ಹಿರಿಯೂರು: ಹಿರಿಯೂರು ನಗರ ಪೋಲಿಸ್ ಠಾಣೆಯಲ್ಲಿ ವಯೋನಿವೃತ್ತಿ ಹೊಂದಿದ್ದ ಪೋಲಿಸ್ ಎಎಸ್ ಐ ನಿರಂಜನಮೂರ್ತಿ ಹಾಗೂ ಪ್ರಭಾಕರರೆಡ್ಡಿ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಪೊಲೀಸರ ಕರ್ತವ್ಯದ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ. ಹಬ್ಬಗಳನ್ನು ಸಂಭ್ರಮದಿಂದ ಯಾವ ರೀತಿ ಆಚರಿಸಬೇಕು? ಹಬ್ಬಕ್ಕೆ ಏನು ಸಿಹಿ ಮಾಡಬೇಕು? ಎಂದು ಎಲ್ಲರು ಯೋಚಿಸುವ ನಮ್ಮಗಳ ಮಧ್ಯೆಯೂ ಸಹ ಪೋಲಿಸ್ ಅಧಿಕಾರಿಗಳು ಹಬ್ಬ ಹರಿದಿನಗಳನ್ನು ಸಹ ಲೆಕ್ಕಿಸದೆ ಹಬ್ಬಗಳಲ್ಲಿಅಹಿತಕರ ಘಟನೆ ನಡೆಯದಂತೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು? ಯಾವ ಸ್ಥಳದಲ್ಲಿಕರ್ತವ್ಯ ನಿರ್ವಹಿಸಬೇಕು? ಎಂಬುದಾಗಿ ಪೊಲೀಸರು ಯೋಚಿಸುತ್ತಾರೆ.
ಇಂತಹ ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದಲೇ ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರು ಸಹ ನೆಮ್ಮದಿಯ ಜೀವನ ಸಾಗಿಸುತ್ತಿದ್ದೆವೆ . ಸಾರ್ವಜನಿಕರು ಸಹ ಕಾನೂನು ಪಾಲಿಸುತ್ತಾ ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕಾಗುರುವುದು ಪ್ರತಿಯೊಬ್ಬ ಭಾರತೀಯ ಆದ್ಯ ಕರ್ತವ್ಯವಾಗಿದೆ .
ಇಂತಹ ಕರ್ತವ್ಯವನ್ನು ನಿರ್ವಹಿಸಿ ನಿವೃತ್ತಿ ಹೊಂದಿದ್ದಂತಹ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರಪೋಲಿಸ್ ಠಾಣೆಯ ASI ಸಿಬ್ಬಂದಿಗಳಾದ ನಿರಂಜಮೂರ್ತಿ ಮತ್ತು ಪ್ರಭಾಕರರೆಡ್ಡಿ ಯವರಿಗೆ ನಗರಪೋಲಿಸ್ ಠಾಣೆಯ ಸಿಬ್ಬಂದಿವರ್ಗದವರಿಂದ ಬೀಳ್ಕೋಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ್ದ ಎ ಎಸ್ ಐ ನಿರಂಜನಮೂರ್ತಿ , ಎ ಎಸ್ ಐ ಪ್ರಭಾಕರರೆಡ್ಡಿ ಮತ್ತು ಕುಟುಂಬಸ್ಥರು, ಹಾಗೂ ಸಿಬ್ಬಂದಿವರ್ಗದವರಾದ ಎ ಎಸ್ ಐ ಅನುಸೂಯಮ್ಮ, ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್, ಹಾಗೂ ಚಂದ್ರಪ್ಪ, ಪ್ರವೀಣ್, ಶಿವಮೂರ್ತಿ, ಅನಿಲ್ ಕುಮಾರ್, ಚಿದಾನಂದ, ಇಬ್ರಾಹಿಂ ಖಲೀಲ್, ಮಹಂತೇಶ್, ಸಿದ್ದಪ್ಪ ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು. ( ಚಿತ್ರದುರ್ಗ-ದಾವಣಗೆರೆ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB