Author: admin

ಬೆಂಗಳೂರು: ಇನ್ನೂ ಮೂರು ದಿನ ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತವರಣ ಇರಲಿದ್ದು, ಸಂಜೆ ಬಳಿಕ ಜೋರು ಮಳೆಯಾಗಲಿದೆ. ಬೆಳಗ್ಗೆ ವೇಳೆ ಕೆಲವೊಮ್ಮೆ ಬಿಸಿಲು ಕೂಡ ಹೆಚ್ಚಾಗುವ ಸಾಧ್ಯತೆಯಿದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಒಳನಾಡಿನ ಕೆಲವು ಕಡೆ ಅಧಿಕ ಮಳೆಯಾಗಲಿದೆ. ಗಾಳಿಯ ವೇಗವು ಗಂಟೆಗೆ 40 ಕಿ.ಮೀ ರಿಂದ 50 ಕಿ.ಮೀ ಇರುವ ಸಾಧ್ಯತೆ ಇದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಸಿದ್ದರಾಮಯ್ಯ ಅವರ ಅದೃಷ್ಟದ ನಿವಾಸ ಸರ್ಕಾರಿ ಬಂಗಲೆ ಕುಮಾರಕೃಪಾ ತನಗೆ ಬೇಕೆಂಬ ಬೇಡಿಕೆಯನ್ನ ಡಿ.ಕೆ ಶಿವಕುಮಾರ್ ಇಟ್ಟಿದ್ದರು. ಅಂದುಕೊಂಡಂತೆ  ಡಿಕೆಶಿ ಅವರಿಗೆ ಸಿದ್ದರಾಮಯ್ಯ ಅವರಿದ್ದ ಅದೃಷ್ಟದ ಮನೆ ಸಿಕ್ಕಿದೆ. ಸಿದ್ದರಾಮಯ್ಯ ಅವರು ಕಾವೇರಿ ನಿವಾಸಕ್ಕೆ ಶಿಫ್ಟ್ ಆದ ನಂತರ ಡಿಕೆ ಶಿವಕುಮಾರ್ ಇಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸಿಎಂ ಬೊಮ್ಮಾಯಿ ಅವರಿದ್ದ ಮನೆಯನ್ನು ಎಂ.ಬಿ ಪಾಟೀಲ್ ಗೆ ನಿಗದಿ ಮಾಡಲಾಗಿದ್ದು, ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿದ್ದ ವಸತಿ ಗೃಹವನ್ನ ನೂತನ ಸಚಿವ ಪ್ರಿಯಾಂಕ್ ಖರ್ಗೆಗೆ ನಿಗದಿ ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕ್ಯಾನ್ಸರ್ ರೋಗಿಯ ಕೊನೆಯ ಆಸೆಯನ್ನು ನಟ ಶಾರುಖ್ ಖಾನ್ ಈಡೇರಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ 60 ವರ್ಷದ ಶಿವಾನಿ ಚಕ್ರವರ್ತಿ ಅವರು ಸಾಯುವ ಮೊದಲು ಶಾರುಖ್ ಅವರನ್ನು ಖುದ್ದಾಗಿ ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಈ ವಿಷಯ ಕಿಂಗ್ ಖಾನ್ ಗೆ ತಿಳಿದಾಗ ಶಿವಾನಿ ವಿಡಿಯೋ ಕಾಲ್ ಮೂಲಕ ಚಕ್ರವರ್ತಿಯ ಮುಂದೆ ಬಂದಿದ್ದಾರೆ. ಶಿವಾನಿ ಚಕ್ರವರ್ತಿ ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ. 60 ವರ್ಷದ ಅವರು ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾರುಖ್ ಖಾನ್ ಅವರನ್ನು ಖುದ್ದಾಗಿ ಭೇಟಿ ಮಾಡುವುದು ಮತ್ತು ಅವರ ಅಡುಗೆಮನೆಯಲ್ಲಿ ಬೇಯಿಸಿದ ಆಹಾರವನ್ನು ನೀಡುವುದು ತನ್ನ ಕೊನೆಯ ಆಸೆಯಾಗಿದೆ ಎಂದು ಶಿವಾನಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ನನ್ನ ದಿನಗಳು ಎಣಿಸಲ್ಪಟ್ಟಿವೆ. ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸಾಯುವ ಮುನ್ನ ನನಗೊಂದು ಆಸೆ ಇದೆ, ಅದನ್ನೇ ಕೊನೆಯ ಆಸೆ ಎನ್ನೋಣ. ಶಾರುಖ್ ಖಾನ್ ಅವರನ್ನು ಖುದ್ದಾಗಿ ನೋಡಬೇಕು. ಮತ್ತು ನಾನು ಮಾಡಿದ…

Read More

ತುಮಕೂರು: ಚಿತ್ರಕಲೆ ಅತ್ಯಂತ ಬೇಡಿಕೆಯ ಕ್ಷೇತ್ರವಾಗಿದೆ. ಚಿತ್ರಕಲೆಯನ್ನು ಆಯ್ಕೆ ಮಾಡಿಕೊಂಡ ಶೇ.80ರಷ್ಟು ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯುತ್ತಿದ್ದಾರೆ. ತುಮಕೂರಿನಲ್ಲಿ ಅತ್ಯುತ್ತಮ ಚಿತ್ರಕಲಾ ತರಬೇತಿಗೆ ಹೆಸರುವಾಸಿಯಾಗಿರುವ  ತುಮಕೂರು ಸರ್ಕಾರಿ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ದಾಖಲಾತಿ ಆರಂಭಗೊಂಡಿದೆ. ಹೌದು..!  ತುಮಕೂರಿನ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿರುವ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ  2023—24ನೇ ಸಾಲಿನ ಅಡ್ಮೀಷನ್ ಓಪನ್ ಆಗಿದ್ದು, ಕೆಲವೇ ಸೀಟುಗಳು ಬಾಕಿ ಉಳಿದಿವೆ. ಕೋರ್ಸ್ ಹೆಸರು: ಬ್ಯಾಚುಲರ್ ಆಫ್ ವಿಜುವಲ್ ಆರ್ಟ್(BVA) ಇದರಲ್ಲಿ  ಚಿತ್ರಕಲೆ, ಆ್ಯನಿಮೇಷನ್, ಗ್ರಾಫಿಕ್ ವಿನ್ಯಾಸ. ಪ್ರವೇಶಾರ್ಹತೆ: ದ್ವಿತೀಯ ಪಿಯುಸಿ, ಐಟಿಐ/ಡಿಪ್ಲೋಮಾ/10+2/ ಅಥವಾ ತತ್ಸಮಾನ ತೇರ್ಗಡೆ. ಕೋರ್ಸ್ ವಿವರಗಳು: ನಾಲ್ಕು ವರ್ಷ ಸ್ನಾತಕ ಪದವಿ(8 ಸೆಮಿಸ್ಟರ್ ಗಳು) ಸೈದ್ಧಾಂತಿಕ, ತಾಂತ್ರಿಕ, ವಿವಿಧ ವೃತ್ತಿ ಕೌಶಲ್ಯ ಆಧಾರಿತ (ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ). ಬಿವಿಎ ಪದವಿಯಿಂದ ಪಡೆಯಬಹುದಾದ ಉದ್ಯೋಗಾವಕಾಶ: ಶಿಕ್ಷಣ ಕ್ಷೇತ್ರ: ಸರ್ಕಾರಿ /ಖಾಸಗಿ ಶಾಲೆ, ಕಾಲೇಜುಗಳಲ್ಲಿ ಚಿತ್ರಕಲಾ ಶಿಕ್ಷಕರು, ದೃಶ್ಯ ಕಲಾ ಕಾಲೇಜುಗಳಲ್ಲಿ ಉಪನ್ಯಾಸಕರು, ಪ್ರೊಫೆಸರ್. ಕೈಗಾರಿಕೆಗಳು/ ಕಂಪೆನಿಗಳು:…

Read More

ಹಿಂಪಡೆದ 2000 ರೂಪಾಯಿ ನೋಟುಗಳನ್ನು ಇಂದಿನಿಂದ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಬಹುದು. ನೋಟು ಬದಲಾಯಿಸಿಕೊಳ್ಳಲು ಬರುವವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತೆ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚನೆ ನೀಡಿದೆ. ಎಸ್‌ಬಿಐ ಅಧಿಸೂಚನೆಯ ಪ್ರಕಾರ, ನೋಟುಗಳ ವಿನಿಮಯಕ್ಕಾಗಿ ಶಾಖೆಗೆ ಬರುವ ಗ್ರಾಹಕರು ಯಾವುದೇ ಗುರುತಿನ ಪುರಾವೆ, ವಿಶೇಷ ಅರ್ಜಿ ಅಥವಾ ನಮೂನೆಯನ್ನು ಭರ್ತಿ ಮಾಡುವ ಅಗತ್ಯವಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫಾರ್ಮ್ ಅನ್ನು ಸಲ್ಲಿಸದೆಯೇ ಒಂದು ಬಾರಿಗೆ 20,000 ರೂ.ವರೆಗೆ ವರ್ಗಾಯಿಸಬಹುದು ಎಂದು ವಿವರಿಸಿದೆ. ‘ಕ್ಲೀನ್ ನೋಟ್’ ನೀತಿ ಜಾರಿಯಿಂದ ಮಾರುಕಟ್ಟೆ ಇಂದಿನಿಂದ ತನ್ನ ಪ್ರತಿಬಿಂಬ ಕಾಣಲು ಆರಂಭಿಸಲಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಭಾರತೀಯ ಕರೆನ್ಸಿ 2000 ರೂ. 2000 ನೋಟುಗಳ ಮುದ್ರಣವನ್ನು ನಿಲ್ಲಿಸಿರುವುದಾಗಿ ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 2000 ನೋಟುಗಳನ್ನು ಚಲಾವಣೆ ಮಾಡದಂತೆ ಬ್ಯಾಂಕ್‌ಗಳಿಗೂ ಸೂಚನೆ ನೀಡಲಾಗಿದೆ. ನೋಟು ಅಮಾನ್ಯೀಕರಣದ ಭಾಗವಾಗಿ 2000 ರೂಪಾಯಿ ಕರೆನ್ಸಿ ನೀಡುವುದನ್ನು ನಿಲ್ಲಿಸುವಂತೆ ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.…

Read More

ಈಗಾಗಲೇ 8+2 – 10 ಜನರಿಗೆ ಮಿನಿಸ್ಟರ್, ಉಪಮುಖ್ಯಮಂತ್ರಿ ಹೀಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇನ್ನುಳಿದವರಿಗೆ ಮೂರು ದಿನ ಆದ ಮೇಲೆ ಸಚಿವ ಸ್ಥಾನ ಕೊಡ್ಬಹುದು ಅಂತ ಅನ್ಕೊಂಡಿದ್ದೇನೆ. ಇನ್ನು 24, 25 ಸಚಿವರನ್ನ ಮಾಡ್ಬೇಕು. ಬಹುಶಃ ಅದೆಲ್ಲಾ ಆದ ಮೇಲೆ ಮಾಡುವ ಚಿಂತನೆ ಇರ್ಬಹುದು ಮುಖ್ಯಮಂತ್ರಿಗಳಿಗೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ  ಮಾತನಾಡಿದ ಅವರು, ಈಗ ಆಗಿರೋರೆಲ್ಲಾ ಹಿರಿಯ ಸಚಿವರೇ. ಸ್ವಾಭಾವಿಕವಾಗಿ ಎಲ್ಲರಿಗೂ ದೊಡ್ಡ ದೊಡ್ಡ ಖಾತೆಗಳ ಬಗ್ಗೆ ಚಿಂತನೆ ಇರುತ್ತೆ ಎಂದರು. ಯಾರಿಗೆ ಯಾವ ಖಾತೆ ಕೊಡ್ಬೇಕು ಅನ್ನೋದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ತುಮಕೂರು ಜಿಲ್ಲೆಯಲ್ಲಿ ಇನ್ನು ಮೂರು ಸಚಿವ ಅಕಾಂಕ್ಷಿಗಳ ವಿಚಾರಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು,   ಮೂರೇ ಯಾಕೆ 7 ಜನರನ್ನು ಸಚಿವರನ್ನಾಗಿ ಮಾಡಬಹುದಲ್ವಾ ಎಂದು ಮರು ಪ್ರಶ್ನೆ ಹಾಕಿದರು. 7 ಜನರನ್ನ ಸಚಿವರನ್ನಾಗಿ ಮಾಡಬಹುದು, ಯಾಕೆ ತುಮಕೂರಿಗೆ ಮೂರು.. ನಮ್ಮ ಹೈಕಮಾಂಡ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ…

Read More

ಕಾಂಗ್ರೆಸ್ ಅವಧಿಯಲ್ಲಿ ಅಮೇಥಿಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಕ್ಷೇತ್ರದ ಶೇ.80ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಮೂಲ ಅಭಿವೃದ್ಧಿಯೇ ಆಗಿಲ್ಲ. ತಿರುವನಂತಪುರಂನಲ್ಲಿ ನಡೆದ ಬಿಎಸ್‌ಎಸ್ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುವಾಗ ಈ ಉಲ್ಲೇಖ ಮಾಡಲಾಗಿದೆ. ರಾಹುಲ್ ಗಾಂಧಿ ಅಮೇಠಿಯಿಂದ ವಯನಾಡ್ ತಲುಪಲು ಹಲವು ಕಾರಣಗಳಿವೆ. ಸೋಲಿನ ಭೀತಿಯಿಂದ ರಾಹುಲ್ ವಯನಾಡಿಗೆ ಬಂದಿದ್ದಾರೆ. ರಾಹುಲ್ ವಯನಾಡ್ ನಲ್ಲಿ ಉಳಿದುಕೊಂಡರೆ ವಯನಾಡ್ ನಲ್ಲೂ ಅದೇ ಪರಿಸ್ಥಿತಿ ಬರುತ್ತದೆ ಎಂದು ಸ್ಮೃತಿ ಸೇರಿಸಿದರು. 2019ರಲ್ಲಿ ಅಮೇಠಿಯಲ್ಲಿ ರಾಹುಲ್ ಅವರನ್ನು ಸೋಲಿಸಿದ್ದ ಸ್ಮೃತಿ, ಪೊಲೀಸರು ಮತ್ತು ಸಚಿವರನ್ನು ಟೀಕಿಸಿದ್ದರು. ವಂದನಾಗೆ ಕೇರಳ ಪೊಲೀಸರು ಭದ್ರತೆ ನೀಡದಿರುವುದನ್ನು ಸಚಿವರು ಟೀಕಿಸಿದ್ದಾರೆ.ಇದೇ ವೇಳೆ ಕೇರಳದಲ್ಲಿ ಅಂಗನವಾಡಿಗಳ ನವೀಕರಣಕ್ಕೆ ಎಳೆದಾಡುತ್ತಿದೆ ಎಂದು ಅಭಿಪ್ರಾಯಪಟ್ಟರು. ತಂತ್ರಜ್ಞಾನದ ನೆರವಿನಿಂದ ಕೇರಳದ ಅಂಗನವಾಡಿಗಳನ್ನು ಇನ್ನಷ್ಟು ಆಧುನೀಕರಣಗೊಳಿಸಬೇಕಿದೆ. ಸ್ಮೃತಿ ಇರಾನಿ ಮಾತನಾಡಿ, ರಾಜ್ಯದ 33 ಸಾವಿರ ಅಂಗನವಾಡಿಗಳಲ್ಲಿ ಶೇ.13 ರಷ್ಟು ಮೇಲ್ವಿಚಾರಕರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ…

Read More

ನೂತನ ಸಚಿವರಾದ ಬಳಿಕ ಮೊದಲ ಬಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟ ಡಾ.ಜಿ.ಪರಮೇಶ್ವರ್,  ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಡಾ. ಜಿ ಪರಮೇಶ್ವರ್.  ಬಳಿಕ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದರು. ಸಿದ್ದಗಂಗಾ ಮಠಕ್ಕೆ ಭೇಟಿ ಬಳಿಕ ‌ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್,  ಯಾವುದೇ ತತ್ಸಕಾರ್ಯಕ್ಕೆ ನಮ್ಮಲ್ಲಿ ಒಂದು ಪದ್ದತಿ ಇದೆ. ಶ್ರೀ ಮಠಕ್ಕೆ ಭೇಟಿ ಕೊಟ್ಟು,ಪರಮಪೂಜ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಳ್ಳೋದು ಒಂದು ಸಂಪ್ರದಾಯವಾಗಿದೆ ಎಂದರು. ನಮ್ಮ ಜಿಲ್ಲೆಗೆ ಅನೇಕ ರಾಜ್ಯದ ಜನರು ಬಂದು ಸಂಪ್ರದಾಯವನ್ನ ನಡೆಸಿಕೊಡ್ತಾರೆ. ನಮ್ಮ ತಂದೆಯವರ ಕಾಲದಿಂದ ನಮ್ಮ ಕುಟುಂಬದವರೆಲ್ಲರುವ ಶ್ರೀಮಠಕ್ಕೆ ಹಾಗೆಯೇ ನಡೆದುಕೊಳ್ತೆವೆ ಎಂದರು. ಸಿದ್ದಲಿಂಗ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಚುನಾವಣೆಯ ಮೊದಲು ಇಲ್ಲಿಗೆ ಬಂದು ಆಶೀರ್ವಾದ ಪಡೆದುಕೊಂಡಿದ್ದೆ. ಈಗ ಗೆದ್ದಾದ ಮೇಲೆ ಬಂದು ಅದರಲ್ಲೂ ವಿಶೇಷವಾಗಿ ಸಚಿವರಾಗಿ ಬಂದು ಆಶೀರ್ವಾದ ಪಡೆದಿದ್ದೇನೆ…

Read More

ಮೂರು ದಿನಗಳ ಕಾಲ ನಡೆಯಲಿರುವ ವಿಧಾನಸಭೆಯ ಮೊದಲ ಅಧಿವೇಶನಕ್ಕೆ ಆಗಮಿಸಿದ್ದ ಶಾಸಕ ಜನಾರ್ದನ ರೆಡ್ಡಿಯವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಶುಭ ಕೋರಿದ್ದಾರೆ. ವಿಧಾನಸೌಧದ ಒಳಗೆ ಶಾಸಕರ ಫೋಟೋ ತೆಗೆಸಲು ವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಇಬ್ಬರು ಫೋಟೋಗೆ ಪೋಸ್ ನೀಡಿದ್ದಾರೆ. ಬಂದಿದ್ದ ಶಾಸಕರು ವಿವಿಧ ಐಡಿ ಕಾರ್ಡ್‍ಗಳಿಗೆ ಫೋಟೋ ತೆಗೆಸಿಕೊಂಡರು. ಇದಲ್ಲದೆ ಆಡಳಿತ ಮತ್ತು ವಿಪಕ್ಷ ಮೊಗಸಾಲೆಯಲ್ಲಿ ಫೋಟೋ ತೆಗೆಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆದ್ದ ನೂತನ ಶಾಸಕರು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ದೇಶದಲ್ಲಿ 2000 ರೂಪಾಯಿ ಕರೆನ್ಸಿಯನ್ನು ಪರಿಚಯಿಸಲು ಪ್ರಧಾನಿ ನರೇಂದ್ರ ಮೋದಿ ಆಸಕ್ತಿ ಹೊಂದಿಲ್ಲ ಎಂದು ವರದಿಯಾಗಿದೆ. ನೋಟು ಅಮಾನ್ಯೀಕರಣವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಜಾರಿಗೆ ತರಬೇಕಾಗಿರುವುದು ಮತ್ತು ಸಣ್ಣ ಕರೆನ್ಸಿ ನೋಟುಗಳನ್ನು ಮುದ್ರಿಸುವ ಸಾಮರ್ಥ್ಯ ಇಲ್ಲದಿರುವುದು ಇದಕ್ಕೆ ಕಾರಣವಾಗಿತ್ತು. ಪ್ರಧಾನಿ ಮೋದಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮೋದಿ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ. ನೃಪೇಂದ್ರ ಮಿಶ್ರಾ ಅವರು 2014-2019ರ ಅವಧಿಯಲ್ಲಿ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು 2000 ನೋಟು ಬಡವರ ಕರೆನ್ಸಿ ನೋಟು ಎಂದು ನೋಡಲಿಲ್ಲ. 1000 ಮತ್ತು 500 ನೋಟುಗಳನ್ನು ಹಿಂತೆಗೆದುಕೊಂಡ ನಂತರ ಸ್ವಲ್ಪ ಸಮಯದವರೆಗೆ ಅಲ್ಲಿ ಹೊಸ ನೋಟುಗಳನ್ನು ನೀಡಬೇಕಾಯಿತು. ನಿಷೇಧಿತ ನೋಟುಗಳ ವಾಪಸಾತಿ, ಹೊಸ ನೋಟುಗಳ ಮುದ್ರಣ ಸೇರಿದಂತೆ ವಿಷಯಗಳನ್ನು ಅವಲೋಕಿಸಿದಾಗ 2000 ನೋಟುಗಳನ್ನು ಬಿಡುಗಡೆ ಮಾಡುವುದೇ ಪರಿಹಾರವಾಗಿತ್ತು’ ಎಂದು ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಕಪ್ಪುಹಣದ ವಿರುದ್ಧ ಹೋರಾಡಲು ನೋಟು ನಿಷೇಧ ಮಾಡಲಾಗಿದೆ. ನಂತರ…

Read More