nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಿಲಾರ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ ಹೆಚ್. ಅವಿರೋಧ ಆಯ್ಕೆ

    September 19, 2026

    ಬರಪೀಡಿತ ಕ್ಷೇತ್ರದಲ್ಲಿ ಹೇಮಾವತಿ ನೀರಿಗಾಗಿ ಪಟ್ಟು: ದಸರಾ ಉತ್ಸವ ಬಹಿಷ್ಕರಿಸಿದ ಶಾಸಕ ಸುರೇಶ್ ಗೌಡ

    September 19, 2026

    ರಂಗನಾಥಪುರ ಮಾರ್ಗವಾಗಿ ದುರ್ಗದಕೆರೆ, ನಾಗತೀಕೆರೆಗೆ ಎತ್ತಿನಹೊಳೆ ನೀರು: ಶಾಸಕ ಸಿ.ಬಿ.ಸುರೇಶ್‌ ಬಾಬು

    September 19, 2026
    Facebook Twitter Instagram
    ಟ್ರೆಂಡಿಂಗ್
    • ಕಿಲಾರ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ ಹೆಚ್. ಅವಿರೋಧ ಆಯ್ಕೆ
    • ಬರಪೀಡಿತ ಕ್ಷೇತ್ರದಲ್ಲಿ ಹೇಮಾವತಿ ನೀರಿಗಾಗಿ ಪಟ್ಟು: ದಸರಾ ಉತ್ಸವ ಬಹಿಷ್ಕರಿಸಿದ ಶಾಸಕ ಸುರೇಶ್ ಗೌಡ
    • ರಂಗನಾಥಪುರ ಮಾರ್ಗವಾಗಿ ದುರ್ಗದಕೆರೆ, ನಾಗತೀಕೆರೆಗೆ ಎತ್ತಿನಹೊಳೆ ನೀರು: ಶಾಸಕ ಸಿ.ಬಿ.ಸುರೇಶ್‌ ಬಾಬು
    • ಕೊರಟಗೆರೆಗೂ ಬಂತು ಕೆ.ಎಸ್‌.ಆರ್‌.ಟಿ.ಸಿ. ಉಪವಿಭಾಗ ಭಾಗ್ಯ: ಹುಲಿಕುಂಟೆ ಸ.ನಂ. 60 ರಲ್ಲಿ 6 ಎಕರೆ ಜಾಗ ಗುರುತು
    • ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷಾ ಮಾನ್ಯತೆ, ₹32,611 ಕೋಟಿ ಯೋಜನೆಗಳಿಗೆ ಅಸ್ತು!
    • ಔರಾದ್ ತಾಲೂಕಿನ ಖಾಸೆಂಪೂರ ಗ್ರಾಮದಲ್ಲಿ ವಿಬಿ–ಜಿ ರಾಮ್ ಜಿ ಯೋಜನೆಯಡಿ ‘ರೋಜ್ಗಾರ್ ದಿನಾಚರಣೆ’
    • ಹೊಳೆನರಸೀಪುರ: ಸೂರ್ಯ ನಾರಾಯಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2ನೇ ವರ್ಷದ ಉಚಿತ ಬೃಹತ್ ವೈದ್ಯಕೀಯ ಶಿಬಿರ ಯಶಸ್ವಿ
    • ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ: ಒಕ್ಕಲಿಗ ಜನಾಂಗದವರಿಂದ ಆನ್ಲೈನ್ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜನವರಿ 28ರಂದು ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನ
    ತುಮಕೂರು January 27, 2025

    ಜನವರಿ 28ರಂದು ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನ

    By adminJanuary 27, 2025No Comments2 Mins Read
    gubbi veeranna

    ತುಮಕೂರು: ಲೋಕಚರಿತ ರಂಗಕೇಂದ್ರ (ರಿ) ಚಿಕ್ಕದಾಳವಟ್ಟ ಮತ್ತು ಸಮ್ಮತ ಥೀಯೇಟರ್ (ರಿ) ಆಯೋಜಿಸುವ ನಾಟಕ ‘ತಿಂಡಿಗೆ ಬಂದ ತುಂಡೇರಾಯ ‘ ಜನವರಿ 28ರಂದು ತುಮಕೂರಿನ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ  6 ಗಂಟೆಗೆ ನಡೆಯಲಿದೆ.

    ಬರ್ಟೋಲ್ಟ್ ಬ್ರೆಕ್ಟ್ ರಚನೆಯ ಈ ನಾಟಕವನ್ನು ಶಕೀಲ್ ಅಹಮ್ಮದ್ ನಿರ್ದೇಶಿಸಿದ್ದಾರೆ. ಅನುಷ್ ಶೆಟ್ಟಿ, ಮುನ್ನ ಮೈಸೂರು ಸಂಗೀತ ನೀಡಿದ್ದಾರೆ. ರಂಗ ವಿನ್ಯಾಸ / ವಸ್ತ್ರ ವಿನ್ಯಾಸವನ್ನು ಶ್ವೇತಾ ರಾಣಿ ಎಚ್. ಕೆ. ಮಾಡಲಿದ್ದಾರೆ.

    ಶಕೀಲ್ ಅಹ್ಮದ್ : ಲೋಣಿ ಬಿ.ಕೆ. (ಬಿಜಾಪೂರ) ಊರಿನವರಾದ ಶಕೀಲ್ ಅಹ್ಮದ್, ಸಾಂಪ್ರದಾಯಿಕ ಮತ್ತು ಸಮಕಾಲೀನ ರಂಗಭೂಮಿಯ ತಂತ್ರಗಳನ್ನು ಬೆಸೆಯುವುದರ ಮೂಲಕ ತಮ್ಮದೇ ಆದ ರಂಗ ತರಬೇತಿಯನ್ನು ಸೃಷ್ಟಿಸಿದ್ದಾರೆ. ನೀನಾಸಂ ಹಾಗೂ ಸಿಂಗಾಪೂರಿನ ಇಂಟರ್ ಕಲ್ಟರ್ ಥಿಯೇಟರ್ ಇನ್ಸಿಟ್ಯೂಟ್ (ಐ.ಟಿ.ಐ) ನಲ್ಲಿ ಅಭಿನಯ ಕುರಿತು ತರಬೇತಿ ಪಡೆದಿರುತ್ತಾರೆ.

    “ಜನಮನದಾಟ” ತಂಡದಲ್ಲಿ ನಟರಾಗಿ, ಕರ್ನಾಟಕದ ಹಲವು ತಂಡಗಳಲ್ಲಿ ನಟ ಹಾಗೂ ತರಬೇತುದಾರರಾಗಿ ಮತ್ತು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಇವರ ನಿರ್ದೇಶನದ ನಾಟಕಗಳು-ಉಳಿದ ದೇಹಗಳು, ರೇಖೆಗಳು, ಮದುವೆ ಹೆಣ್ಣು, ಉಳಿದ ಸಾಕ್ಷಿಗಳು, ಅಪರಿಚಿತ ಘಳಿಗೆ, ಫಾರ್ ಎ ಬೈಟ್ ಆಫ್ ಫೂಡ್ ಹಾಗೂ ಆನಾಮಿಕನ ಸಾವು.

    ನಾಟಕದ ಕುರಿತು:

    ತಿಂಡಿಗೆ ಬಂದ ತುಂಡೇರಾಯ ಜರ್ಮನ್ ನಾಟಕಕಾರ ಬರ್ಟೋಲ್ಟ್‌ ಬ್ರೆಕ್ಟ್ ಅವರ “The resistible rise of Arthuro Ui” ನಾಟಕವನ್ನು ಆಧರಿಸಿದೆ. ಅದು ಎರಡನೇಯ ವಿಶ್ವಯುದ್ದಕ್ಕೂ ಮೊದಲು. ಜರ್ಮನಿಯಲ್ಲಿ. ಅಡಾಲ್ಫ್ ಹಿಟ್ಲ‌ರ್ ಮತ್ತು ನಾಝಿ ಪಕ್ಷದ ಬೆಳವಣಿಗೆಯ ಸಂಕೇತವಾಗಿ ಹುಟ್ಟಿದ ವಿಡಂಬನಾತ್ಮಕ ನಾಟಕ. ಈ ನಾಟಕದ ಎಲ್ಲಾ ಪಾತ್ರಗಳು ಹಾಗೂ ಘಟನೆಗಳು, ನಾಝಿ ಜರ್ಮನಿಯ ಇತಿಹಾಸದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದೆ.

    ಸಣ್ಣಪುಟ್ಟ ಕೊಲೆ, ಸುಲಿಗೆ, ದರೋಡೆ ಮಾಡಿಕೊಂಡು ಬದುಕಿದ್ದ ತುಂಡೇರಾಯನ ಹೆಸರು, ರಾಜ್ಯದ ಆರ್ಥಿಕ ಸಂಕಷ್ಟದಿಂದಾಗಿ, ಸಮಾಜದ ಭಯರಹಿತ ವಾತಾವರಣದಿಂದಾಗಿ, ಜನರ ಮನಸ್ಸಿನಿಂದ ಮರೆಯಾಗಲಾರಂಬಿಸುತ್ತದೆ. ಸರ್ಕಾರದ ಆಸ್ತಿಯನ್ನು ಖಾಸಗೀಕರಣಗೊಳಿಸುವುದರಲ್ಲಿ ಲಂಚ ಪಡೆದ ಬ್ರಷ್ಟ ರಾಜಕಾರಣಿಯ ಕಥೆ ಕಿವಿಗೆ ಬೀಳುತ್ತಿದ್ದಂತೆ, ಅವನ ಮಹತ್ವಾಕಾಂಕ್ಷೆಯ ಕನಸಿಗೆ ರೆಕ್ಕೆ ಮೂಡಲಾರಂಭಿಸುತ್ತದೆ. ಇದನ್ನೇ ಮೆಟ್ಟಿಲನ್ನಾಗಿಸಿಕೊಳ್ಳುವ ತುಂಡೇರಾಯ ತನ್ನದೇ ಆದ ಪ್ರತ್ಯೇಕ ಗುಂಪು ಕಟ್ಟಿಕೊಂಡು, ದೊಂಬಿ-ಗಲಭೆಗಳನ್ನು ಸೃಷ್ಟಿಸುತ್ತಾ ತನ್ನ ಬುದ್ದಿ ಹಾಗೂ ಬಲಪ್ರಯೋಗದಿಂದ ಅಧಿಕಾರ ಗದ್ದುಗೆ ಹಿಡಿಯುತ್ತಾನೆ. ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾದಂತೆ ಅದನ್ನು ಸಾಧಿಸುವ ಮಾರ್ಗ ಇನ್ನೂ ಹೆಚ್ಚು ಹೆಚ್ಚು ಕ್ರೂರವಾಗುತ್ತಾ ಹೋಗುತ್ತದೆ. ಜನರನ್ನು ಮರುಳು ಮಾಡುತ್ತಾ, ಮರುಳಾಗದ್ದವರನ್ನು ಕೊಲ್ಲುತ್ತಾ, ಒಂದಾದ ಮೇಲೊಂದರಂತೆ ಎಲ್ಲಾ ರಾಜ್ಯಗಳನ್ನು ಕಬಳಿಸುತ್ತಾ, ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಾನೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಬರಪೀಡಿತ ಕ್ಷೇತ್ರದಲ್ಲಿ ಹೇಮಾವತಿ ನೀರಿಗಾಗಿ ಪಟ್ಟು: ದಸರಾ ಉತ್ಸವ ಬಹಿಷ್ಕರಿಸಿದ ಶಾಸಕ ಸುರೇಶ್ ಗೌಡ

    September 19, 2026

    ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ: ಒಕ್ಕಲಿಗ ಜನಾಂಗದವರಿಂದ ಆನ್ಲೈನ್ ಅರ್ಜಿ ಆಹ್ವಾನ

    September 18, 2026

    ಸಾಲ ಸೌಲಭ್ಯ: ಬೆಸ್ತ ಜನಾಂಗದವರಿಂದ ಅರ್ಜಿ ಆಹ್ವಾನ

    September 17, 2026

    Comments are closed.

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಕಿಲಾರ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ ಹೆಚ್. ಅವಿರೋಧ ಆಯ್ಕೆ

    September 19, 2026

    ಪಾವಗಡ : ತಾಲೂಕಿನ ಕಸಬಾ ಹೋಬಳಿಯ ಕಿಲಾರ್ಲಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ರಾಮಚಂದ್ರ…

    ಬರಪೀಡಿತ ಕ್ಷೇತ್ರದಲ್ಲಿ ಹೇಮಾವತಿ ನೀರಿಗಾಗಿ ಪಟ್ಟು: ದಸರಾ ಉತ್ಸವ ಬಹಿಷ್ಕರಿಸಿದ ಶಾಸಕ ಸುರೇಶ್ ಗೌಡ

    September 19, 2026

    ರಂಗನಾಥಪುರ ಮಾರ್ಗವಾಗಿ ದುರ್ಗದಕೆರೆ, ನಾಗತೀಕೆರೆಗೆ ಎತ್ತಿನಹೊಳೆ ನೀರು: ಶಾಸಕ ಸಿ.ಬಿ.ಸುರೇಶ್‌ ಬಾಬು

    September 19, 2026

    ಕೊರಟಗೆರೆಗೂ ಬಂತು ಕೆ.ಎಸ್‌.ಆರ್‌.ಟಿ.ಸಿ. ಉಪವಿಭಾಗ ಭಾಗ್ಯ: ಹುಲಿಕುಂಟೆ ಸ.ನಂ. 60 ರಲ್ಲಿ 6 ಎಕರೆ ಜಾಗ ಗುರುತು

    September 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.