nammatumakuru

    Subscribe to Updates

    Get the latest creative news from FooBar about art, design and business.

    What's Hot

    “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ | ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ

    May 19, 2026

    ಕುಣಿಗಲ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು ಉರುಳಿ ತಾಯಿ–ಮಗಳು ಸ್ಥಳದಲ್ಲೇ ಸಾವು

    May 19, 2026

    ಗುಜರಾತ್ ಮಾದರಿ ನಮಗೆ ಬೇಡ,  ಕರ್ನಾಟಕ ಇಡೀ ದೇಶಕ್ಕೆ ಮಾದರಿ: ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು

    May 19, 2026
    Facebook Twitter Instagram
    ಟ್ರೆಂಡಿಂಗ್
    • “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ | ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ
    • ಕುಣಿಗಲ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು ಉರುಳಿ ತಾಯಿ–ಮಗಳು ಸ್ಥಳದಲ್ಲೇ ಸಾವು
    • ಗುಜರಾತ್ ಮಾದರಿ ನಮಗೆ ಬೇಡ,  ಕರ್ನಾಟಕ ಇಡೀ ದೇಶಕ್ಕೆ ಮಾದರಿ: ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು
    • ಸಾಧನಾ ಸಮಾವೇಶ: ಕೊರಟಗೆರೆಯ 13,353 ಫಲಾನುಭವಿಗಳಿಗೆ ಸೌಲಭ್ಯ
    • ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!
    • ಪಾರ್ಟ್‌ಟೈಮ್‌ ಕೆಲಸದ ಆಮಿಷ: ತುಮಕೂರಿನ ಮಹಿಳಾ ವೈದ್ಯೆಗೆ ₹4 ಲಕ್ಷ ವಂಚನೆ
    • ಸಿರಾ: ಬುಕ್ಕಾಪಟ್ಟಣ ವೃತ್ತದಲ್ಲಿ ಪೂರ್ಣಗೊಂಡು ಐದಾರು ತಿಂಗಳು ಕಳೆದರೂ ಉದ್ಘಾಟನೆಗೊಳ್ಳದ ಶೌಚಾಲಯ!
    • ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ: ರಸ್ತೆ ದುರಾವಸ್ಥೆ ವಿರುದ್ಧ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಿವನ ವೇಷ ಮತ್ತು ರಾಜನ ಅಹಂಕಾರ: ಒಂದು ಸುಂದರ ನೀತಿ ಕಥೆ
    ಲೇಖನ May 6, 2026

    ಶಿವನ ವೇಷ ಮತ್ತು ರಾಜನ ಅಹಂಕಾರ: ಒಂದು ಸುಂದರ ನೀತಿ ಕಥೆ

    By adminMay 6, 2026No Comments3 Mins Read
    kannada story

    ಈಶ್ವರನು ಒಮ್ಮೆ ಭೂಲೋಕದಲ್ಲಿ ಕಷ್ಟದಲ್ಲಿರುವ ತನ್ನ ಭಕ್ತರಿಗೆ ಒಳ್ಳೆಯದು ಮಾಡಲೆಂದು ನಿರ್ಧರಿಸಿ ಒಂದು ನಾಯಿಯ ವೇಷ ಹಾಕಿಕೊಂಡು ಮೊದಲು ಒಂದು ಗುರುಕುಲಕ್ಕೆ ಹೋದನು. ಅಲ್ಲಿ ಗುರುಗಳು ಒಬ್ಬ ಶಿಷ್ಯನನ್ನು ನಿಲ್ಲಿಸಿ ನಿನಗೆ ಈ ಜನ್ಮದಲ್ಲಿ ವಿದ್ಯೆ ತಲೆಗೆ ಹತ್ತುವುದಿಲ್ಲ, ಬರೀ ಈಶ್ವರ ಭಜನೆ ಮಾಡುವುದರಲ್ಲೇ ಕಾಲ ಕಳೆಯುತ್ತಿರುವೆ ಏನು, ನಿನಗೆ ಈಶ್ವರ ಬಂದು ವಿದ್ಯ ಕಲಿಸುವನೇ ಎನ್ನುತ್ತಿದ್ದಂತೆ ಅಲ್ಲಿಗೆ ಬಂದಿದ್ದ ನಾಯಿ ವೇಷದ ಶಿವನು ಓಡಿಬಂದು ಆ ಶಿಷ್ಯನಿಗೆ ಬಂದು ಕಚ್ಚಿತು ಮತ್ತು ಅಲ್ಲಿಂದ ಯಾರ ಕೈಗೂ ಸಿಕ್ಕದೆ ಓಡಿ ಹೋಯಿತು.

    ಎಲ್ಲರೂ ಗಾಬರಿಯಾಗುತ್ತಿದ್ದರೆ ಇತ್ತ ಶಿಷ್ಯನು ಇದ್ದಕ್ಕಿದ್ದಂತೆ ವೇದ ಉಪನಿಷತ್ತುಗಳನ್ನು ತಪ್ಪಿಲ್ಲದೆ ಜೋರಾಗಿ ಪಠಣ ಮಾಡಲು ಪ್ರಾರಂಭಿಸಿದನು. ಅವನಲ್ಲಿ ಆದ ಬದಲಾವಣೆಗೆ ಆ ನಾಯಿಯೇ ಕಾರಣವಿರಬಹುದು ಎಲ್ಲರೂ ಶಂಕಿಸಿದರು. ನಂತರ ನಾಯಿಯು ಒಬ್ಬ ಭಕ್ತ ಬಡವನ ಮನೆಗೆ ಹೋಯಿತು, ಅಲ್ಲಿ ಬಡವನು ಭಿಕ್ಷೆಯಲ್ಲಿ ಬಂದಿದ್ದ ಊಟವನ್ನು ಮನೆ ಮಂದಿ ಎಲ್ಲಾ ಹಂಚಿಕೊಂಡು ಇನ್ನೇನು ತಿನ್ನಬೇಕು ಅಷ್ಟರಲ್ಲಿ ಬಂದ ನಾಯಿಯನ್ನು ನೋಡಿ ಅಯ್ಯೋಪಾಪ ಹಸಿದಿರಬೇಕು ಎಂದು ಎಲ್ಲವನ್ನೂ ತಂದು ಆ ನಾಯಿಯ ಮುಂದೆ ಇಟ್ಟನು ತಕ್ಷಣವೇ ನಾಯಿಯು ಅವನನ್ನು ಕಚ್ಚಿ ಅಲ್ಲಿಂದ ಓಡಿ ಹೋಯಿತು ಎಲ್ಲರೂ ಮತ್ತೆ ಗಾಬರಿಯಾದರು, ಆದರೆ ನೋಡನೋಡುತ್ತಿದ್ದಂತೆ ಬಡವನ ಮನೆ ಮಹಲಾಯಿತು, ವಜ್ರ ವೈಡೂರ್ಯಗಳು ಬಂದವು. ಇದಕ್ಕೆ ಕಾರಣ ಆ ನಾಯಿ ಕಚ್ಚಿದ ಪರಿಣಾಮವಿರಬೇಕು ಎಂದು ಎಲ್ಲರೂ ಶಂಕಿಸಿದರು.


    Provided by
    Provided by

    ಮತ್ತೆ ಆ ನಾಯಿಯು ಆನೆಗಳಿಂದ ಬೆಳೆ ಹಾನಿಯಾಗಿದ್ದ ಈಶ್ವರ ಭಕ್ತನೊಬ್ಬ ಹೊಲದಲ್ಲಿ ರೋದಿಸುತ್ತಿದ್ದನು ಓಡಿ ಹೋಗಿ ಅವನನ್ನೂ ಕಚ್ಚಿತು ಇದ್ದಕ್ಕಿದ್ದಂತೆ ಹಾನಿಯಾಗಿದ್ದ ಬೆಳೆಗಳೆಲ್ಲಾ ಮತ್ತೆ ಎದ್ದು ನಿಂತವು ಇದಕ್ಕೆ ಕಾರಣ ಆ ನಾಯಿ ಕಚ್ಚಿದ್ದರಿಂದ ಎಂದು ಎಲ್ಲರೂ ಶಂಕಿಸಿದರು. ಈ ವಿಚಾರಗಳೆಲ್ಲಾ ರಾಜ ಭಟರ ಮೂಲಕ ಆ ಊರಿನ ರಾಜನಿಗೆ ಹೋಯಿತು ಮತ್ತು ರಾಜ ಭಟರು ರಾಜನಿಗೆ ಪ್ರಭು ಪಕ್ಕದ ಊರಿನ ರಾಜನಿಗೂ ಆ ನಾಯಿ ಕಚ್ಚಿತಂತೆ ಇದರಿಂದ ಆ ರಾಜನಿಗೆ ಮತ್ತಷ್ಟು ಗ್ರಾಮಗಳನ್ನು ಅವನು ಯುದ್ಧದಲ್ಲಿ ಗೆದ್ದು ಬಂದನಂತೆ ಎಂದು ವರದಿ ನೀಡಿದರು.

    ಇದನ್ನೆಲ್ಲಾ ಕೇಳಿದ ರಾಜನು ಹಾಗಾದರೆ ನಾನು ಆ ನಾಯಿಯನ್ನು ಹೇಗಾದರು ಮಾಡಿ ಹಿಡಿದು ಕಚ್ಚಿಸಿಕೊಳ್ಳಬೇಕು, ಆಗ ನಾನು ಈ ಊರನ್ನು ಮತ್ತಷ್ಟು ಯುದ್ಧಗಳನ್ನು ಮಾಡಿ ವಿಸ್ತರಿಸಬಹುದು ಎಂದು ಯೋಚಿಸಿ ರಾಜಭಟರಿಗೆ ಈ ಕೂಡಲೇ ಆ ನಾಯಿಯನ್ನು ಸೆರೆ ಹಿಡಿದು ತನ್ನಿ ಎಂದು ಆಜ್ಞಾಪಿಸಿದನು. ತಕ್ಷಣ ಹೊರಟ ಸೈನಿಕರು, ಕಷ್ಟಪಟ್ಟು ಹುಡುಕಿ ಹಿಡಿಯಲು ಹರ ಸಾಹಸ ಪಟ್ಟು ಕೊನೆಗೂ ಪಂಜರದಲ್ಲಿ ಬಂಧಿಸಿ ಅರಮನೆಗೆ ತಂದರು.

    ರಾಜನು ಅದನ್ನು ಬಂಧಮುಕ್ತ ಮಾಡಿ ತನ್ನನ್ನೂ ಕಚ್ಚುವಂತೆ ಹೇಳಿದನು, ಕೂಡಲೇ ಮೇಲೆರಗಿದ ನಾಯಿಯು ಸಿಕ್ಕ ಸಿಕ್ಕ ಹಾಗೆ ರಾಜನನ್ನು ಕಚ್ಚಿಹಾಕಿ ಬಿಟ್ಟಿತು ಮತ್ತು ಮಾಯವಾಯಿತು ಕೂಡಲೇ ರಾಜನಿಗೆ ಮೈಯಲ್ಲಾ ಉರಿ ಊತ ಉಂಟಾಗಿ ಸಹಿಸಲಾಗದ ನೋವಿನಿಂದ ಚೀರಾಡತೊಡಗಿದನು ಅದೇ ಸಮಯಕ್ಕೆ ಸರಿಯಾಗಿ ಪಕ್ಕದ ಊರಿನ ರಾಜನು ಆಕ್ರಮಣ ನಡೆಸಿ ಆ ಊರನ್ನೂ ಗೆದ್ದು ಬಿಟ್ಟನು ಮತ್ತು ಈ ರಾಜನನ್ನು ಕಾಡಿಗಟ್ಟಿದನು. ರೋಗಗ್ರಸ್ಥನಾದ ರಾಜನು ನಡೆಯಲಾಗದೇ ನಡೆಯುತ್ತಾ ಕಾಡಿನ ಒಂದು ಋಷಿಯ ಆಶ್ರಮಕ್ಕೆ ಬಂದು ಸೇರಿದನು, ಋಷಿಗಳು ಅವನನ್ನು ಗುರುತಿಸಿ ಸತ್ಕರಿಸಿದರು. ನಂತರ ರಾಜನು ನಡೆದುದೆಲ್ಲಾ ವಿವರಿಸಿ ತನಗೇಕೆ ಹೀಗಾಯಿತು ಎಂದು ಋಷಿಗಳನ್ನು ಕೇಳಿದಾಗ ಋಷಿಗಳು ಹೇಳಿದರು, ಮೊದಲಿಗೇ ನೀನು ರಾಜನಾದ ಕಾರಣ ಗರ್ವದಿಂದ ದೇವರನ್ನು ಮರೆತದ್ದು, ಮತ್ತು ದುರಾಸೆಪಟ್ಟು ನಾಯಿಯಿಂದ ಕಚ್ಚಿಸಿಕೊಂಡು ರಾಜ್ಯ ಗೆಲ್ಲಲು ಹೊರಟಿದ್ದು ಎಂದು ಹೇಳಿ ಅದು ಸಾಧಾರಣ ನಾಯಿಯಲ್ಲ ನಾಯಿಯ ವೇಷದ ಶಿವ ಎಂದಾಗ ರಾಜನಿಗೆ ತನ್ನ ತಪ್ಪು ಅರಿವಾಗಿ ಅಂದಿನಿಂದ ಈಶ್ವರನ ಧ್ಯಾನ ಮಾಡುತ್ತಾ ತಾನು ಕಳೆದುಕೊಂಡಿದ್ದ ಎಲ್ಲವನ್ನು ಮತ್ತೆ ನಿಧಾನವಾಗಿ ಗಳಿಸಿದ.

    venugopal
    ರಚನೆ: ವೇಣುಗೋಪಾಲ್

    ಸಂಪಾದಕರ ನುಡಿ:

    “ಶಿವನ ವೇಷ” ಎಂಬ ಈ ಕಥೆ ಮಾನವ ಜೀವನದ ಆಳವಾದ ಸತ್ಯವನ್ನು ಸುಂದರವಾಗಿ ಮನದಟ್ಟುಗೊಳಿಸುತ್ತದೆ. ದೇವರು ನಮ್ಮ ಮುಂದೆ ಯಾವ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೋ ನಾವು ತಿಳಿಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಕಥೆ ಸ್ಪಷ್ಟವಾಗಿ ಹೇಳುತ್ತದೆ. ಭಕ್ತಿ, ನಿಸ್ವಾರ್ಥತೆ ಮತ್ತು ವಿನಯ ಇರುವವರ ಮೇಲೆ ದೈವಕೃಪೆ ಹೇಗೆ ಅನಾಯಾಸವಾಗಿ ಬೀಳುತ್ತದೆ ಎಂಬುದನ್ನು ಬಡವನ, ಶಿಷ್ಯನ ಹಾಗೂ ರೈತನ ಘಟನೆಗಳ ಮೂಲಕ ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

    ಇನ್ನೊಂದೆಡೆ, ಗರ್ವ ಮತ್ತು ದುರಾಸೆ ಮನುಷ್ಯನ ಪತನಕ್ಕೆ ಕಾರಣವಾಗುತ್ತವೆ ಎಂಬುದನ್ನು ರಾಜನ ಪಾತ್ರದ ಮೂಲಕ ತಿಳಿಸಲಾಗಿದೆ. ದೇವರನ್ನು ಉಪಯೋಗಿಸಿಕೊಳ್ಳುವ ಮನೋಭಾವವು ಅಪಾಯಕಾರಿಯಾಗಿದೆ; ದೇವರನ್ನು ಭಜಿಸಬೇಕಾದರೆ ನಿಷ್ಠೆಯಿಂದ, ಸ್ವಾರ್ಥವಿಲ್ಲದೆ ಭಜಿಸಬೇಕು ಎಂಬುದು ಈ ಕಥೆಯ ಮುಖ್ಯ ಸಾರಾಂಶ.

    ಸರಳ ಭಾಷೆಯಲ್ಲಿ ಗಂಭೀರ ಅರ್ಥವನ್ನು ಒಳಗೊಂಡಿರುವ ಈ ಕಥೆ ಓದುಗರಿಗೆ ನೈತಿಕ ಮೌಲ್ಯಗಳನ್ನು ನೆನಪಿಸುತ್ತದೆ. ನಮ್ಮ ಬದುಕಿನಲ್ಲಿ ನಡೆಯುವ ಘಟನೆಗಳ ಹಿಂದೆ ದೈವ ಇಚ್ಛೆ ಇರಬಹುದು ಎಂಬ ನಂಬಿಕೆಯನ್ನು ಬಲಪಡಿಸುವ ಜೊತೆಗೆ, ಸದ್ಗುಣಗಳನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಮನದಟ್ಟು ಮಾಡುತ್ತದೆ.

    — ಸಂಪಾದಕರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ | ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ

    May 19, 2026

    ಗುರು ಶಿಷ್ಯರು: ಈ ದಿನದ ಕಥೆ

    May 16, 2026

    ತಾಯಂದಿರ ದಿನದ ವಿಶೇಷ ‘ಅಮ್ಮ’ | ವಿ.ಎಂ.ಎಸ್.ಗೋಪಿ

    May 10, 2026

    Leave A Reply Cancel Reply

    Our Picks

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ | ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ

    May 19, 2026

    ರಾಘವೇಂದ್ರ ಅಡಿಗ ಎಚ್ಚೆನ್. ಬಹು ನಿರೀಕ್ಷಿತ  “ರಕ್ಕಿ” ಚಿತ್ರದ “ರಗಡೋ ರಕ್ಕಿ” ಹಾಡು ಇತ್ತೀಚೆಗೆ PRK Audio ಯೂಟ್ಯೂಬ್ ಚಾನೆಲ್‌ನಲ್ಲಿ…

    ಕುಣಿಗಲ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು ಉರುಳಿ ತಾಯಿ–ಮಗಳು ಸ್ಥಳದಲ್ಲೇ ಸಾವು

    May 19, 2026

    ಗುಜರಾತ್ ಮಾದರಿ ನಮಗೆ ಬೇಡ,  ಕರ್ನಾಟಕ ಇಡೀ ದೇಶಕ್ಕೆ ಮಾದರಿ: ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು

    May 19, 2026

    ಸಾಧನಾ ಸಮಾವೇಶ: ಕೊರಟಗೆರೆಯ 13,353 ಫಲಾನುಭವಿಗಳಿಗೆ ಸೌಲಭ್ಯ

    May 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.