ತಿಪಟೂರು: ನಗರದ ಕಲಾಕೃತಿ ತಂಡದಿಂದ ನಗರದ ಕೆ.ಆರ್.ಬಡಾವಣೆ ಬಯಲು ರಂಗಮಂದಿರದಲ್ಲಿ ಏಪ್ರಿಲ್ 8 ರಿಂದ ಹತ್ತರವರೆಗೆ ಕಲಾಕೃತಿ ನಾಟಕೋತ್ಸವ 2022 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ತಿಪಟೂರು ಕೃಷ್ಣ ತಿಳಿಸಿದರು.
ಇತ್ತೀಚೆಗೆ ಕೊರೊನಾ ಆಘಾತದಿಂದ ಕರುನಾಡಿನ ಸಮಸ್ತ ಜನತೆಗೆ ಹೊಸತನ ಖುಷಿ ನೀಡಲು ಮನರಂಜನೆಗಾಗಿ ಕಲಾಕೃತಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಾಟಕೋತ್ಸವವನ್ನು ಮಾಜಿ ಶಾಸಕ ಕೆ.ಷಡಕ್ಷರಿ ಉದ್ಘಾಟಿಸುವರು. ಉಪವಿಭಾಗಾಧಿಕಾರಿಗಳು ದಿಗ್ವಿಜಯ ಬೋರ್ಡ್ ಕೆ ಸಾಧಕರನ್ನು ಸನ್ಮಾನಿಸುವರು. ಇಂದು ಸಂಜೆ ಮುದ್ದಣ್ಣ ಪ್ರಮೋಷನ್ ಪ್ರಸಂಗ ನಾಟಕವು ನಡೆಯಲಿದ್ದು, ಡಾಕ್ಟರ್ ಶ್ರೀಧರ್ ರವರ ಅಧ್ಯಕ್ಷತೆಯಲ್ಲಿ ಸಚಿವ ಬಿ.ಸಿ.ನಾಗೇಶ್ ಅವರಿಂದ ಸಾಧಕರಿಗೆ ಸನ್ಮಾನ ಎರಡನೇ ದಿನ ಬಾಹುಬಲಿ ವಿಜಯಂ ನಾಟಕ ನಡೆಯಲಿದ್ದು, ಹತ್ತನೇ ತಾರೀಕು ಸಂಜೆ ಸಮಾರೋಪ ನಡೆಯಲಿದೆ.
ಮಾಜಿ ಶಾಸಕ ನಂಜಾಮರಿ ಹಾಗೂ ತಹಸಿಲ್ದಾರ್ ಚಂದ್ರಶೇಖರ್, ಉಪಾಧ್ಯಕ್ಷ ಬಿ.ಎಸ್. ಶಿವಪ್ರಸಾದ್, ಪ್ರಧಾನ ಕಾರ್ಯದರ್ಶಿ ಜ್ಯೋತಿ ಗಣೇಶ್ ಹಾಗೂ ಮುಖ್ಯ ಅತಿಥಿಗಳಾಗಿ ಪೊಲೀಸ್ ಉಪ ಅಧೀಕ್ಷಕರು ಸಿದ್ದಾರ್ಥ ಗೊಯಲ್ ಐಪಿಎಸ್ ತಿಪಟೂರು ಉಪವಿಭಾಗ ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy