ತಿಪಟೂರು: ತಾಲೂಕಿನ ಸರ್ಕಾರಿ ನೌಕರರ ಭವನದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಹಿಂದುಳಿದ ಸಮುದಾಯಗಳ ಏಳಿಗೆಗೆ ಶ್ರಮಿಸಿದ ನಾಯಕ ಡಾ ಬಾಬು ಜಗಜೀವನರಾಂ ಅವರ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿಗಳಾದ ರಂಗಧಾಮಯ್ಯ, ಬಾಬು ಜಗಜೀವನ ರಾಂ ಅವರು ಉತ್ತರ ಭಾರತದಲ್ಲಿ ದಲಿತ ಸಮುದಾಯದಲ್ಲಿ ಜನಿಸಿ ಜಾತಿವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ ನಾಯಕರು ಇವರು ಜಗಜೀವನ್ ರಾಮ್ ಓದುತ್ತಿರುವ ಶಾಲೆಯಲಿ ಕುಡಿಯಲು ನೀರನ್ನು ಮೇಲು ವರ್ಗದ ಜನಾಂಗಕ್ಕೆ ಬೇರೆ ಮಡಿಕೆ ತಳಸಮುದಾಯದಕೆ ಬೇರೆ ಕಡೆ ನೀರಿನ ಮಡಿಕೆ ಇಟ್ಟಿದರು ಇದರ ಬಗ್ಗೆ ಹೆಚ್ಚಿನ ಹೋರಾಟ ಮಾಡಿ ಜೊತೆಜೊತೆಗೆ ವಿದ್ಯಾಭ್ಯಾಸ ಮಾಡುತ್ತಿದ್ದ ರು ಶಾಲೆಗೆ ರಾಂಕ್ ಸ್ಟುಡೆಂಟ್ ಆಗಿದ್ದರು ಈ ದೇಶಕ್ಕೆ ಇವರ ಕೊಡುಗೆ ತುಂಬಾ ಅಪಾರವಾಗಿದೆ ಎಂದು ತಿಳಿಸಿದರು
ಮತ್ತು ನಗರಸಭಾ ಸದಸ್ಯರ ರಾಮ್ಮೋಹನ್ ಮಾತನಾಡಿ ನಮ್ಮ ಸಮಾಜಕ್ಕೆ ನಾವೆಲ್ಲರೂ ಹೇಗೆ ಸಮಾನತೆಯಿಂದ ಬಾಳಬೇಕು ಅನ್ನೋದನ್ನ ಅಭಿ ಸ್ವಾರವಾಗಿ ಹೋರಾಟ ಮಾಡಿದ ನಾಯಕ ಡಾ ಬಾಬು ಬಾಬು ಜಗಜೀವನ್ ರಾಮ್. ಅವರು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಡಿವೈಎಸ್ಪಿ, ತಾಲೂಕು ದಂಡಾಧಿಕಾರಿ ಚಂದ್ರಶೇಖರ್ , ತಾಲೂಕ್ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಅಬಕಾರಿ ಇಲಾಖೆಯ ಡಿವೈಎಸ್ಪಿ, ನಗರಸಭಾ ಸದಸ್ಯರ ಮೋಹನ್, ಸಾಹಿತಿಗಳಾದ ರಂಗಧಾಮಯ್ಯ, ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಅಶೋಕ್ ಗೌಡನಕಟ್ಟೆ, ನಾಗತಿಹಳ್ಳಿ ಕೃಷ್ಣಮೂರ್ತಿ ಸಂಚಾಲಕರು ದಲಿತ ಮುಖಂಡ ಶೆಟ್ಟಿಹಳ್ಳಿ ಕಲ್ಲೇಶ್ ಮತ್ತಿಘಟ್ಟ ಶಿವಕುಮಾರ್ ಯುವ ಘಟಕಅಧ್ಯಕ್ಷ ಗುರುಗದಹಳ್ಳಿಮಂಜುನಾಥ್ ಸೇರಿದಂತೆ ಹಲವು ಮುಖಂಡರು ಗಣ್ಯರು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5