ಸರಗೂರು: ತಾಲ್ಲೂಕಿನ ನುಗು ಡ್ಯಾಂನಿಂದ ಮುಳ್ಳೂರುವರೆಗೆ ಸುಮಾರು 3 ಕಿ.ಮೀ. ಉದ್ದದವರೆಗೂ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಗುತ್ತಿಗೆದಾರ ಶಾಂತಮಲ್ಲಪ್ಪ ಕೋತ್ತೇಗಾಲ , ಸರಿಯಾದ ರೀತಿಯಲ್ಲಿ ಕೆಲಸ ಮಾಡಿಸಿಲ್ಲ ಎಂದು ಇಲ್ಲಿನ ನಿವಾಸಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸುಮಾರು ವೆಚ್ಚ 4.30 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ, ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಣವನ್ನು ದುರುಪಯೋಗ ಮಾಡಿಕೊಂಡು ಕಳಪೆ ಕಾಮಗಾರಿ ನಡೆಸಿದ್ದಾರೆ. ರಸ್ತೆಯ ಪ್ಯಾಚಿಂಗ್ ಡಾಂಬರೀಕರಣ ಮಾಡದೇ ರಸ್ತೆಗೆ ಮಣ್ಣು ಹಾಕಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ರಸ್ತೆಯ ಕೋತ್ತೇಗಾಲ ಗ್ರಾ.ಪಂ. ಸದಸ್ಯ ಮಹದೇವ ಮಾತನಾಡಿ, ಈ ರಸ್ತೆಗೆ ಡಾಂಬರಿಕರಣ ಮಾಡಿಲ್ಲ. ರಸ್ತೆಯ ಗುಂಡಿಗಳಿಗೆ ಪ್ಯಾಚಿಂಗ್ ಮಾಡದೇ, ಬರೇ ಮಣ್ಣು ಹಾಕಿ ಬಿಟ್ಟಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರ ಸೇರಿ ಕಳಪೆ ಕಾಮಗಾರಿ ಮಾಡಿ ಅನ್ಯಾಯ ಮಾಡಿದ್ದಾರೆ. ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಮದ ಸ್ಥಳೀಯ ಮುಖಂಡ ಪುಟ್ಟೇಗೌಡ ಮಾತನಾಡಿ, ಡ್ಯಾಂ ಬೀರ್ವಾಳ್ ರಿಂದ ಹುಲ್ಲಹಳ್ಳಿ ರಸ್ತೆಗೆ ಸೇರುವ ರಸ್ತೆ ಇದಾಗಿದ್ದು, ಈ ಕಾಮಗಾರಿ ಎಸ್ಟಿಮೆಂಟ್ ಇರುವ ಪ್ರಕಾರ ಕೆಲಸ ಮಾಡಿಲ್ಲ ಇವರ ಇಷ್ಟಬಂದಂಗೆ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.
ಕೋತ್ತೇಗಾಲ ಗ್ರಾ.ಪಂ. ಸದಸ್ಯ ಚಲುವಪ್ಪ ಮಾತನಾಡಿ, ಇದು ಕಾಡಂಚಿನ ಭಾಗವಾಗಿದ್ದು, ಇಲ್ಲಿ ರಾತ್ರಿ ವೇಳೆ ವಾಹನ ಸಂಚಾರವೇ ಕಷ್ಟಕರವಾಗಿದೆ. ಇಂತಹದ್ದರಲ್ಲಿ, ಇಲ್ಲಿನ ರಸ್ತೆಯ ಕಾಮಗಾರಿಯನ್ನು ಸರಿಯಾಗಿ ನಡೆಸದೇ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕೋತ್ತೇಗಾಲ ಗ್ರಾ.ಪಂ. ಸದಸ್ಯರು ಮಹದೇವ, ಚಲುವಪ್ಪ, ಸುಂದರ್, ಗ್ರಾಮದ ಮುಖಂಡರು ರವಿ, ಪುಟ್ಟೇಗೌಡ, ಶಿವರಾಜು, ಬೀರನಾಯಕ, ಮಲ್ಲಿಕಾರ್ಜುನ, ಮಾದಯ್ಯ ಇನ್ನೂ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB