Author: admin

ತುರುವೇಕೆರೆ: ಇಡೀ ರಾಜ್ಯದಲ್ಲೇ ತೀವ್ರ ಕುತೂಹಲ ಕೆರಳಿಸಿರುವಂತಹ ವಿಧಾನ ಪರಿಷತ್ ಚುನಾವಣೆ ಇಂದು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದೆ. ಆದರೆ, 12 ಗಂಟೆಯಾದರೂ ಮಣೆಚೆಂಡೂರು ಗ್ರಾಮ ಪಂಚಾಯ್ತಿಯಲ್ಲಿನ ಒಂದು ಮತ ಬಿಟ್ಟರೆ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿ, ಸೊರವನಹಳ್ಳಿ ಗ್ರಾಮ ಪಂಚಾಯ್ತಿ ಮತ್ತು ಮಾಯಸಂದ್ರ ಗ್ರಾಮ ಪಂಚಾಯ್ತಿಯಲ್ಲಿ ಇನ್ನೂ ಕೂಡ ಒಂದು ಮತವೂ ಆಗಿಲ್ಲ. ಪಂಚಾಯ್ತಿ ಸಿಬ್ಬಂದಿಗಳು, ಆರಕ್ಷಕರು ಮತ್ತು ಆಶಾಕಾರ್ಯಕರ್ತೆಯರು ಕೋವಿಡ್ ಸುರಕ್ಷಾ ಕ್ರಮಗಳನ್ನು ಕೈಗೊಂಡು ಬೆಳ್ಳಂಬೆಳಗ್ಗೆಯೇ ಪಂಚಾಯ್ತಿಯಲ್ಲಿ ಶಿಸ್ತಿನಿಂದ ಹಾಜರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯರು ಮಾತ್ರ  ಮತದಾನ ಮಾಡಲು ಇನ್ನೂ ಯಾಕೆ ಬಂದಿಲ್ಲ? ಎಂಬುದು ಜನಸಾಮಾನ್ಯರಲ್ಲಿ ಪ್ರಶ್ನೆ ಮೂಡಿದೆ. ಮತದಾನ ಮಾಡಲು ಸಂಜೆ 4 ಗಂಟೆಯವರೆಗೂ ಸಮಯವಿರುವುದರಿಂದ ಕಾದು ನೋಡಬೇಕಾಗಿದೆ. ಸದಸ್ಯರ ಸಂಖ್ಯಾ ಬಲ ಶೆಟ್ಟಿಗೊಂಡನ ಹಳ್ಳಿ ಗ್ರಾಮ ಪಂಚಾಯ್ತಿ – 14 ಮಣೆಚೆಂಡೂರು ಗ್ರಾಮಪಂಚಾಯ್ತಿ – 14 ಸೊರವನಹಳ್ಳಿ ಗ್ರಾಮಪಂಚಾಯ್ತಿ-16 ಮಾಯಸಂದ್ರ ಗ್ರಾಮಪಂಚಾಯ್ತಿ-15 ವರದಿ: ವೆಂಕಟೇಶ ಜೆ ಎಸ್ (ವಿಕ್ಕಿ) ಮಾಯಸಂದ್ರ ನಿಮ್ಮ ಸುದ್ದಿಗಳನ್ನು…

Read More

ಬಾಂಗ್ಲಾದೇಶ: ಸರ್ಕಾರವನ್ನ ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ವಿದ್ಯಾರ್ಥಿಯೊಬ್ಬನನ್ನ ಸಹ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ಮಾಡಿ ಕೊಲೆ ಮಾಡಿತ್ತು.. ಈ ಘಟನೆಗೆ ಸಂಬಂಧಿಸಿದಂತೆ 20 ವಿದ್ಯಾರ್ಥಿಗಳಿಗೆ ಬಾಂಗ್ಲಾದೇಶದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.. ಸರ್ಕಾರವನ್ನು ಟೀಕಿಸಿ ಪೋಸ್ಟ್‌ ಮಾಡಿದ್ದ ವಿದ್ಯಾರ್ಥಿಯೊಬ್ಬನನ್ನು ಕಾಲೇಜು ಆವರಣದಲ್ಲೇ ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.. ಹೀಗಾಗಿ ಪ್ರಕರಣದಲ್ಲಿ 20 ವಿದ್ಯಾರ್ಥಿಗಳಿಗೆ ಢಾಕಾ ಕೋರ್ಟ್‌ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಮೂಲಕ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿರುವುದಾಗಿ ಕೋರ್ಟ್‌ ಹೇಳಿದೆ. ಆರೋಪಿಗಳೆಲ್ಲರೂ ದೋಷಿಗಳೆಂದು ಸಾಬೀತಾಗಿದ್ದು, 5 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಮೂರ್ತಿ ಅಬು ಜಾಫರ್‌ ಮೊಹಮ್ಮದ್‌ ಕಮ್ರುಜ್ಜಾಮನ್‌ ಘೋಷಿಸಿದ್ದಾರೆ. ಒಟ್ಟು 25 ತಪ್ಪಿತಸ್ಥರ ಪೈಕಿ ಮೂವರು ಕೃತ್ಯ ನಡೆದ ದಿನದಿಂದಲೂ   ತಲೆಮರೆಸಿಕೊಂಡಿದ್ದು, ಉಳಿದ ಎಲ್ಲರೂ ಜೈಲಿನಲ್ಲಿದ್ದಾರೆ. 2019ರ ಅಕ್ಟೋಬರ್‌ 6ರಂದು ಬಾಂಗ್ಲಾದೇಶದ ಇಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿ ಅಬ್ರಾರ್‌ ಫಹಾದ್‌ ಎಂಬುವವರನ್ನು ಕಾಲೇಜಿನ ಆವರಣದಲ್ಲಿ ಉದ್ರಿಕ್ತ ಗುಂಪೊಂದು ಭೀಕರವಾಗಿ…

Read More

ನವದೆಹಲಿ :  ಈ ತಿಂಗಳು ಅಂದ್ರೆ ಡಿಸೆಂಬರ್ ನಲ್ಲಿ ಮುಂದಿನ ವಾರ ಒಟ್ಟಿಗೆ 4 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರಲಿದೆ..  ಹೀಗಾಗಿ ಈಗಲೇ ಬ್ಯಾಂಕಿನ ವಹಿವಾಟುಗಳನ್ನ ಮುಗಿಸಿಕೊಳ್ಳಿ.. ಬ್ಯಾಂಕ್ ಗಳಿಗೆ ರಜೆ ಇದ್ರೂ ಕೂಡ ಆನ್‍ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಚಟುವಟಿಕೆಗಳು ಚಾಲ್ತಿಯಲ್ಲಿರಲಿದೆ.. ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಿ ಮುಂದಿನ ವಾರದಲ್ಲಿ 2 ದಿನಗಳ ಮುಷ್ಕರವನ್ನು ಬ್ಯಾಂಕ್ ಒಕ್ಕೂಟಗಳು ಘೋಷಿಸಿದೆ. ಈ ಮುಷ್ಕರದಿಂದ ಡಿಸೆಂಬರ್ 16 ಅಂದ್ರೆ ಗುರುವಾರ ಹಾಗೂ 17 ಅಂದ್ರೆ ಶುಕ್ರವಾರ ಬ್ಯಾಂಕ್‍ಗಳು ಬಂದ್ ಆಗಿರಲಿವೆ.. ಭಾರತದ ಎಲ್ಲಾ ರಾಜ್ಯಗಳಲ್ಲಿ ನಾಲ್ಕೂ ದಿನಗಳ ಕಾಲ ಬ್ಯಾಂಕ್‍ಗಳು ಮುಚ್ಚಿರುವುದಿಲ್ಲ ಎಂಬುದನ್ನೂ ಗಮನಿಸಬೇಕು. ಬ್ಯಾಂಕ್ ಮುಷ್ಕರ ಹೊರತುಪಡಿಸಿ ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಆಚರಿಸುವ ಹಬ್ಬಗಳಿಗಾಗಿ ಉಳಿದ ಒಂದು ದಿನದ ರಜೆಯನ್ನು ಹೊಂದಿರುತ್ತದೆ. ಉಳಿದಂತೆ ಕೆಲವೆಡೆ ( ದೇಶಾದ್ಯಂತ  ಎಲ್ಲಾ ಬ್ಯಾಂಕ್ ಗಳು ಅಲ್ಲ ) ಡಿಸೆಂಬರ್ 18 ರಂದು ಬಂದ್ ಇರಲಿದೆ.. ಕಾರಣ ಯು ಸೋಸೋ ಮರಣ ವಾರ್ಷಿಕೋತ್ಸವ (…

Read More

ಬೆಂಗಳೂರು: ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯಲ್ಲಿರುವ ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆಯ 8, 9 ಹಾಗೂ 10ನೇ ತರಗತಿಗಳಿಗೆ ಇಂಗ್ಲಿಷ್ ವಿಷಯದ ಶಿಕ್ಷಕರನ್ನು ಶೀಘ್ರವೇ ನೇಮಕ ಮಾಡಿ ಎಂದು ಹೈಕೋರ್ಟ್ ಶಿಕ್ಷಣ ಇಲಾಖೆಗೆ ಆಯುಕ್ತರಿಗೆ ನಿರ್ದೇಶಿಸಿದೆ. ತುರುವೇಕೆರೆ ತಾಲ್ಲೂಕಿನ ದುಂಡ ಗ್ರಾಮದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಡಿ.ಟಿ. ಲಕ್ಷ್ಮೀನಾರಾಯಣ ಸಲ್ಲಿಸಿರುವ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಶಿಕ್ಷಕರನ್ನು ನೇಮಕ ಮಾಡಿದ ಕುರಿತಂತೆ ಅನುಪಾಲನಾ ವರದಿಯನ್ನು ಇದೇ 22ರೊಳಗೆ ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನ್ಯಾಯಪೀಠ ನಿರ್ದೇಶಿಸಿದೆ. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 8,9 ಹಾಗೂ 10ನೇ ತರಗತಿಯಲ್ಲಿ ಒಟ್ಟು 166 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಇಂಗ್ಲಿಷ್ ಭಾಷೆ ಬೋಧಿಸುವ ಶಿಕ್ಷಕರನ್ನು ನೇಮಕ ಮಾಡಿಲ್ಲ. ಈ ಕುರಿತು ಕಳೆದ ಅಕ್ಟೋಬರ್ 10ರಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.…

Read More

ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ದಿನಾಂಕ 11, 12,13,ರಂದು ರಾಜ್ಯಮಟ್ಟದ ಕೊಕ್ಕೋ ಪಂದ್ಯವನ್ನು ಆಯೋಜಿಸಲಾಗಿದೆ ಎಂದು ತಿಪಟೂರು ಕಲ್ಪತರು ಸ್ಪೋರ್ಟ್ಸ್ ಗೌರವಾಧ್ಯಕ್ಷ ಹಲೋಕೇಶ್ವರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರು,ಮಂಡ್ಯ, ವಿಜಯಪುರ,ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ರಾಜ್ಯದ ಎಲ್ಲಾ ಭಾಗಗಳಿಂದ ಸ್ಪೋರ್ಟ್ಸ್ ಕ್ಲಬ್ ನ ಟೀಮ್ ಗಳು ಭಾಗವಹಿಸಲಿದ್ದು, ಜಿಲ್ಲಾಮಟ್ಟದ ಎಂಟು ಟೀಮ್ ಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳು ಸೇರಿ ಒಟ್ಟು 58 ಪುರುಷರು 25 ಮಹಿಳಾ ಟೀಮ್ ಗಳು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಬಾರಿ ನಾಲ್ಕರ ಬದಲಾಗಿ ಹೆಚ್ಚುವರಿಯಾಗಿ ಒಂದು ಕೋರ್ಟ್ ಸ್ಥಾಪಿಸಲಾಗಿದೆ. ಒಟ್ಟು 127 ಮ್ಯಾಚ್ ಗಳು ನಿರಂತರವಾಗಿ ನಡೆಯಲಿದೆ ಎಂದು ಇದೇ ವೇಳೆ ಅವರು ತಿಳಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಸಭೆ ಸದಸ್ಯರಾದ ನಿಜಗುಣ ರಾಮಯ್ಯ, ನಗರಸಭೆ ಸದಸ್ಯೆ ಭಾರತಿ ಮಂಜುನಾಥ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ವರದಿ: ಆನಂದ್ ತಿಪಟೂರು ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್…

Read More

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿಯ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಹೊಣಕೆರೆ ಗ್ರಾಮದಲ್ಲಿ 2015-16 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರುದ್ರ ಭೂಮಿ ನಿರ್ಮಾಣಕ್ಕೆ  ನಿರ್ಮಿತಿ ಕೇಂದ್ರ ತುಮಕೂರು ಇವರಿಗೆ ಗುತ್ತಿಗೆ ನೀಡಿದ್ದು, ಈ ಕಾಮಗಾರಿಯನ್ನು ಕೈಗೆತ್ತಿಗೊಂದಿದ್ದು ಆದರೆ ಈವರೆಗೆ ಕಾಮಗಾರಿ ಪೂರ್ಣಗೊಳಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಸ್ಮಶಾನ ಸುತ್ತ ಕಾಂಪೌಂಡ್  ಹಾಗೂ ಒಂದು ಕಟ್ಟಡ ನಿರ್ಮಾಣವಾಗಿದೆ ಆದ್ರೆ ಈ ಕಾಮಗಾರಿ ಕೈಗೊಳ್ಳುವ ಮುನ್ನ ಈ ಸ್ಥಳದ ವೀಕ್ಷಣೆ ಮಾಡಿ ಸ್ಮಶಾನಕ್ಕೆ ಯೋಗ್ಯವಾಗಿದೆಯ ಎಂದು  ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಲ್ಲಾಗಲಿ, ಕಂದಾಯ ಇಲಾಖೆಯ ಅಧಿಕಾರಿಗಳೇ, ಆಗಲಿ ಶಾಸಕರೆ ಆಗಲಿ ಇತರೆ ಜನಪ್ರತಿನಿಧಿಗಳೆ ಆಗಲಿ ಕಿಂಚಿತ್ತೂ ಚಿಂತಿಸದೇ ನಿರ್ಲಕ್ಷತೆ ತೋರಿದ್ದಾರೆ. ಸ್ಮಶಾನದೊಳಗೆ ಕಂದಕ ತೋಡಿ ಬಳಸದಂತೆ ತಡೆದಿರುವುದು ಈ ಜಾಗವನ್ನು ಗುರುತು ಮಾಡಿದ ವೇಳೆ ಯಾವುದೇ ತಾಲೂಕು ಮಟ್ಟದ ದಲಿತ  ಮುಖಂಡಿಗಾಗಲಿ, ಊರಿನ ದಲಿತರಿಗಾಗಲಿ ಮಾಹಿತಿಯನ್ನೇ ನೀಡಿಲ್ಲ. ಈಗ ಗುರ್ತಿಸಿರುವ ಜಾಗದಲ್ಲಿ ಯಾರೋ ಕಿಡಿಗೇಡಿಗಳು ಸುಮಾರು 20ರಿಂದ 30 ಅಡಿ…

Read More

ವೆಂಕಟೇಶ ಜೆ.ಎಸ್ ( ವಿಕ್ಕಿ ) ಕ್ರೀಡಾ ಸುದ್ಧಿ: ಪ್ರತಿವರ್ಷದ ಡಿಸೆಂಬರ್’ನಲ್ಲಿ ನಡೆಯುವ ಪ್ರತಿಷ್ಠಿತ ದ್ವಿಪಕ್ಷೀಯ ಆಶಸ್ ಸರಣಿಯ ಮೊದಲ ಪಂದ್ಯದ  ಎರಡನೇ ದಿನವೂ ಆಸ್ಟ್ರೇಲಿಯಾ  ಮೇಲುಗೈ ಸಾಧಿಸಿದೆ. ‘ಬ್ರಿಸ್ಬೇನ್’ನಲ್ಲಿ ಡಿಸೆಂಬರ್ 8 ರಂದು ಪ್ರಾರಂಭವಾದ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ಪ್ಯಾಟ್ ಕಮಿನ್ಸ್’ರವರ ಕರಾರುವಾಕ್ಕಾದ ಬೌಲಿಂಗ್ ದಾಳಿಗೆ ತರಗೆಲೆಗಳಂತೆ ಉದುರಿದ ಇಂಗ್ಲೆಂಡ್ ಬ್ಯಾಟ್ಸ್ಮ್ಯಾನ್’ಗಳು ತಂಡದ ಅಲ್ಪ ಮೊತ್ತದ ಪತನಕ್ಕೆ ಕಾರಣವಾದರು. ಹಮೀದ್, ಪೋಪ್, ಬಟ್ಲರ್ ಮತ್ತು ಕ್ರಿಸ್ ವೋಕ್ಸ್ ಹೊರೆತು ಪಡಿಸಿ , ಇನ್ಯಾವ ಬ್ಯಾಟ್ಸ್ ಮ್ಯಾನ್’ಗಳು ಕೂಡ ಎರಡಂಕಿಗಡಿ ಮುಟ್ಟಲಿಲ್ಲ. ಇದರೊಂದಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಇಂಗ್ಲೆಂಡ್ 147 ಕ್ಕೆ ಆಲೌಟ್ ಆಯಿತು. ಅಲ್ಪ ಮೊತ್ತದ ಟ್ರೈಯಲ್ ಬೆನ್ನತ್ತಿದ ಆಸ್ಟ್ರೇಲಿಯಾ ವಾರ್ನರ್ ( 94), ಲ್ಯಾಬಶೇನ್ (74)ಮತ್ತು ಟ್ರೆವಿಸ್ ಹೆಡ್ ರವರ(112*) ಶತಕದ ನೆರವಿನಿಂದ ಎರಡನೇ‌ ದಿನದಂತ್ಯಕ್ಕೆ  ಮೊದಲ ಇನ್ನಿಂಗ್ಸ್’ನಲ್ಲಿ 7 ವಿಕೆಟ್ ಕಳೆದು ಕೊಂಡು 343…

Read More

ಬೆಂಗಳೂರು: ಲಂಚಮುಕ್ತ ಕರ್ನಾಟಕ ವೇದಿಕೆ ವತಿಯಿಂದ ಗಾಂಧಿ ಭವನದಲ್ಲಿ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಮಾಡಿ ಗೌರವಿಸಲಾಯಿತು. ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾದ ಆದರ್ಶ ಅಯ್ಯರ್, ಶಶಿಧರ ಶೆಟ್ಟಿ, ಸಾಮಾಜಿಕ ಹೋರಾಟಗಾರರಾದ ಖ್ವಾಜಾ ಮೋಹಿನಿದ್ದಿನ್ ಎನ್., ನಿಂಗಮ್ಮ ಸವಣೂರ, ಗಿರೀಶ್ ಆಚಾರ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಸರಗೂರು: ತಾಲೂಕಿನ ಸಂಪರ್ಕ ರಸ್ತೆ ಪುರದಕಟ್ಟೆ ಗ್ರಾಮದ ಮುಖ್ಯ ರಸ್ತೆಯು ತೀರಾ ಹದಗೆಟ್ಟಿದ್ದು, ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಮುಂದಾಗದ ಹಿನ್ನಲೆಯಲ್ಲಿ  ಎ.ಎಸ್.ಐ ದೊರೆಸ್ವಾಮಿ ಅವರು ರಸ್ತೆ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರ ಸುರಕ್ಷತೆಗೆ ಮುಂದಾದರು. ಈ ಸಂಬಂಧ ಮಾತನಾಡಿದ ಗ್ರಾಮಸ್ಥ ಬೆಟ್ಟನಾಯಕ,  ಪುರದಕಟ್ಟೆ ಗ್ರಾಮದ ಮುಖ್ಯ ರಸ್ತೆಯು ತೀರ ಹದಗೆಟ್ಟಿದ್ದು, ಇದು ಅಧಿಕಾರದಲ್ಲಿರುವವರ ಕಣ್ಣಿಗೆ ಕಾಣದಿರುವುದು ಬಹಳ ದುರಂತ. ತಾಲೂಕಿನ ಪ್ರಮುಖ ಕೇಂದ್ರ ಬಿಂದು ಶ್ರೀ ಚಿಕ್ಕದೇವನ ಬೆಟ್ಟಕ್ಕೆ ತೆರಳಲು ಈ ಮಾರ್ಗವೇ ಪ್ರಮುಖವಾದರು, ಯಾವ ಜನಪ್ರತಿನಿಧಿಗಳು ರಸ್ತೆ ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಎ.ಎಸ್.ಐ ದೊರೆಸ್ವಾಮಿ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.  ಈ ರೀತಿಯ ರಸ್ತೆಗಳಿಂದ ಜನರ ಸುಗಮ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಇನ್ನೂ ಮುಂದೆಯಾದರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗಬೇಕು  ಎಂದು ಅವರು ಒತ್ತಾಯಿಸಿದರು. ಇದೇ ವೇಳೆ ಎ.ಎಸ್.ಐ ದೊರೆಸ್ವಾಮಿ, ಶಿವಕುಮಾರ್, ಮಲ್ಲಿಕಾರ್ಜುನ ಆರಾಧ್ಯ…

Read More

ಹಾಸನ: ಮಗಳ ಸಾವಿಗೆ ಅಳಿಯನೇ ಕಾರಣ ಎಂದು ಆರೋಪಿಸಿ ಸೆಲ್ಫಿ ವಿಡಿಯೋ ಮಾಡಿ ಅಳಿಯನ ಮನೆ ಬಾಗಿಲಲ್ಲಿ ಮಾವ ನೇಣಿಗೆ ಶರಣಾಗಿರುವ ಘಟನೆ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ. ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ ಒಂದು ಕೆಲ ದಿನಗಳ ಹಿಂದೆ ನಾಗರಾಜ್ ಅವರ ಮಗಳು ಹೇಮಾಶ್ರೀ ಮೃತಪಟ್ಟಿದ್ದು, ಇಂದು ಮಗಳ ತಿಂಗಳ ತಿಥಿ ಕಾರ್ಯ ಮಾಡಲು ನಿರ್ಧರಿಸಲಾಗಿತ್ತು. ಹೀಗಾಗಿ ಮಗಳ ತಿಥಿ ಕಾರ್ಯಕ್ಕೆ ತಂದೆ ಬಂದಾಗ, ಮನೆಗೆ ಬೀಗ ಹಾಕಿ ಅಳಿಯ ಪ್ರವೀಣ್ ಹಾಗೂ ಕುಟುಂಬಸ್ಥರು ನಾಪತ್ತೆಯಾಗಿದ್ದರು. ಇದನ್ನೆಲ್ಲ ಕಂಡು ನೊಂದ ತಂದೆ, ನನ್ನ ಮಗಳ ಸಾವಿಗೆ ಅಳಿಯ ಪ್ರವೀಣ್, ಅತ್ತೆ ಭದ್ರಮ್ಮ ಕಾರಣ ಎಂದು ಆರೋಪಿಸಿ ವೀಡಿಯೋ ಮಾಡಿದ್ದಾರೆ. ಮಗಳನ್ನು ವರದಕ್ಷಿಣೆ ಕಿರುಕುಳ ನೀಡಿ ಕೊಂದಿದ್ದಾರೆ. ನನ್ನ ಮಗಳಿಗೆ ಆದ ಪರಿಸ್ಥಿತಿ ಇನ್ಯಾರಿಗೂ ಆಗಬಾರದು ಎಂದು ಮನನೊಂದು ವಿಡಿಯೋ ಮಾಡಿ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದ ಹಿಂದೆ ಮಾಳಿಗೆರೆಯ ಪ್ರವೀಣ್…

Read More