ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಪ್ರತಿ ಬುಧವಾರ ಹಾಗೂ ಶನಿವಾರದ ಸಂತೆಗಳು ನಡೆಯುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೊವಿಡ್ ಹಿನ್ನೆಲೆಯಲ್ಲಿ ವಾರದ ಸಂತೆಗಳನ್ನು ರದ್ದುಪಡಿಸಲಾಗಿತ್ತು. ಇದೀಗ ಕೊವಿಡ್ ನಿಯಂತ್ರಣಕ್ಕೆ ಬಂದಿರುವ ಸಂತೆಯನ್ನು ಮತ್ತೆ ಆರಂಭ ಮಾಡಲಾಗಿದೆ.
ಹಿರಿಯೂರು ನಗರಸಭೆ ಆಡಳಿತದ ಅಧಿಕಾರಿಗಳ ಆದೇಶದ ಸಂಖ್ಯೆ ನ. ಸ.ಹಿ.ಕ. ಶಾ. ಸಿ . ಆರ್ ೧/೨೦೨೧-೨೨ ನಗರಸಭೆ ಕಾರ್ಯಾಲಯದ ಆದೇಶದ ಪ್ರಕಾರ ಕೋವಿಡ್ ಮತ್ತು ಓಮಿಕ್ರೋನ್ ಸಾಂಕ್ರಾಮಿಕ ರೋಗವು ಸಹಜ ಸ್ಥಿತಿಗೆ ತಲುಪಿರುವುದರಿಂದ ನಗರಸಭೆ ಕಾರ್ಯಾಲಯದ ಆಡಳಿತ ಅಧಿಕಾರಿಗಳ ಆದೇಶದ ಮೇರೆಗೆ ವಾರದ ಸಂತೆಯನ್ನು ಎ ಪಿ ಎಂಸಿ ಮಾರ್ಕೆಟ್ ನಿಂದ ಮೊದಲಿನಂತೆ ಶನಿವಾರ ಹಿರಿಯೂರು ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿನ ಬನ್ನಿಮಂಟಪ ಸಂತೇಪೇಟೆಯಲ್ಲಿ ಹಾಗೂ ಬುಧವಾರದ ಟಿ.ಬಿ.ಸರ್ಕಲ್ ಬಳಿ ಮೊದಲಿನಂತೆ ಸಂತೆಯನ್ನು ಮಾಡುವಂತೆ ನಗರಸಭೆ ಆದೇಶ ಮಾಡಿತ್ತು.
ಕಳೆದ ಎರಡು ಮೂರು ವರ್ಷಗಳಿಂದ ಕೊರೊಣ ಹಾಗೂ ಓಮಿಕ್ರೋನ್ ಸಾಂಕ್ರಾಮಿಕ ರೋಗದಿಂದ ತರಕಾರಿ ವ್ಯಾಪಾರಿಗಳ ಪರಿಸ್ಥಿತಿ ಗಳು ನೆಲಗುಂದಿದ್ದವು. ನಗರಸಭೆ ಆಡಳಿತ ಅಧಿಕಾರಿಗಳ ಆದೇಶದ ಪ್ರಕಾರ ಇಂದು ಸಂತೆಯಲ್ಲಿ ಎಲ್ಲಾ ವ್ಯಾಪಾರಸ್ಥರು ಸಹ ಬೆಳಿಗ್ಗೆಯಿಂದಲೇ ಸಂತೆಗೆ ತರಕಾರಿಗಳನ್ನು ಬಂಡವಾಳ ಹಾಕಿ ತಂದು ಹಾಕಿದ್ದಾರೆ. ಆದರೆ ಸ್ಥಳ ಬದಲಾವಣೆಯ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರದ ಹಿನ್ನೆಲೆಯಲ್ಲಿ ಸಂತೆಗೆ ಗ್ರಾಹಕರೇ ಇಲ್ಲದೇ ವ್ಯಾಪಾರಸ್ಥರಿಗೆ ಬಹಳ ನಷ್ಟ ಉಂಟಾಗಿದೆ.
ಎರಡು ಮೂರು ವರ್ಷಗಳಿಂದ ಕೊವಿಡ್ ಹಿನ್ನೆಲೆಯಲ್ಲಿ ವ್ಯಾಪಾರಸ್ಥರಿಗೆ ತೀವ್ರ ನಷ್ಟವಾಗಿತ್ತು. ಇದೀಗ ಹಿರಿಯೂರು ತಾಲ್ಲೂಕು ಆಡಳಿತದ ನಿರ್ಲಕ್ಷ್ಯದಿಂದ ವ್ಯಾಪಾರಸ್ಥರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಕ್ಷಣವೇ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB