ಕೊರಟಗೆರೆ: ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಿಳಾ ಘಟಕದ ವತಿಯಿಂದ ಸರಿಗಮಪ ಖ್ಯಾತಿಯ ಮಧುಗಿರಿ ಮೂಲದ ರತ್ನಮ್ಮ ಮಂಜಮ್ಮ ರವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು .
ನಂತರ ರತ್ನಮ್ಮ ಜಯಮ್ಮ ರಿಂದ ಮಾದೇಶ್ವರನ ಗೀತೆಯನ್ನು ಹಾಡುವಂತೆ ಬಂದಿದ್ದ ಸಾರ್ವಜನಿಕರು ಕೇಳಿಕೊಂಡರು ಸಾರ್ವಜನಿಕರ ಬೇಡಿಕೆಯಂತೆ ರತ್ನಮ್ಮ ಮಂಜಮ್ಮ ಮಾದೇಶ್ವರನ ಗೀತೆಯನ್ನು ಹಾಡಿ ಬಂದಿದ್ದ ಸಾರ್ವಜನಿಕರಿಗೆ ಮನರಂಜಿಸಿದರು .
ನಂತರ ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ನಾಡಿನ ಸಮಸ್ತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯವನ್ನು ಕೋರಿ ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಂದು ಹೆಣ್ಣು ಇದ್ದೇ ಇರುತ್ತಾಳೆ ಆ ಮಹಾತಾಯಿಯ ತಾಳ್ಮೆಗೆ ನಾವೆಲ್ಲರೂ ಶರಣಾಗಲೇಬೇಕು ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲುಹಿ ನಮ್ಮದೊಂದು ಗುರಿಯತ್ತ ಮುಟ್ಟಿಸುವಲ್ಲಿ ಹೆಣ್ಣಿನ ಮಹತ್ವ ಬಹು ದೊಡ್ಡದು ಎಂದು ತಿಳಿಸಿದರು .
ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB