ಜಗಳೂರು: ಯಕ್ಷಗಾನ ಕಲೆಯು ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಜಗಳೂರು ಭಾಗ ಹಾಗೂ ಚಿತ್ರದುರ್ಗ ಬಳ್ಳಾರಿ ಜಿಲ್ಲೆಯಲ್ಲಿ ಇಂದಿಗೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿರುವುದು ಆಧುನಿಕ ಕಾಲದಲ್ಲಿ ಒಂದು ಅದ್ಭುತವೆ ಸರಿ ಎಂದು ಎಚ್ಚೆತ್ತ ಕರ್ನಾಟಕ ನವ ನಿರ್ಮಾಣ ವೇದಿಕೆಯ ಸಂಸ್ಥಾಪಕ ಮಹಾಲಿಂಗಪ್ಪ ಜೆ ಹೆಚ್ ಎಮ್ ಹೊಳೆ ತಿಳಿಸಿದರು.
ಯಕ್ಷಗಾನ ಬಯಲಾಟ ನಾಟಕ ಎಂಬುವುದು ಒಂದು ಗಂಡು ವಿದ್ಯೆ. ತಾಳ ಮೇಳ ತಮಟೆ ಗೆಜ್ಜೆ ತಬಲ ಶಾನಹಿ ಮುಂತಾದ ವಾದ್ಯಮೇಳಗಳ ಮುಖಾಂತರ ಪಾತ್ರಧಾರಿಗಳನ್ನು ಉರಿದುಂಬಿಸುವ ಬಯಲಾಟ, ಭಾಗವತರ ಪರಿ ನೋಡಲು, ಕೇಳಲು ಅದ್ಭುತವಾಗಿರುತ್ತದೆ. ಮನಮೋಹಕ ಸ್ತ್ರೀ ಪಾತ್ರವನ್ನು ಪುರುಷರು ಮಹಿಳೆಯರೇ ನಾಚುವಂತೆ ಅಭಿನಯಿಸುವುದು ಸೋಜಿಗ ಎಂದರು.
ವಿಜ್ಞಾನ, ತಂತ್ರಜ್ಞಾನ ಮುಂದುವರಿದ ಈ ಯುಗದಲ್ಲಿ ಸಿನಿಮಾ, ಧಾರವಾಹಿಗಳ ಮೋರೆಹೋಗುತ್ತಿರುವ ಕಾಲಘಟ್ಟದಲ್ಲಿ ಇಂದಿಗೂ ಸಹ ಜಗಳೂರು ತಾಲೂಕು ಹಿರೆಮಲ್ಲನಹೊಳೆ ಗೊಲ್ಲರಹಟ್ಟಿಯಲ್ಲಿ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಬಯಲಾಟವನ್ನ ಉಳಿಸಿ ಬೆಳಸಿಕೊಂಡು ಬರುತ್ತಿರುವುದು ಗ್ರಾಮಿಣ ಕಲೆಗೆ ಇರುವ ಶಕ್ತಿಯನ್ನ ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.
ಇಂತಹ ಅಳಿವಿನಂಚಿನಲ್ಲಿರುವ ಗ್ರಾಮೀಣ ಕಲೆಗಳನ್ನ ಉಳಿಸಿ ಬೆಳೆಸಿ ಬಯಲಾಟ ಭಾಗವತರು ಹಾಗೂ ಕಲಾವಿದರನ್ನ ಗುರುತಿಸಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಅವರಿಗೆ ಗೌರವಧನ ಪ್ರೋತ್ಸಾಹಗಳನ್ನು ಕೊಟ್ಟು ಗ್ರಾಮೀಣ ಸೊಗಡನ್ನು ಮುಂದಿನ ಪೀಳಿಗೆಗೆ ಸಿಗುವಂತೆ ಮಾಡಬೇಕು ಎಂದರು.
ವರದಿ: ಮುರುಳಿಧರನ್ ಆರ್., ( ಚಿತ್ರದುರ್ಗ – ದಾವಣಗೆರೆ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB