಲೀ ಅವರ ಏಜೆನ್ಸಿ, ಬಿಗ್ ಪಂಚ್ ಎಂಟರ್‌ ಟೈನ್‌ ಮೆಂಟ್, ಸಿಯೋಲ್‌ ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹ ನಡೆಯಲಿದೆ ಎಂದು ಘೋಷಿಸಿದೆ. ಡಾನ್ ಲೀ ಮತ್ತು ಯಿ ಜಂಗ್ ಅವರ ವಿವಾಹವು ಅತ್ಯಂತ ಖಾಸಗಿ ಸಮಾರಂಭದಲ್ಲಿ ನಡೆಯಲಿದೆ. ಕುಟುಂಬ, ಸಂಬಂಧಿಕರು, ಸಹೋದ್ಯೋಗಿಗಳು ಮತ್ತು ಪರಿಚಯಸ್ಥರು ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ಡಾನ್ ಲೀ ಅವರ ಏಜೆನ್ಸಿ ಪ್ರತಿನಿಧಿ ಪತ್ರಿಕೆಗಳ ಮೂಲಕ ಈ ವಿಷಯ ತಿಳಿಸಿದ್ದಾರೆ. ಡಾನ್ ಲೀ ಎಂದೂ ಕರೆಯಲ್ಪಡುವ ಮಾ ಡಾಂಗ್ ಸಿಯೋಕ್ ಭಾರತದಲ್ಲೂ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಡಾಂಗ್ ಲೀ ಮತ್ತು ಯಿ ಜಂಗ್ ಹ್ವಾ 2016 ರಿಂದ ಡೇಟಿಂಗ್ ಮಾಡುತ್ತಿದ್ದಾರೆ. ಮಾ ಡಾಂಗ್ ಸಿಯೋಕ್ ಅಕಾ ಡಾನ್ ಲೀ ಅವರು ಟ್ರೈನ್…

Read More

ಕಾರು ಪ್ರಯಾಣ ಎಂದರೆ ಎಲ್ಲರಿಗೂ ಬಲು ಇಷ್ಟ. ದೂರದ ಊರುಗಳಿಗೆ, ಟ್ರಿಪ್ ಮಾಡಲು ಕಾರುಗಳಲ್ಲಿ ಹೋಗುವುದೆಂದರೆ ಒಂದು ರೀತಿಯ ಖುಷಿ. ಹೀಗೆ ಕಾರಲ್ಲಿ ಹೋಗುವ ಸಂದರ್ಭದಲ್ಲಿ ಸುಖಕರ ಪ್ರಯಾಣಕ್ಕಾಗಿ ಹೆಚ್ಚಿನವರು ಎಸಿ ಆನ್ ಮಾಡುತ್ತಾರೆ. ಆದರೆ ಕಾರಲ್ಲಿ ಹೀಗೆ, ಯಾವಾಗ ಬೇಕು ಆವಾಗ AC ಆನ್ ಮಾಡಿದ್ರೆ ಏನೆಲ್ಲಾ ನಷ್ಟ ಉಂಟಾಗುತ್ತೆ ಗೊತ್ತಾ? ಹಾಗಿದ್ರೆ ಇಲ್ಲಿದೆ ನೋಡಿ ಕುತೂಹಲ ವಿಚಾರ. ಇಂದು ಬಿಸಿಲ ಝಳಕ್ಕೆ ಜನ ತಂಡಾ ಹೊಡೆದಿದ್ದಾರೆ. ಫ್ಯಾನ್, ಕೂಲರ್, AC ಇಲ್ಲದೆ ನಿಮಿಷವೂ ಇರಲು ಅಸಾಧ್ಯ. ಕಾರಿನಲ್ಲಿ ಹೋಗುವಾಗ ಕಿಟಕಿ ತೆರೆದರೆ ಬೇಕಾದಷ್ಟು ಗಾಳಿ ಬೀಸಿದರೂ AC ಹಾಕಿದಾಗ ಆಗೋ ನೆಮ್ಮದಿ ಸಿಗುವದೇ ಇಲ್ಲ. ಹೀಗಾಗಿ ಇಂದು ಎಲ್ಲರೂ ಕಾರಲ್ಲಿ AC ಹಾಕುತ್ತಾರೆ. ಹವಾನಿಯಂತ್ರಿಣ ಇಲ್ಲದ ಕಾರಿನಲ್ಲಿ ಪ್ರಯಾಣಿಸೋದೇ ತ್ರಾಸದಾಯಕ. ಹೀಗೆ ಕಾರಲ್ಲಿ 1 ಗಂಟೆ ನಿರಂತರವಾಗಿ AC ಆನ್ ಮಾಡಿದ್ರೆ ಎಷ್ಟು ಪೆಟ್ರೋಲ್ ಖರ್ಚಾಗುತ್ತೆ ಅನ್ನೋ ಐಡಿಯಾ ಇದೆಯಾ? ಇದು ತಿಳಿದರೆ ಇನ್ಮುಂದೆ ನೀವು AC ಹಾಕೋದಕ್ಕೆ…

Read More

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪಿಯು ಮಂಡಳಿಯ ಅಧಿಕೃತ ವೆಬ್ ಸೈಟ್ karresults.nic.in ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು ಪಾಸಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ 2,49,927 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾಲಕ್ಷ್ಮೀ 600ಕ್ಕೆ 598 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ನಂತರ ಸ್ಥಾನದಲ್ಲಿ ಕೆ ಹೆಚ್ ಉರ್ವೀಶ್ ಪ್ರಶಾಂತ್ 597 ಅಂಕ, ವೈಭವಿ ಆಚಾರ್ಯ 597 ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಮೂವರು ಟಾಪರ್ಗಳಾಗಿದ್ದಾರೆ. ಕಲಾ ವಿಭಾಗದಲ್ಲಿ ಮೇಧಾ ಡಿ. ಟಾಪರ್ 600ಕ್ಕೆ 596 ಅಂಕಗಳನ್ನು ಪಡೆದರೆ, ವಿಜಯಪುರದ ವೇದಾಂತ್ ಜ್ಞಾನುಭ ನವಿ ಮತ್ತು ಕವಿತಾ ಬಿ ವಿ 600ಕ್ಕೆ 596 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಜ್ಞಾನವಿ 600ಕ್ಕೆ 597 ಅಂಕ ಪಡೆದು ಟಾಪರ್ ಆಗಿದ್ದಾರೆ. ಪವನ್ ಎಂ ಎಸ್ ಮತ್ತು ಹರ್ಷಿತ ಎಸ್ ಎಚ್ 596 ಅಂಕ ಪಡೆದಿದ್ದಾರೆ.…

Read More

ರೇಖಾ ಮತ್ತು ಅಮಿತಾಬ್ ಬಚ್ಚನ್ ಸಿನಿಮಾಗಳನ್ನು ಸಿನಿ ಪ್ರೇಮಿಗಳು ಮರೆಯಲು ಆಗಲ್ಲ. ಇವರಿಬ್ಬರೂ ಈ ಹಿಂದೆ ಅನೇಕ ರೊಮ್ಯಾಂಟಿಕ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಜೋಡಿಯನ್ನು ಜನರು ತುಂಬಾ ಇಷ್ಟಪಟ್ಟಿದ್ದರು. ಈ ಜೋಡಿ ನಡುವಿನ ಸಂಬಂಧದ ಕುರಿತು ಅಂದು ಗುಸುಗುಸು ಕೇಳಿಬಂದಿತ್ತು. ಈಗಲೂ ಕೇಳಿಬರುತ್ತಿರುತ್ತದೆ. ಆದರೀಗ ಅಮಿತಾಭ್ ಮತ್ತು ರೇಖಾ ನಡುವಿನ ಪ್ರೇಮ ಪ್ರಕರಣದ ಕುರಿತು ಅವರ ಪತ್ನಿ ಜಯಾ ಬಚ್ಚನ್ ಮನಬಿಚ್ಚಿ ಮಾತನಾಡಿದ್ದಾರೆ. ಸೂಪರ್‌ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ಕೃಷ್ಣ ಸುಂದರಿ ರೇಖಾ ಅವರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ. 70 ರ ದಶಕದಲ್ಲಿ, ಅಮಿತಾಭ್ ಬಚ್ಚನ್ ಮತ್ತು ರೇಖಾ ಅವರ ಸಂಬಂಧವು ಬಹಳ ಚರ್ಚಿತ ವಿಷಯವಾಗಿತ್ತು. ಈ ಬಗ್ಗೆ ಎಲ್ಲಡೆ ಗುಸುಗುಸು ಉಂಟಾಗಿದ್ದರೂ ಅಮಿತಾಭ್ ಮಾತ್ರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ. ಆದರೆ ರೇಖಾ ತಮ್ಮ ಪ್ರೇಮ ಕಥೆಯ ಬಗ್ಗೆ ಹಲವಾರು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಒಟ್ಟಿನಲ್ಲಿ ಈ ಜೋಡಿಯ ಪ್ರೇಮಕಥೆ ಯಾರೂ…

Read More

ಗೋಮಾಂಸ ಸಮೋಸವನ್ನು ಕುರಿ ಮಾಂಸದ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ಏಳು ಮಂದಿಯನ್ನು ಗುಜರಾತ್ ‌ನಲ್ಲಿ ಬಂಧಿಸಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದೆ. ಅಂಗಡಿಯಲ್ಲಿ ಮಾರುವ ಮಟನ್ ಸಮೋಸದಲ್ಲಿ ಕಡಿಮೆ ಬೆಲೆಗೆ ದನದ ಮಾಂಸ ತುಂಬಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸುಳಿವಿನ ಆಧಾರದ ಮೇಲೆ ಪೊಲೀಸರು ವಡೋದರದ ಪಾನಿಗೇಟ್ ಪ್ರದೇಶದ ಹುಸೇನಿ ಸಮೋಸಾ ಕೇಂದ್ರದಲ್ಲಿ ದಾಳಿ ನಡೆಸಿ 113 ಕೆಜಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ನಂತರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದಾಗ ಅದು ಹಸುವಿನ ಮಾಂಸ ಎಂಬುದು ದೃಢಪಟ್ಟಿತ್ತು. ಪೊಲೀಸರು ಮಾಲೀಕರಾದ ಯೂಸುಫ್ ಶೇಖ್ ಮತ್ತು ನಯೀಮ್ ಶೇಖ್ ಮತ್ತು ಅವರ ನಾಲ್ವರು ಕಾರ್ಮಿಕರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮಾಲೀಕರು ಇಮ್ರಾನ್ ಖುರೇಷಿ ಅವರಿಗೆ ದನದ ಮಾಂಸ ನೀಡಿರುವುದು ಬೆಳಕಿಗೆ ಬಂದಿದೆ. ಅವರ ಹೇಳಿಕೆ ಆಧರಿಸಿ ಪೊಲೀಸರು ಖುರೇಷಿಯನ್ನು ಬಂಧಿಸಿದ್ದಾರೆ. ಕೆಲವರು ಹಸುವಿನ ಮಾಂಸವನ್ನು ಬಳಸಿ ಮನೆಯಿಂದ ಸಮೋಸ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, 61 ಕೆಜಿ…

Read More

ಭಾರತದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಪ್ರಮುಖವಾದ ಹಾಗೂ ಹೆಚ್ಚು ಪ್ರಸಿದ್ಧಿ ಹೊಂದಿದ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ ಕೂಡ ಪ್ರಮುಖವಾದುದು. ಇದೀಗ ಈ ಬ್ಯಾಂಕ್ ತನ್ನ ಗ್ರಾಹಕರಿಗೊಂದು ಭರ್ಜರಿ ಗುಡ್ ನ್ಯೂಸ್ ನೀಡಿದ್ದು ಫಿಕ್ಸೆಡ್ ಡೆಪಾಸಿಟ್ (FD) ನ ಬಡ್ಡಿ ಹೆಚ್ಚು ಮಾಡಿ ಆದೇಶ ಹೊರಡಿಸಿದೆ. ಹೌದು, ಕೆನರಾ ಬ್ಯಾಂಕ್ ಗ್ರಾಹಕರಿಗೋಸ್ಕರ ನಾನಾ ರೀತಿಯ ಸೌಲಭ್ಯವನ್ನು ನೀಡುತ್ತವೆ, ಅದರ ಜೊತೆಗೆ ಹೂಡಿಕೆ ಮಾಡಿರುವವರ ಹಣಕ್ಕೆ ಬಡ್ಡಿ ದರವನ್ನು ಹೆಚ್ಚಿಸಿರುವ ಕೆನರಾ ಬ್ಯಾಂಕ್, 444 ದಿನಗಳ ಫಿಕ್ಸೆಡ್ ಡೆಪಾಸಿಟ್(Fixed deposit) ಯೋಜನೆಯನ್ನು ಹೊಂದಿರುವಂತಹ ಗ್ರಾಹಕರಿಗೆ ಸಂತೋಷದ ಸುದ್ದಿ ನೀಡಿ, ಹೂಡಿಕೆ ಮಾಡಿರುವ ಹಣಕ್ಕೆ 7% ಕ್ಕಿಂತ ಹೆಚ್ಚಿನ ಬಡ್ಡಿ ಹಣವನ್ನು ನೀಡ ಹೊರಟಿದೆ. ಕೆನರಾ ಬ್ಯಾಂಕಿನಲ್ಲಿರುವ ನಾನಾ ರೀತಿಯಾದಂತಹ FD ಯೋಜನೆಗಳ ಪೈಕಿ ನೀವೇನಾದರೂ 444 ದಿನದ ಯೋಜನೆಯನ್ನು ಪಡೆದು, ಒಟ್ಟಿಗೆ 3 ಲಕ್ಷ ಹಣವನ್ನು ಪಾವತಿಸುತ್ತಾ ಹೋದರೆ 444 ದಿನಗಳವರೆಗೆ ನಿಮ್ಮ ಹೂಡಿಕೆ ಹಣಕ್ಕೆ 7.25% ಬಡ್ಡಿ ಹಣವು ಲಭಿಸುತ್ತದೆ. ಇದರಿಂದಾಗಿ…

Read More

ವಕೀಲೆಯೊಬ್ಬರು ತನಗೆ ಜನರ ಗುಂಪೊಂದು ವೀಡಿಯೋ ಕಾಲ್‌ ನಲ್ಲಿ ವಿವಸ್ತ್ರಗೊಳಿಸಿ ಹೇಳಿ 10 ಲಕ್ಷ ರೂ. ವಂಚನೆ ಮಾಡಿರುವ ಕುರಿತು ದೂರು ನೀಡಿದ್ದಾರೆ. ಎಪ್ರಿಲ್‌ 5 ರಂದು ಮುಂಬೈನಲ್ಲಿ ಕಸ್ಟಮ್ಸ್‌ ಇಲಾಖೆಯ ಅಧಿಕಾರಿಗಳು ಎಂದು ಹೇಳಿಕೊಂಡ ಕೆಲವರು ನನ್ನನ್ನು ಸಂಪರ್ಕಿಸಿ, ನನ್ನ ಹೆಸರಿನಲ್ಲಿ ಡ್ರಗ್ಸ್‌ ಪ್ಯಾಕೇಜ್‌ ಸಿಂಗಾಪುರದಿಂ ರವಾನೆಯಾಗುತ್ತಿದೆ ಎಂದು ಹೇಳಿದ್ದು, ಮಾದಕ ವಸ್ತು ಪರೀಕ್ಷೆಗಾಗಿ ವೀಡಿಯೋ ಕರೆಯಲ್ಲಿ ವಿವಸ್ತ್ರಗೊಳ್ಳುವಂತೆ ಹೇಳಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇದು ಎರಡು ದಿನಗಳ ಕಾಲ ಮುಂದುವರಿದಿದ್ದು, ನಂತರ ಬ್ಲ್ಯಾಕ್‌ ಮೇಲ್‌ ಮಾಡಲು ಅವರು ಪ್ರಾರಂಭ ಮಾಡಿದ್ದು, ತಮ್ಮ ಖಾತೆಗೆ 10 ಲಕ್ಷ ರೂಪಾಯಿಗಳನ್ನು ವರ್ಗಾಯಿಸದಿದ್ದರೆ ವಿಡಿಯೋವನ್ನು ಆನ್‌ ಲೈನ್‌ ಮೂಲಕ ಅಪ್‌ ಲೋಡ್‌ ಮಾಡಲಾಗುವುದು ಎಂದು ಬೆದರಿಸಿದ್ದಾರೆ. ಇದರಿಂದ ಬೆದರಿದ ವಕೀಲೆ ಅವರು ಹೇಳಿದ ಮೊತ್ತವನ್ನು ಖಾತೆಗೆ ಜಮಾ ಮಾಡಿದ್ದಾರೆ. ನಂತರ ಅವರು ಎ.7 ರಂದು ಪೊಲೀಸರಿಗೆ ದೂರನ್ನು ನೀಡಿದ್ದು, ಪೊಲೀಸರು ಸುಲಿಗೆ, ವಂಚನೆಗೆ ಸಂಬಂಧಪಟ್ಟಂತೆ ಐಟಿ ಕಾಯ್ದೆ ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್‌ ಗಳ…

Read More

ಇಂದಿನ ತಂತ್ರಜ್ಞಾನದಲ್ಲಿ, ಮಾಹಿತಿ ತಂತ್ರಜ್ಞಾನ(ಐಟಿ) ಬಹುಸಂಖ್ಯೆಯ ಅವಕಾಶಗಳು ಅಭಿವೃದ್ಧಿ ಹೊಂದುತ್ತಿರುವ ಉದ್ಯಮವಾಗಿ ಮುಂದುವರೆದಿದೆ. ಅನೇಕ ವ್ಯಕ್ತಿಗಳು ಈ ಕ್ಷೇತ್ರಕ್ಕೆ ಸೇರಲು ಬಯಸುತ್ತಾರೆ ಆದರೆ ಎಂಜಿನಿಯರಿಂಗ್ ಪದವಿಯು ಈ ಕ್ಷೇತ್ರದಲ್ಲಿ ಯಶಸ್ಸಿಯಾಗುವ ಏಕೈಕ ಮಾರ್ಗವಾಗಿದೆ ಎಂದು ಪ್ರಶ್ನಿಸಿದ್ದಾರೆ.ಸುದ್ದಿ ಏನೆಂದರೆ, ಐಟಿ ವಲಯವು ನಂಬಲಾಗದಷ್ಟು ಮತ್ತು ಅದರಲ್ಲಿ ಎಂಜಿನಿಯರಿಂಗ್ ಪದವಿಯ ಅಗತ್ಯವಿಲ್ಲದ ಹಲವಾರು ಒಳ್ಳೆಯ ಲಾಭದಾಯಕ ವೃತ್ತಿಗಳಿವೆ. ಸಾಫ್ಟ್ ವೇರ್ ಡೆವಲಪರ್: ಕಂಪ್ಯೂಟರ್ ವಿಜ್ಞಾನ ಅಥವಾ ಸಂಬಂಧಿತ ಪದವಿ ಪ್ರಯೋಜನಕಾರಿಯಾಗಿದ್ದರೂ, ಸಾಫ್ಟ್ವೇರ್ ಡೆವಲಪರ್ ಆಗಲು ಇದು ಅತ್ಯಾವಶ್ಯಕವಾಗುವುದಿಲ್ಲ. ಅನೇಕ ಯಶಸ್ವಿ ಸಾಫ್ಟ್‌ ವೇರ್ ಸ್ವಯಂ ಡೆವಲಪರ್‌ ಗಳು-ಕಲಿತ ಅಥವಾ ಕೋಡಿಂಗ್ ಬೂಟ್‌ ಕ್ಯಾಂಪ್ ‌ಗಳನ್ನು ಅನುಸರಿಸಿದ್ದಾರೆ. ಬಳಕೆದಾರರ ಅಗತ್ಯಗಳನ್ನು ಪೂರೈಸುವ ಸಾಫ್ಟ್ ವೇರ್ ಅನ್ನು ಕೋಡ್ ಮತ್ತು ರಚಿಸುವ ನಿಮ್ಮ ಸಾಮರ್ಥ್ಯವು ಹೆಚ್ಚು ಮುಖ್ಯವಾಗುತ್ತದೆ. ವೆಬ್ ಡೆವಲಪರ್: ವೆಬ್ ಅಭಿವೃದ್ಧಿಯು ಕೌಶಲಗಳು ಸಾಮಾನ್ಯವಾಗಿ ಔಪಚಾರಿಕ ಶಿಕ್ಷಣವನ್ನು ನೀಡುವ ಕ್ಷೇತ್ರವಾಗಿದೆ. ಆನ್‌ ಲೈನ್ ಕೋರ್ಸ್‌ಗಳು, ಟ್ಯೂಟೋರಿಯಲ್ ಮತ್ತು ಪ್ರಾಯೋಗಿಕ ಅನುಭವದ ಮೂಲಕ ನೀವು HTML, CSS,…

Read More

ಬೆಳಗಾವಿ: ತಾಲೂಕಿನ ಗ್ರಾಮಗಳಾದ ಕುರಿಹಾಳ, ಬೋಡಕೇನಹಟ್ಟಿ, ಅಲತಗಾ, ಗೌಂಡವಾಡ, ಗ್ರಾಮಗಳಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಅಧಿಕೃತ ಅಭ್ಯರ್ಥಿಯಾದ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಪ್ರಚಾರ ಮಾಡಿದರು. ಮತದಾರರಿಗೆ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ್ ದೇಶಕ್ಕಾಗಿ ಏನು ನೀಡಿದೆ ಎಂಬುದನ್ನು ಪ್ರಿಯಾಂಕ ಜಾರಕಿಹೊಳಿ ಮತದಾರರಿಗೆ ತಿಳಿಸಿದರು‌. ಚಿಕ್ಕೋಡಿ ಲೋಕಸಭಾ ಕ್ಷೇತ್ರ ಇಲ್ಲಿನ ಯುವಕರಿಗೆ ಯುವತಿಯರಿಗೆ ಹೆಚ್ಚಿನ ಉದ್ಯೋಗವಕಾಶಗಳು ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾರ್ಯ ನಿರ್ವಹಿಸಲಿದ್ದೇವೆ. ಅಭಿವೃದ್ಧಿ ನಮ್ಮ ಮೂಲ ಮಂತ್ರವಾಗಲಿದೆ ಎಂದರು. ಇದೇ ಸಂದರ್ಭದಲ್ಲಿ, ಗ್ರಾಮದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಛತ್ರಪತಿ ಸಂಭಾಜಿ ಮಹಾರಾಜರ ಪೂಜೆ ಸಲ್ಲಿಸಿ ಅಭಿವಾದನ ಮಾಡಿದರು. ಕಾಂಗ್ರೆಸ್ ಮುಖಂಡ ಹಾಗೂ ಬಹುಜನ ಸಮಾಜದ ನಾಯಕರಾದ ಮಲ್ಲೇಶ್ ಚೌಗಲೆ ಮಾತನಾಡಿ, ಚಿಕ್ಕೋಡಿಯ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಯುವ ಹಾಗೂ ವಿದ್ಯಾವಂತ ಹಾಗೂ ಸಾಮಾಜಿಕ ಶಿಕ್ಷಣ ರಾಜಕೀಯ ಕ್ಷೇತ್ರಗಳಲ್ಲಿ, ತಮ್ಮ ಸಣ್ಣ ವಯಸ್ಸಿನಲ್ಲಿಯೇ ಅತಿ…

Read More

ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14 ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಯಲಿದೆ. ಈ ಮೊದಲು ಏಪ್ರಿಲ್ 14 ರಂದು ದೇವನಹಳ್ಳಿಯಲ್ಲಿ ಸಮಾವೇಶ ನಿಗದಿಯಾಗಿತ್ತು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಈ ಸಾರ್ವಜನಿಕ ಸಮಾವೇಶ ಇದೀಗ ಮಂಗಳೂರಿಗೆ ಸ್ಥಳಾಂತರಗೊಂಡಿರುವುದು ವಿಶೇಷವಾಗಿದೆ. ಕರ್ನಾಟಕದ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಜೊತೆ ಕಳೆದ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸಂವಾದ ನಡೆಸಿದ್ದರು. ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನೀಡಿದ್ದರು. ಬೂತ್ ಮಟ್ಟದಲ್ಲಿ ಚುನಾವಣಾ ಪ್ರಚಾರ ಯಾವ ರೀತಿಯಲ್ಲಿ ಸಾಗುತ್ತಿದೆ ಎಂಬುದನ್ನು ವಿಚಾರಿಸಿದ್ದರು. ಇದೀಗ ಖುದ್ದು ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಕಾರ್ಯಕ್ಕೆ ವೇಗ ನೀಡಲಿದ್ದಾರೆ. ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಸಂಜೆ ಬೆಂಗಳೂರಿನಲ್ಲಿ ರೋಡ್ ಶೋದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 6ರಿಂದ 7 ಗಂಟೆಯವರೆಗೆ ಹೆಬ್ಬಾಳ-ಬ್ಯಾಟರಾಯನಪುರದಲ್ಲಿ ರೋಡ್ ಶೋ ನಡೆಯಲಿದೆ. ಏಪ್ರಿಲ್ 14ಕ್ಕೆ ಬೆಂಗಳೂರಿಗೆ…

Read More