Author: admin

ತಿಪಟೂರು: ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಜನರ ಆಸೆಗೆ ಮತ್ತು ಭಾವನೆಗಳಿಗೆ ಸರ್ಕಾರ ಎಳ್ಳುನೀರು ಬಿಟ್ಟಿದೆ ಎಂದು ಕಾಂಗ್ರೆಸ್ ನ ಮಾಜಿ ಶಾಸಕ ಕೆ ಷಡಕ್ಷರಿ ಅವರು ಹೇಳಿದರು. ತಿಪಟೂರು ನಗರದ ಸರ್ಕಾರಿ ನೌಕರ ಭವನದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ನಾಲ್ಕು ವರ್ಷದಿಂದ ತಾಲೂಕಿನ ಸಮಸ್ಯೆಗಳು ಜನ ಎದುರಿಸುತ್ತಿದೆ. ಸಚಿವ ಬಿ.ಸಿ. ನಾಗೇಶ್ ಅವಧಿಯಲ್ಲಿ ಇದುವರೆಗೂ ಹೊಸ ಯೋಜನೆಗಳು ಬರಲಿಲ್ಲ. ಕಾಂಗ್ರೆಸ್ ಸರಕಾರ ಅನುಮೋದಿಸಿದ ಕಾಮಗಾರಿಗಳಿಗೆ ಅಡಚನೆ ಮಾಡಿ ನಿಲ್ಲಿಸಿದ್ದಾರೆ. ನಮ್ಮ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದು ಬಿಟ್ಟರೆ ಬೇರೆ ಏನು ಕೆಲಸ ಮಾಡಿಲ್ಲ ಎಂದು ದೂರಿದ ಅವರು,  ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಿಪಟೂರು ನಗರಕ್ಕೆ ಮಿನಿ ವಿಧಾನಸೌಧ ನಗರಸಭೆ ಕಟ್ಟಡ ಐಬಿ ಕಟ್ಟಡ ಕಾಂಗ್ರೆಸ್ ಕಾಲದಲ್ಲಿ ಮಂಜೂರಾಗಿದ್ದು ಎಂದರು. ಸರ್ಕಾರಿ ಕಚೇರಿಯಲ್ಲಿ ಲಂಚಾವತಾರ ತಾಂಡವಾಡುತ್ತಿದೆ. ರೈತರ ರಾಗಿ ಖರೀದಿಗೆ ನಿರ್ಬಂಧ ಮಾಡಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ. ತಿಪಟೂರು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಕಾಂಗ್ರೆಸ್ ಸರ್ಕಾರವೇ…

Read More

ಮಧುಗಿರಿ:  ತಾಲೂಕಿನ  ದೊಡ್ಡೇರಿ ಹೋಬಳಿ ದೊಡ್ಡೇರಿ ಗ್ರಾಮದಲ್ಲಿ ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ವಿತರಿಸಿ, ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಎಲ್ಲಾ ಕಂದಾಯ ವೃತ್ತಿಗಳನ್ನು ಆಯಾ ಆಯಾ ಗ್ರಾಮಲೆಕ್ಕಿಗರು ಕಂದಾಯ ದಾಖಲೆಗಳನ್ನು ಮನೆಮನೆಗೂ ಹಂಚಿಸುವ ಮೂಲಕ ಕಾಯ೯ಕ್ರಮವನ್ನು ಪ್ರಾರಂಭಿಸಲಾಯಿತು.  ಈ ಸಂದಭ೯ದಲ್ಲಿ ದೊಡ್ಡೇರಿ ನಾಡ ಕಚೇರಿ ಉಪ ತಸೀಲ್ದಾರ್ ಅನಂತನಾಗ್,  ಕಂದಾಯ ತನಿಖಾಧಿಕಾರಿಗಳು ಚನ್ನವೀರಪ್ಪ ಅರಾದ್ಯ,  ಗ್ರಾಮಲೆಕ್ಕಿಗರಾದ ರಮೇಶ್ ಗ್ರಾಮ ಸಹಾಯಕರಾದ ರವಿಕುಮಾರ್ ಹಾಜರಿದ್ದರು ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಗುಬ್ಬಿ: ರಾಜಕೀಯವಾಗಿ ಇಡೀ ಯಾದವ ಸಮುದಾಯ ಒಗ್ಗಟ್ಟಿನಿಂದ ಕೂಡಿದ್ದು,  ಎಸ್ ಟಿ  ಮೀಸಲಾತಿಯನ್ನು ಕಾಡುಗೊಲ್ಲ ಸಮುದಾಯಕ್ಕೆ ನೀಡಬೇಕು ಎಂದು ಹಿಂದುಳಿದ ವರ್ಗಗಳ ಜಿಲ್ಲಾ ಮೋರ್ಚಾ ಮಾಜಿ ಅಧ್ಯಕ್ಷ ಜಿ ಎನ್ ಬೆಟ್ಟಸ್ವಾಮಿ ಆಗ್ರಹಿಸಿದರು ತಾಲ್ಲೂಕಿನ ಪಂಚಮುಖಿ ದೇವಸ್ಥಾನದಲ್ಲಿ ಕರೆದಿದ್ದ ಕಾಡುಗೊಲ್ಲರ  ಸಭೆಯಲ್ಲಿ ಮಾತನಾಡಿದ ಅವರು,  ಬಹಳ ವರ್ಷಗಳಿಂದಲೂ ಸಹ ಕಾಡುಗಳಲ್ಲಿ ವಾಸ ಮಾಡುತ್ತಿರುವಂತಹ ಕಾಡುಗೊಲ್ಲ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದ್ದು , ಅವರನ್ನು ಎಸ್ ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸಿದರೆ ಅವರ ಜೀವನಕ್ಕೆ ದಾರಿಯಾಗುತ್ತದೆ ಎಂಬ ಸದುದ್ದೇಶದಿಂದ ಎಲ್ಲರೂ ಒಟ್ಟಿಗೆ ಸೇರಿ ಹೋರಾಟ ಮಾಡಲು ಸಿದ್ಧವಿದ್ದೇವೆ. ಪಕ್ಷಾತೀತವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಈ ಸಮುದಾಯವನ್ನು ಮೇಲಕ್ಕೆತ್ತುವ ಕೆಲಸವನ್ನು ಮಾಡಲು ಸಿದ್ಧವಿದ್ದೇವೆ.  ಎಲ್ಲ ಜನಪ್ರತಿನಿಧಿಗಳನ್ನು ಶಾಸಕರಿಂದ ಹಿಡಿದು ಮುಖ್ಯಮಂತ್ರಿಯವರೆಗೂ ಸಹ ನಮಗಿರುವಂತಹ ಸಮಸ್ಯೆಗಳನ್ನು ತಿಳಿಹೇಳಿ ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಲು ಒತ್ತಾಯ ಮತ್ತು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು. ಯಾದವ ಮುಖಂಡ ಜುಂಜೇಗೌಡ  ಮಾತನಾಡಿ,  ತಾಲ್ಲೂಕಿನಲ್ಲಿ ಇರುವುದು ಒಂದೇ…

Read More

ಬೆಂಗಳೂರು: ತಂದೆ ಸಾವಿನ ಬಳಿಕ ಅವರ ಹೆಸರಿನಲ್ಲಿ ನಕಲಿ ವಿಲ್(ಉಯಿಲು ಪತ್ರ) ಸೃಷ್ಟಿಸಿ ಮಲತಾಯಿಗೆ ಸೇರಬೇಕಿದ್ದ 50 ಕೋಟಿ ಮೌಲ್ಯದ ಆಸ್ತಿಯನ್ನ ಮಕ್ಕಳಿಬ್ಬರು ಕಬಳಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೋಜಮ್ಮ (67) ಎಂಬುವರು ಕೊಟ್ಟ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸರು ಮಕ್ಕಳಿಬ್ಬರನ್ನು ಬಂಧಿಸಿದ್ದಾರೆ. ಚೆನ್ನಪ್ಪ ಅವರಿಗೆ ಲಕ್ಷ್ಮಮ್ಮ ಮತ್ತು ಬೋಜಮ್ಮ ಪತ್ನಿಯರು. ಮೊದಲ ಪತ್ನಿಗೆ ಸುರೇಶ್, ಮಹೇಶ್ ಸೇರಿ ಮೂವರು ಮಕ್ಕಳು. ಬೋಜಮ್ಮಗೆ ಒಬ್ಬ ಪುತ್ರನಿದ್ದಾನೆ. 2014ರ ಜೂನ್ನಲ್ಲಿ ಚೆನ್ನಪ್ಪ ಮೊಮ್ಮಕ್ಕಳಿಗೆ ವಿಲ್ ಮಾಡಿದ್ದರು. ಈ ಪ್ರಕಾರ ಲಕ್ಷ್ಮಮ ಫೈನಾನ್ಸ್ ಸಂಸ್ಥೆ ಬೋಜಮ್ಮಗೆ ಸೇರಬೇಕಿತ್ತು. 2019ರಲ್ಲಿ ಚೆನ್ನಪ್ಪ ಮೃತಪಟ್ಟರು. ಇದಾದ ಮೇಲೆ ಆರೋಪಿಗಳು, 2016ನೇ ಸಾಲಿನಲ್ಲಿ ಚೆನ್ನಪ್ಪ ವಿಲ್ ಮಾಡಿದ್ದಾರೆ ಎಂದು ಒಂದೊಂದಾಗಿ ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಡೆತತ್ನೋಟ್ ಸಲ್ಲಿಸಿ ಐದು ದೃಢೀಕೃತ ವಿಲ್ ಪಡೆದಿದ್ದಾರೆ. ಇದರ ಆಧಾರದ ಮೇಲೆ ಲಕ್ಷ್ಮಮ್ಮರ ಫೈನಾನ್ಸ್ ಸಂಸ್ಥೆಯನ್ನು ಸುರೇಶ್ ಮತ್ತು ಮಹೇಶ್ ತಮ್ಮ ಹೆಸರಿಗೆ ಅಧಿಕಾರವನ್ನು ವರ್ಗಾವಣೆ ಮಾಡಿಸಿಕೊಂಡು 50…

