ತುಮಕೂರು: ಜಿಲ್ಲೆಯ ತಿಪಟೂರು ತಾಲ್ಲೂಕಿನ ಪವಾಡ ಕ್ಷೇತ್ರ ಕೆರಗೋಡಿರಂಗಾಪುರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಗಳ ಜನ್ಮವರ್ಧಂತಿ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಶ್ರೀಗಳ ವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀಶಂಕರೇಶ್ವರಸ್ವಾಮಿ ಶ್ರೀರಂಗನಾಥಸ್ವಾಮಿ, ಲಿಂಗೈಕ್ಯ ಹಿರಿಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆಸಲ್ಲಿಸಲಾಯಿತು. ಶ್ರೀಮಠದ ಸಮುದಾಯ ಭವನದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಕ್ತಾಧಿಗಳು ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.
ಭಕ್ತರಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗುರುಪರದೇಶಿಕೇಂದ್ರ ಮಹಾಸ್ವಾಮೀಜಿ, ದೇಶ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಹಾಗೂ ಜಾತಿ ರಾಜಕಾರಣ ಆತಂಕ ಉಂಟುಮಾಡಿದೆ ಎಲ್ಲಾರೂ ಶಾಂತಿ ಸಹಭಾಳ್ವೆಯಿಂದ ಬಾಳ ಬೇಕಿರುವಾಗ ಜಾತಿ ಧರ್ಮಗಳ ಹೆಸರಿನಲ್ಲಿ ಪರಸ್ಪರ ದ್ವೇಷ ಭಿತ್ತುತ್ತಿರುವುದು ನೋವುಂಟು ಮಾಡಿದೆ. ಕೆರಗೋಡಿ ರಂಗಾಪುರ ಮಠ ಜಾತ್ಯಾತೀತ ಪರಂಪರೆ ಹೊಂದಿದ್ದು, ಟಿಪ್ಪು ಸುಲ್ತಾನ್ ಹೈದರಾಲಿ ಕಾಲದಿಂದಲೂ ಮುಸ್ಲೀಂಮರು ಮಠದೊಂದಿಗೆ ಭಕ್ತಿ ಗೌರವ ಭಾವದಿಂದ ಉತ್ತಮ ಸಂಬಂದ ಹೊಂದಿದ್ದಾರೆ. ಇಂದು ಹಿಂದೂ ಮುಸ್ಲಿಂ ಕ್ರೈಸ್ತ ಬಂಧುಗಳು ಮಠಕ್ಕೆ ಆಗಮಿಸಿ ಭಕ್ತಿ ಸಮರ್ಪಿಸಿರುವುದು ತುಂಬ ಸಂತೋಷ ಉಂಟುಮಾಡಿದೆ
ದೇಶದಲ್ಲಿ ದೇಶದ ಅಭಿವೃದ್ದಿ ಶಾಂತಿ ಸಹಬಾಳ್ವೆ ದೃಷ್ಠಿಯಿಂದ ಎಲ್ಲರೂ ಒಟ್ಟಾಗಿ ಬದುಕ ಬೇಕು. ಜಾತಿ ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಡಾಳು ಶ್ರೀರುದ್ರಮುನಿ ಮಹಾಸ್ವಾಮೀಜಿ, ಗೋಡೆಕೆರೆ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮೀಜಿ ಮಾಜಿ ಶಾಸಕ ಕೆ.ಷಡಕ್ಷರಿ, ಎಪಿಎಂಸಿ ಅಧ್ಯಕ್ಷ ಹೆಚ್.ಬಿ ದಿವಾಕರ್, ಸಮಾಜ ಸೇವಕ ಕೆ.ಟಿ ಶಾಂತಕುಮಾರ್ ಸೇರಿದಂತೆ
ಮದಿನಾ ಮಸೀದಿ ಮುತ್ತವಲ್ಲಿ ಮಹಮದ್ ದಸ್ತಗೀರ್, ಜಾಮೀಯಾ ಮಸೀದಿಮುತ್ತವಲ್ಲಿ ಷಫಿಉಲ್ಲಾ ಷರೀಪ್, ಫೈಫುಲ್ಲ, ಮುನ್ನಾವರ್ ಸೇರಿದಂತೆ ಕ್ರೈಸ್ತ ಪಾದ್ರಿಗಳು ಭಾಗವಹಿಸಿ ಭಕ್ತಿ ಸಮರ್ಪಿಸಿದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5