ಪಾವಗಡ: ಪರಿಸರ ದಿನಾಚರಣೆಯ ಪ್ರಯುಕ್ತ “ಭಾರತ ಮಾತಾ ಸೇವಾ ಟ್ರಸ್ಟ್” ವತಿಯಿಂದ ಪಾವಗಡ ತಾಲೂಕಿನ ಸಾಸಲಕುಂಟೆ, ಆರ್ಲಹಳ್ಳಿ, ಮಲ್ಲಮ್ಮನಹಳ್ಳಿ, ಬುದಿಬೆಟ್ಟ, ಕೋಟಗುಡ್ಡ, ದೆವಲಕೆರೆ, ಮತ್ತು ಪಾವಗಡ ನಗರದಲ್ಲಿ 100 ನೂರಕ್ಕೂ ಹೆಚ್ಚು ಜಂಬುನೇರಳೆ, ಸಿಬೆಗಿಡ, ,ದೊಡ್ಡ ಹಲಸಿನ ಹಣ್ಣಿನ ಗಿಡ, ಬೆಲದಕಾಯಿ ಗಿಡ, ಕಾಡುಬಾದಮಿಗಿಡ, ಹೆಬ್ಬೆವು, ಹುಣಸೆ ಗಿಡ, ಗಸಗಸೆಗಿಡ, ಬೇವಿನಗಿಡ, ತೆಗದಗಿಡ, ಸಿತಾಫಲ, ಸಿಲ್ವರ್ ಇನ್ನೂ ಇತರೆ ವಿವಿಧ ರೀತಿಯ ಗಿಡಗಳನ್ನು ಮನೆಯ ಹತ್ತಿರ, ತೋಟದಲ್ಲಿ, ಹೊಲದಲ್ಲಿ ನೆಡುವುದರ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಟ್ರಸ್ಟಿನ ಅಧ್ಯಕ್ಷರಾದ ನಾಗೇಂದ್ರ ಪ್ರತಾಪ್ ಚಾಲನೆ ನೀಡಿ ಮಾತನಾಡಿ, ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಇದು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದನ್ನು ಸಂರಕ್ಷಿಸುವ ಅಗತ್ಯತೆಯ ದಿನವಾಗಿದೆ ಎಂದರು.
ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಇದು ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ. ಭೂಮಿಯು ವಿವಿಧ ಜೀವಿಗಳ ನೆಲೆಯಾಗಿದೆ ಮತ್ತು ನಾವೆಲ್ಲರೂ ಆಹಾರ, ಗಾಳಿ, ನೀರು ಮತ್ತು ಇತರ ಅಗತ್ಯಗಳಿಗಾಗಿ ಪರಿಸರದ ಮೇಲೆ ಅವಲಂಬಿತರಾಗಿದ್ದೇವೆ ಎಂದು ತಿಳಿಸಿದರು.
ಪರಿಸರದ ಮಹತ್ವವನ್ನು ಅರ್ಥಮಾಡಿಕೊಳ್ಳದೆ ಮಾನವರು ಅದನ್ನು ನಾಶಪಡಿಸುತ್ತಿದ್ದಾರೆ. ಈಗ ಮಾನವ ಚಟುವಟಿಕೆಗಳಿಂದಾಗಿ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ನಮ್ಮ ಅಭಿವೃದ್ಧಿಗಾಗಿ ನಾವು ಅತ್ಯಮೂಲ್ಯ ಪರಿಸರವನ್ನು ತ್ಯಾಗ ಮಾಡುತ್ತಿದ್ದೇವೆ. ನಮಗೆ ಅರಿವಿಲ್ಲದೇ ಪರಿಸರವನ್ನು ಹಾಳು ಮಾಡುವ ಮೂಲಕ ಅನೇಕ ರೋಗಗಳು ಮತ್ತು ಪ್ರಕೃತಿ ವಿಕೋಪಗಳನ್ನು ಕರೆಯುತ್ತಿದ್ದೇವೆ ಎಂದರು.
ಪರಿಸರವನ್ನು ರಕ್ಷಿಸಲು ನಾವು ಗಮನಹರಿಸಬೇಕಾದ ಮುಖ್ಯ ವಿಷಯಗಳು. ಪರಿಸರವನ್ನು ಹೆಚ್ಚು ಆರೋಗ್ಯಕರವಾಗಿಸಲು ನಾವು ಮರಗಳನ್ನು ನೆಡುವುದರ ಮೇಲೆ ಕೇಂದ್ರೀಕರಿಸಬೇಕು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕು ಈ ವಿಶ್ವ ಪರಿಸರ ದಿನದ 2022 ರ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಭರವಸೆ ನೀಡೋಣ ಪರಿಸರ ಸಂರಕ್ಷಣೆ ಮಾಡುವೆವೆಂದು ಹೇಳಿದರು.
ಈ ಸಂಧರ್ಭದಲ್ಲಿ ಟ್ರಸ್ಟಿನ ಗೌರವ ಅಧ್ಯಕ್ಷರಾದ ನಾರಾಯಣಮ್ಮದೊಡ್ಡೀರಪ್ಪ, ಅಧ್ಯಕ್ಷರಾದ ನಾಗೇಂದ್ರ ಪ್ರತಾಪ್, ಖಜಾಂಚಿ ಗೋಪಾಲಕೃಷ್ಣ, ಟ್ರಸ್ಟಿಗಳಾದ ದಿನೇಶ್ ಎಸ್, ಸುನೀಲ್ ಪಾಳೇಗಾರ, ಸುರೇಶ್ ಯಾದವ್, ಮಧುಗಿರಿ ನವಿನ್, ಕ್ಯಾತಗಾನಚೆರ್ಲು ಶ್ರೀನಿವಾಸುಲು, ತಿರುಮಣಿ ಅಕ್ಕಲಪ್ಪ, ನಲಿಗಾನಹಳ್ಳಿ ಹನುಮಂತರಾಯಪ್ಪ ಮತ್ತು ಪರಮೇಶ್, ಲಿಂಗದಹಳ್ಳಿ ಬಾಲರಾಜು, ವಿಶ್ವನಾಥ್, ಪಾವಗಡ ನಗರದ ಶ್ರಿರಾಮ್, ಶ್ರೀ ಕಾಂತ್ ಹೊಸಕೋಟೆ, ಸಾಸಲಕುಂಟೆ ಗ್ರಾಮದ ಉಪನ್ಯಾಸಕರಾದ ನರಸಿಂಹಮೂರ್ತಿ, ರಾಣಾಪ್ರತಾಪ್, ಮಂಜುಪ್ರತಾಪ್, ಮದನ್ ರೆಡ್ಡಿ, ಮಲ್ಲಮ್ಮನಹಳ್ಳಿ ರಾಜಪ್ಪ, ದೇವಲಕೆರೆ ಸುದೀಪ್ , ಬುದಿಬೆಟ್ಟ ಪ್ರವೀಣ್ ಯಾದವ್, ಆರ್ಲಹಳ್ಳಿ ಗ್ರಾಮದ ದಾಸಪ್ಪ ಜಿ, ಇತರರು ಹಾಜರಿದ್ದರು
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5