Read More

ಪಾವಗಡ: ಹೆಲ್ಪ್ ಸೊಸೈಟಿ, ಪಾವಗಡ ಹಾಗೂ ಪ್ರೇರಣಾ ಫೌಂಡೇಶನ್ ಮಧುಗಿರಿ ಹಾಗೂ ರೋಟರಿ ಸಂಸ್ಥೆ ತುಮಕೂರು ವತಿಯಿಂದ ಪಾವಗಡದ ಎಸ್.ಎಸ್.ಕೆ. ಸಮುದಾಯ ಭವನದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಪರೀಕ್ಷಾ ಸಿದ್ಧತಾ ಕಾರ್ಯಾಗಾರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶ್ವತ್ಥ್ ನಾರಾಯಣ ಕಾರ್ಯಕ್ರಮ ಉದ್ಘಾಟಿಸಿದ್ದರು,  ಕಾರ್ಯಕ್ರಮದಲ್ಲಿಸಂಪನ್ಮೂಲ ವ್ಯಕ್ತಿಯಾಗಿ ಜನಾರ್ಧನ ಆಗಮಿಸಿದ್ದರು. ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಭಾಗವಹಿಸಿದ್ದರು. ಪ್ರೇರಣಾ ಫೌಂಡೇಶನ್ ಅಧ್ಯಕ್ಷರಾದ ರಮೇಶ್ ಎಸ್.ಆರ್., ಕಾರ್ಯದರ್ಶಿ ಶ್ರೀರಾಮಕೃಷ್ಣ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕಟ್ಟಶ್ರೀನಿವಾಸ ಮೂರ್ತಿ, ಎಸ್ ಎಸ್ ಕೆ ಸಂಸ್ಥೆ ಅಧ್ಯಕ್ಷರಾದ ಕೆ.ವಿ. ಶ್ರೀನಿವಾಸ, ಅಧ್ಯಾಪಕರಾದ ಹರೀಶ್, ಶ್ರೀಮತಿ ನಾಗಲಕ್ಷ್ಮಿ ವಿದ್ಯಾರ್ಥಿ ಮುಖಂಡ ನಂದೀಶ್ ನಾಯ್ಕ ಉಪಸ್ಥಿತರಿದ್ದರು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಮಧುಗಿರಿ: ಶಾಸಕರಾದ ಎಂ.ವಿ.ವೀರಭದ್ರಯ್ಯ ರವರು ಗೋಪಗೊಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸರ್ಕಾರಿ ಗೋಮಾಳದ ಸಾಗುವಳಿದಾರರು ಹಾಗೂ ಅರಣ್ಯ ಇಲಾಖೆಯ ಮಧ್ಯೆ ಇದ್ದ ಸಮಸ್ಯೆಯನ್ನು ಸ್ಥಳದಲ್ಲಿಯೇ ನಿಂತು ಅಧಿಕಾರಿಗಳಿಗಳೊಂದಿಗೆ ಪರಿಶೀಲಿಸಿದರು. ಸಾಗುವಳಿದಾರರಿಗೆ ಹಾಗೂ ರೈತರಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡದೆ ಸಹಕರಿಸಿ ಎಂದು ಇದೇ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಖಡಕ್ ಎಚ್ಚರಿಕೆ ನೀಡಿದರು.ಶಾಸಕರ ಸೂಚನೆಗೆ ಒಪ್ಪಿಗೆ ಸೂಚಿಸಿದ ಅಧಿಕಾರಿಗಳು ಯಾವುದೇ ತೊಂದರೆಯನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಹಾಗೂ ಅರಣ್ಯ ಇಲಾಖೆಯ ಎ.ಸಿ.ಎಫ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು. ವರದಿ: ಅಬಿದ್ ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಗುಬ್ಬಿ: ತುಮಕೂರು ಅಶೋಕ ನಗರದಲ್ಲಿರುವ ಜಿಲ್ಲೆಯ ಹೆಸರಾಂತ ಮಹೇಶ್ ಪಿ.ಯು.ಕಾಲೇಜಿನಿಂದ ಆಗಮಿಸಿದ್ದ ಉಪನ್ಯಾಸಕರಾದ ಹರೀಶ್ ಮತ್ತು ನಾಗಲಕ್ಷ್ಮಿರವರು ತಾಲೂಕಿನಲ್ಲಿರುವ ವಿವಿಧ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಜಿಲ್ಲೆಯಲ್ಲಿ ಮಹೇಶ್ ಪಿ.ಯು. ವಿದ್ಯಾಸಂಸ್ಥೆ ಒಂದೇ ಶಾಖೆ ಇರುವುದಾಗಿ ತಿಳಿಸಿದರು. ಗುಬ್ಬಿ ಪಟ್ಟಣದ ಹೆಸರಾಂತ ಪ್ರಿಯಾ ಆಂಗ್ಲ ಶಾಲೆ, ನಿಟ್ಟೂರು ಸಿದ್ದಶ್ರೀ, ವಿದ್ಯಾಶಾಲೆ ಮತ್ತು ತಾಲೂಕಿನ ವಿವಿಧ ಪ್ರೌಢಶಾಲೆಗಳಿಗೆ ಭೇಟಿ ನೀಡಿದ ಉಪನ್ಯಾಸಕ ಹರೀಶ್ ಮತ್ತು ನಾಗಲಕ್ಷ್ಮಿರವರು ವಿದ್ಯಾರ್ಥಿಗಳೊಂದಿಗೆ ಕಾಲೇಜು ಶಿಕ್ಷಣ ಕುರಿತು ಸಂವಾದ ನಡೆಸಿದರು. ಈ ವೇಳೆ ಉಪನ್ಯಾಸಕರಾದ ಹರೀಶ್ ಮತ್ತು ನಾಗಲಕ್ಷ್ಮಿಮಾತನಾಡಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮುಂದಿನ ಕಾಲೇಜು ಶಿಕ್ಷಣ ಕುರಿತು ವಿದ್ಯಾರ್ಥಿಗಳ ಪಾತ್ರ ಮತ್ತು ಪೋಷಕರ ಪಾತ್ರದ ಹಲವು ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಅಲ್ಲದೆ ತಮ್ಮ ಮಹೇಶ್ ಪಿ.ಯು. ಕಾಲೇಜು ತುಮಕೂರು ಜಿಲ್ಲಾಧ್ಯಂತ ಒಂದೇ ಶಾಖೆ ಇರುವುದಾಗಿ ಮಾಹಿತಿ ನೀಡಿದರು. ತಮ್ಮ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಾದ್ಯಂತ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ಸಾಲಿನಲ್ಲಿ ಹಾಗೂ ಇನ್ನುಳಿದ ವರ್ಷಗಳ ಸಾಲಿನಲ್ಲಿ ಜಿಲ್ಲೆಯಲ್ಲೆ ಉತ್ತಮ…

Read More

ತುರುವೇಕೆರೆ: ಬಜೆಟ್ ಮೇಲಿನ ವಿಕಲಚೇತನ ನಿರೀಕ್ಷೆ ಹುಸಿಯಾಗಿದೆ. ವಿಕಲಚೇತನರ ಜನಸಂಖ್ಯೆ ಅನುಗುಣವಾಗಿ ವಿಕಲಚೇತನರ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕೆಂದು ಶ್ರೀವಿವೇಕಾನಂದ ಅಂಗವಿಕಲರ ಸಂಘದ ಕಾರ್ಯದರ್ಶಿ ಎಂ.ಪಿ. ನಟೇಶ್ ಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಾದ ಬಸವರಾಜ ಎಸ್.ಬೊಮ್ಮಾಯಿ ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ವಿಕಲಚೇತನರಿಗೆ ಅನೇಕ ನಿರೀಕ್ಷೆಗಳಿದ್ದವು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಕಲಚೇತನರ ಬಗ್ಗೆ ಒಲವು ತೋರಿ, ಅನೇಕ ಭರವಸೆಗಳೊಂದಿಗೆ ನಿರೀಕ್ಷೆಯಲ್ಲಿದ್ದವರಿಗೆ ಬಹಳ ನೋವಾಗಿದೆ. ಶೇ. 75%ಹೆಚ್ಚು ಮನೋವೈಕಲ್ಯ ಹೊಂದಿದ್ದವರಿಗೆ 1,400 ರೂ. ಗಳಿಂದ, 2,000 ರೂ.ಗಳಿಗೆ ಮಾಶಾಸನ ಹೆಚ್ಚಿಸುವ ಭರವಸೆ ಮತ್ತು ಬಸ್ ಪಾಸ್ ಪ್ರಸ್ತುತ ದರದಲ್ಲಿಯೇ ಹೆಚ್ಚಿನ ದೂರದ ಪ್ರಯಾಣ ನೀಡುವುದರ ಮೂಲಕ ಅನೇಕ ಸೌಲಭ್ಯಗಳನ್ನು ಒದಗಿಸುವ ನಿರೀಕ್ಷೆಗಳು ಹುಸಿಯಾಗಿವೆ. ಸದನದಲ್ಲಿ ರಾಜ್ಯದ ಎಲ್ಲಾ ಶಾಸಕರು ತಮ್ಮ ವೇತನವನ್ನು ಹೆಚ್ಚಿಸಿಕೊಂಡರು. ಆದರೆ ಅಂಗವಿಕಲರ ಸಮಸ್ಯೆಯ ಬಗ್ಗೆ ಯಾರು ಪರಿಗಣಿಸಲಿಲ್ಲ. ಶೇ.75% ಮತ್ತು 25%ನ ತಾರತಮ್ಯವನ್ನು ಹೋಗಲಾಡಿಸಬೇಕು. ಗ್ರಾಮೀಣ ಪ್ರದೇಶದ ಪುನರ್ವಸತಿ ಕೇಂದ್ರಗಳ ಕಾರ್ಯಕರ್ತರ…

Read More

ತುರುವೇಕೆರೆ: ಬಜೆಟ್ ಮೇಲಿನ ವಿಕಲಚೇತನ ನಿರೀಕ್ಷೆ ಹುಸಿಯಾಗಿದೆ. ವಿಕಲಚೇತನರ ಜನಸಂಖ್ಯೆ ಅನುಗುಣವಾಗಿ ವಿಕಲಚೇತನರ ಅಭಿವೃದ್ಧಿಗಾಗಿ ನಿಗಮ  ಸ್ಥಾಪಿಸಬೇಕೆಂದು ಶ್ರೀವಿವೇಕಾನಂದ ಅಂಗವಿಕಲರ ಸಂಘದ ಕಾರ್ಯದರ್ಶಿ ಎಂ.ಪಿ. ನಟೇಶ್ ಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಮುಖ್ಯಮಂತ್ರಿಗಳಾದ ಬಸವರಾಜ ಎಸ್.ಬೊಮ್ಮಾಯಿ  ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ವಿಕಲಚೇತನರಿಗೆ ಅನೇಕ ನಿರೀಕ್ಷೆಗಳಿದ್ದವು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಕಲಚೇತನರ ಬಗ್ಗೆ ಒಲವು ತೋರಿ, ಅನೇಕ ಭರವಸೆಗಳೊಂದಿಗೆ ನಿರೀಕ್ಷೆಯಲ್ಲಿದ್ದವರಿಗೆ ಬಹಳ ನೋವಾಗಿದೆ. ಶೇ. 75%ಹೆಚ್ಚು ಮನೋವೈಕಲ್ಯ ಹೊಂದಿದ್ದವರಿಗೆ 1,400 ರೂ. ಗಳಿಂದ,  2,000 ರೂ.ಗಳಿಗೆ ಮಾಶಾಸನ ಹೆಚ್ಚಿಸುವ ಭರವಸೆ ಮತ್ತು ಬಸ್ ಪಾಸ್ ಪ್ರಸ್ತುತ ದರದಲ್ಲಿಯೇ ಹೆಚ್ಚಿನ ದೂರದ ಪ್ರಯಾಣ ನೀಡುವುದರ ಮೂಲಕ ಅನೇಕ ಸೌಲಭ್ಯಗಳನ್ನು ಒದಗಿಸುವ ನಿರೀಕ್ಷೆಗಳು ಹುಸಿಯಾಗಿವೆ. ಸದನದಲ್ಲಿ ರಾಜ್ಯದ ಎಲ್ಲಾ ಶಾಸಕರು ತಮ್ಮ ವೇತನವನ್ನು ಹೆಚ್ಚಿಸಿಕೊಂಡರು. ಆದರೆ ಅಂಗವಿಕಲರ ಸಮಸ್ಯೆಯ ಬಗ್ಗೆ ಯಾರು ಪರಿಗಣಿಸಲಿಲ್ಲ. ಶೇ.75% ಮತ್ತು 25%ನ ತಾರತಮ್ಯವನ್ನು ಹೋಗಲಾಡಿಸಬೇಕು. ಗ್ರಾಮೀಣ ಪ್ರದೇಶದ ಪುನರ್ವಸತಿ ಕೇಂದ್ರಗಳ ಕಾರ್ಯಕರ್ತರ…

Read More

ಚಿಕ್ಕಹೊಮ್ಮ ಯೂಥ್ಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಾರ್ಟಿಯಾ ರಾಜ್ಯ ಹಾಗೂ ಮೈಸೂರು ಜಿಲ್ಲಾ ಅಸಂಘಟಿತ ವಲಯ ಸಹಯೋಗದ ವತಿಯಿಂದ ಚಿಕ್ಕಹೊಮ್ಮ ಗ್ರಾಮದಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ಇ-ಶ್ರಮ್ ಕಾರ್ಡ್ ವಿತರಿಸಲಾಯಿತು. ಮೈಸೂರು ಮತ್ತು ಚಾಮರಾಜನಗರ ಮದನ್ ರವರು ಚಿಕ್ಕಹೊಮ್ಮ ಗ್ರಾಮದಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ಇ- ಶ್ರಮ್ ವಿತರಣೆ ಮಾಡಿದರು. ಇದೆ ಸಂದರ್ಭದಲ್ಲಿ ಚಿಕ್ಕಹೊಮ್ಮ ಯೂಥ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಮದನ್, ಸಿ.ಎಸ್, ಕಾರ್ಯದರ್ಶಿ ರಾಜು ಕೆ., ರಾಜ್ಯ ಅಸಂಘಟಿತ ವಲಯದ ಪ್ರಧಾನ ಕಾರ್ಯದರ್ಶಿ ಫ್ರಾನ್ಸಿಸ್ , ಉಪಾಧ್ಯಕ್ಷರಾದ ಸುನಿಲ್ ನಾರಾಯಣ್, ಮೈಸೂರು ಜಿಲ್ಲಾ ಅಸಂಘಟಿತ ವಲಯದ ಅಧ್ಯಕ್ಷರಾದ ನಾಗರಾಜು, ಅಭಿ, ಮಧುಸೂದನ್ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು . ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More