Author: admin

ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಉತ್ತಮ ಆರಂಭ ಪಡೆದು, ಪ್ರೇಕ್ಷಕರ ಮನಗೆದ್ದು, ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.ಈ ವೇಳೆ ಗಣೇಶ್ ಅವರು ತಮ್ಮ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ. ಬಾಸ್ ಪದ ಬಳಕೆ ಇತ್ತೀಚೆಗೆ ಹೆಚ್ಚಿದೆ. ನೆಚ್ಚಿನ ಹೀರೋಗೆ ಅಭಿಮಾನಿಗಳು ಬಾಸ್ ಎಂದು ಕರೆಯುತ್ತಾರೆ. ​ ‘ಬಾಸ್’ ಎಂದರೆ ಅದು ದರ್ಶನ್ ಎಂದು ಅವರ ಫ್ಯಾನ್ಸ್ ಹೇಳುತ್ತಾರೆ. ಸುದೀಪ್, ಯಶ್ ಅಭಿಮಾನಿಗಳು ಕೂಡ ಬಾಸ್ ಪದ ನಮ್ಮ ಹೀರೋಗೆ ಹೊಂದಿಕೆ ಆಗುತ್ತದೆ ಎಂದು ಹೇಳುತ್ತಾರೆ. ಗಣೇಶ್ ಫ್ಯಾನ್ಸ್ ಅವರನ್ನು ಥಿಯೇಟರ್ ಮುಂದೆ ‘ಜಿ ಬಾಸ್’ ಎಂದು ಕರೆದಿದ್ದರು. ‘ಕೃಷ್ಣಂ ಪ್ರಣಯ ಸಖಿ’ ಗೆದ್ದ ಖುಷಿಯಲ್ಲಿ ಈ ರೀತಿ ಕರೆಯುತ್ತಿದ್ದರು. ಇದಕ್ಕೆ ಗಣೇಶ್ ಬೇಸರ ಹೊಹಾಕಿದ್ದಾರೆ. ‘ನನ್ನನ್ನು ಫ್ಯಾನ್ಸ್ ಜಿ ಬಾಸ್ ಎನ್ನುತ್ತಿದ್ದರು. ದಯವಿಟ್ಟು ಹಾಗೆ ಕರೆಯಬೇಡಿ. ನಾನು ನಿಮ್ಮ ಮನೆಯ ಹುಡುಗ. ನನಗೆ ಗೋಲ್ಡನ್ ಸ್ಟಾರ್ ಎಂದು ಇಟ್ಟಿದ್ದೀರಿ. ಹಾಗೆಯೇ ಕರೆಯಿರಿ ಸಾಕು’ ಎಂದು…

Read More

ಡಾ.ಬ್ರೋ ಹಲವು ದೇಶಗಳನ್ನು ಸುತ್ತಿ ಬ್ಲಾಗ್ ಮಾಡಿದ್ದರು. ಇದೀಗ ಡಾ.ಬ್ರೋ ಹೊಸ ಉದ್ಯಮ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಆಫೀಸು ಓಪನ್ ಮಾಡಿರುವ ಬ್ರೋ, ಗೋ ಪ್ರವಾಸವೆಂಬ ಟ್ರಾವೆಲಿಂಗ್ ಉದ್ಯಮ ಶುರು ಮಾಡಿದ್ದಾರೆ. ವಿಶ್ವದ ಮೂಲೆ ಮೂಲೆಯನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದು ಕನ್ನಡಿಗರಿಗೆ ತೋರಿಸುತ್ತಿರುವ ಡಾ. ಬ್ರೋ ಪ್ರಸಿದ್ಧಿಯ ಗಗನ್, ವಿನೂತನ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರವಾಸದ ಮೂಲಕವೇ ಪ್ರಸಿದ್ಧಿ ಪಡೆದಿರುವ ಗಗನ್, ಈಗ ತಮ್ಮ ಜೊತೆ ಸಾಮಾನ್ಯ ಜನರಿಗೂ ವಿಶ್ವವನ್ನು ಸುತ್ತಲು ಅವಕಾಶ ಮಾಡಿಕೊಡ್ತಿದ್ದಾರೆ. ಈ ಕೆಲಸಕ್ಕೆ ಡಾ.ಬ್ರೋಗೆ ಅವರ ಸ್ನೇಹಿತರು ಕೂಡ ಸಾಥ್ ಕೊಟ್ಟಿದ್ದಾರೆ. ಇವರೆಲ್ಲ ಸೇರಿ, ನಿಮ್ಮನ್ನು ಭಾರತ ಸೇರಿ, ಬೇರೆ ಬೇೆರೆ ದೇಶಗಳಿಗೆ ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಇನ್ನು ಗೋ ಪ್ರವಾಸಕ್ಕೆ ಎಷ್ಟರ ಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿದೆ ಅಂದ್ರೆ, ಫಟಾಪಟ್ ಎಂದು ಟಿಕೇಟ್‌ ಸೇಲ್ ಆಗಿದೆ. ಡಾ.ಬ್ರೋ ಈ ಪ್ರವಾಸಿಗರ ಜೊತೆಗೆ ಹೋಗಿ, ಅಲ್ಲಿನ ವಿಶೇಷತೆಯನ್ನು ಪ್ರವಾಸಿಗರಿಗೆ ತೋರಿಸುತ್ತಾರೆ. ವಿಜಯನಗರದಲ್ಲಿ ಡಾಕ್ಟರ್ ಬ್ರೋ, ಗೋ ಪ್ರವಾಸ (gopravasa) ಹೆಸರಿನ…

Read More

ಬೆಂಗಳೂರು: ಚೇತನ ಫೌಂಡೇಷನ್ ಕರ್ನಾಟಕ, ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ವತಿಯಿಂದ ರಾಜ್ಯ ಸಂಪನ್ಮೂಲ ವ್ಯಕ್ತಿ, ಸಮಾಜ ಸೇವಕ ಪಾವಗಡ ನವೀನ್ ಕಿಲಾರ್ಲಹಳ್ಳಿ ಅವರಿಗೆ ಭಾನುವಾರ ನಗರದ ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ  ಭಾರತ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪಾವಗಡದ ಗಡಿನಾಡಿನ ಯುವಕ ಕಳೆದ 20 ವರ್ಷಗಳಿಂದ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಮನೆ ಮಾತಾಗಿರುವ ನವೀನ್ ಕಿಲಾರ್ಲಹಳ್ಳಿಗೆ ಸಂದಿರುವ ಗೌರವ ಇದಾಗಿದೆ.    ಇತ್ತೀಚಿಗೆ ಶಿಕ್ಷಣ ಕ್ಷೇತ್ರದಲ್ಲಿನ ಶಾಲಾ ಕಾಲೇಜು ಮಕ್ಕಳಿಗೆ ನೈತಿಕ ಮೌಲ್ಯಗಳ ಅರಿವನ್ನು ರಾಜ್ಯ ವ್ಯಾಪಿ ತಮ್ಮ ಸ್ವಂತ ಖರ್ಚಿನಲ್ಲಿ ಮೂಡಿಸುತ್ತಿರುವುದು ಸಾಮಾಜಿಕವಾಗಿ ಅಪಾರ  ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಶಸ್ತಿಗೆ ಭಾಜನರಾದ ಪಾವಗಡ ನವೀನ್ ಕಿಲಾರ್ಲಹಳ್ಳಿಯವರಿಗೆ ನೆಟ್ಟಿಗರು, ಗಣ್ಯರು ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ನಾಗೇಂದ್ರಪ್ರಸಾದ್ , ಸಂಗೀತ ನಿರ್ದೇಶಕ ಮಹೇಶ್ ಮಹಾದೇವ್, ಗಾಯಕಿ  ಡಾ.ಪ್ರಿಯದರ್ಶನಿ, ರೈತ ಕವಿ ಶಂಕರಪ್ಪ ಬಳ್ಳೇಕಟ್ಟೆ, ಚಂದ್ರಶೇಖರ್ ಮಾಡಲಗೆರೆ ಸೇರಿದಂತೆ ಹಲವರು…

Read More

ಬೀದರ್: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ಸಂಸದ ಸಾಗರ ಖಂಡ್ರೆ ನೇತೃತ್ವದಲ್ಲಿ ಬೀದರ್ ನಲ್ಲಿ ಪ್ರತಿಭಟನೆ ನಡೆಯಿತು. ರಾಜಕೀಯ ದ್ವೇಷ ಹಾಗೂ ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಸಿದ್ದರಾಮಯ್ಯ  ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಾಜ್ಯಪಾಲರ ನಡೆಯನ್ನು ಖಂಡಿಸಿದರು. ಜನಪರ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಣಿಯಲು ಆಗದಿರುವ ಕಾರಣ ರಾಜಭವನವನ್ನು ದುರುಪಯೋಗ  ಮಾಡಿಕೊಂಡು ಮುಖ್ಯಮಂತ್ರಿಗಳ ಹೆಸರಿಗೆ ಕಳಂಕ ತರುವ ಕೆಲಸ ಬಿಜೆಪಿ ಅವರು ಹಾಗೂ ಕೇಂದ್ರ ಸರ್ಕಾರದವರು ಮಾಡುತ್ತಿದ್ದಾರೆ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನದ ಮುಖ್ಯಸ್ಥರಾಗಿ ಹೀಗೆ ಅಸಂವಿಧಾನಿಕ ನಡೆಯನ್ನು ಅನುಸರಿಸುತ್ತಿರುವ ಕರ್ನಾಟಕದ ರಾಜ್ಯಪಾಲರನ್ನು ರಾಷ್ಟ್ರಪತಿಗಳು ಕೂಡಲೇ ವಾಪಾಸ್ ಕರೆಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.  ವರದಿ: ಅರವಿಂದ ಮಲ್ಲಿಗೆ,  ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More

ಬೀದರ್: ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ಯಾವುದೇ ರೋಗಗಳು ಬಾಧಿಸುವುದಿಲ್ಲ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಕ್ರೀಡೆಗಳು ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿಶೇಷವಾಗಿ ದೇಶೀಯ ಆಟಗಳನ್ನು ಆಡಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಬೀದರ ಹಾಗೂ ಪತ್ರಿಸ್ವಾಮಿ ಪದವಿ ಪೂರ್ವ ಕಾಲೇಜು ಔರಾದ(ಬಿ) ಸಂಯುಕ್ತಾಶ್ರಯದಲ್ಲಿ ಆ.16ರಂದು ಔರಾದ(ಬಿ) ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2024–25ನೇ ಸಾಲಿನ ತಾಲ್ಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲ್ಲೂಕು, ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಜಯಿಸಿ ರಾಜ್ಯಮಟ್ಟಕ್ಕೆ ಹೋಗುವ ತಂಡಕ್ಕೆ 31,000 ಬಹುಮಾನ ಮತ್ತು ಟೀ ಶರ್ಟ್ಗಳನ್ನು ನೀಡಲಾಗುವುದೆಂದು ಘೋಷಿಸಿದರು. ವಿದ್ಯಾರ್ಥಿಗಳು ಕ್ರೀಡಾ ಭಾವನೆಯಿಂದ ಹುಮ್ಮಸ್ಸಿನಿಂದ ಆಟವಾಡಬೇಕು. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಜಯಿಸಿ ತಾಲ್ಲೂಕಿನ ಹೆಸರನ್ನು ಎತ್ತರಕ್ಕೇರಿಸಬೇಕು. ಶಿಕ್ಷಣದ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದು, ಐಎಎಸ್, ಐಪಿಎಸ್, ಕೆಎಎಸ್‌ ನಂತಹ ಹುದ್ದೆಗಳಿಗೆ ಏರಲು ಪ್ರಯತ್ನ ವಹಿಸಬೇಕು.…

Read More

ತುಮಕೂರು: ತುಮಕೂರಿನ ಪರಿವಿಕ್ಷಣ ಮಂದಿರದಲ್ಲಿ ನೂತನ ಕಚೇರಿಯನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅದ್ದೂರಿಯಾಗಿ ಉದ್ಘಾಟನೆ ಮಾಡಿದರು. ಇಂದು ಇದರೊಂದಿಗೆ  ಜನಸಂಪರ್ಕ ಸಭೆಯನ್ನು ಕೂಡ ನಡೆಸಿದರು. ಜನಸಂಪರ್ಕ ಸಭೆಯಲ್ಲಿ  ಪ್ರತಿ ತಾಲೂಕಿನಿಂದಲೂ  ನೂರಾರು ಕಾರ್ಯಕರ್ತರು ಆಗಮಿಸಿದ್ದರು. ಕೈಯಲ್ಲಿ ಹೂ ಗುಚ್ಚ ಹಿಡಿದು ಆಗಮಿಸಿದ ನೂರಾರು ಕಾರ್ಯಕರ್ತರು. ಅವರನ್ನು ನೂತನ ಕಚೇರಿಗೆ ಭರ್ಜರಿಯಾಗಿ ಸ್ವಾಗತಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ತುಮಕೂರು: ಸಿದ್ದರಾಮಯ್ಯ ನುರಿತ ರಾಜಕಾರಣಿ. ಇಂತಹ ಸಂದರ್ಭದಲ್ಲಿ ಅವರ ಪಕ್ಷ ಹೇಳಬೇಕಾಗುತ್ತೆ. ರಾಜೀನಾಮೆ ಬಗ್ಗೆ ನಾವು ತೀರ್ಮಾನ ಮಾಡಲು ಆಗಲ್ಲ. ಪಕ್ಷ ತೀರ್ಮಾನ ಮಾಡಬೇಕು. ಆಗ ಸಿದ್ದರಾಮಯ್ಯರ ವರ್ಚಸ್ಸು ಹೆಚ್ಚಾಗುತ್ತೆ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸೂಚನೆ ನೀಡಿರೋದು ಕಾನೂನಿ ಅಡಿಯಲ್ಲಿ ಇರೋದ್ರಿಂದ ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕಿರೋದು ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಅವರ ಕರ್ತವ್ಯ ಎಂದರು. ಅದನ್ನ ಮಾಡಲಿ ಎನ್ನೋದು ನನ್ನ‌ ಆಗ್ರಹ. ಸಿದ್ದರಾಮಯ್ಯನವರು ಎಂದೂ ಕೂಡ ದುಡುಕೋದು ಮಾಡ್ತಾರಾ ಮತ್ತೊಂದು ಮಾಡ್ತಾರ ಗೊತ್ತಿಲ್ಲ ಎಂದರು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ 125 ವರ್ಷ ಇತಿಹಾಸ ಇರುವ ಪಕ್ಷ. ನಾವು ಬಿಜೆಪಿಯವರು ಹೇಗೆ ನಡೆದುಕೊಂಡಿದ್ದೀವಿ ಅಂತಾ ಅರ್ಥಮಾಡಿಕೊಂಡು ಅವರು ತೀರ್ಮಾನ ತೆಗೆದುಕೊಂಡರೆ ಮುಂದಿನ ಪೀಳಿಗೆಗೆ ರಾಜಕೀಯ ಬಗ್ಗೆ ಗೌರವ ಇರುತ್ತೆ ಎಂದರು. ಅದನ್ನ ಮಾಡಬೇಕಾಗಿರೊದು ಆ ಪಕ್ಷ ಹಾಗೂ ಸಿದ್ದರಾಮಯ್ಯ. ತುಮಕೂರು ಕ್ಷೇತ್ರ ಸಂಬಂದಿಸಿದಂತೆ ರಾಜಕಾರಣ ಮಾಡಲು ಹೋಗಲ್ಲ‌…

Read More

ಗೋಕಾಕ್: ಉತ್ತರ ಕರ್ನಾಟಕ ಭಾಗದಲ್ಲಿ ಆಗಾಗ್ಗೆ ತಲೆದೋರುವ ಪ್ರಕೃತಿ ವೈಪರೀತ್ಯಗಳಿಗೆ ಸ್ಪಂದಿಸಿ ಸಹಸ್ರಾರು ಜನರಿಗೆ ಸಹಾಯಹಸ್ತವನ್ನು ನೀಡುತ್ತಿರುವ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಗೋಕಾಕ್ ನಗರದ ಹಾಗೂ ಈ ಭಾಗದ ಪರವಾಗಿ ಧನ್ಯವಾದವನ್ನು ಸಮರ್ಪಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಗೋಕಾಕ್ ನಗರದ ಮಧ್ಯಭಾಗದಲ್ಲಿರುವ ವಾಲ್ಮೀಕಿ ಕ್ರೀಡಾಂಗಣದಲ್ಲಿ ಪ್ರವಾಹ ಪೀಡಿತರಿಗೆ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾಮಿ ಜಪಾನಂದಜೀ ಅವರ ಬಗ್ಗೆ ಈಗಾಗಲೇ ಅನೇಕ ವಿಚಾರಗಳನ್ನು ಕೇಳ್ಪಟ್ಟಿದ್ದು, ಇಂದು ಅವರ ನೇರ ದರ್ಶನವನ್ನು ಪಡೆದು ಆಶೀರ್ವಾದ ಪಡೆದುದಕ್ಕೆ ಸಂತೋಷವಾಗಿದೆ ಎಂದರು. ಇದೇ ವೇಳೆ ಸ್ವಾಮೀಜಿಗೆ ಗೌರವ ಸಲ್ಲಿಸಿ, ಪುಷ್ಪಮಾಲೆಯನ್ನು ಸಲ್ಲಿಸಿದರು. ಸ್ವಾಮಿ ಜಪಾನಂದಜೀ ಮಹಾರಾಜ್ ಮಾತನಾಡಿ, ನಮ್ಮ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ರವರ ಸಹಕಾರದಿಂದ ಕಳೆದ 30 ವರ್ಷದಿಂದ ಏಕಪ್ರಕಾರವಾಗಿ ಆರು ರಾಜ್ಯಗಳಲ್ಲಿ ನಿರಂತರವಾದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇವೆ. ಇದೀಗ ಎರಡು ದಿನಗಳ ಹಿಂದೆ ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತ ಹಾಗೂ ಪ್ರವಾಹದ ಸಂತ್ರಸ್ತರಿಗೂ ಪರಿಹಾರವನ್ನು ನಡೆಸುತ್ತಿದ್ದೇವೆ…

Read More

ಒಮ್ಮೆ ಸತ್ಯಪುರ ರಾಜ್ಯಕ್ಕೆ ಸೇರಿದ ಸಿರಿವನ ಎಂಬ ಅರಣ್ಯದಲ್ಲಿ ಪ್ರಖ್ಯಾತ ಗುರು ಪ್ರಭುಶಿಖಿರ ಎಂಬುವರ ಗುರುಕುಲದಲ್ಲಿ ಸರ್ವವಿದ್ಯಾ ಪರಂಗತರಾಗಿದ್ದ ಜ್ಞಾನದೇವ, ಸತ್ಯದೇವ ಮತ್ತು ಅಮರದೇವಗಳೆಂಬ ಮೂವರು ಪಂಡಿತರು ರಾಜ ವೀರಬಲ್ಲಾಳನ ಆಸ್ಥಾನಕ್ಕೆ ಬಂದರು. ಅವರ ಮುಖದ ವರ್ಚಸ್ಸನ್ನು ನೋಡಿ ಎದ್ದು ನಿಂತು ಗೌರವಿಸಿ ನಂತರ ರಾಜ ಪಂಡಿತರುಗಳೇ ನನ್ನಿಂದ ನಿಮಗೆ ಏನಾಗಬೇಕು ಎಂದಾಗ ಮೂವರೂ ತಮ್ಮ ತಮ್ಮ ಪರಿಚಯ ಮಾಡಿಕೊಂಡ ನಂತರ ಅಮರದೇವನು ರಾಜರೇ ನಮಗೆ ನಿಮ್ಮ ಆಸ್ಥಾನದಲ್ಲಿ ನಮಗೆ ರಾಜಗುರು ಸ್ಥಾನಬೇಕು ನೀಡುವಿರಾ ಎಂದಾಗ ಹರ್ಷಿತನಾದ ರಾಜನು ಆಗಬಹುದು, ಆದರೆ ರಾಜಗುರು ಸ್ಥಾನ ಕೇವಲ ಒಬ್ಬರಿಗೆ ಮಾತ್ರ ದೊರಕುವುದು ಎಂದಾಗ ಸತ್ಯದೇವನು ಮುಂದೆ ಬಂದು ಇವರಿಬ್ಬರಿಗಿಂತ ನನಗೆ ಹೆಚ್ಚು ಜ್ಞಾನ ನನಗೆ ನೀಡಬೇಕು ಎಂದಾಗ ಅವರಿಬ್ಬರಲ್ಲಿ ಮಾತಿನ ವೈಮನಸ್ಯ ಉಂಟಾಯಿತು. ನಂತರ ಸುಮ್ಮನೆ ನಿಂತಿದ್ದ ಜ್ಞಾನದೇವನನ್ನು ಕುರಿತು ರಾಜ ನೀವು ಏನು ಹೇಳುವಿರಿ ಎಂದಾಗ ಜ್ಞಾನದೇವನು ಮಹಾರಾಜರೇ ತಮ್ಮ ತೀರ್ಮಾನವೇ ಅಂತಿಮ ನಾನು ಹೇಳುವುದು ಏನೂ ಇಲ್ಲ ಎಂದಾಗ ರಾಜನು…

Read More

ತುಮಕೂರು: ತುಮಕೂರು ಹಾಗೂ ನೆಲಮಂಗಲ ನಡುವಿನ ಅಡಕಮಾರನಹಳ್ಳಿ ಬೆಂಗಳೂರು ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡುತ್ತಿದ್ದ ಎರಡು ಬೈಕ್ ಗಳನ್ನು ತಡೆದು ಸಾರ್ವಜನಿಕರು ಬಿಸಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರು ತೀವ್ರ ಕಿರಿಕಿರಿ ಉಂಟು ಮಾಡಿದ್ದರು. ಹೀಗಾಗಿ ಸಾರ್ವಜನಿಕರೇ ಬೈಕ್ ಗಳನ್ನು ಯುವಕರಿಂದ ಕಿತ್ತುಕೊಂಡು ಪುಡಿಗಟ್ಟಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More