ಗುಬ್ಬಿ: ಹನುಮ ಜಯಂತಿಯನ್ನು ಶ್ರೀರಾಮ ಜಯಂತಿಯಂದೇ ಮಾಡಬೇಕಿದ್ದ ಶ್ರೀರಾಮ ಜಯಂತೋತ್ಸವದ ಕಾರ್ಯಕರ್ತರುಗಳು ಇಬ್ಬಗೆ ನೀತಿಯಿಂದ ಹಾಗೂ ಮೂರು ದಿನದ ಅವಧಿಯನ್ನು ಪೊಲೀಸ್ ಇಲಾಖೆಯು ವಿಸ್ತರಿಸಿ ಇಂದು ರಾಮ ರಥೋತ್ಸವವನ್ನು ಆಚರಿಸಲಾಯಿತು.
ಪಟ್ಟಣದ ಶ್ರೀ ಚನ್ನ ಬಸವೇಶ್ವರ ದೇವಾಲಯದದಿಂದ ಪ್ರಾರಂಭ ವಾದ ಶ್ರೀ ರಾಮ ಉತ್ಸವವು ವಿವಿಧ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ಮೂಲಕ ಸಾಗಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾಗೂ ಕಾರ್ಯಕರ್ತರ ಹುಮ್ಮಸ್ಸಿನೊಂದಿಗೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಂದ ರಾಮ ಭಕ್ತರಿಗೆ ಪಾನಕ ಮತ್ತು ಮಜ್ಜಿಗೆ ಗುಬ್ಬಿವೀರಣ್ಣ ಸರ್ಕಲ್ ಬಳಿ ವಿತರಿಸಿ, ನಾವು ಯಾವತ್ತು ಅಣ್ಣತಮ್ಮಂದಿರಂತೆ ಇರುತ್ತೇವೆಂದು ಕೇಸರಿ ಶಾಲನ್ನು ಹೊದ್ದು ರಾಮ ರಥೋತ್ಸವಕ್ಕೆ ಪುಷ್ಪಾರ್ಚನೆ ಮಾಡಿ ಬಾಂಧವ್ಯ ತೋರಿಸಿದರು.
ಮೆರವಣಿಗೆಯಲ್ಲಿ ಜೆಡಿಎಸ್ ನ ಕಾರ್ಯಕರ್ತರುಗಳು ಹಾಗೂ ಶಾಸಕ ಎಸ್.ಆರ್. ಶ್ರೀನಿವಾಸ್ ಬಿಜೆಪಿ ಮುಖಂಡ ದಿಲೀಪ್ ಕುಮಾರ್, ಮಂಡಲದ ಅಧ್ಯಕ್ಷ ಪಂಚಾಕ್ಷರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೈರಪ್ಪ ಹಾಗೂ ನೂರಾರು ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5