ಸರಗೂರು: ತಾಲ್ಲೂಕಿನ ಬಿ ಮಟಕೇರಿ ಗ್ರಾಪಂ ವ್ಯಾಪ್ತಿಯ ಬರುವ ಹೊಸಕೋಟೆ ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ರೈತರು ಅರಣ್ಯ ಇಲಾಖೆ ಮತ್ತು ಕೆಇಬಿ ಅಧಿಕಾರಿಗಳು ಹಾಜರಾಗದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಚಲುವರಾಜು ಅವರನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.
ಬಿ ಮಟಕೇರಿ ಗ್ರಾಪಂ ಸದಸ್ಯ ಬೆಟ್ಟಸ್ವಾಮಿ ಮಾತನಾಡಿ, ಬಿ ಮಟಕೇರಿ ಗ್ರಾಪಂಗೆ ಒಳಪಡುವ ಗ್ರಾಮಗಳಲ್ಲಿ ಹಾಡಿ, ಗ್ರಾಮಗಳು ಹೆಚ್ಚು ಆದರೆ ಇವರಿಗೆ ಸ್ಮಶಾನ ಮಾಳ, ಸಾಗುವಳಿ ಪತ್ರ, ಹಕ್ಕುಪತ್ರ, ಇನ್ನೂ ಇತರೆ ಸೌಲಭ್ಯಗಳನ್ನು ನೀಡುತ್ತಿಲ್ಲ. ಇದರ ಬಗ್ಗೆ ಅಧಿಕಾರಿಗಳು ಇದರ ಕ್ರಮವಹಿಸಬೇಕು ಎಂದರು.
ದಸಂಸ ತಾಲ್ಲೂಕು ಸಂಘಟನೆ ಸಂಚಾಲಕರಾದ ಗೋವಿಂದರಾಜು ಮಾತನಾಡಿ, ಈ ಭಾಗದ ಜನರಿಗೆ ಸ್ಮಶಾನ ಮಾಳಗಳು ಇಲ್ಲ, ಸ್ಮಶಾನ ಜಾಗವನ್ನು ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಹಾದನೂರು ಗ್ರಾಪಂ ಸದಸ್ಯ ಶಿವಲಿಂಗಯ್ಯ ಮಾತನಾಡಿ, ಕಾಡಾಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿ ಗಳು ಹಾವಳಿ ಜಾಸ್ತಿಯಾಗಿದೆ. ಇದರ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ಅ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗೈರು ಆಗಿದ್ದಾರೆ. ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಸರಗೂರಿಂದ ಹಾಗೂ ಹೇಡಿಯಾಲ ಮತ್ತು ಹಾದನೂರು ಮಾರ್ಗವಾಗಿ ಕುರ್ಣೇಗಾಲ ಆಲನಹಳ್ಳಿ ಗ್ರಾಮದವರಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಂದು ತಹಶೀಲ್ದಾರ್ ಅವರನ್ನು ಮನವಿ ಮಾಡಿದರು.
ರೈತ ಬಸವರಾಜು, ಶಿವಕುಮಾರ್, ಮಹೇಶ್ ಮೊದಲಾದ ಮುಖಂಡರು ಮಾತನಾಡಿ ತಹಶೀಲ್ದಾರ್ ಅವರಿಗೆ ವಿವಿಧ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟರು.
ಗ್ರಾಮಸ್ಥರ ಸಮಸ್ಯೆಗಳನ್ನು ಆಳಿಸಿದ ಬಳಿಕ ಮಾತನಾಡಿದ ತಹಶೀಲ್ದಾರ್ ಚಲುವರಾಜು, ಗ್ರಾಮಸ್ಥರು ಸಲ್ಲಿರುವ ಅರ್ಜಿಗಳನ್ನು ಜಿಲ್ಲಾಧಿಕಾರಿ ಕಚೇರಿ ಗೆ ಕಳುಹಿಸಿ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ರೂಪಾಬಾಯಿಮಲ್ಲೇಶನಾಯಕ, ಉಪಾಧ್ಯಕ್ಷ ದೇವದಾಸ್, PWD ಅಧಿಕಾರಿ ರಾಜಯ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಾರಾಯಣಸ್ವಾಮಿ, ಮತ್ತು ಗೋಪಾಲಕೃಷ್ಣ ಮೂರ್ತಿ, ಗ್ರಾಪಂ ಸದಸ್ಯರು ಬೆಟ್ಟಸ್ವಾಮಿ, ಭಾಲತಿಚಿನ್ನಪ್ಪ, ನಾಗೇಶ್. ಅಜೀತ್, ನಾಗೇಂದ್ರ, ಶಿವಲಿಂಗಯ್ಯ., Apmc ಅಧಿಕಾರಿ ವಸಂತಕುಮಾರ್, ಅಬಕಾರಿ ಇಲಾಖೆ ಅಧಿಕಾರಿ ಗೀತಾ, ಪೋಲಿಸ್ ಇಲಾಖೆ.ಆಸ್ಪತ್ರೆಯ ಸಿಬ್ಬಂದಿ, ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ಮುಖಂಡರು ಎಲ್ಲಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy