ತುಮಕೂರು: ನಗರದ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜು ವತಿಯಿಂದ ಇತ್ತೀಚಿಗೆ ಜರಗಿದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ ಜಯಂತಿ ಮತ್ತು ವಿಶ್ವ ಆರೋಗ್ಯ ದಿನವನ್ನು ವಿಭಿನ್ನ ಹಾಗೂ ವಿನೂತನವಾಗಿ ಆಚರಿಸಲಾಯಿತು.
ಶ್ರೀಗಳವರ 117 ಜಯಂತಿಯ ಪ್ರಯುಕ್ತ ಕಾಲೇಜಿನ ಸುತ್ತಮುತ್ತಲಿನ 117 ಮನೆಗಳಲ್ಲಿ ‘ಮನೆ ಔಷಧಿ ವಿಮರ್ಶೆ ಮತ್ತು ಆರೋಗ್ಯ ಜಾಗೃತಿ’ ಶೀರ್ಷಿಕೆ ಅಡಿಯಲ್ಲಿ ಮನೆ ಮನೆಗಳಲ್ಲಿ ಆರೋಗ್ಯ, ಔಷಧ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ ವಿ.ಕುಲಕರ್ಣಿರವರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉತ್ತಮ ಆರೋಗ್ಯದ ಮಹತ್ವ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಉಸ್ತುವಾರಿಯನ್ನು ಡಾ.ಪಿ.ಅಶೋಕ್ ಕುಮಾರ್, ರವಿನಂದನ್ ಎ.ಪಿ. ಮತ್ತು ಡಾ.ನಂದಿನಿ ಎಂ.ಸ್ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಮನೆ-ಮನೆಗೆ ಭೇಟಿ ನೀಡಿದರು ಮತ್ತು ಅನೇಕ ಕ್ಲಿನಿಕಲ್ ಫಾರ್ಮಸಿ ಚಟುವಟಿಕೆಗಳನ್ನು ನಡೆಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA