Author: admin

ಕೇರಳ: ತ್ವರಿತ ಸಾಲದ ಹಣದ ಅರ್ಜಿಗಳ ಬಲೆಗೆ ಹೆಚ್ಚಿನ ಸಂಖ್ಯೆಯ ಜನರು ಬಲಿಯಾಗುತ್ತಿದ್ದಾರೆ. ಕೊಟ್ಟಾಯಂ ಮೂಲದವರೊಬ್ಬರು ಈ ಬಲೆಯಿಂದ ಪಾರಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದರು ಮರುಕಳಿಸಿದ ಜೀವನ. ಕೊಟ್ಟಾಯಂ ಪಂಪಾಡಿಯ ನಿವಾಸಿಯೊಬ್ಬರು ಸ್ಮಾರ್ಟ್‌ ಕಾಯಿನ್ ಮತ್ತು ದಟ್ಟಪೇ ಎಂಬ ಆನ್‌ ಲೈನ್ ಇನ್‌ ಸ್ಟಂಟ್ ಮನಿ ಅಪ್‌ ಗಳ ಮೂಲಕ ಮೂರು ಕಂತುಗಳಲ್ಲಿ ರೂ. 15,000 ಸಾಲವನ್ನು ಪಡೆದರು. ಮೊತ್ತವನ್ನು ಸರಿಯಾಗಿ ಮರುಪಾವತಿ ಮಾಡಲಾಗಿದೆ. ಆದರೆ ಮತ್ತೆ ಹಣ ಕೇಳುವ ಸಂದೇಶಗಳು ಬರಲಾರಂಭಿಸಿದವು. ನಾನು ಅದನ್ನು ನಮೂದಿಸಿ ಮೊತ್ತವನ್ನು ಪಾವತಿಸಿ ಅದರ ಸ್ಕ್ರೀನ್‌ ಶಾಟ್ ತೆಗೆದುಕೊಂಡೆ. ಬಳಿಕ ಮತ್ತೊಂದು ನಂಬರ್‌ ನಿಂದ ನಗದು ಹಣ ನೀಡುವಂತೆ ಸಂದೇಶ ಬಂದಿತ್ತು. ಆದರೆ ನಾನು ಪಾವತಿಯ ಸ್ಕ್ರೀನ್‌ ಶಾಟ್ ಅನ್ನು ಅವರಿಗೆ ತೋರಿಸಿದಾಗ, ಅವರು ಅದನ್ನು ಸ್ವೀಕರಿಸಲಿಲ್ಲ. “ಹಣ ಕಳುಹಿಸದಿದ್ದರೆ, ನಿಮಗೆ ಕೆಲಸ ಸಿಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮೊದಲು ಪಠ್ಯಗಳು, ನಂತರ ಬೆದರಿಕೆ ಫೋನ್ ಕರೆ, ನಂತರ ತಮಗೆ ಸಂಬಂಧವೇ ಇಲ್ಲದ ನಮ್ಮ…

Read More

ಮಧುಗಿರಿ ರಾಗಿ ಖರೀದಿ ಕೇಂದ್ರದಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ ಅನ್ನೋ ಸ್ಥಿತಿ ನಿರ್ಮಾಣವಾಗಿದ್ದು  ರೈತರು ತಮ್ಮ ಊರಿನಿಂದ ರಾಗಿಗಳನ್ನು ತಂದು ಬೀದಿಯಲ್ಲಿ ಪರದಾಡುವಂತಾಗಿದೆ. ಮಧುಗಿರಿ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಬೇಕಾದರೆ ರೈತರು ಎರಡು ಮೂರು ದಿನಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಗಿ ಬೆಳೆಯಲು ಕೂಡ ರೈತರು ಇಷ್ಟೊಂದು ಕಷ್ಟಪಟ್ಟಿರಲಿಕ್ಕಿಲ್ಲ. ಆದರೆ, ಇದೀಗ ರಾಗಿ ಮಾರಾಟ ಮಾಡಲು ನಿದ್ದೆ ಬಿಟ್ಟು ಬೀದಿ ಬದಿ ಕಾಯುವಂತಾಗಿದೆ. ರಾಗಿ ತಂದು ಎರಡು ದಿನ ಕಾದರು ಕೆಲ ರೈತರಿಗೆ ಅಧಿಕಾರಿಗಳು  ದೂಳು ಮಣ್ಣಿನ ಅಂಶ ಇದೆ ಎಂದು ಸಬೂಬು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ರಾಗಿ ತಂದು ಎರಡು ಮೂರು ದಿನಗಳಿಂದ  ರೈತರು ರಸ್ತೆಯಲ್ಲಿ ಕಾಯುವಂತಾಗಿದೆ. ಇದರಿಂದಾಗಿ ರೈತರ ಖರ್ಚು ದುಪ್ಪಟ್ಟಾಗುತ್ತಿದೆ. ರೈತರು ಬಾಡಿಗೆ ವಾಹನದಲ್ಲಿ ರಾಗಿ ತೆಗೆದುಕೊಂಡು ಬಂದಿದ್ದಾರೆ. ಆದರೆ ವಾಹನ ಮಾಲಿಕರು ನಾವು ಕಾಯಲು ಆಗುವುದಿಲ್ಲ ನಮಗೆ ಇನ್ನೂ ಒಂದು ದಿನದ ಬಾಡಿಗೆ ನೀಡಿದರೆ ಇಲ್ಲೆ ಇರುತ್ತವೆ ಎನ್ನುತ್ತಿದ್ದಾರೆ. ಇದರಿಂದಾಗಿ…

Read More

ಬೆಂಗಳೂರು: ಕಾಲೇಜು ವಾರ್ಷಿಕೋತ್ಸವದಲ್ಲಿ ಪಂಜುರ್ಲಿ ದೈವದ ವೇಷ ಧರಿಸಿ ನೃತ್ಯ ಮಾಡಿದ ವಿದ್ಯಾರ್ಥಿಯ ಮೇಲೆ ದೈವ ಆವಾಹನೆಯಾದ ಘಟನೆ ನಡೆದಿದೆ. ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಾಂತಾರದ ಹಾಡಿಗೆ ದೈವ ವೇಷ ಧರಿಸಿ ಪಿಯುಸಿ ವಿದ್ಯಾರ್ಥಿ ನೃತ್ಯ ಮಾಡುತ್ತಿದ್ದ ಈ ವೇಳೆ ದೈವ ಆವಾಹನೆಯಾಗಿದೆ ಅನ್ನೋ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಬೆಂಗಳೂರಿನ ಹೊಂಬೇಗೌಡ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ವಿದ್ಯಾರ್ಥಿ ವಿಶಾಲ್ ಎಂಬಾತನು ವಾರ್ಷಿಕೋತ್ಸವದಲ್ಲಿ ವರಾಹ ರೂಪಂ ಹಾಡಿಗೆ ನೃತ್ಯ ಮಾಡಿದ್ದ. ಬಳಿಕ ವೇದಿಕೆಯಿಂದ ಕೆಳಗಿಳಿದ ವೇಳೆ ದೈವ ಆವಾಹನೆಯಾಗಿದೆ. ಬಳಿಕ ಸಹಪಾಠಿಗಳು ಶಿಕ್ಷಕರು ವಿದ್ಯಾರ್ಥಿಯನ್ನು ಉಪಚರಿಸಿದ್ದಾರೆ. ತಕ್ಷಣವೇ ಆಯೋಜಕರು ಹಾಡು ನಿಲ್ಲಿಸಿದ್ದಾರೆನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ. ಕೊರಟಗೆರೆ:  ಕರ್ನಾಟಕದ ಡಿಸಿಎಂ ಮತ್ತು ಕೊರಟಗೆರೆಯ ಶಾಸಕನಾಗಿ 5ವರ್ಷವು ಜನರ ಒಡನಾಡಿಯಾಗಿ ಪ್ರತಿ ಹಳ್ಳಿಯಲ್ಲೂ ಅಭಿವೃದ್ದಿಯ ಕೆಲಸ ಮಾಡಿದ್ದೇನೆ. ಆದರೇ ನಾನು ಜನರ ಕೈಗೆ ಸಿಗೋದೇ ಇಲ್ಲವೆಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಆರೋಪ ಮಾಡ್ತಾರೇ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು. ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಯಾದವ ಸಮುದಾಯದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕೊರಟಗೆರೆ ಕ್ಷೇತ್ರದ ಜನತೆಯ ಆಶೀರ್ವಾದದಿಂದ ನನಗೆ ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ, ಡಿಸಿಎಂ ಹುದ್ದೆ ದೊರೆತಿದೆ. ಭಾರತದ ಯಾವುದೇ ರಾಜ್ಯಕ್ಕೆ ಹೋದ್ರು ಅಲ್ಲಿ ಕೊರಟಗೆರೆ ಅಂದ್ರೇ ಡಾ.ಜಿ.ಪರಮೇಶ್ವರ್ ಅಂತಾರೇ. ಕೊರಟಗೆರೆ ಕ್ಷೇತ್ರಕ್ಕೆ ಕಳೆದ 5 ವರ್ಷದಲ್ಲಿ 2,500 ಕೋಟಿ ಅನುದಾನ ತಂದು ಮತದಾರರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಅಂಕಿಅಂಶದ ದಾಖಲೆಯ ಪುಸ್ತಕ ನೀಡಿ 2023ರ ಚುನಾವಣೆಗೆ ಹೋಗ್ತಿದ್ದೇನೆ ಎಂದು ತಿಳಿಸಿದರು. ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸಣ್ಣಮುದ್ದಯ್ಯ ಮಾತನಾಡಿ, 2023ಕ್ಕೆ ಕೊರಟಗೆರೆ…

Read More

ಕೊಟ್ಟಿಗೆಹಾರ: ಬಣಕಲ್‍ನ ಮತ್ತಿಕಟ್ಟೆಯಲ್ಲಿ ಹುಲಿ ದಾಳಿಗೆ ಹಸುವೊಂದು ಶುಕ್ರವಾರ  ಸಂಜೆ ಬಲಿಯಾಗಿದೆ. ಮತ್ತಿಕಟ್ಟೆಯ ಬ್ಲೂ ಮೌಂಟ್ ಎಸ್ಟೇಟ್ ಆನಂದ್ ಮಿಸ್ಕಿತ್ ಅವರ ಕಾಫಿ ತೋಟದಲ್ಲಿ ಮಧುಸೂದನ್ ಚಂದ್ರಾವತಿ ಪೂಜಾರಿಯವರ ಸಿಂಧಿ ಹಸುವನ್ನು ಹುಲಿ ಕೊಂದು ಹಾಕಿದೆ.ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ಉಮೇಶ್,ಅರಣ್ಯ ಗಸ್ತು ಅಧಿಕಾರಿ ಜಯಪ್ಪ,ಮೋಸಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರಂತರ ಸಾಗುತ್ತಿರುವ ಹುಲಿ ದಾಳಿ:ಬಣಕಲ್ ನ ಹೆಗ್ಗುಡ್ಲು ಮತ್ತಿಕಟ್ಟೆ, ಬಿ.ಹೊಸಳ್ಳಿ, ಹೊಕ್ಕಳ್ಳಿ,ಭಾರತಿಬೈಲ್ ಭಾಗದಲ್ಲಿ ಹುಲಿ ದಾಳಿ ಸಾಗುತ್ತಿದ್ದು ಈವರೆಗೂ ಸುಮಾರು 50 ಕ್ಕೂ ಹೆಚ್ಚು ದನಗಳು ಹುಲಿ ಪಾಲಾಗಿವೆ.ಆದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ಬಾರಿ ಹುಲಿ ಸ್ಥಳಾಂತರಿಸುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಹುಲಿ ಸೆರೆಗೆ ಸಿಸಿ ಕ್ಯಾಮೆರಾ ಕಣ್ಘಾವಲು ಹಾಕಿದರೂ ಹುಲಿಯನ್ನು ಸ್ಥಳಾಂತರ ಮಾಡಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.ಹುಲಿ  ದಾಳಿಯನ್ನು ನಿಯಂತ್ರಿಸಲು ಹುಲಿ ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥ ಎಚ್.ಟಿ.ಪ್ರಸನ್ನ ಒತ್ತಾಯಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ತುರುವೇಕೆರೆ: ತಾಲೂಕಿನ ಕಸಬಾ  ಹೋಬಳಿ ಗುಡ್ಡೆನೆಹಳ್ಳಿ ಗ್ರಾಮದ ಹಿರಿಯ ಜೆಡಿಎಸ್ ಮುಖಂಡರಾದ ಜಿ.ಶಂಕರೇಗೌಡ ಹಾಗೂ ಜೆಡಿಎಸ್ ಪಕ್ಷದಿಂದ ಗೆದ್ದು ಎಪಿಎಂಸಿ ಮಾಜಿ ಅಧ್ಯಕ್ಷರಾಗಿದ್ದ ಛಾಯಾಶಂಕರೇಗೌಡ ಹಾಗೂ ತುರುವೇಕೆರೆ ಕಾಂಗ್ರೆಸ್ ಮುಖಂಡರು ಹಾಗೂ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ  ಕೆ.ಟಿ.ಶಿವಶಂಕರ್ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು. ಜೆ ಡಿ ಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯ ವೈಖರಿಗಳಿಂದ, ಬೇಸತ್ತು ಬಾರತೀಯ ಜನತಾ ಪಕ್ಷದ  ತತ್ವ ಹಾಗೂ ಸಿದ್ದಾಂತವನ್ನು ಒಪ್ಪಿ ಶಾಸಕರಾದ ಮಸಾಲ ಜಯರಾಮ್ ರವರ ಸರಳತೆ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ನೂತನ ಸದಸ್ಯರು ತಿಳಿಸಿದರು. ಮಾಜಿ ಸಂಸದರಾದ ಎಸ್.ಪಿ. ಮುದ್ದುಹನುಮೇಗೌಡರ ನೇತೃತ್ವದಲ್ಲಿ ಹಾರ ಹಾಗೂ ಪಕ್ಷದ ಬಾವುಟ ನೀಡುವ ಮೂಲಕ ನೂತನ ಸದಸ್ಯರನ್ನು ಆತ್ಮೀಯವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಮಸಾಲ ಜಯರಾಮ್, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ವಿ.ಬಿ.ಸುರೇಶ್, ಡಿ.ಜೆ.ರಂಗಸ್ವಾಮಿ ಮತ್ತಿತರರು ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಕುಂದಗೋಳ: ತಾಲೂಕಿನ ಬೆನಕನಹಳ್ಳಿ ಗ್ರಾಮಕ್ಕೆ ಇಂದು ಬೆಳ್ಳಂಬೆಳಗ್ಗೆ ನುಗ್ಗಿದ ನಾಯಿಯೋ, ತೋಳಯೋ, ನರಿವೋ ಎಂದು ತಿಳಿಯದ ಪ್ರಾಣಿ ಬರೋಬ್ಬರಿ 9 ಜನರಿಗೆ ಕಚ್ಚಿ ಗಾಯಪಡಿಸಿದ ಘಟನೆ ಕುಂದಗೋಳ ತಾಲೂಕಿನ ಬೆನಕನಹಳ್ಳಿಯಲ್ಲಿ ನಡೆದಿದೆ. ಗಾಯಾಳುಗಳೆಲ್ಲಾ ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿ ಆಗಿಲ್ಲಾ.ಮನುಷ್ಯರನ್ನೇ ಅಲ್ಲದೇ ಜಾನುವಾರುಗಳ ಮೇಲೆ ದಾಳಿ ಮಾಡಿದ ಪ್ರಾಣಿ ಅವುಗಳಿಗೂ ಕಚ್ಚಿ ಗಾಯಪಡಿಸಿದೆ. ಇಂದು ಬೆನಕನಹಳ್ಳಿ ಗ್ರಾಮಕ್ಕೆ ಮಬ್ಬು ಕತಲಲ್ಲಿ ನುಗ್ಗಿದ ಪ್ರಾಣಿ, ಕಸ ಗುಡಿಸುವವರು, ಜಾನುವಾರು ಹೊರಗೆ ಕಟ್ಟುವವರು, ಗೋಧಿ ಕೀಳಲು ಹೋದವರ ಮೇಲೆ ದಾಳಿ ಮಾಡಿದೆ. ಒಟ್ಟಾರೆ ಯಾವುದೋ ಪ್ರಾಣಿ ಜನರ ರಕ್ತದ ರುಚಿ ನೋಡಿ ಓಡಿ ಹೋಗಿದೆ ಎಂದು ಇಲ್ಲಿನ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ವರದಿ: ಸುರೇಶ್ ಬಾಬು ಎಂ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಹೊಳೆನರಸೀಪುರ: ತಾಲ್ಲೂಕಿನ ಶ್ರವಣೂರಲ್ಲಿ ಗ್ರಾಮದಲ್ಲಿ ಇಂದು ಅಖಿಲ ನಾಮಧಾರಿಗೌಡ ಸಂಘವನ್ನು ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜೇಗೌಡರು, ಗ್ರಾಮದಲ್ಲಿ ಎಲ್ಲಾರು ಅಣ್ಣ ತಮ್ಮಂದಿರಂತೆ ಇರಬೇಕೆಂದು ಯುವಕರಿಗೆ ಕಿವಿ ಮಾತು ಹೇಳಿದರು. ಗ್ರಾಮದ ಮುಖಂಡರಾದ ತಿಮ್ಮೇಗೌಡರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರವಣೂರು ಗ್ರಾಮದ ಹಿರಿಯರಿಗೆ ಸನ್ಮಾನ ಮಾಡಲಾಯಿತು. ವಾಲ್ಮೀಕಿ ಯುವಕರ ಸಂಘ ಮತ್ತು ಅಪ್ಪು ಅಭಿಮಾನಿಗಳ ಬಳಗ ಶ್ರವಣೂರು ಹಾಗೂ ಸುತ್ತಮುತ್ತ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ವರದಿ:  ಮಂಜು ಶ್ರವಣೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಅಥಣಿ: ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ. ಅಥಣಿ ತಾಲೂಕಿನ ಹಲ್ಯಾಳ ಸಕ್ಕರೆ ಕೃಷ್ಣಾ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಬಗ್ಯಾಸಗೆ (ಒನ ಹಿಪ್ಪಿಗೆ) ಬೆಂಕಿ ತಗಲಿದೆ. ಪರಿಣಾಮವಾಗಿ ಭಾರೀ ಬೆಂಕಿ ಸೃಷ್ಟಿಯಾಗಿದ್ದು, ಆತಂಕ ಸೃಷ್ಟಿಸಿತ್ತು. ಘಟನಾ ಸ್ಥಳಕ್ಕೆ ಸುಮಾರು 5 ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡಿವೆ. ಸತತ ಪ್ರಯತ್ನದ ಬಳಿಕ ಬೆಂಕಿ ಹತೋಟಿಗೆ ಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ವರದಿ: ಸುರೇಶ್ ಬಾಬು ಎಂ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸೂರ್ಯ ಯಾವಾಗಲೂ ಸಂಶೋಧನಾ ಜಗತ್ತನ್ನು ಆಕರ್ಷಿಸಿದ್ದಾನೆ. ಇದೀಗ ಹೊಸ ಬೆಳವಣಿಗೆಯೊಂದು ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದೆ. ಸೂರ್ಯನ ಮೇಲ್ಮೈಯ ಒಂದು ಭಾಗವು ಬೇರ್ಪಟ್ಟಿದೆ ಎಂಬುದು ವೈಜ್ಞಾನಿಕ ಪ್ರಪಂಚದ ಆವಿಷ್ಕಾರವಾಗಿದೆ. ಇದರೊಂದಿಗೆ ಉತ್ತರ ಧ್ರುವದಲ್ಲಿ ಚಂಡಮಾರುತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ. ಎನ್‌ಡಿಟಿವಿ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ಮಾಹಿತಿ ನೀಡಿವೆ. ಈ ವಿದ್ಯಮಾನವನ್ನು ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ಕಂಡುಹಿಡಿದಿದೆ. ಗಗನಯಾತ್ರಿ ಡಾ. ತಮಿತಾ ಸ್ಕೋವ್ ಅವರು ಈ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಂತಹ ವಿದ್ಯಮಾನ ಹೇಗೆ ಸಂಭವಿಸಿತು ಎಂದು ವೈಜ್ಞಾನಿಕ ಜಗತ್ತು ಹುಡುಕುತ್ತಿದೆ. ಸೂರ್ಯನ ಮೇಲ್ಮೈಯಿಂದ ಹೊರಕ್ಕೆ ವಿಸ್ತರಿಸಿರುವ ಭಾಗವು ಬೇರ್ಪಟ್ಟಿದೆ ಎಂದು ನಾಸಾ ಕಂಡುಹಿಡಿದಿದೆ. ನಾಸಾ ಪ್ರಕಾರ, ಈ ಹಿಂದೆಯೂ ಇಂತಹ ವಿದ್ಯಮಾನಗಳು ನಡೆದಿವೆ. ವೈಜ್ಞಾನಿಕ ಜಗತ್ತನ್ನು ಕಂಗೆಡಿಸುವ ಮಾಹಿತಿ ಹೊರಬೀಳುತ್ತಿದೆ. ಸೂರ್ಯನ ಬಿದ್ದ ಭಾಗವು ಉತ್ತರ ಧ್ರುವವನ್ನು ಸುತ್ತಲು ಎಂಟು ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ. ವಿಜ್ಞಾನಿಗಳ ಪ್ರಕಾರ ಚಂಡಮಾರುತದ ವೇಗ ಸೆಕೆಂಡಿಗೆ 96 ಕಿ.ಮೀ. ಸೂರ್ಯನು ನಿರಂತರವಾಗಿ ಸೌರ…

Read More