nammatumakuru

    Subscribe to Updates

    Get the latest creative news from FooBar about art, design and business.

    What's Hot

    ಯತೀಂದ್ರ ಅವರಿಗೆ ಒಂದು ನೋಟೀಸು ಕೊಡೋ ಧೈರ್ಯ ಇಲ್ವಾ?: ಡಿಕೆಶಿ ವಿರುದ್ಧ ಆರ್.ಅಶೋಕ್ ವಾಗ್ದಾಳಿ

    October 25, 2025

    ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಸಚಿವ ಕೃಷ್ಣಭೈರೇಗೌಡ

    October 25, 2025

    ತಾಲ್ಲೂಕು ಮಟ್ಟದ ಕ್ರೀಡಾಕೂಟ: ಜ್ಞಾನ ಬೋಧಿನಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಾಧನೆ

    October 25, 2025
    Facebook Twitter Instagram
    ಟ್ರೆಂಡಿಂಗ್
    • ಯತೀಂದ್ರ ಅವರಿಗೆ ಒಂದು ನೋಟೀಸು ಕೊಡೋ ಧೈರ್ಯ ಇಲ್ವಾ?: ಡಿಕೆಶಿ ವಿರುದ್ಧ ಆರ್.ಅಶೋಕ್ ವಾಗ್ದಾಳಿ
    • ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಸಚಿವ ಕೃಷ್ಣಭೈರೇಗೌಡ
    • ತಾಲ್ಲೂಕು ಮಟ್ಟದ ಕ್ರೀಡಾಕೂಟ: ಜ್ಞಾನ ಬೋಧಿನಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಾಧನೆ
    • ತುಂಬಾಡಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ರಮೇಶ್ ಆಯ್ಕೆ
    • ಜ್ಞಾನಭೋದನಿ ಶಾಲೆ: ದೈಹಿಕ ಶಿಕ್ಷಕ ಅಬ್ದುಲ್ ಶುಕೂರ್ ಅವರಿಗೆ ಸನ್ಮಾನ
    • ತುಮಕೂರು | ರಾಸು ಸಾವು: ಪರಿಹಾರ ವಿತರಣೆಯಲ್ಲಿ ವಿಳಂಬ: 2.64 ಕೋಟಿ ಬಾಕಿ
    • ತುರುವೇಕೆರೆ | ನಿರಂತರ ಮಳೆಯಿಂದಾಗಿ ಕೋಡಿ ಹರಿದ ಕೆರೆಗಳು
    • ಆಟೋದಲ್ಲಿ ಮರೆತು ಹೋದ ಬ್ಯಾಗ್ ವಾರಸುದಾರರಿಗೆ ವಾಪಸ್: ಸಹಾಯ ಮಾಡಿದ AI ಸಿ.ಸಿ.ಟಿವಿ ಕಮಾಂಡ್ ಸೆಂಟರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರ್ವಧರ್ಮ ಸಮನ್ವತೆಯ ಜೈನಧರ್ಮ:  ಸ್ವಸ್ತಿ ಶ್ರೀ ಮೂಡುಬಿದರೆ ಭಟ್ಟಾರಕ ಶ್ರೀಗಳು
    ಜಿಲ್ಲಾ ಸುದ್ದಿ December 17, 2024

    ಸರ್ವಧರ್ಮ ಸಮನ್ವತೆಯ ಜೈನಧರ್ಮ:  ಸ್ವಸ್ತಿ ಶ್ರೀ ಮೂಡುಬಿದರೆ ಭಟ್ಟಾರಕ ಶ್ರೀಗಳು

    By adminDecember 17, 2024No Comments3 Mins Read
    jain

    ಮೂಡುಬಿದರೆ: ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು ಸರ್ವಧರ್ಮಗಳೊಂದಿಗೆ ಸಮನ್ವಯ ಕಾಪಾಡಿಕೊಂಡು ಬರುತ್ತಿರುವ ಧರ್ಮವಾಗಿದೆ, ಎಲ್ಲಾ ಧರ್ಮಗಳನ್ನು ಪ್ರೋತ್ಸಾಹಿಸುತ್ತಿದ್ದು, ಈ ಪರಿ ಬೇರೆ ಧರ್ಮದಲ್ಲಿ ಕಾಣುವುದಿಲ್ಲ ಎಂದು ಮೂಡುಬಿದರೆ ಜೈನ ಮಠದ ಸ್ವಸ್ತಿ ಶ್ರೀ ಚಾರು ಕೀರ್ತಿ   ಭಟ್ಟರಕ ಪಂಡಿತಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

    ಅವರಿಂದ ಮೂಡುಬಿದರೆ ಲೆಪ್ಪ ಬಸದಿಯ ಶ್ರೀ ಚಂದ್ರನಾಥ ತೀರ್ಥಂಕರ ಹಾಗೂ ಮಾತೇ ಜ್ವಾಲಾ ಮಾಲಿನಿ ಅಮ್ಮನವರ 38ನೇ ವಾರ್ಷಿಕ ಲಟ್ಟಣಿಗೆ ಅಭಿಷೇಕ, ಧಾರ್ಮಿಕ ಸಭಾ, ಕಾರ್ಯಕ್ರಮದ ಪಾವನ ಸಾನಿಧ್ಯ  ವಹಿಸಿ ಆಶೀರ್ವಚನ ನೀಡಿದರು.


    Provided by
    Provided by
    Provided by

    ಮೂಡುಬಿದಿರೆ ಬಾಗದಲ್ಲಿ ಶ್ರೀಮಂತ  ಮನೆತನಗಳು, ಮಠಗಳು, ರಾಜರಿದ್ದರು ಜೈನ ಧರ್ಮದ ಆಚಾರ ವಿಚಾರಗಳನ್ನು ಜನ ಗೌರವಿಸುತ್ತಿದ್ದರು, ಎಲ್ಲಾ ಧರ್ಮಗಳನ್ನು ಪ್ರೋತ್ಸಾಹಿಸಿದ್ದಾರೆ ಇದೊಂದು ಸರ್ವಧರ್ಮ ಸಮನ್ವಯ ಕ್ಷೇತ್ರವಾಗಿತ್ತು ಎಂದರು.

    ಮೂಡುಬಿದರೆಯಲ್ಲಿ ಜೈನ  ಧರ್ಮಕ್ಕೆ ಪುರಾತನ ಇತಿಹಾಸವಿದೆ, ಉನ್ನತವಾಗಿ ಬೆಳೆದಿದೆ, ಪುತ್ತಿಗೆ ಅರಸರು, ಪರಂಪರೆ, ಕಾವ್ಯವಾಚನ ನೀಡಿದ್ದಾರೆ  ಲೆಪ್ಪದ ಬಸದಿಗೆ ಈ ಹಿಂದೆ ವೈಭವದ ಪಂಚಕಲ್ಯಾಣಗಳು ನಡೆದಿವೆ ,ಕೆರೆ, ಕಟ್ಟೆ ಬಾವಿಗಳನ್ನು ಜನರಿಗೆ ಧಾರೆ ಎರೆದ ಜೈನ ಧರ್ಮ ಈ ಕಟ್ಟು ಕಟ್ಟಲೆಗಳನ್ನು ಕಾಪಾಡಿಕೊಂಡು ಬಂದಿದೆ ಎಂದರು .

    ಬಸದಿಗೆ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು ಇದು  ಜೀರ್ಣೋದ್ಧಾರಕ್ಕೆ ಮಾತ್ರ,   ಎಂದ ಭಟ್ಟಾರಕ ಶ್ರೀಗಳು, ಆಚಾರ –ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು ಎಂದರು.

    ಧರ್ಮಸ್ಥಳ ಜೈನ ಧರ್ಮೀಯರಿಗೆ ತವರು ಮನೆಯಾದರೂ ಇಲ್ಲಿ ಎಲ್ಲಾ ಸಮುದಾಯದವರು ಸೇರುತ್ತಾರೆ, ಶ್ರೀ ಹರ್ಷೇಂದ್ರ  ಹೆಗಡೆಯವರು ಶಿಸ್ತಿಗೆ ಹೆಸರಾಗಿದ್ದು, ಧರ್ಮವಂತರು , ಅನುಭವ ವoತರು. ಧರ್ಮದ ಆಚರಣೆಯಿಂದ ಧರ್ಮದ ಪ್ರಭಾವನೆ ಆಗಲಿದೆ ಎಂದ ಅವರು, ಜನ ಎಷ್ಟೇ ಉನ್ನತ ಹುದ್ದೆಯವರಾದರು ಶ್ರಾವಕ ಆಚರಣೆ ಓದಬೇಕು ಶಿಬಿರಗಳು ,ವರ್ತನೆಗಳು, ಸ್ವಚ್ಛವಾಗಿರಬೇಕು ಸಂಸ್ಕಾರಗಳನ್ನು ನೀಡುವ ಕಾರ್ಯ ಧರ್ಮ ಮಾಡಬೇಕಿದೆ, ಈ ಹಿಂದೆ ಆದಿನಾಥ, ಮಹಾವೀರ ಹಾಗು ಚಂದ್ರನಾಥ ತೀರ್ಥಂಕರರು ಧರ್ಮಗಳನ್ನು ದಾರೆದಿದ್ದಾರೆ ಎಂದರು.

    ಸ್ವಯಂಸೇವಕರಾಗಿ ದುಡಿದಾಗ, ಆತ್ಮಾವಲೋಕ ಲೋಕನ ಮಾಡಿಕೊಂಡಾಗ ಬಸದಿಗಳು ಸ್ವಚ್ಛವಾಗಲಿವೆ ಎಂದರು.  ಶ್ರಾವಕರು ,ಪುರೋಹಿತರು ಎರಡು ಕಣ್ಣುಗಳಿದ್ದಂತೆ. ಬಸದಿಗಳ ರಕ್ಷಣೆಗೆ ಸ್ವಚ್ಛತೆ ಕೈಗೊಳ್ಳಬೇಕು,  ಕೀಳಿರಿಮೆ ಮಾಡದೆ ಕರ್ತವ್ಯಗಳನ್ನು ಅಳವುಡಿಸಿಕೊಂಡು,ಕಟ್ಟು–ಕಟ್ಟಲೆಗಳನ್ನು ರಕ್ಷಿಸಿ ಉಳಿಸಿ ಬೆಳೆಸಬೇಕೆಂದರು.

    ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ ಧರ್ಮ ಸಾಮ್ರಾಜ್ಯದ   ಹಿಂದಿನ ನೆನಪುಗಳನ್ನು ಮಲಕು ಹಾಕಿ, ಮೂಡುಬಿದರೆ ಇದೊಂದು ದೈವತ್ವದ ನೆಲೆ ,ಧರ್ಮಭೂಮಿ , ಈಗಿರುವ ಬಸದಿಗಳಲ್ಲಿ ಪೂಜೆ ಆಗುವಂತೆ ಮಾಡಿ , ಸ್ವಚ್ಛತೆ ಕಾಪಾಡುವುದು ಅಗತ್ಯ. ಬಸದಿಗಳಲ್ಲಿ ಪುರೋಹಿತರುಗಳ ಕೊರತೆ ಇದೆ ಎಂದ ಅವರು,  ಈ ಕಾಲಘಟ್ಟದಲ್ಲಿ ಸಿದ್ದರಾಮಯ್ಯ ಸರ್ಕಾರ  50 ಲಕ್ಷ ಬಿಡುಗಡೆ ಮಾಡಿದೆ ಎಂದರು.

    ಸಮುದಾಯ ಭವನ, ಬಸದಿಗಳ  ಜೀರ್ಣೋದ್ಧಾರ ವೇಣೂರು ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ.ಗಳನ್ನು ನೀಡಿದೆ, ಸರ್ಕಾರಕ್ಕೆ ತೆರಿಗೆ ಪಾವತಿಸುವಲ್ಲಿ ಜೈನ ಸಮುದಾಯ ಮೊದಲಿಗರು ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಸಿಂಡಿಕೇಟ್ ನ ಮಾಜಿ ಸದಸ್ಯ ಕೆ. ಸುರೇಶ್ ಬಲ್ಲಾಳ್ ಮಾತನಾಡಿ ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು ಹಲವಾರು ಜೈನ ಬಸದಿಗಳು ದೇವಸ್ಥಾನಗಳಾಗಿವೆ ಎಂದರು .ಈ ಹಿಂದೆ ಹಳ್ಳಿ ಹಳ್ಳಿಗಳಲ್ಲಿ ಬಸದಿಗಳಿದ್ದವು ಎಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಿ.ಹರ್ಷೇಂದ್ರ ಹೆಗಡೆ ಮಾತನಾಡಿ, ಕ್ಷೇತ್ರದಲ್ಲಿ ಅನ್ನದಾನ, ವಸ್ತ್ರದಾನ ,ವಿದ್ಯಾದಾನ ಮಾಡಿದ್ದು ಅಭಯದಾನ ಕ್ಷೇತ್ರದಲ್ಲಿ ನಡೆಯುತ್ತಿದೆ. ಧರ್ಮ ಕ್ಷೇತ್ರಗಳ ಸ್ವಚ್ಛತೆ , ಶುಚಿತ್ವ ಕಾಪಾಡುವುದು ಎಲ್ಲಾ ಧರ್ಮಗಳ ಪ್ರಮುಖವಾಗಿದ್ದು,ಈ ಬಗ್ಗೆ ಚಿಂತನೆ ಅಗತ್ಯ ಎಂದರು.

    ಬಸದಿಗಳ ಜೀರ್ಣೋದ್ಧಾರದಿಂದ ಸಮಾಜದಲ್ಲಿ ಐಕ್ಯತೆ ಬರುತ್ತದೆ , ಬಸದಿ ಸಮುದಾಯಗಳ ಜೀರ್ಣೋದ್ಧಾರದಿಂದ ಉತ್ತಮ ಪರಿಸರ ಬೆಳೆಯುತ್ತದೆ ಎಂದ ಅವರು, ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.  ಭೂ– ಮಸೂದೆ ತಂದ ನಂತರ ಬಸದಿಗಳ ನಿರ್ವಹಣೆ ಕಷ್ಟವಾಗಿತ್ತು ಎಂದು ಅವರು, ವಿದ್ಯಾವಂತರಾಗಿ, ವಿಚಾರವಂತರಾಗಿ, ಆಚಾರವಂತರಾದಾಗ ಬೆಲೆ ಬರಲಿದೆ ಎಂದರು.

    ಇದೇ ಸಂದರ್ಭದಲ್ಲಿ  ಅರಳ ರಾಜೇಂದ್ರ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಮಲ್ ಕುಮಾರ್ ಬೆಟೆಗೇರಿ, ಅರಮನೆ ಎಲ್.ಎಂ. ವೀರೇಂದ್ರ, ಮೂಡುಬಿದ್ರೆ ಅರಮನೆಯ ಕುಲದೀಪ್ .ಎಂ. ಚೌಟ, ನಿಖಿಲ್, ಮಿಥುನ್ ಚೋಟ, ಸಿ.ಎಂ.ಸುರೇಶ್ ಕುಮಾರ್ , ಮೊಕೇಶ್ವರ ಆದರ್ಶ ಸೇರಿದಂತೆ ಅರಮನೆ ,ಕೊಂಡೆ ಮನೆ ,ಚೌಟ ಅರಮನೆ ಸದಸ್ಯರುಗಳು ,ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.  ಕು .ಖ್ಯಾತಿ ಪ್ರಾರ್ಥಿಸಿದರು.  ಪ್ರಭಾತ್ ಬಲ್ಲಾಳ್ ಸ್ವಾಗತಿಸಿ –ಕಾರ್ಯಕ್ರಮ ನಿರೂಪಿಸಿದರು.  ಸಿ.ಎಂ. ಆದರ್ಶ  ವಂದಿಸಿದರು.

    ವರದಿ: ಜೆ.ರಂಗನಾಥ. ತುಮಕೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಆಟೋದಲ್ಲಿ ಮರೆತು ಹೋದ ಬ್ಯಾಗ್ ವಾರಸುದಾರರಿಗೆ ವಾಪಸ್: ಸಹಾಯ ಮಾಡಿದ AI ಸಿ.ಸಿ.ಟಿವಿ ಕಮಾಂಡ್ ಸೆಂಟರ್

    October 25, 2025

    ದನದ ಕೊಟ್ಟಿಗೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು: 2 ಕರುಗಳು, ಕೃಷಿ ಸಾಮಗ್ರಿ, ಬೆಳೆ ಸುಟ್ಟು ಕರಕಲು

    October 25, 2025

    ಬಾಸ್ಕೆಟ್ ಬಾಲ್:  ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಎಚ್.ಎನ್.ಸವಿತಾ: ಗ್ರಾ.ಪಂ.ನಿಂದ ಸನ್ಮಾನ

    October 24, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಯತೀಂದ್ರ ಅವರಿಗೆ ಒಂದು ನೋಟೀಸು ಕೊಡೋ ಧೈರ್ಯ ಇಲ್ವಾ?: ಡಿಕೆಶಿ ವಿರುದ್ಧ ಆರ್.ಅಶೋಕ್ ವಾಗ್ದಾಳಿ

    October 25, 2025

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ‘ಉತ್ತರಾಧಿಕಾರಿ’ ಹೇಳಿಕೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ…

    ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಸಚಿವ ಕೃಷ್ಣಭೈರೇಗೌಡ

    October 25, 2025

    ತಾಲ್ಲೂಕು ಮಟ್ಟದ ಕ್ರೀಡಾಕೂಟ: ಜ್ಞಾನ ಬೋಧಿನಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಾಧನೆ

    October 25, 2025

    ತುಂಬಾಡಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ರಮೇಶ್ ಆಯ್ಕೆ

    October 25, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.