Author: admin

ಹಿರಿಯೂರು:  ವಿ ವಿ ಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಕೃಷಿ ಬೆಳೆಗೆ ಅವಶ್ಯಕತೆಯಿರುವುದರಿಂದ ನೀರು ಹರಿಸಲು ಚಿತ್ರದುರ್ಗ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಫೆಬ್ರವರಿ 4 ರಂದು ವಿವಿ ಸಾಗರದ ಅಚ್ಚುಕಟ್ಟು ಪ್ರದೇಶಗಳಿಗೆ ಇಂದು ಹರಿಸಲಿದ್ದಾರೆ ಆದರೆ , ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಿವಿ ನಾಲವನ್ನು ಅಚ್ಚುಕಟ್ಟು ಗೊಳಿಸದೆ ಪ್ಲಾಸ್ಟಿಕ್ , ಗಾಜು , ಕಸಕಡ್ಡಿ ತುಂಬಿರುವಂತಹ ನಾಲಕ್ಕೆ ನೀರು ಹರಿಸಲು ಸಿದ್ಧತೆ ಮಾಡಿದ್ದಾರೆ ಎಂದು ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯೂರು ತಾಲ್ಲೂಕಿನ  ವಿ ವಿ ಸಾಗರದ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಕೃಷಿ ಬೆಳೆಗೆ ಅವಶ್ಯಕತೆಯಿರುವ ಹಿನ್ನೆಲೆಯಲ್ಲಿ ಫೆ4ರಂದು ಇಂದು  ನೀರು ಹರಿಸಲು ಆದೇಶಿಸಿದೆ . ಹಾಲಿ ಶೇಂಗಾ , ಮೆಕ್ಕಜೋಳ ಮತ್ತು ಹತ್ತಿ ಹಾಗೂ ಅಡಿಕೆ, ತೆಂಗು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ . ಆದರೆ ತ್ಯಾಜ್ಯ ವಸ್ತುಗಳ ಹಾಗೂ ಫೈರುಗಳು ಬೆಳೆದಿರುವ ನಾಲೆಗಳ ಹೂಳು…

Read More

ಮುನಿಯೂರು: ರೈತರಿಗೆ ಸಾಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯ ವೇಳೆ ಸಹಕಾರ ಸಂಘದ ಕಾರ್ಯದರ್ಶಿ ಗಿಡ್ಡೇಗೌಡ ಮೇಲೆ ಸ್ಥಳೀಯ  ಯುವಕರು ಹಲ್ಲೆ  ನಡೆಸಿರುವ ಘಟನೆ ನಡೆದಿದೆ. ತುರುವೇಕೆರೆ ಪೋಲೀಸ್ ಠಾಣಾ ವ್ಯಾಪ್ತಿಗೆ ಬರುವ ಮುನಿಯೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಂತಹದ್ದೊಂದು ಘಟನೆ ನಡೆದಿದ್ದರೂ ಪೊಲೀಸರು ಮೌನವಾಗಿದ್ದಾರೆ ಎನ್ನುವ ಆರೋಪಗಳು ಕೂಡ ಇದೀಗ ಕೇಳಿ ಬಂದಿದೆ. ಈ ಪ್ರದೇಶದಲ್ಲಿ ಕೆಲವರು ಆಗಾಗ ಮಾರಕಾಸ್ತ್ರಗಳಿಂದ ಬೆದರಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎನ್ನುವ ಆತಂಕದ ಮಾತುಗಳು ಕೂಡ ಕೇಳಿ ಬಂದಿವೆ. ಯಾರೋ ಬೀದಿ ರೌಡಿಗಳ ನ್ಯಾಯ ಇಲ್ಲಿ ನಡೆಯುವುದಾದರೆ, ಪೊಲೀಸ್ ವ್ಯವಸ್ಥೆಗಳೇಕೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಘಟನೆ ಸಂಬಂಧ ತಕ್ಷಣವೇ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಪಾವಗಡ: ತಾಲ್ಲೂಕಿನ ವಳ್ಳುರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ರಸ್ತೆ ಕಾಮಗಾರಿಗಳಿಗೆ ಶಾಸಕರಾದ ವೆಂಕಟರಮಣಪ್ಪ ಶಂಕುಸ್ಥಾಪನೆ ಮಾಡಿದರು. ಕಾಮಗಾರಿಗಳ ಪಟ್ಟಿ ಈ ಕೆಳಕಂಡಂತೆ ಇವೆ: 1.ವೆಂಕಟಮ್ಮನಹಳ್ಳಿ ಜಿಲ್ಲಾ ಮುಖ್ಯರಸ್ತೆಯಿಂದ ಆಂತರಿಕ ರಸ್ತೆ ಅಭಿವೃದ್ಧಿ- ಅಂದಾಜು ಮೊತ್ತ-193 ಲಕ್ಷ ರೂ.ಗಳು 2.ವೆಂಕಟಮ್ಮನಹಳ್ಳಿ-ಕ್ಯಾತಗಾನಚರ್ಲು ಮಾರ್ಗ ರಸ್ತೆ ಅಭಿವೃದ್ಧಿ ಅಂದಾಜು ಮೊತ್ತ-107 ಲಕ್ಷ ರೂ. ಗಳು. 3.ಕ್ಯಾತಗಾನ ಚರ್ಲು-ಮುತ್ಯಾಲಮ್ಮನ ದೇವಸ್ಥಾನದ ರಸ್ತೆ ಅಭಿವೃದ್ಧಿ ಅಂದಾಜು ಮೊತ್ತ-194 ಲಕ್ಷ ರೂ. ಗಳು.ಗುದ್ದಲಿ ಪೂಜೆ ಮಾಡಿದರು 4.ಬಳ್ಳ ಸಮುದ್ರ ಗ್ರಾಮದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣ ಅಂದಾಜು ಮೊತ್ತ-44 ಲಕ್ಷ ರೂ ಗಳು. 5.ಕ್ಯಾತಗಾನ ಚರ್ಲು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಗೆ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಅಂದಾಜು ಮೊತ್ತ-174 ಲಕ್ಷ ರೂ.ಗಳು. 6.ಇಂಟುರಾಯನ ಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಗೆ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಅಂದಾಜು ಮೊತ್ತ-104 ಲಕ್ಷ ರೂ. ಗಳು. 7.ವೆಂಕಟಮ್ಮನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಗೆ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅಂದಾಜು…

Read More

ಮಧುಗಿರಿ: ವಿಧಾನ ಪರಿಷತ್ ಶಾಸಕ  ಚಿದಾನಂದ್ ಎಂ ಗೌಡ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಇಂದು ಮಧುಗಿರಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ನಂತರ ಅಭಿಮಾನಿಗಳು 53 ತೆಂಗಿನಕಾಯಿ ಒಡೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ತದನಂತರ  ಕಾರ್ಯಕರ್ತರು 53 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ 53 ಕೆ.ಜಿ. ಕೇಕ್ ತಂದು ವಿಧಾನ ಪರಿಷತ್ ಶಾಸಕರ ಸಮ್ಮುಖದಲ್ಲಿ ಕತ್ತರಿಸಿ ಸಂಭ್ರಮಿಸಿದರು. ಕಾರ್ಯಕ್ರಮ ಕುರಿತು ಮಾತನಾಡಿದ ಚಿದಾನಂದ ಗೌಡ್ರು, ನಿಮ್ಮ ಅಭಿಮಾನ ಪ್ರೀತಿಗೆ ಸದಾ ಋಣಿಯಾಗಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಮಾಡಲು ನಿಮ್ಮೆಲ್ಲರ ಈ ಪ್ರೀತಿ ಅಭಿಮಾನ ಪ್ರೇರೇಪಿಸುತ್ತಿದೆ ಎಂದು ತಿಳಿಸಿದರು. ಈ ಸಂದರ್ಭ ದಲ್ಲಿ ಮಧುಗಿರಿ ಮಂಡಲ ಅಧ್ಯಕ್ಷರಾದ ಪಿ.ಎಲ್.ನರಸಿಂಹ ಮೂರ್ತಿ , ಮಂಡಲ ಪ್ರಧಾನ ಕಾರ್ಯದರ್ಶಿ  ಸೀತಾರಾಮು, ಹಿರಿಯ ಮುಂಖಡರಾದ ನಾಗರಾಜಪ್ಪ, ಮಧುಗಿರಿ ವಿಭಾಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಜಯಣ್ಣ, ಕೊರಟಗೆರೆ ಮಂಡಲದ ಅಧ್ಯಕ್ಷರಾದ ಪವನ್ , ಪ್ರಧಾನ ಕಾರ್ಯದರ್ಶಿ ಗುರುದತ್,  ಜಿಲ್ಲಾ ಎಸ್ಸಿ…

Read More

ಪಾವಗಡ: ಸರ್ಕಾರಿ ಶಾಲೆಗಳು ಅಂದವಾಗಿರಬೇಕು ಎನ್ನುವ ಕಾರಣಕ್ಕಾಗಿ ಹೆಲ್ಪ್ ಸೊಸೈಟಿ ಮಹತ್ವದ ಹೆಜ್ಜೆಯಿಟ್ಟಿದ್ದು,  ಶಾಲೆಗೆ ಬಣ್ಣಗಳನ್ನು ವಿತರಿಸುವ ಮೂಲಕ, ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿನೂತನ ಪ್ರಯತ್ನ ನಡೆಸಿದೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ನೇತೃತ್ವದಲ್ಲಿ  ಬಣ್ಣದ ಡಬ್ಬಗಳನ್ನು ವಿತರಿಸಲಾಯಿತು. ಪಾವಗಡ ತಾಲ್ಲೂಕು ವೀರಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತುಂಬಾ ಹಳೆಯದ್ದಾಗಿದ್ದು, ಇದನ್ನು ಸುಣ್ಣ ಬಣ್ಣಗಳಿಂದ ಆಕರ್ಷಣೆ ಗೊಳಿಸಿ ಶಾಲಾ ಮಕ್ಕಳಿಗೆ ಉತ್ತಮ ವಾತಾವರಣ ದೊರಕುವಂತೆ ಮಾಡಲು ಹೆಲ್ಪ್ ಸೊಸೈಟಿ ಈ ಕಾರ್ಯವನ್ನು ಮಾಡಿತು. ಶಾಲೆಗೆ ಬಣ್ಣದ ಡಬ್ಬಿಗಳನ್ನು ತಂದೊಡನೆ ಶಾಲೆಯ ಮಕ್ಕಳು ಕೂಡ ಖುಷಿಪಟ್ಟಿದ್ದು, ಚಪ್ಪಾಳೆ ತಟ್ಟುವ ಮೂಲಕ ಹೆಲ್ಪ್ ಸೊಸೈಟಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಸಕಿ ರತ್ನಮ್ನ ಹಾಗೂ ಆಡಳಿತ ಮಂಡಳಿ, ಹೆಲ್ಪ್ ಸೊಸೈಟಿ ಪದಾಧಿಕಾರಿಗಲಾದ ಶರತ್, ಮಣಿ, ಪ್ರಸನ್ನ, ಸುಬ್ರಮಣ್ಯ ಉಪಸ್ಥಿತರಿದ್ದರು. ವರದಿ:  ನಂದೀಶ್ ನಾಯ್ಕ ಪಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಕೊರಟಗೆರೆ : ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿಯ ದಲಿತ ಕಾಲೋನಿಯ ಹನುಮಂತರಾಯಪ್ಪ ಎಂಬ ಮೃತ ವ್ಯಕ್ತಿಯ ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ.  ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ  ತಹಸೀಲ್ದಾರ್ ನಹಿದಾ ಜಮ್ ಜಮ್ ಭೇಟಿ ನೀಡಿ ಸ್ಪಂದಿಸಿದ್ದಾರೆ. 100ಕ್ಕೂ ಅಧಿಕ ದಲಿತ ಕುಟುಂಬ ಇರುವಂತಹ ಬೈರೇನಹಳ್ಳಿಗೆ ಗ್ರಾಮದಲ್ಲಿ ಸ್ಮಶಾನವೇ ಮರೀಚಿಕೆಯಾಗಿದೆ.  50ಕ್ಕೂ ಹೆಚ್ಚು ಭಾರಿ ಅರ್ಜಿ ನೀಡಿದ್ದ ದಲಿತರಿಗೆ ಸ್ಮಶಾನದ ಜಾಗ ನಿಗದಿ ಪಡಿಸದೆ ಕೊರಟಗೆರೆ ತಾಲ್ಲೂಕು ಆಡಳಿತ ಜಾಣ ಮೌನವಹಿಸಿದೆ. 100ಕ್ಕೂ ಹೆಚ್ಚು ಜನ ದಲಿತ ಕುಟುಂಬ ವಾಸವಿರುವ ಬೈರೇನಹಳ್ಳಿ ಗ್ರಾಮದಲ್ಲಿ  ದಲಿತರಿಗೆ ಶವ ಸಂಸ್ಕಾರಕ್ಕೆ ಜಾಗವಿಲ್ಲದೇ ಕೆರೆ-ಕಟ್ಟೆ, ರಸ್ತೆಬದಿ, ಸರಕಾರಿ ಹಳ್ಳದಲ್ಲಿ ಮಣ್ಣು ಮಾಡಬೇಕಿದೆ  ಮಾಡುವ ಸ್ಥಿತಿ ಇದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದು,  ತಡರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದ ಪರಿಶಿಷ್ಟ ಜಾತಿಯ ಸಮುದಾಯದ ಹನುಮಂತರಾಯಪ್ಪ(55) ಎಂಬವರ  ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ. ಬೈರೇನಹಳ್ಳಿ ಗ್ರಾಮದ ಲೇ.ತಿಮ್ಮಯ್ಯ ಎಂಬವರ  ಮಗನಾದ ಹನುಮಂತರಾಯಪ್ಪಅನಾರೋಗ್ಯ ಹಿನ್ನಲೆ ಬುಧವಾರ ತಡರಾತ್ರಿ…

Read More

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಹೈಕೋರ್ಟ್‌ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಅಳವಡಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಕುರಿತು ಬೆಂಗಳೂರಿನ ಜೆ. ಜಗನ್‌ ಕುಮಾರ್, ವಿ. ಪರಮೇಶ್ ಎಂಬುವರು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶಿಸಬೇಕು ಎಂದು ಹೈಕೋರ್ಟ್​ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಇನ್ನಷ್ಟೇ ವಿಚಾರಣೆಗೆ ದಿನಾಂಕ ನಿಗದಿಯಾಗಬೇಕಿದೆ. ದೇಶದ ಮಹಾನ್ ವ್ಯಕ್ತಿಗಳಲ್ಲಿ ಅಂಬೇಡ್ಕರ್‌ ಕೂಡ ಒಬ್ಬರು. ಸಂವಿಧಾನ ರಚನಾ ಕರಡು ಸಮಿತಿ ಅಧ್ಯಕ್ಷರಾಗಿದ್ದವರು. ಸ್ವತಂತ್ರ ಭಾರತದ ಪ್ರಥಮ ಕೇಂದ್ರ ಕಾನೂನು ಸಚಿವರು. 1920ರಿಂದಲೂ ಸಂವಿಧಾನ ರಚನೆಯಲ್ಲಿ ಅವರು ನಿರ್ವಹಿಸುತ್ತಾ ಬಂದ ಪಾತ್ರ ಮಹತ್ತರವಾದದ್ದು. ಅವರ ಸಂಘಟನೆ ಮತ್ತು ನಾಯಕತ್ವದ ಕೌಶಲ್ಯಕ್ಕೆ ಸಾಟಿಯಿಲ್ಲ. 1990ರಲ್ಲಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆದರೆ ಗಾಂಧೀಜಿ ಅವರಿಗೆ ದೊರೆತ ಪ್ರಾಧಾನ್ಯತೆ ಅಂಬೇಡ್ಕರ್‌ ಅವರಿಗೆ ಲಭಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸಂವಿಧಾನ ರಚಿಸಿದ ಅಂಬೇಡ್ಕರರ ಭಾವಚಿತ್ರ ಯಾವುದೇ ಕೋರ್ಟ್‌ ಹಾಲ್‌ನಲ್ಲಿ ಕಾಣಿಸದಿರುವುದು ದುರಾದೃಷ್ಟಕರ. ಈ ನಿಟ್ಟಿನಲ್ಲಿ ಅವರ…

Read More

ಬೆಂಗಳೂರು: ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಮಧ್ಯಂತರ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು. ರಾಜ್ಯದ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಕುರಿತು ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ವರದಿ ಸಲ್ಲಿಸಲು ಸಮಿತಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಅವರಿಗೆ ಸೂಚನೆ ನೀಡಲಾಗಿದೆ ಎಂದರು. ಅಲ್ಲದೇ ಈ ಸಂಸ್ಥೆಗಳ ಸಾಮರ್ಥ್ಯ ಗುರುತಿಸಿ, ಅವುಗಳ ದಕ್ಷ ಬಳಕೆಗೆ ಮಾರ್ಗೋಪಾಯಗಳನ್ನು ಶಿಫಾರಸು ಮಾಡುವಂತೆ ತಿಳಿಸಲಾಗಿದೆ. ಹಾಗೂ ಸಾರಿಗೆ ಸಂಸ್ಥೆಗಳ ಆಸ್ತಿಗಳಿಂದ ಆದಾಯೋತ್ಪನ್ನ, ಸಂಸ್ಥೆಯ ವರ್ಕ್ ಶಾಪ್ ಗಳ ಸದ್ಬಳಕೆ, ಮಾನವ ಸಂಪನ್ಮೂಲದ ದಕ್ಷ ಬಳಕೆ, ಸಂಸ್ಥೆಗಳ ಸೇವೆಯಲ್ಲಿ ಸುಧಾರಣೆ, ತಂತ್ರಜ್ಞಾನದ ಬಳಕೆ ಮೊದಲಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ತಾವು ಕೈಗೊಂಡ ಕ್ರಮಗಳ ಕುರಿತು ಎಂ.ಆರ್. ಶ್ರೀನಿವಾಸಮೂರ್ತಿ ಮಾಹಿತಿ…

Read More

ಕೊಡಗು: ಇಬ್ಬರು ಮಹಿಳೆಯರುನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದೋಚಿರುವ ಘಟನೆ ಕೊಡುಗು ಜಿಲ್ಲೆಯ ಕೊಳಕೇರಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಿಗೇರಿಯಲ್ಲಿ ಸಹೋದರಿಯರಾದ 78 ವರ್ಷದ ಜಾನಕಿ ಮತ್ತು 68 ವರ್ಷದ ಅಮ್ಮಕ್ಕಿ ವಾಸವಿದ್ದರು. ಇವರ ಮನೆಗೆ ಸೋಮವಾರ ತಡರಾತ್ರಿ ನಾಲ್ವರು ಕಳ್ಳರು ನುಗ್ಗಿ ಇಬ್ಬರು ವಯೋವೃದ್ಧರನ್ನು ಮನೆಯೊಳಗೆ ಕಟ್ಟಿ ಹಾಕಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ನಂತರ ಮನೆಯಲ್ಲಿದ್ದ 2.5 ಲಕ್ಷ ರೂ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ನಂತರ ಕೈಗೆ ಕಟ್ಟಿದ ಹಗ್ಗವನ್ನು ಬಿಚ್ಚಿಕೊಂಡು ಬೆಂಗಳೂರಿನಲ್ಲಿರುವ ಸಹೋದರ, ನಿವೃತ್ತ ನ್ಯಾಯಧೀಶ ಬೋಪಯ್ಯ ಅವರಿಗೆ ಅಜ್ಜಿಯರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಬೋಪ್ಪಯ್ಯ ನಾಪೋಕ್ಲು ಪೊಲೀಸರಿ ತಿಳಸಲಾಗಿದ್ದು, ಘಟನೆಯಲ್ಲಿ ಸಹೋದರಿಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆಗಾಗಿ ನಾಪೋಕ್ಲು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಆರೋಪಿಗಳು ಕೆಲವು ದಿನಗಳಿಂದ ಹೊಂಚು ಹಾಕಿ‌ ಮನೆಯ ಬಗ್ಗೆ ಮಾಹಿತಿ‌…

Read More

ಬೆಂಗಳೂರು : ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರೈಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಪುಟ ಸಂಕಷ್ಟ ತೀವ್ರವಾಗಿ ಕಾಡುತ್ತಿದೆ. ಮೇಲ್ನೋಟ ಎಲ್ಲವೂ ಓಕೆ ಓಕೆ ಎನ್ನುತ್ತಿರುವ ಬೊಮ್ಮಾಯಿ, ಸಚವಾಕಾಂಕ್ಷಿಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದಾರೆ. ಮಂತ್ರಿಗಿರಿ ಆಕಾಂಕ್ಷಿಗಳ ಒತ್ತಾಯಕ್ಕೆ ಮಣಿದಿರುವಂತೆ ಕಾಣುತ್ತಿರುವ ಬೊಮ್ಮಾಯಿ, ಇಂದು ದೆಹಲಿ ದಂಡಯಾತ್ರೆ ಮಾಡಲು ನಿರ್ಧರಿಸಿದ್ದರಂತೆ. ಆದ್ರೆ ಕೆಲ ಸಂಸದರ ಸೂಚನೆ ಮೇರೆಗೆ ಸೋಮವಾರ ದೆಹಲಿಗೆ ಹೋಗಲು ನಿರ್ಧರಿಸಿದ್ದಾರಂತೆ. ಸದ್ಯ ಪಂಚ ರಾಜ್ಯ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಬಿಜೆಪಿ ಬಿಗ್ ಬಾಸ್ ಗಳು ಬೊಮ್ಮಾಯಿಗೆ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಪಟ್ಟು ಬಿಡದ ಆಕಾಂಕ್ಷಿಗಳು.. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತತ್ವಕ್ಕೆ ಬಂದಾಗಿನಿಂದಲೂ  ಸಚಿವಾಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಅದರಲ್ಲೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ, ಎಂ.ಪಿ.ರೇಣುಕಾಚಾರ್ಯ ಸರ್ಕಾರ ರಚನೆಯಾಗಿನಿಂದಲೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಲೇ ಇದ್ದಾರೆ. ಇನ್ನೇನು ರಾಜ್ಯದ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷ ಬಾಕಿ ಇರುವ  ಈ ಸಂದರ್ಭದಲ್ಲಿ ರೇಣುಕಾಚಾರ್ಯ, ನನಗೆ ಮಂತ್ರಿ…

Read More