ಕೊರಟಗೆರೆ: ಪಟ್ಟಣದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಈ ಹಿಂದೆ ಇ -ಸೊತ್ತು ಆಂದೋಲನ ಕಾರ್ಯಕ್ರಮವನ್ನು ನಡೆಸಿದ್ದು, ಅದರಲ್ಲಿ ಮೂರನೇ ವಾರ್ಡಿನ 38 ಜನ ಸಾರ್ವಜನಿಕರು ತಮ್ಮ ಮನೆಯ ಇ-ಸ್ವತ್ತಿಗೆ ಅರ್ಜಿಯನ್ನು ಸಲ್ಲಿಸಿದ್ದರು ಅರ್ಜಿಗಳನ್ನು ಪರಿಶೀಲಿಸಿ ಇಂದು ಸಾರ್ವಜನಿಕರ ಮನೆ ಬಾಗಿಲಿಗೆ ಅಧ್ಯಕ್ಷರು ಸದಸ್ಯರು ಹಾಗೂ ಅಧಿಕಾರಿಗಳು ತೆರಳಿ ಸುತ್ತಿನ ಅಳತೆಗಳನ್ನು ಮಾಡಿ ಇ ಸೊತ್ತನ್ನು ಸಾರ್ವಜನಿಕರಿಗಿಡುತ್ತಿದ್ದಾರೆ.
ಅಧ್ಯಕ್ಷರಾದ ಕಾವ್ಯಶ್ರೀ ರಮೇಶ್ ಮಾತನಾಡಿ, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗಮನ ಹರಿಸಲಾಗಿದೆ ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್ ಗಳಲ್ಲೂ ಕೂಡ ಈ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಧ್ಯೇಯ ಎಂದು ತಿಳಿಸಿದರು .
13ನೇ ವಾರ್ಡಿನ ಸದಸ್ಯ ಒಬಳರಾಜು ಮಾತನಾಡಿ, ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ಅವರ ಆಶಯದಂತೆ ತಾಲೂಕಿನ ಜನತೆಯು ಯಾವ ಕಚೇರಿಗೂ ಅಲೆದಾಡಬಾರದು ಅವರ ಕುಂದುಕೊರತೆಗಳನ್ನು ಆಯಾ ವಾರ್ಡಿನ ಸದಸ್ಯರೇ ಖುದ್ದಾಗಿ ಪರಿಶೀಲಿಸಿ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕು ಎಂದು ತಿಳಿಸಿದ್ದರು, ಅವರ ಆಶಯದಂತೆ ಪ್ರತಿ ವಾರ್ಡಿನಲ್ಲಿ ಇ ಸೊತ್ತು ಆಂದೋಲನ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಮನೆಯ ಸದಸ್ಯರಿಗೆ ಅವರ ಚಿರ ಸ್ಥಿರ ಆಸ್ತಿಗಳನ್ನು ಅಳೆದು ಸ್ಥಳದಲ್ಲಿಯೇ ಈ ಸೊತ್ತು ಕೊಡುವ ವಿನೂತನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು
ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಮಾತನಾಡಿ, ಪ್ರತಿ ಬಾರಿ ಸದಸ್ಯರ ಸಭೆ ನಡೆದಾಗ ಅತಿಹೆಚ್ಚು ಸಾರ್ವಜನಿಕರ ನಮ್ಮ ಮನೆಯ ಇ-ಸೊತ್ತು ಆಗಿಲ್ಲ ಎಂಬ ಸಮಸ್ಯೆ ಕೇಳಿಬರುತ್ತಿತ್ತು. ಅದರಂತೆಯೇ ಅಧ್ಯಕ್ಷರು ಸದಸ್ಯರ ಒಪ್ಪಿಗೆ ಮೇರೆಗೆ ಪ್ರಥಮವಾಗಿ ಹದಿ3ನೇ ವಾರ್ಡಿನಿಂದ ಇ- ಸ್ವತ್ತು ಆಂದೋಲನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡಿನ ಸಮಸ್ಯೆಗಳನ್ನು ಇದೇ ರೀತಿ ಬಗೆಹರಿಸುವುದಾಗಿ ತಿಳಿಸಿದರು.
13ನೇ ವಾರ್ಡಿನ ಸಾರ್ವಜನಿಕ ಮಧು ಮಾತನಾಡಿ, ನೂತನವಾಗಿ ಆಯ್ಕೆಯಾಗಿರುವ ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರು ಅಧ್ಯಕ್ಷರು ಸೇರಿ ನಡೆಸುತ್ತಿರುವ ಇಂತಹ ನೂತನ ಕಾರ್ಯಕ್ರಮಗಳು ಯಶಸ್ವಿಯಾಗಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಬಗೆಹರಿಸಲಿ ಎಂದು ತಿಳಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್, ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB