ರಾಜ್ಯದಲ್ಲಿ ಸರ್ಕಾರದಲ್ಲಿ ನಡೆಯುವ ಅವ್ಯವಹಾರದ ಬಗ್ಗೆ ಅಂದರೆ ಮರಳುಮಾಫಿಯ, ಸರ್ಕಾರಿ ಇಲಾಖೆಗಳಲ್ಲಿ ನಡಿವ ಅವ್ಯವಹಾರಗಳ ಬಗ್ಗೆ ಪ್ರಾಮಾಣಿಕ ಸಾಮಾಜಿಕ ಕಾರ್ಯಕರ್ತರು, ಆರ್ಟಿಐ ಕಾಯ್ದೆಯ ಸದುಪಯೋಗ ಮಾಡಿಕೊಂಡು ಈ ಕಾಯ್ದೆಯಿಂದ ಮಾಹಿತಿ ಪಡೆದುಕೊಂಡು, ಮಾಧ್ಯಮಗಳಿಗೆ ಬಿಡುಗಡೆ ಹಾಗೂ ಸರ್ಕಾರಗಳ ಮೇಲೆ ಒತ್ತಡ ತರುವ ಸಂದರ್ಭದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ತಮ್ಮ ಪಟಲಂ ಕಟ್ಟಿಕೊಂಡು ಸಾಮಾಜಿಕ ಕಾರ್ಯಕರ್ತರ ಮೇಲೆ ಹಲ್ಲೆ, ಹಾಗೂ ಅನೇಕ ಕಾರ್ಯಕರ್ತರನ್ನು ಕೊಲೆಗೈದಿರುವುದು ಮಾಧ್ಯಮಗಳಲ್ಲಿ ನೋಡಿದ್ದೇವೆ, ಆದರೆ ಸಾಮಾಜಿಕ ಕಾರ್ಯಕರ್ತರು ಜನಸಾಮಾನ್ಯರ ಅನುಕೂಲಕ್ಕಾಗಿ ಹಾಗೂ ಕಾನೂನುಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತರು ತಮ್ಮ ಪ್ರಾಣ ಭಯ ಬಿಟ್ಟು, ಹೋರಾಟ ಮಾಡುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಾಗಲು, ಯಾವುದೇ ರಾಜಕೀಯ ಪಕ್ಷಗಳಾಗಲಿ ಅಥವಾ ಸಂಘಟನೆಗಳಾಗಲಿ ಇವರ ಪರ ಹೋರಾಟ ಮಾಡಿದ್ದು ಆಗಲಿ ಅಥವಾ ಹೇಳಿಕೆ ಕೊಟ್ಟಿದ್ದು ಆಗಲಿ ಕಂಡುಬಂದಿರುವುದಿಲ್ಲ ಎಂಬುದು ಹಲವಾರು ಪ್ರಜ್ಞಾವಂತರಿಂದ ಕೇಳಿ ಬರುತ್ತದೆ.
ರಾಜಕಾರಣಿಗಳ ಮೇಲೆ ಅಧಿಕಾರಿಗಳ ಮೇಲೆ ತನಿಖಾ ಸಂಸ್ಥೆಗಳು ದಾಳಿ ಮಾಡಿ, ಇವರ ಆದಾಯ ಮೀರಿ ಬಂಡವಾಳ ಮಾಡಿರುವ ಬಗ್ಗೆ ಬಹಿರಂಗಪಡಿಸುವ ಸಂದರ್ಭದಲ್ಲಿ ಹಾಗೂ ಜೈಲಿಗೆ ಕಳಿಸುವ ಸಂದರ್ಭದಲ್ಲಿ, ಬಲೆಗೆ ಬಿದ್ದಿರುವ ರಾಜಕಾರಣಿಗಳ ರಾಜಕೀಯ ಪಕ್ಷಗಳು ಹಾಗೂ ಜಾತಿ ಸಂಘಟನೆಗಳು ಅವರ ಪರ ಹೋರಾಟ ಮಾಡುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ, ಇವರು ಭ್ರಷ್ಟರಾಗಿದ್ದರು ಸಹ ಇವರ ಪರ ನಿಲ್ಲುವ ರಾಜಕೀಯ ಪಕ್ಷಗಳು ಹಾಗೂ ಜಾತಿ ಸಂಘಟನೆಗಳು, ಸಮಾಜಕ್ಕಾಗಿ ಜನಸಾಮಾನ್ಯರ ಪರವಾಗಿ ಹೋರಾಟ ಮಾಡಿದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಸಾಮಾಜಿಕ ಕರ್ತರ ಪರವಾಗಿ ರಾಜಕೀಯ ಪಕ್ಷಗಳು, ಸಂಘಟನೆಗಳು ಹೋರಾಟ ಮಾಡಿದ ಉದಾಹರಣೆಗಳು ಕಂಡುಬಂದಿರುವುದಿಲ್ಲ.
ಈ ರೀತಿ ಸಮಾಜ ನಡೆದುಕೊಂಡರೆ ಸಾಮಾಜಿಕ ಕಾರ್ಯಕರ್ತರು ಮನೋಸ್ಥೈರ್ಯ ಕುಗ್ಗಲು ಸಹ ಕಾರಣ ಆಗಬಹುದು, ಹಾಗೂ ಸಾಮಾಜಿಕ ಕಾರ್ಯಕರ್ತರ ಸಂಖ್ಯೆ ಇಳಿಮುಖ ಆಗುವ ಸಾಧ್ಯತೆಗಳು ಕಂಡುಬರುತ್ತವೆ, ಆದಕಾರಣ ಅವರ ಹೋರಾಟಗಳಿಗೆ ನೈತಿಕ ಬೆಂಬಲ ನೀಡಲು ರಾಜ್ಯದಲ್ಲಿ ಅನೇಕ ರೀತಿ ಸಂಘಟನೆಗಳು ಇರುವುದರಿಂದ, ಇವರಿಗೆ ಬೆಂಬಲ ನೀಡುವ ಹಾಗೂ ಇವರ ಪರ ಹೋರಾಟ ಮಾಡುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂಬುದು ಹಲವು ಪ್ರಜ್ಞಾವಂತರಿಂದ ಕೇಳಿ ಬರುತ್ತದೆ. ಭವಿಷ್ಯದಲ್ಲಿ ಈ ರೀತಿ ಬೆಳವಣಿಗೆ ಹಾಗುವ ಪ್ರಜ್ಞಾವಂತರಲ್ಲಿ ಆಶಯ ಕೇಳಿ ಬರುತ್ತದೆ.
–N. S. ಈಶ್ವರ್ ಪ್ರಸಾದ್, ನೆರಳೇಕೆರೆ. ಮಧುಗಿರಿ ತಾಲೂಕು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA