ತುಮಕೂರು: ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಬಿ.ತೇಜಸ್ವಿನಿ ವಿರುದ್ಧ ಎಸ್ ಸಿ, ಎಸ್ ಟಿ ದೌರ್ಜನ್ಯ ಕಾಯ್ದೆಯಡಿ ನೀಡಿರುವ ದೂರು ಪ್ರಚೋದನೆಯಿಂದ ನೀಡಿರುವ ದೂರಾಗಿದೆ. ಈ ದೂರನ್ನು ರದ್ದು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾಧಿಕಾರಿಗೆ ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿರುವ ಮನವಿಯಲ್ಲಿ, ತಹಶೀಲ್ದಾರ್ ಮೇಲೆ ಕೆ.ವಿ.ಪರಮೇಶ್ವರಯ್ಯ ಬಿನ್ ವೆಂಕಟೇಶಯ್ಯನವರು ಎಸ್ ಸಿ ಎಸ್ ಟಿ ಕಾಯ್ದೆಯಡಿಯಲ್ಲಿ ದೂರು ನೀಡಿದ್ದಾರೆ. ಇವರು ಬೇರೆಯವರ ಪ್ರಚೋದನೆಯಿಂದ ದೂರು ನೀಡಿದ್ದಾರೆ. ಕೆಲವರು ತಮ್ಮ ವೈಯಕ್ತಿಕ ದ್ವೇಷ ಸಾಧಿಸಿಕೊಳ್ಳಲು ಅಮಾಯಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ.
ತಹಶೀಲ್ದಾರ್ ತೇಜಸ್ವಿನಿಯವರು ಜಾತಿನಿಂದನೆ ಮಾಡಿರುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ೧೨ ಕುಟುಂಬಗಳಿರುವ ಗುಂಡುತೋಪಿನ ಪರಮೇಶ ಮತ್ತು ಅವರ ಕುಟುಂಬಸ್ಥರಿಗೆ ಗಂಜಿ ಕೇಂದ್ರವನ್ನು ತೆರೆಯುವ ಮೂಲಕ ತಹಶೀಲ್ದಾರ್ ಮಾನವೀಯ ಕ್ರಮಕೈಗೊಂಡಿದ್ದರು. ಮಳೆ ಬಿಟ್ಟಾಗ ಸಾರ್ವಜನಿಕ ಬಳಕೆ ಉದ್ದೇಶಕ್ಕಾಗಿ ಸ್ತ್ರಿ ಶಕ್ತಿ ಭವನ ತೆರವುಗೊಳಿಸಿ ಎಂದು ಹೇಳಿದ್ದಾರೆ ಎಂದು ತಹಶೀಲ್ದಾರ್ ಅವರನ್ನು ಸಮರ್ಥಿಸಿಕೊಂಡರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB