ನಂಜನಗೂಡು: ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಫೋಟೋ ತೆರವುಗೊಳಿಸಿ ಅವಮಾನಿಸಿದ ಘಟನೆಯ ವಿರುದ್ಧ ನಂಜನಗೂಡು ತಾಲ್ಲೂಕಿನ ಹೇಡಿಯಾಲ ಗ್ರಾಮದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಗೆ ನಂಜನಗೂಡು ತಾಲ್ಲೂಕಿನ ಹೇಡಿಯಾಲ ಸುತ್ತಮುತ್ತಲಿನ ಗ್ರಾಮವಾದ ಹಾದನೂರು ಮುಳ್ಳೂರು , ವಡೆಯನಪುರ ಹೇಡಿಯಾಲ ಗ್ರಾಮಸ್ಥರು ಬೆಂಬಲ ನೀಡಿದರು. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ನಂಜನಗೂಡು ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾಗೇಶ ರಾಜ್ ಮಾತನಾಡಿ, ಅಂಬೇಡ್ಕರ್ ಭಾವ ಚಿತ್ರಕ್ಕೆ ಅವಮಾನಿಸಿದ ಬಗ್ಗೆ ಎಸ್ ಸಿ, ಎಸ್ ಟಿ ಶಾಸಕರು ಸಚಿವರು ಸದನದಲ್ಲಿ ಮಾತನಾಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಮಹೇಶ್ ಮಾತನಾಡಿ, ಮೊನ್ನೆ ನಡೆದ ವಿಧಾನಸೌಧ ಚಲೋ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಬಸವರಾಜು ಬೊಮ್ಮಯಿರವರು ಇನ್ನೂ ಮೂರು ದಿನಗಳಲ್ಲಿ ಅವನ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್.ಡಿ.ಕೋಟೆಯ ಪುರಸಭೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್. ಸಿ. ನರಸಿಂಹಮೂರ್ತಿ , ಪ್ರತಿಭಟನಾಕಾರರು ಸಂಶೋಧಕ ಸಂಘದ ರಾಜ್ಯಾಧ್ಯಕ್ಷ ಮರಿದೇವಯ್ಯ, ದಸಂಸ(ಅಂಬೇಡ್ಕರ್ ವಾದ)ಜಿಲ್ಲಾ ಸಂಘಟನಾ ಸಂಚಾಲಕರಾದ ಚಾ ಶಿವಕುಮಾರ್ ಶಿವಲಿಂಗಯ್ಯ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಾ ನಾಗೇಶ್ ರಾಜ್ , ಗೋವಿಂದರಾಜು ಗ್ರಾ ಪಂ ಸದಸ್ಯ ಹೇಡಿಯಾಲ, ಹೆಚ್. ಡಿ.ಕೋಟೆಯ ನರಸಿಂಹಮೂರ್ತಿ, ಮುಸ್ಲಿಂ ಸಮುದಾಯದ ಮುಖಂಡರು ಸಲ್ಮಮತಿಅಲಿ, ಹಾದನೂರು ಯಜಮಾನ ಮಹದೇವಯ್ಯ, ಶಿವಲಿಂಗಯ್ಯ ಗ್ರಾಪಂ ಸದಸ್ಯ, ಸಂಶೋಧಕ ಸಂಘದ ಅಧ್ಯಕ್ಷ ಮರಿದೇವಯ್ಯ, ನಾರಾಯಣ್ ವಡೆಯನಪುರ, ಬಸವಣ್ಣಹಾದನೂರು, ಸಿದ್ದರಾಜು ಹೊಸವಿಡುಹುಂಡಿ, ನಿಂಗರಾಜು ರವಿಕುಮಾರ್ ಮೂಳ್ಳೂರು, ಕೆಂಪಣ್ಣ ಕುಮಾರ್ ಚೆಂಗೌಡನಹುಂಡಿ, ಶಿವರಾಜ್ ಅರಸು, ಪ್ರಕಾಶ್, ರಾಜೇಶ್ ಹಾದನೂರು ಮತ್ತಿತರರು ಇದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB