Subscribe to Updates
Get the latest creative news from FooBar about art, design and business.
- ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್
- ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
- ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ
- ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
- ನವೆಂಬರ್ 7ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ
- ಡಿಸೆಂಬರ್ 2ರವರೆಗೆ ಕಾಲುಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಅಭಿಯಾನ
- ನವೆಂಬರ್ 16ರಂದು ನವೋದಯ ಶಾಲೆ ಮಾಕ್ ಪರೀಕ್ಷೆ
- ಖ್ಯಾತ ಖಳನಟ ಹರೀಶ್ ರಾಯ್ ನಿಧನ
Author: admin
ಇಂದು ರಾಜ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ನಗರದ ಮೂರು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಇದೀಗ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಸಂದರ್ಭದಲ್ಲಿ ಪ್ರತಿಭಟನೆ ಭೀತಿ ಎದುರಾಗಿದೆ. ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಓಡಾಡುವ ರಸ್ತೆಯಲ್ಲಿ ಖಾಕಿ ಕಣ್ಗಾವಲು ಹಾಕಲಾಗಿದೆ. ಇಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬೆಳಿಗ್ಗೆ 11:15 ಕ್ಕೆ ಯಲಹಂಕ ವಾಯು ನೆಲೆಗೆ ಮೋದಿ ಬಂದಿಳಿಯಲಿದ್ದಾರೆ. ಮಲ್ಲೇಶ್ವರಂ ಬಳಿಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಗೆ ಆಗಮಿಸಲಿದ್ದಾರೆ. ಇದಾದ ನಂತರ ಜ್ಞಾನ ಭಾರತಿ ಡಾ. ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ ಗೆ ಭೇಟಿ ನೀಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳ ನಂತರ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ನಂತರ ಪ್ರಧಾನ ಮಂತ್ರಿ ಮೈಸೂರಿಗೆ ತೆರಳಲಿದ್ದಾರೆ. ಪ್ರತಿಭಟನೆ ಭೀತಿ : ಆದರೆ ಪ್ರಧಾನಿ ನರೇಂದ್ರ ಮೋದಿ ಭೀತಿ ವೇಳೆ…
ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಸಮೀಪ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಬಸ್ಸಿನಲ್ಲಿದ್ದ10 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ ತುಮಕೂರು-ಶಿವಮೊಗ್ಗ ನ್ಯಾಷನಲ್ ಹೆದ್ದಾರಿ 206ರಲ್ಲಿ ಘಟನೆ ಸಂಭವಿಸಿದೆ. ನಿಟ್ಟೂರು ಕಡೆಯಿಂದ ತುಮಕೂರು ಕಡೆಗೆ ಕಾರು ಬರುತ್ತಿದ್ದರೆ, ಬೆಂಗಳೂರು ಕಡೆಯಿಂದ ಶಿವಮೊಗ್ಗ ಕಡೆಗೆ ಬಸ್ ಹೊರಟಿತ್ತು. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು,ಕಾರಿನಲ್ಲಿದ್ದ ಗಿರೀಶ್ (37), ಮಾನ್ಯ (17), ಮೃತ ದುರ್ದೈವಿಗಳು. ಬಸ್ಸಿನಲ್ಲಿದ್ದ ಗಾಯಾಳುಗಳನ್ನು ತಕ್ಷಣ ಗುಬ್ಬಿ ಸರ್ಕಾರಿ ಆಸ್ಪತ್ರೆ ಹಾಗೂ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ತೀವ್ರ ಹಸಿವಿನ ಸಂದರ್ಭದಲ್ಲಿ ಒಂದು ಖರ್ಜೂರ ಸೇವಿಸಿದರೆ, ಸಾಕು. ಮನುಷ್ಯನ ದೇಹದ ಅರ್ಧ ಆಯಾಸವನ್ನು ಹೋಗಲಾಡಿಸುವಷ್ಟು ಶಕ್ತಿ ಅದರಲ್ಲಿದೆ. ಸುಮಾರು 500ರಕ್ಕೂ ಹೆಚ್ಚು ವಿಧದ ವಿವಿಧ ಖರ್ಜೂರಗಳಿವೆ. ಈ ಖರ್ಜೂರಗಳಲ್ಲಿ ಮನುಷ್ಯನ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ, ಸೋಡಿಯಂ, ಮೆಗ್ನೀಷಿಯಮ್ ಮತ್ತು ಕಬ್ಬಿಣದ ಅಂಶ ಸೇರಿದಂತೆ ವಿವಿಧ ಅಂಶಗಳಿವೆ. ಮಾಗಿದ ಖರ್ಜೂರವನ್ನು ನೀರಿನಲ್ಲಿ ಕುದಿಸಿದ ಬಳಿಕ ಅದನ್ನು ಒಣಗಿಸಿ, ದೀರ್ಘಕಾಲದ ವರೆಗೂ ಸಂರಕ್ಷಿಸಲಾಗುತ್ತದೆ. ಈ ಖರ್ಜೂರ್ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಕೂಡ ಉತ್ತಮವಾದ ಬೇಡಿಕೆ ಇದೆ. ಮುಖ್ಯವಾಗಿ ಖರ್ಜೂರ ನಮ್ಮ ದೇಹದಲ್ಲಿ ಚೈತನ್ಯವನ್ನು ತುಂಬುತ್ತದೆ. ನಮಗೆ ತೀವ್ರವಾದ ಹಸಿವಾಗುವ ಸಂದರ್ಭದಲ್ಲಿ ಒಂದೆರಡು ಖರ್ಜೂರದ ಹಣ್ಣು ತಿಂದು ನೀರು ಕುಡಿದರೆ ಸಾಕು, ಕೆಲವೇ ಕ್ಷಣಗಳಲ್ಲಿ ನಮ್ಮ ದೇಹ ಹಸಿವು ಮತ್ತು ಆಯಾಸದಿಂದ ಮುಕ್ತವಾಗುತ್ತದೆ. ಒಂದು ಲೋಟ ಹಾಲು ಮತ್ತು ಒಂದು ಖರ್ಜೂರದ ಹಣ್ಣು ಒಂದು ಹೊತ್ತಿನ ಹಸಿವನ್ನು ನೀಗಿಸುವ ಶಕ್ತಿಯನ್ನು ಹೊಂದಿದೆ. ಇದರಲ್ಲಿ ಕಾರ್ಬೋಹೈಡ್ರೇಡ್ ಗಳು, ಪ್ರೋಟೀನ್, ಕ್ಯಾಲ್ಸಿಯಂ, ಅಮೈನೋ ಆಮ್ಲಗಳು, ಸಲ್ಫರ್, ಕಬ್ಬಿಣ, ಪೊಟ್ಯಾಷಿಯಂ,…
ಕೊರಟಗೆರೆ : ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ತಾಲ್ಲೂಕಿನ ವಡ್ಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಗಾನಹಳ್ಳಿ ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟನೆ ಮಾಡಿದ ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್ ಗ್ರಾಮದಲ್ಲಿ ಇಂದು ಜಿಲ್ಲಾಧಿಕಾರಿಗಳ ನೆಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕೋವಿಡ್-19 ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದರು. ಪಿಂಚಣಿಗಳ ಅದಾಲತ್ ಮೂಲಕ ವಿಶೇಷ ಚೇತನರಿಗೆ ವೃದ್ಧರಿಗೆ, ರೈತರ ಕುಟುಂಬಗಳಿಗೆ ಕೃಷಿ ಇಲಾಖೆ ಎಲ್ಲಾ ಸೇವೆಗಳನ್ನು ನೀಡುವಲ್ಲಿ ಜಿಲ್ಲೆಯಲ್ಲಿ ಕೊರಟಗೆರೆ ಪ್ರಮುಖ ಪಾತ್ರ ವಹಿಸಿದೆ ಎಂದರು. ಕೃಷಿ ಇಲಾಖೆಯ ಮೂಲಕ ಅನೇಕ ಪರಿಹಾರಗಳನ್ನು ನೀಡಲಾಗುತ್ತಿವೆ. ರೈತರ ಬಣವೆಗಳು ಬೆಂಕಿಹಾನಿಗೊಳಗಾದಾಗ ರೈತನಿಗೆ ಹಾವು ಕಡಿತದಿಂದ , ಆಕಸ್ಮಿಕವಾಗಿ ಸಿಡಿಲು ಬಡಿತದಿಂದಾಗಿ ಜೀವ ಹಾನಿಗೊಳಗಾದಾಗ ತುರ್ತಾಗಿ ಪರಿಹರಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುವ ಕಮಿಟಿ ರಚಿಸಲಾಗಿದೆ ಎಂದು ತಿಳಿಸಿದರು. ರೈತರಿಗೆ ಸಾವಯವ ಗೊಬ್ಬರಗಳ ತಯಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಜೊತೆಗೆ ಇಲಾಖೆಗಳಲ್ಲಿ ಜಿಂಕ್ ಗೊಬ್ಬರ ರಸಗೊಬ್ಬರಗಳನ್ನು ಕೃಷಿ ಅಧಿಕಾರಿಗಳ ಮೂಲಕ…
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕು ಮಾಯಸಂದ್ರ ಗ್ರಾಮದಲ್ಲಿ, ಏರ್ಪಡಿಸಿದ್ದ ಕಂದಾಯ ಸಚಿವರ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ್ ದಲಿತರ ಮನೆಯ , ರೊಟ್ಟಿ, ಉಪ್ಪಿಟ್ಟು, ಚಿತ್ರಾನ್ನ ಸವಿದರು. ರಾತ್ರಿ ಮಾಯಸಂದ್ರದ ಟಿ.ಬಿ.ಕ್ರಾಸ್ ನಲ್ಲಿರುವ ಶ್ರೀ ಆದಿ ಚುಂಚನಗಿರಿಯ ಮಠದ ಶಾಖಾಮಠ ಕಲ್ಪತರು ಆಶ್ರಮದಲ್ಲಿ ತಂಗಿದ ಅವರು , ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದರು. ಈ ವೇಳೆ ರಸ್ತೆ ಬದಿಯಲ್ಲಿನ ಟೀ ಅಂಗಡಿಯಲ್ಲಿ ಟೀ ಕುಡಿದು, 9:30ರ ವೇಳೆಗೆ ಮಾಯಸಂದ್ರದ ,ಬಡ ದಲಿತರಾದ ಜಯಮ್ಮ ಬಿನ್ ಲೇಟ್ ನಾರಾಯಣಪ್ಪ ಅವರ ಮಗ ವಿನೋದ್ ರವರ ಮನೆಗೆ ತೆರಳಿ ಅವರ ಉಭಯ ಕುಶಲೋಪರಿ ,ವಿಚಾರಿಸಿದರು. ಬಳಿಕ ಅವರ ಮನೆಯಲ್ಲಿ ಮಾಡಿದ್ದ ಅಕ್ಕಿ ರೊಟ್ಟಿ ,ಉಚ್ಛಳು ಚಟ್ನಿಯನ್ನು ಅವರ ಅಡುಗೆ ಕೋಣೆಯಿಂದ ಸಚಿವರು ತಾವೇ ,ಬಡಿಸಿಕೊಂಡು ಹಾಲ್ ನಲ್ಲಿ ಊಟಕ್ಕೆ ಕುಳಿತರು. ಉಪ್ಪಿಟ್ಟು, ಚಿತ್ರಾನ್ನ ಹಾಕಿಸಿಕೊಂಡು ಸವಿದರು. ಸಚಿವರಿಗೆ ಶಾಸಕ ಮಸಾಲ ಜಯರಾಮ್ , ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ದಲಿತ ಮುಖಂಡರಾದ ವಿ.ಟಿ.ವೆಂಕಟರಾಮ್, ಪಟ್ಟಣ ಪಂಚಾಯಿತಿ…
ಚಿತ್ರದುರ್ಗ: ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಚಿತ್ರದುರ್ಗ ಜಿಲ್ಲಾ ಯುವ ಘಟಕದ ವತಿಯಿಂದ ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಚಿತ್ರದುರ್ಗ ತಾಲೂಕು ಯುವ ಘಟಕದ ಅಧ್ಯಕ್ಷರನ್ನಾಗಿ ಗೌತಮ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ರಾಮಚಂದ್ರ. ಕೆ. , ಸಂಘಟನೆ ಕೇವಲ ಐಡಿ ಕಾರ್ಡ್ ಗೆ ಮಾತ್ರ ಸೀಮಿತವಾಗಿರಬಾರದು. ಅಸ್ಪೃಶ್ಯತೆ, ಶೋಷಣೆ, ಅತ್ಯಾಚಾರಕ್ಕೊಳಗಾದವರ ಪರ ಹೋರಾಡಬೇಕು ಎಂದು ತಿಳಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೃಷಭೇಂದ್ರ ಬಾಬುರವರ ಮಾತನಾಡಿ, ಬಾಬಾಸಾಹೇಬರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಾಬಾಸಾಹೇಬರ ವಿಚಾರಗಳನ್ನು ಕೈಗೆತ್ತಿಕೊಂಡು ಯುವಜನತೆ ನಮ್ಮ ದೇಶದ ಮಾದರಿಯಾಗಿ ಬೆಳೆಯಬೇಕು. ದಲಿತರ ಅಲ್ಪಸಂಖ್ಯಾತರ ಶೋಷಣೆಗೊಳಗಾದ ಪರವಾಗಿ ನಿಮ್ಮ ಹೋರಾಟಗಳು ನಡೆಯಬೇಕೆಂದು ನೂತನ ಪದಾಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ವೃಷಭೇಂದ್ರ ಬಾಬು, ಬಿಎಸ್ ಜಿಲ್ಲಾಧ್ಯಕ್ಷರಾದ ರೇವಣಸಿದ್ದಪ್ಪ ಬಿ. ಕಲ್ಕುಂಟೆ, ಜಿಲ್ಲಾ ಕಾರ್ಯದರ್ಶಿಯಾದ ಹನುಮಂತು ಎಸ್., ಹಿರಿಯೂರು ತಾಲೂಕು ಕಾರ್ಯ ಅಧ್ಯಕ್ಷರಾದ…
ಜಮ್ಮು ಕಾಶ್ಮೀರದ ಪಾಂಪೋರ್ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೃತದೇಹ ಕೃಷಿ ಭೂಮಿಯಲ್ಲಿ ಪತ್ತೆಯಾಗಿದ್ದು ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಮೃತ ಅಧಿಕಾರಿಯನ್ನು ಫಾರೂಖ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದ್ದು ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಬ್-ಇನ್ಸ್ಪೆಕ್ಟರ್ (ಮಿನಿಸ್ಟೀರಿಯಲ್ ವಿಂಗ್) ಆಗಿದ್ದರು. ಫಾರೂಖ್ ಅವರನ್ನು ಪಾಂಪೋರ್ನ ಸಂಬೂರ ಪ್ರದೇಶದಲ್ಲಿರುವ ಅವರ ನಿವಾಸದಿಂದ ಅಪಹರಿಸಿ ಹತ್ತಿರದ ಗದ್ದೆಯಲ್ಲಿ ಹತ್ಯೆಗೈಯ್ಯಲಾಗಿದೆ ಎಂದು ಶಂಕಿಸಲಾಗಿದೆ. ಅವರು ಶುಕ್ರವಾರ ಸಂಜೆ ತಮ್ಮ ಮನೆಯಿಂದ ತಮ್ಮ ಭತ್ತದ ಗದ್ದೆಗೆ ತೆರಳಿದ್ದರೆನ್ನಲಾಗಿದೆ. ಅಲ್ಲಿ ಈ ಘಟನೆ ನಡೆದಿದೆ. ಫಾರೂಖ್ ಅವರು ಜಮ್ಮು ಕಾಶ್ಮೀರದ ಐಆರ್ಪಿ ಬೆಟಾಲಿಯನ್ ನಲ್ಲಿ ನಿಯೋಜಿಸಲ್ಪಟ್ಟಿದ್ದರು. ಇನ್ನೂ, ಘಟನೆ ನಡೆದ ವೇಳೆ ಫಾರೂಖ್ ಅವರು ಕರ್ತವ್ಯದಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಆಕೆ ೭ ರಿಂದ ೮ ವರ್ಷದ ಪುಟ್ಟ ಬಾಲೆ.. ಆದ್ರೇ.. ವಿಧಿಯಾಟಕ್ಕೆ ಬಲಿಯಾಗಿ ಚಿಕ್ಕವಯಸ್ಸಿನಲ್ಲಿಯೇ ತನ್ನ ಎಡಗೈ ಕಳೆದುಕೊಂಡಿದ್ದಳು. ಕೃತಕ ಕೈಜೋಡಣೆಯ ಮೂಲಕ, ಜೋವನೋತ್ಸಾಹ ಮೆರೆಯುತ್ತಿದ್ದ ಬಾಲಕಿಯ ಚಿಕಿತ್ಸೆಗಾಗಿ, ಕೆ ಎಸ್ ಆರ್ ಟಿಸಿಯ ಚಾಲಕ ಸೇವೆ ಬಿಟ್ಟು, ದೀರ್ಘಕಾಲಿಕ ರಜೆ ಕೂಡ ಪಡೆಯುವಂತೆ ಆಗಿ, ಕೆಲಸ ಕಳೆದುಕೊಳ್ಳುವಂತೆ ಆಗಿತ್ತು. ಆದ್ರೇ.. ಮಾನವೀಯ ಅಂತಹಃ ಕರಣದ ಕೆ ಎಸ್ ಆರ್ ಟಿ ಸಿ ಎಂ.ಡಿ ಭೇಟಿಯಾದ ಒಂದೇ ಕ್ಷಣದಲ್ಲಿ, ಆ ಪುಟ್ಟ ಬಾಲೆಯ ಮಾತುಗಳಿಗೆ ಭಾವುಕರಾದಂತ ಎಂಡಿ, ಚಾಲಕನಿಗೆ ಮರು ಆದೇಶ ನೀಡಿ, ಮಾನವೀಯತೆ ಮೆರೆದಿದ್ದಾರೆ. ಹೌದು.. ಕು. ಭೂಮಿಕ, ವಯಸ್ಸು ೭ ರಿಂದ ೮ ಆಸುಪಾಸು, ಮುಗ್ಧತೆ, ಪ್ರಾಮಾಣಿಕತೆಯೊಡನೆಯೇ, ವಿಧಿಯಾಟಕ್ಕೆ ಬಲಿಯಾಗಿ ಚಿಕ್ಕ ವಯಸ್ಸಿನಲ್ಲಿಯೇ ವೈದ್ಯಕೀಯ ಲೋಪದಿಂದ ತನ್ನ ಎಡಗೈಯನ್ನು ಭಾಗಷಃ ಕಳೆದುಕೊಂಡು ಕೃತಕ ಕೈಜೋಡಣೆಯೊಂದಿಗಿದ್ದರೂ ಜೀವನೋತ್ಸಾಹ ಹೊಂದಿದ್ದಳು. ಈ ಬಾಲಕಿಯ ತಂದೆ ದೀರ್ಘಾವಧಿ ಗೈರುಹಾಜರಿ ಪ್ರಕರಣದಲ್ಲಿ ನಿಗಮದಿಂದ ವಜಾ ಆಗಿದ್ದು, ಕೆಲಸವಿಲ್ಲದೆ ಜೀವನ ನಡೆಸುವುದಕ್ಕೆ ಕಷ್ಟ ಪಡುತ್ತಿದ್ದು, ಮಗುವಿಗೆ…
ರಾತ್ರಿ ಸುರಿದ ಧಾರಾಕಾರ ಮಳೆಗೆ ಯುವಕನೋರ್ವ ಕೆರೆಯಲ್ಲಿ ಮುಳುಗಿ ದುರ್ಮರಣ ಹೊಂದಿರುವ ಘಟನೆ ಬೆಳಕಿಗೆ ಬಂದಿದ್ದು, ಒಟ್ಟಾರೆ, ಮಹಾಮಳೆಗೆ ಬೆಂಗಳೂರಿನಲ್ಲಿ ಮೂವರು ಕೊನೆಯುಸಿರೆಳೆದಿದ್ದಾರೆ. ದೀಪಕ್ ಎಂಬಾತ ಮೃತ ಯುವಕನಾಗಿದ್ದು, ನಿನ್ನೆ ರಾತ್ರಿ ೧೧ ಗಂಟೆ ಸುಮಾರಿಗೆ ಸ್ನೇಹಿತನ ರವಿಚಂದ್ರ ಜೊತೆಗೆ ಕಾರಿ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮಾಗಡಿ ರಸ್ತೆಯ ತಾವರೆಕೆರೆಯ ಸೀಗೆಹಳ್ಳಿ ಗೇಟ್ ಬಳಿ ದುರಂತ ಸಂಭವಿಸಿದೆ. ಅಲ್ಲದೆ, ತಿರುವಿನಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ರಸ್ತೆಯ ಅಂಚು ಗೊತ್ತಾಗದೆ ಕೆರೆಗೆ ಕಾರು ಇಳಿದಿದ್ದು ಆಗ ಮುಳುಗಲು ಶುರುವಾಗುತ್ತಿದ್ದಂತೆ ರವಿಚಂದ್ರ ಬಾಗಿಲು ತೆಗೆದು ಹೊರಬಂದಿದ್ದಾನೆ. ಆದರೆ ದೀಪಕ್ ಕಾರ್ ನಿಂದ ಆಚೆ ಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ಅಗ್ನಿಶಾಮಕ ದಳ ಮತ್ತು ಎಸ್.ಡಿ.ಆರ್.ಎಫ್ ಸಿಬ್ಬಂದಿ ಕಾರ್ಯಾಚರಣ ನಡೆಸಿ ಕೆರೆಯಿಂದ ಮೃತದೇಹ ಮತ್ತು ಕಾರು ಹೊರತೆಗೆಯಲಾಗಿದೆ.ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…
ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆ ವಿರೋಧಿಸಿ ಇಂದೂ ಕೂಡ ದೇಶದ ಹಲವೆಡೆ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದೆ. ಬಿಹಾರದಲ್ಲಿ ರೊಚ್ಚಿಗೆದ್ದ ಗುಂಪು ವಾಹನಗಳಿಗೆ ಬೆಂಕಿ ಹಚ್ಚಿದೆ. ಮತ್ತೊಂದೆಡೆ ತಮಿಳುನಾಡು-ಪಂಜಾಬ್ನಲ್ಲೂ ಪ್ರತಿಭಟನೆಯ ಕಾವು ಮತ್ತಷ್ಟು ತೀವ್ರಗೊಂಡಿದ್ದು, ಮುನ್ನೆಚ್ಚೆರಿಕೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಿನ್ನೆ ಬಿಹಾರದಲ್ಲಿ ರೈಲುಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂದೂ ಕೂಡ ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರ ಬಂದ್ಗೆ ಕರೆ ನೀಡಲಾಗಿದೆ. ಬಿಹಾರದ ಸಂಘಟನೆಗಳು ಯೋಜನೆ ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ೭೨ ಗಂಟೆಗಳ ಕಾಲಾವಕಾಶ ನೀಡಿದೆ. ಈ ಬಂದ್ ಗೆ ಆರ್ ಜೆಡಿ, ಮಹಾಘಟ ಬಂಧನ್ ಜತೆಗೆ ವಿವಿಧ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಬಂದ್ ನಡುವೆಯೂ ಜೆಹನಾಬಾದ್ನಲ್ಲಿ ಉದ್ರಿಕ್ತ ಗುಂಪು ಬಸ್, ಟ್ರಕ್ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದೆ. ಯುವಕರನ್ನು ಸೇನೆಗೆ ಅಲ್ಪಾವಧಿಗಾಗಿ ನೇಮಕ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿತ್ತು. ಈ ಯೋಜನೆ…