ತುಮಕೂರು: ನೋಡುಗರಿಂದ ಓದುಗರಿಂದ ಪತ್ರಿಕೆಗಳು ದೂರದಲ್ಲಿವೆ. ರಾಜಕಾರಣಿಗಳು ಸಿನಿಮಾರಂಗದವರನ್ನ ಬಿಟ್ಟು ಜನಸಾಮನ್ಯರ ಬಳಿ ಪತ್ರಿಕೆಗಳು ಹೋಗಬೇಕಿದೆ ಆಗ ಓದುಗರ ಸಂಖ್ಯೆ ಹೆಚ್ಚುತ್ತದೆ, ಪತ್ರಿಕೆಗಳು ಸಿದ್ದಾಂತ, ನಡವಳಿಕೆಗಳನ್ನು ಬದಲಾಯಿಸದೆ ಹೋದರೆ ಕಷ್ಟ ಸಾಧ್ಯ, ನಾವು ವಿಶ್ವಾಸಾರ್ಹತೆ ಗಳಿಸಬೇಕು ಎಂದು ರವೀಂದ್ರ ಭಟ್ ಐನೈಕ್ಯ ಹೇಳಿದ್ದಾರೆ.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕರ್ನಾಟಕ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಮಕೂರಿನಲ್ಲಿ ನಡೆದ ಸಮ್ಮೇಳನ ಕ್ಕೆ ತುಮಕೂರು ಕಾ.ನಿ.ಪ. ಜಿಲ್ಲಾ ಸಂಘಕ್ಕೆ ಅಭಿನಂದನೆ ಸಲ್ಲಿಸುತ್ತೇನೆ, ಪತ್ರಕರ್ತರ ರಾಜ್ಯ ಸಮ್ಮೇಳನ ರಾಷ್ಟ್ರೀಯ ಸಮ್ಮೇಳನವಾಗಿ ಪರಿವರ್ತನೆಯಾಗಬೇಕು ಸಮ್ಮೇಳನಕ್ಕೆ ಸರ್ವಾಧ್ಯಕ್ಷರೊಬ್ಬರನ್ನು ಸೃಷ್ಟಿ ಮಾಡಬೇಕು ಎಂದು ತಿಳಿಸಿದರು.
ಗೋಷ್ಠಿ ಉದ್ಘಾಟಿಸಿ ಮಾತನಾಡಿದ ವಿಜಯವಾಣಿ ಸಂಪಾದಕ ಕೆ.ಎನ್.ಚೇನ್ನೆಗೌಡ, ಪತ್ರಿಕೋದ್ಯಮದಲ್ಲಿ ಓದುಗರ ಕೊರತೆ ಇದೆ, ಸೋಷಿಯಲ್ ಮೀಡಿಯಾ ಅಬ್ಬರ ಹೆಚ್ಚಿದೆ. ಅದರಲ್ಲೂ ಸವಾಲುಗಳನ್ನು ಎದುರಿಸಿ ಪತ್ರಿಕೆಗಳು ನಡೆಯುತ್ತಿವೆ. ಓದುಗರನ್ನ ಜಾಗೃತೆಗೊಳಿಸುವುದು ಸಂಪಾದಕರು ಜವಾಬ್ದಾರಿ ಓದುಗರಲ್ಲಿ ಸುದ್ದಿಯ ಕುತೂಹಲ ಕೆರಳಿಸುವ ಹಂತದಲ್ಲಿ ವಿಫಲರಾಗುದ್ದೇವೆ ಎನ್ನುವ ಖಿನ್ನತೆ ಕಾಡುತ್ತಿದೆ ಪ್ರಿಂಟ್ ಮೀಡಿಯಾದಲ್ಲಿಅಭಿವೃದ್ಧಿ ಸುದ್ದಿ ನೀಡುತ್ತಿಲ್ಲ. ಹಾಗಾಗಿ ಇದಕ್ಕೆ ಪರಿಹಾರ ಮತ್ತುಅನ್ವೇಷಣೆಯಾಗಬೇಕಿದೆ ಎಂದರು.
ಗೋಷ್ಠಿಯಲ್ಲಿ ಮಾಧ್ಯಮ ಓದುಗರು ಕೇಳುಗರ ಬಗ್ಗೆ ವಿಷಯ ಮಂಡನೆ ಮಾಡಿ ಮಾತನಾಡಿದ ಹಿರಿಯ ಪತ್ರಕತರು ಹಾಗೂ ಮೈಂಡ್ ಫುಲ್ ಮೀಡಿಯಾ ನಿರ್ದೇಶಕರಾದ ಅನಂತ್ ಚೀನಿವಾರ್ತುಮಕೂರಿನ ಸಮ್ಮೇಳನ ಆತ್ಮ ವಿಮರ್ಶೆ ಮಾಡಿಕೊಳ್ಳುವ ವಿಚಾರ ಗೋಷ್ಠಿಯಾಗಿದೆ, ಮಾಧ್ಯಮ ಓದುಗರನ್ನು ಕೇಳುಗರನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಅವರ ಪ್ರತಿಕ್ರಿಯೆಯನ್ನು ಪರಿಗಣಿಸಬೇಕು ಅವರ ಪ್ರಶ್ನೆ ಅಹವಾಲು,ಸ್ವೀಕರಿಸಬೇಕು. ಪತ್ರಿಕೆ ಓದುಗರನ್ನ ಜಾಣಜಾಣೆಯರನ್ನಾಗಿ ಕಾಣಬೇಕು, ನೋಡಗರ ಮನ ತುಂಬುವ ವಿಷಯ ವಸ್ತು ನಮ್ಮದಾಗಬೇಕು. ಪತ್ರಿಕೆಗಳಿಗೆ ಕಳಿಸುವ ಓದುಗರ, ಕೇಳುಗರ ಬರಹಗಳನ್ನು, ತಲ್ಲಣಗಳನ್ನ ಪ್ರತಿ ಪತ್ರಿಕೆಗಳನ್ನು ಅಮೂಗ್ರವಾಗಿ ಓದುವ ವರ್ಗಇದ್ದು, 70% ಜನ ಡಿಜಿಟಲ್ ನ್ಯೂಸ್, ನೋಡುವ ಜನರಿದ್ದಾರೆ. ಆಡಿಯನ್ಸ್ ಗಳಲ್ಲಿ ಎರಡು ವರ್ಗವಿದೆ ಅವರಿಗೆ ತಕ್ಕಂತೆ ಮಾಧ್ಯಮ ಗಂಭೀರ ಪರಿಗಣಿಸಲಾಗುತ್ತಿಲ್ಲ, ನಮ್ಮಲ್ಲಿ ಪ್ರತಿಸ್ಪಂದನೆ ಇಲ್ಲ, ಇಂದಿನ ಪತ್ರಕರ್ತರಿಗೆ ದಪ್ಪಚರ್ಮ ಮನಸ್ಥಿತಿ ಯಿಂದ ಒ.ನೋ.ಕೆ. ಕಳೆದುಕೊಳ್ಳಲಾಗುತ್ತಿದೆ ಪತ್ರಿಕೆಗಳು ಲೀಡ್ ಸ್ಟೋರಿಗಳು ಜಾಗೃತೆ ಮೂಡಿಸುವಂತಾಗಬೇಕು. ಡಿಜಿಟಲ್ ಮೀಡಿಯಾದಲ್ಲಿ ಕೆಲ ಜವಾಬ್ದಾರಿಯುತ ಬದಲಾವಣೆ ಕಾಣಬೇಕಿದೆ, ಇವುಗಳಿಗೆ ನಿಯಮ, ಕಟ್ಟುಪಾಡುಗಳು ಬೇಕಿದೆ ಎಂದರು.
ಮೈಸೂರು ವಿವಿ ಪತ್ರಿಕೋದ್ಯಮವಿಭಾಗದ ಮುಖ್ಯಸ್ಥರಾದ ಎಂ.ಎಸ್. ಸ್ವಪ್ನಅವರು ಮಾತನಾಡಿ, ಅಕಾಡಮಿಕ್ಕಾಗಿ ಪತ್ರಕರ್ತರನ್ನ ತಯಾರು ಮಾಡಬೇಕಿದೆ. ನಾವುಗಳು ವಿಷಯವಸ್ತುಅಧ್ಯಯನ ಶೀಲತೆಯನ್ನ ಮನಗಣಿಸಿದ್ದೇವೆ, ಇಂಡಿಯನ್ ರಿಡರ್ಸ್ ಶಿಫ್ ಸರ್ವೆಯಲ್ಲಿ 54% ಜನ ನ್ಯೂಸ್ ಪೇಪರ್ ಗಳನ್ನು ಓದುತಿಲ್ಲ 14% ಜನ ಮಾತ್ರ ಪತ್ರಿಕೆಗಳನ್ನ ಓದುತ್ತಾರೆ ನಾವು ಓದುಗರನ್ನ ವಯಸ್ಸಿನ, ಭಾಷೆಯ ವಿಚಾರದ ಮೇಲೆ ಅಳೆಯ ಬೇಕಾಗುತ್ತದೆ, ಪತ್ರಿಕೋದ್ಯಮದಲ್ಲಿಅಭಿವೃದ್ಧಿ ವಿಷಯದ ಕೊರತೆ ಇದೆ. ತುಂಬಾ ವಿಚಾರ ರಾಜಕೀಯವಾಗಿದ್ದು ವೈಭವೀಕರಣ ಹೆಚ್ಚಿದೆ. ಪತ್ರಿಕೆಗಳಲ್ಲಿ ಕ್ವಾಲಿಟಿ ಸುದ್ದಿಯ ಕೊರತೆಯಿದೆ. ಇಂದು ಮಾಧ್ಯಮವನ್ನು ಬೆರೆಯ ವರ್ಗ ಆಳುತ್ತಿದೆ. ಉದ್ಯಮ ರೀತಿಯಲ್ಲಿ ನಡೆಯುತ್ತಿದೆ. ಇದು ಸಂಶೋಧನೆ ಯಿಂದ ಹೊರ ಬಿದ್ದಿದೆ. ಓದುಗರ, ಕೇಳುಗರ, ನೋಡುಗರ ಅಭಿಪ್ರಾಯಕ್ಕೆ ತಕ್ಕಂತೆ ನಾವು ಸ್ಪಂದನೆ ನೀಡುತ್ತಿಲ್ಲ, ಹೀಗಾಗಿ ಭಾಷೆಯ ಕುರಿತಾಗಿ ಸಾಕಷ್ಟು ಸುಧಾರಣೆಯಾಗಬೇಕು ಎಂದು ತಿಳಿಸಿದರು.
ವಿಚಾರ ಗೋಷ್ಠಿಯಲ್ಲಿ ಉಗಮ ಶ್ರೀನಿವಾಸ್ ಮತ್ತು ಕುಚ್ಚಂಗಿ ಪ್ರಸನ್ನ ತುಮಕೂರು ವಿವಿ ಸಿಬಂತಿ ಪದ್ಮನಾಬ್ ಇವರು ಪ್ರತಿಕ್ರಿಯಿಸಿದರು. ಮರಿಯಪ್ಪ, ಶಿವನಂದ ತಗಡೂರು, ಚಿ.ನಿ.ಪುರುಷೋತ್ತಮ್, ಟಿ.ಇ.ರಘುರಾಮ್ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx