ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯ ವಾಣಿವಿಲಾಸಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಭರಂಗಿರಿ ಮಜರೆ ತಳವಾರಹಟ್ಟಿಯಲ್ಲಿ ಸುಮಾರು 300ಕ್ಕಿಂತಲೂ ಅಧಿಕ ಮನೆಗಳಿದ್ದು, ಇಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿದೆ.
ಇಲ್ಲಿನ ತಳವಾರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆಗೊಂಡು ನಾಲ್ಕು ವರ್ಷಗಳೇ ಕಳೆದರೂ, ಬಿಲ್ ಪಾಸ್ ಆಗಿದ್ದರೂ, ಕುಡಿಯುವ ನೀರಿನ ಸರಿಯಾದ ವ್ಯವಸ್ಥೆಯೇ ಆಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಿನ ಸಮಸ್ಯೆ ಬಗ್ಗೆ ತಳವಾರಹಟ್ಟಿ ಗ್ರಾಮಸ್ಥರು ನಿರ್ಮಿತ ಕೇಂದ್ರದಲ್ಲಿ ವಿಚಾರಿಸಿದರೆ, ಅಧಿಕಾರಿಯಾದ ಪ್ರಕಾಶ್ ರವರು ಬೇಜಾವ್ದಾರಿತನದಿಂದ ಉತ್ತರಿಸಿದ್ದು, ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ನೂ ಇಲ್ಲಿನ ವಾಟರ್ ಸಪ್ಲೆ ಇಂಜನಿಯರ್ ಆದ ರಾಮಚಂದ್ರಪ್ಪ ನವರನ್ನು ವಿಚಾರಿಸಿದರೆ ಅವರು ಕೂಡ ಸರಿಯಾದ ಉತ್ತರವನ್ನು ನೀಡದೇ ಬೇಜವಾಬ್ದಾರಿಯಿಂದ ಉತ್ತರಿಸುತ್ತಿದ್ದಾರೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.
‘ದೀಪದ ಕೆಳಗಡೆ ಕತ್ತಲೆ’ ಎನ್ನುವಂತೆ ಕರ್ನಾಟಕದಾದ್ಯಂತ ಪ್ರಖ್ಯಾತವಾದ ವಾಣಿವಿಲಾಸಸಾಗರ ಜಲಾಶಯದಲ್ಲಿ ನೀರು ಹರಿಯುತ್ತಿದ್ದರೂ, ಇಲ್ಲಿನ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಉಂಟಾಗಿದೆ. ಈ ಗ್ರಾಮದಲ್ಲಿ ಸುಮಾರು 300 ಕ್ಕಿಂತಲೂ ಹೆಚ್ವು ಮನೆಗಳು ಇದ್ದು ಪೈಪ್ ಲೈನ್ ಸಹ ಪಕ್ಕದಲ್ಲಿಯೇ ಇದೆ. ಅದೂ ಅಲ್ಲದೇ ಐದಾರು ಬೋರ್ ವೆಲ್ ಗಳೂ ಇವೆ. ಇಷ್ಟೆಲ್ಲ ವ್ಯವಸ್ಥೆಗಳಿದ್ದರೂ ಗ್ರಾಮಸ್ಥರಿಗೆ ನೀರು ಸಿಗುತ್ತಿಲ್ಲ. ಗ್ರಾಮಸ್ಥರು ಪ್ರತಿದಿನ ಸುಮಾರು ಇಪ್ಪತ್ತು ಕಿ.ಮೀ. ಹೋಗಿ ಕುಡಿಯುವ ನೀರನ್ನು ತರುತ್ತಿರುವ ಸ್ಥಿತಿ ಇದೆ ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುಡಿಯುವ ನೀರಿನ ಘಟಕ ಸ್ಥಾಪನೆಗೊಂಡು ನಾಲ್ಕು ವರ್ಷಗಳೇ ಕಳೆದರೂ ಇದರ ಬಿಲ್ ಸಮೇತ ಪಾಸ್ ಆಗಿದ್ದು ಇಲ್ಲಿಯವರೆಗೂ ಈ ಕುಡಿಯುವ ನೀರಿನ ಘಟಕದ ಪ್ಲಾಟ್ ಫಾರಂ ಸಹ ನಿರ್ಮಾಣ ಮಾಡಿಲ್ಲ , ಇದರ ಬಗ್ಗೆ ಸಂಬಂಧ ಪಟ್ಟ ಸರ್ಕಾರವು ಸಂಬಂಧ ಪಟ್ಟ ಸರ್ಕಾರ ಆಡಳಿತ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಸಂಬಂಧ ಪಟ್ಟ ಮೇಲಾಧಿಕಾರಿಗಳು ಈ ಕೂಡಲೇ ಗ್ರಾಮದ ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ)
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB