ಮಧುಗಿರಿ: ಪಟ್ಟಣದ ಶ್ರೀ ಚೌಡೇಶ್ವರಿ ಗುಡಿ ಬೀದಿಯಲ್ಲಿರುವ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಗುರುವಾರದಂದು ಸ್ಕಂದ ಷಷ್ಠಿ ಮಹೋತ್ಸವವು ನಡೆಯಿತು.
ಮಹೋತ್ಸವದ ಅಂಗವಾಗಿ ಶ್ರೀಸ್ವಾಮಿಯವರಿಗೆ ಪಂಚಾಮೃತಾಭಿಷೇಕ ರುದ್ರಾಭಿಷೇಕ ಪುಣ್ಯಾಹ ದೇವನಾಂದಿ ರಕ್ಷಾಬಂಧನ ಕಲಶಸ್ಥಾಪನೆ, ನಾರಿಕೇಳ ಗಣಪತಿ ಹೋಮ, ಕಾಳ ಸರ್ಪ ದೋಷ ನಿವಾರಣೆ, ರಾಹುಕೇತು ಸುಬ್ರಹ್ಮಣ್ಯ ಹೋಮ, ಪೂರ್ಣಾಹುತಿ ಬಲಿಹರಣ ಪ್ರಧಾನ ಹೋಮ, ವಿಶೇಷ ಪೂಜೆ ಅಲಂಕಾರ, ಮಹಾಮಂಗಳಾರತಿ, ಗೋಪೂಜೆ, ಬ್ರಹ್ಮಚಾರಿ ಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಇದೇ ವೇಳೆ ಆಶ್ಲೇಷಬಲಿಯೂ ಸಹ ನಡೆಯಿತು.
ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಡಾ.ಎಂ.ಜಿ. ಶ್ರೀನಿವಾಸ್ ಮೂರ್ತಿ, ಡಿವೈಎಸ್ಪಿ ರಾಮಕೃಷ್ಣಪ್ಪ, ಅರ್ಚಕರಾದ ಪಿ.ವಿ. ಬಾಲಕೃಷ್ಣ (ಅಪ್ಪಿ ಸ್ವಾಮಿ), ಎಂ.ಎಸ್. ವಿನಯ್ ಶರ್ಮಾ, ವಿಜಯ್ ಶರ್ಮಾ ಹಾಗೂ ಅಪಾರ ಭಕ್ತಾದಿಗಳು ಭಾಗವಹಿಸಿದ್ದರು .
ವರದಿ: ಅಬಿದ್ ಮಧುಗಿರಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700