ಕೊರಟಗೆರೆ : ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕೊರಟಗೆರೆ ತಾಲೂಕು ಶೇ. 64.79ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಕಳೆದ ಬಾರಿಗಿಂತ ಈ ಬಾರಿ ಶೇ. 2ರಷ್ಟು ಚೇತರಿಕೆ ಕಂಡಿದೆ.
ಕೊರಟಗೆರೆ ಪಟ್ಟಣದ ಚಾಣಕ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಅದಿಲ್ ಲಾಲ್ ಸಾಬ್ ರಾಮ್ ದುರ್ಗ್ 625 ಕ್ಕೆ 621 (ಶೇ. 99.36) ಅಂಕ ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರವೀಂದ್ರ ಭಾರತಿ ರವೀಂದ್ರಭಾರತಿ ಪ್ರೌಢ ಶಾಲೆಯ ಸೃಜನ್. ಎಂ.ಎನ್– 618,(ಶೇ. 98.88) ಸುಹಾಸ್.ಪಿ– 618, (ಶೇ. 98.88) ಅಮೂಲ್ಯ.ಜಿ.ಹೆಚ್- 617 (ಶೇ. 97.72) ಸರ್ಕಾರಿ ಪ್ರೌಡಶಾಲೆಯ ವೇಣು 617 (ಶೇ. 97.72) ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ.
ಈ ಬಾರಿ ಕೊರಟಗೆರೆ ತಾಲೂಕಿನಲ್ಲಿ 2093 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದರು, ಈ ಪೈಕಿ 1037 ಗಂಡು ಮಕ್ಕಳು ಹಾಗೂ 1056 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದು, ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಶೇ. 64.79ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದೆ.
ಕೊರಟಗೆರೆ ತಾಲೂಕಿನ ಹುಲೀಕುಂಟೆ ಸಮೀಪ ಇರುವ ಕಿತ್ತೂರರಾಣ ಚೆನ್ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತೊಗರಿಘಟ್ಟ ಗ್ರಾಮದ ಗೋವಿಂದರಾಜು ಮಗಳಾದ ಟಿ.ಜಿ.ಗೀತಾ 614 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW