ತುಮಕೂರು: ಪತ್ನಿಯನ್ನು ಲಾಡ್ಜ್ ಗೆ ಕರೆತಂದ ಪತಿಯೋರ್ವ, “ಪತ್ನಿಯ ಕಾಲು ಕತ್ತರಿಸಿದ್ದೇನೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಬೇಕು. ನಾಲ್ವರು ಹುಡುಗರನ್ನು ಕಳುಹಿಸಿಕೊಡಿ” ಎಂದು ಹೊಟೇಲ್ ಮಾಲಿಕರಿಗೆ ಕರೆ ಮಾಡಿ ಹೇಳಿದ ವಿಲಕ್ಷಣ ಘಟನೆ ನಡೆದಿದೆ.
ತುಮಕೂರಿನ ಅಶೋಕ ಲಾಡ್ಜ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಗದಗ ಮೂಲದ 34 ವರ್ಷ ವಯಸ್ಸಿನ ಬಾಬು ಎಂಬಾತ ಈ ಕೃತ್ಯ ನಡೆಸಿದ್ದು, ತುಮಕೂರಿನ ಅಶೋಕ ಲಾಡ್ಜ್ ಗೆ ಬಂದಿದ್ದ ಈತ ಪತ್ನಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಬ್ಯಾಗ್ ನಲ್ಲಿ ಮಚ್ಚು ಹಿಡಿದುಕೊಂಡು ಬಂದಿದ್ದ ಎನ್ನಲಾಗಿದೆ.
ಲಾಡ್ಜ್ ನಲ್ಲಿ ಪತ್ನಿ, ಮಧುಗಿರಿ ಮೂಲದ ಅನಿತಾ ಅವರ ಕಾಲಿಗೆ ಮಚ್ಚಿನಿಂದ ಗಾಯಗೊಳಿಸಿದ್ದು, ಬಳಿಕ ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡು ಹೈಡ್ರಾಮಾ ಆಡಿದ್ದಾನೆ. ಬಳಿಕ ಹೊಟೇಲ್ ಮಾಲಿಕರಿಗೆ ಕರೆ ಮಾಡಿ ಹುಡುಗರನ್ನು ಕರೆಸುವಂತೆ ಹೇಳಿದ್ದಾನೆ ಎನ್ನಲಾಗಿದೆ.
ಅನಿತಾ ಅವರನ್ನು ಆರೋಪಿಯು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡ ಅನಿತಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಬಾಬುನನ್ನು ತುಮಕೂರು ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನೂ ಬಾಬು ಹೊಟೇಲ್ ಮಾಲಿಕರಿಗೆ ಕರೆ ಮಾಡಿ ಪತ್ನಿಯ ಕಾಲು ಕತ್ತರಿಸಿದ್ದೇನೆ ಎಂದು ಹೇಳಿದ ತಕ್ಷಣವೇ ಹೊಟೇಲ್ ಮಾಲಿಕರು ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಇಂದು ಬೆಳಗ್ಗಿನ ವೇಳೆ 6 ಗಂಟೆಗೆ ಈ ದಂಪತಿ ಹೊಟೇಲ್ ಗೆ ಬಂದಿದ್ದರು ಎಂದು ಹೇಳಲಾಗಿದೆ.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB