ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಪನೋಂದಣಿ ಕಚೇರಿಯಲ್ಲಿ ಸ್ಟಾಂಪ್ ವೆಂಡರ್ ಗಳದ್ದೆ ಹಾವಳಿಯಾಗುತ್ತಿದ್ದು ಜನ ಸಾಮಾನ್ಯರ ಬಳಿ ಹಣವನ್ನು ದೋಚಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಪ್ರತಿದಿನ ಹಿರಿಯೂರು ತಾಲ್ಲೂಕಿನ ಉಪನೋಂದಣಿ ಕಛೇರಿಗೆ ಸಾವಿರಾರು ಜನರು ತಮ್ಮ ಕೆಲಸಗಳಿಗಾಗಿ ಆಗಮಿಸುತ್ತಾರೆ. ಆದರೆ ಇಲ್ಲಿನ ಸ್ಟಾಂಪ್ ವೆಂಡರ್ ಗಳು ಉಪನೋಂದಣಿ ಕಛೇರಿಗೆ ಬರುವ ಸಾಮಾನ್ಯ ಜನರನ್ನು ಟಾರ್ಗೆಟ್ ಮಾಡಿ ಅವರಿಂದ ಹಣ ಸುಳಿಗೆ ಮಾಡಲಾಗುತ್ತಿದೆ. ಈ ಘಟನೆಗಳನ್ನು ಸರ್ಕಾರಿ ಆಡಳಿತ ಮಂಡಳಿ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹಿರಿಯೂರು ತಾಲ್ಲೂಕಿನ ಉಪನೋಂದಣಿ ಕಛೇರಿಯಲ್ಲಿ ಎಲ್ಲೆಂದರಲ್ಲಿ ಬರಿ ಸ್ಟಾಂಪ್ ವೆಂಡರ್ ಹೆಸರನ್ನು ಬಳಸಿ ಅಧಿಕಾರಿಗಳಿಗೆ ಹಣ ನೀಡಿದರೆ ಮಾತ್ರವೇ ಪತ್ರಗಳು ಸಿಗುತ್ತವೆ ಎನ್ನಲಾಗುತ್ತಿದೆ. ಸಾರ್ವಜನಿಕರ ಹಣದೋಚುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂದಿನ ದಿನಗಳಲ್ಲಿ ಎಲ್ಲವೂ ಆನ್ ಲೈನ್ ಆಗಿರುವುದರಿಂದ ಸ್ಟಾಂಪ್ ವೆಂಡರ್ ಗಳ ಅವಶ್ಯಕತೆ ಸಹ ಬೇಕಾಗಿಲ್ಲ. ಆದರೆ ಇಲ್ಲಿ ಅಧಿಕಾರಿಗಳು ಸಹ ಸ್ಟಾಂಪ್ ವೆಂಡರ್ ಅನ್ನುವ ಬ್ರೋಕರ್ ಗಳ ಮುಖಾಂತರ ಹಣವನ್ನು ದೋಚುತ್ತಿದ್ದಾರೆ. ಸಾರ್ವಜನಿಕರ ಬಳಿ ಸ್ಟಾಂಪ್ ವೆಂಡರ್ ಗಳು ಹಣ ನೀಡಿದರೆ ಮಾತ್ರ ಅಧಿಕಾರಿಗಳು ಪತ್ರಗಳನ್ನು ನೀಡುವುದಾಗಿಯೂ ಹೇಳುತ್ತಿರುವ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ ಕಂಡು ಬಂದಿದೆ .
ಘಟನೆ ಸಂಬಂಧ ತಕ್ಷಣವೇ ಉಪನೋಂದಣಿ ಕಛೇರಿಯ ಮೇಲಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸ್ಥಳೀಯ ಶಾಸಕರು ಈ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕು ಎಂದು ಹಿರಿಯೂರು ತಾಲ್ಲೂಕು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ: ಮುರುಳಿಧರನ್ ಆರ್., ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5