ಸರಗೂರು: ತಾಲ್ಲೂಕಿನ ಬಿ ಮಟಕೇರಿ ಗ್ರಾ.ಪಂ. ವ್ಯಾಪ್ತಿಯ ಮೊಳೆಯೂರು ಮತ್ತು ಕಾವಲ್ ಗ್ರಾಮದಲ್ಲಿ ಬಿಲ್ ಕುಮಾರಸ್ವಾಮಿ ಹಾಗೂ ಸಿದ್ದಾಪ್ಪಾಜಿ ಖಂಡಯ ಉತ್ಸವ ಜರುಗಿತು.
ಗ್ರಾಮಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಸಂಸದರು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ಅವರಿಗೆ ಮೊಳೆಯೂರು ಕಾವಲ್ ಗ್ರಾಮದ ಗ್ರಾಮಸ್ಥರು ಮತ್ತು ಮುಖಂಡರು ಸ್ವಾಗತಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ದೇವರನ್ನು ಕರೆದೊಯ್ಯುವುದು ದೇವರ ವಿಗ್ರಹಮೂರ್ತಿ ಗಳನ್ನು ತೊಳೆದು ವಿಶೇಷ ಪೂಜೆ ಸಲ್ಲಿಸಿ ದೇವರನ್ನು ದೇವಸ್ಥಾನದ ಬಳಿಗೆ ಕರೆತರಲಾಗುವುದು.
ಈ ನಡುವೆ ಭಕ್ತರಿಂದ ಹಾಲು ಹರಿವೆ, ಬಾಯಿ ಬೀಗ ಸೇವೆ ಇರಲಿದೆ ಎಂದು ದೇವಸ್ಥಾನದ ಆವರಣದಲ್ಲಿ ಗ್ರಾಮದ ಯುವ ಮುಖಂಡ ಮೊಳೆಯೂರು ನಾಗರಾಜ್ ತಿಳಿಸಿದರು.
ಗ್ರಾಮದ ಪ್ರಮುಖ ಬೀದಿಯಿಂದ ಬಿಲ್ ಕುಮಾರಸ್ವಾಮಿ ಮತ್ತು ಸಿದ್ದಾಪ್ಪಾಜಿ ಖಂಡಯ ಕಳಶದೊಂದಿಗೆ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನ ಬಳಿಗೆ ಕರೆತರಲಾಯಿತು.
ನಂತರ ತಾಲ್ಲೂಕಿನ ಎಲ್ಲಾ ಬಂದತಹ ಭಕ್ತರಿಗೆ ಅನ್ನ ಸಂತರ್ಪಣೆ ಇರಲಿದೆ ಎಂದು ಗ್ರಾಮಸ್ಥರು ಹೇಳಿದರು.
ಯುವ ಮುಖಂಡರು ನಾಗರಾಜು ಎಮ್ ಜೆ., ಯಜಮಾನರಗಳು ಕೃಷ್ಣ., ನಿಂಗರಾಜು, ಸೋಮೇಶ್, ಗ್ರಾ.ಪಂ.ಸದಸ್ಯ ನಾಗಯ್ಯ, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಪುಟ್ಟಸ್ವಾಮಿ, ಮಹದೇವ ಎಮ್.ಎನ್.ನಾಗರಾಜು, ಎಮ್ ಎನ್.ಕುಮಾರ್, ಸಿ.ಪ್ರಸಾದ್, ಮಹದೇವಯ್ಯ, ನಾಗಯ್ಯ, ದೇವರಾಜು, ನಾಗರಾಜು, ನಿಂಗಯ್ಯ, ಹನುಮಯ್ಯ ಎಮ್ ಜಿ.ನಾಗೇಂದ್ರ., ಸಿದ್ದರಾಜು, ಕೆಂಡಯ್ಯ ಹಾಗೂ ಗ್ರಾಮದ ಮುಖಂಡರು ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5