ಹೆಚ್ ಡಿ ಕೋಟೆ ಮತ್ತುಸರಗೂರು ಮಾಜಿ ಶಾಸಕರಾದ ಬೀಚನಹಳ್ಳಿ ಚಿಕ್ಕಣ್ಣ ಅವರ 78ನೇ ವರ್ಷದ ಹುಟ್ಟುಹಬ್ಬವನ್ನು ಜೈಪ್ರಕಾಶ್ ಅಭಿಮಾನಿಗಳ ಬಳಗದವತಿಯಿಂದ ಆಚರಣೆ ಮಾಡಲಾಯಿತು.
ತಾಲ್ಲೂಕಿನ ನಾಡದೇವತೆ ಚಿಕ್ಕಮ್ಮತಾಯಿಯ ಆರ್ಶೀವಾದ ಪಡೆದು. ನಂತರ ಪಟ್ಟಣದ ಶ್ರೀ ಗಣಪತಿ ದೇವಾಲಯ ಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ. ಪಟ್ಟಣ ಪಂಚಾಯ್ತಿ ಆವರಣದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ನಂತರ ಹುಟ್ಟು ಹಬ್ಬದ ಪ್ರಯುಕ್ತ ಚಿಕ್ಕಣ ಅವರ ಪುತ್ರ ಜೈಪ್ರಕಾಶ್ ಸೇರಿದಂತೆ ಹಲಾವಾರು ಮಂದಿ ರಕ್ತದಾನ ಮಾಡಿದರು. ಹ್ಯಾಂಡ್ ಪೋಸ್ಟ್ ಸರ್ಕಲ್ ಬಳಿ ಸೇಬಿನ ಹಾರವನ್ನು ಹಾಕಿ ಜೆಡಿಎಸ್ ಪಕ್ಕದ ಕಾರ್ಯಕರ್ತರು ಹಾಗೂ ಮುಖಂಡರು ಸೇರಿ ಹಾರವನ್ನು ಹಾಕಿದರು. ಹಾಗೂ ಹ್ಯಾಂಡ್ ಪೋಸ್ಟ್ ಅಲ್ಲಿಂದ ಕೋಟೆ ಅಂಬೇಡ್ಕರ್ ಭವನವರಗೆ ಮೆರವಣಿಗೆ ಮೂಲಕ ಚಿಕ್ಕಣ್ಣನವರಿಗೆ ಹೂವಿವನ್ನು ವಾದ್ಯಗಳ ಮೂಲಕ ಮೆರವಣಿಗೆ ಮಾಡಿಕೊಂಡು ಬಂದರು .
ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದು. ಮುಖಂಡರು ಮಾತನಾಡಿ, ಮಾಜಿ ಶಾಸಕ ಚಿಕ್ಕಣ್ಣವವರು ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.. ಅವರ ಪುತ್ರರಾದ ಜೈ ಪ್ರಕಾಶ್ ಅವರನ್ನಿ ಚುನಾವಣೆಯಲ್ಲಿ ನಿಲ್ಲಿಸುವುದಾಗಿ ಎಂದು ಹೇಳಿದರು. ಮುಂದಿನ ನಿರ್ಧಾರ ಜೆಡಿಎಸ್ ವರಿಷ್ಠರಿಗೆ ಬಿಟ್ಟಿದ್ದು ಎಂದು ಹೇಳಿದರು.
ಹುಟ್ಟು ಹಬ್ಬದ ಪ್ರಯುಕ್ತ 10 ಬಡ ಕುಟುಂಬದವರಿಗೆ ಹಸುಗಳನ್ನು ಉಚಿತವಾಗಿ ವಿತರಣೆ ಮಾಡಿದರು. ಸುಮಾರು 1,000 ಮಂದಿಗೆ ಅನ್ನದಾನ ಏರ್ಪಡಿಸಿ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.
ಜೆಡಿಎಸ್ ಪಕ್ಷದ ಮುಖಂಡರು ಜೈಪ್ರಕಾಶ್, ಎಸ್ ಎಲ್ ರಾಜಣ್ಣ, ಸರಗೂರು ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಗೋಪಾಲಸ್ವಾಮಿ, ನಂಜುಂಡಮೂರ್ತಿ, ಜಯರಾಮ್, ಸಿದ್ದರಾಜು ಹೊಸಹೇಗ್ಗುಡಿಲು, ಎನ್.ಡಿ.ರಾಜಣ್ಣ, ನರಸಿಂಹ ಹಿಂದುಳಿದ ವರ್ಗದ ಅಧ್ಯಕ್ಷ ಮತ್ತು ಸವಿತಾ ಸಮಾಜದ ಅಧ್ಯಕ್ಷ ಸುರೇಂದ್ರ ಕುಮಾರ್ ನರಸಿಪುರ, ಹರೀಶ್ ಕೊತ್ತೆಗಾಲ, ಶಿವಲಿಂಗಯ್ಯ ಚಾಮಲಾಪುರ, ಬೆಟ್ಟನಾಯಕ ಪುರದಕಟ್ಟೆ, ರೀತೀ, ಮಹೇಂದ್ರ ಸಾಗರೆ ಗಣಪ್ಪ ಸರಗೂರು, ನಾಗರಾಜು ಸರಗೂರು, ನಾಗನಾಯಕ, ಬಸವರಾಜು, ಚನ್ನಪ್ಪನಾಯಕ, ಮಹೇಶ್, ಪುಟ್ಟಸ್ವಾಮಿ, ರವಿ, ಚಂದ್ರ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB