ತುಮಕೂರು: ಗಮಕ ಭಾರತೀ ಚಾರಿಟಬಲ್ ಟ್ರಸ್ಟ್ ತುಮಕೂರು, ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಜಿಲ್ಲಾ ಸಮಿತಿ ತುಮಕೂರು, ಸಂಸ್ಕಾರ ಭಾರತೀ ಕರ್ನಾಟಕ ಬೆಂಗಳೂರು, ಮಹಾನಗರ ಸಮಿತಿ, ತುಮಕೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಗಮಕ ಹಬ್ಬ–2026 ಕಾರ್ಯಕ್ರಮವು ಜು.18 ರಿಂದ 26ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯ, 1ನೇ ಅಡ್ಡರಸ್ತೆ, ಸೋಮೇಶ್ವರಪುರಂ, ತುಮಕೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಜು.18 ರಂದು ಸಂಜೆ 5.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭ ಹಾಗೂ ಗಮಕ ಕಲಾಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಮಕಭಾರತೀ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಟಿ.ಹೆಚ್.ಜೈಪ್ರಕಾಶ್ ವಹಿಸುವರು. ಉದ್ಘಾಟನೆಯನ್ನು ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ಆರ್. ಲಕ್ಷ್ಮೀನಾರಾಯಣ ವಹಿಸುವರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಮುಕ್ತಾ ಭಾಸ್ಕರ್ ಆಗಮಿಸುವರು. ಹಿರಿಯ ಗಮಕಿಗಳಾದ ಪದ್ಮಾ ಸೂರ್ಯನಾರಾಯಣ ಅವರು ಗಮಕ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡುವರು. ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮ. ಕಾವ್ಯಭಾಗ: ಕರ್ಣ-ದ್ರೋಣ ಸಂವಾದ. ವಾಚನ: ಉಮಾಶ್ರೀ ಸಂತೋಷ್, ವ್ಯಾಖ್ಯಾನ: ತರಂಗಿಣಿ ಜಗದೀಶ್.
ಜು.26ರ ಸಂಜೆ 5.30ಕ್ಕೆ ಗಮಕ ಹಬ್ಬ-2026ರ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ಕರ್ನಾಟಕ ಅಧ್ಯಕ್ಷರಾದ ನಟರಾಜಶೆಟ್ಟಿ ವಹಿಸುವರು. ಮುಖ್ಯ ಅತಿಥಿಗಳಾಗಿ ಬಾಬು ಹಿರಣ್ಣಯ್ಯ, ಜಿ.ಬಿ.ಜ್ಯೋತಿಗಣೇಶ್, ಟಿ.ಕೆ.ಲಕ್ಷ್ಮೀಶ ಅವರುಗಳು ಆಗಮಿಸುವರು. ಅನಂತರಾಮಯ್ಯ ಅವರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಚಿತ್ರ ಕಲಾವಿದ ನರಸಿಂಹಪ್ಪ ಡಿ. ಹಾಗೂ ಸಮಾಜ ಸೇವಕ ಎನ್.ನಟರಾಜುಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮ. ಕಾವ್ಯಭಾಗ: ಭೀಷ್ಮರ ಶರಶಯನ, ವಾಚನ: ಸುಮ ಜಯಸಿಂಹ, ವ್ಯಾಖ್ಯಾನ: ಜಯಶೀಲ ಶಂಕರ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


