nammatumakuru

    Subscribe to Updates

    Get the latest creative news from FooBar about art, design and business.

    What's Hot

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ:  ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ

    August 8, 2026

    ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್‌ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ

    August 8, 2026
    Facebook Twitter Instagram
    ಟ್ರೆಂಡಿಂಗ್
    • 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
    • ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ:  ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ
    • ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್‌ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ
    • ರಾಹುಲ್ ಗಾಂಧಿ ಪ್ರಧಾನಿಯಾಗಲಿ:  ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ
    • ಆಗಸ್ಟ್ 9ರಂದು ತಿಪಟೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯೋಗ ಚಾಂಪಿಯನ್ಷಿಪ್ ಸ್ಪರ್ಧೆ
    • ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ
    • ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿ: ಶ್ರೀ ಸಿದ್ಧಲಿಂಗ ಮಹಾಸ್ವಾಮಿ
    • ಹೂ ಲೋಕ,  ಭೂರಮೆಯ  ರಥ :  ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ  ವಾಹ್..!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜಿನ ಭಜನೆ ಪರಂಪರೆ ಉಳಿಸುವ ಕೆಲಸ: ಅನಿತಾ ಸುರೇಂದ್ರ ಕುಮಾರ್
    ಜಿಲ್ಲಾ ಸುದ್ದಿ January 5, 2025

    ಜಿನ ಭಜನೆ ಪರಂಪರೆ ಉಳಿಸುವ ಕೆಲಸ: ಅನಿತಾ ಸುರೇಂದ್ರ ಕುಮಾರ್

    By adminJanuary 5, 2025No Comments2 Mins Read
    anitha surendra kumar

    ಬೆಂಗಳೂರು: ಜಿನ ಭಜನೆ ಇದೊಂದು ಪುರಾತನವಾದ ಸಂಸ್ಕೃತಿಯಾಗಿದ್ದು,  ಈ ಪರಂಪರೆಯನ್ನು ಉಳಿಸಿ ,ಬೆಳೆಸಿ, ಮುಂದಿನ ಪೀಳಿಗೆಗೆ ಕೊಂಡಯುವ ಕೆಲಸವಾಗಿದೆ ಎಂದು ಭಾರತೀಯ ಜೈನ ಮಿಲನ್ ರಾಷ್ಟ್ರೀಯ ಮಹಿಳಾ ಘಟಕದ  ಉಪಾಧ್ಯಕ್ಷರು ಹಾಗೂ ಬೆಂಗಳೂರು  ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ತಿಳಿಸಿದರು.

    ಅವರಿಂದು ಭಾರತೀಯ  ಜೈನ್ ಮಿಲನ ವಲಯ–೮ ರ ಜಿನ ಭಜನಾ ಸೀಸನ್–8 ರ ಫೈನಲ್ ಅಂಗವಾಗಿ ನೃತ್ಯ ಪ್ರದರ್ಶನ ದೊಂದಿಗೆ ಮೆರವಣಿಗೆಗೆ  ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಡುತ್ತಾ,  ಜಿನ ಭಜನೆ ಇದೊಂದು ಪುರಾತನವಾದ  ಪರಂಪರೆ ಇದು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ, ಇದು ಎಲ್ಲರ ಆಶೀರ್ವಾದದಿಂದ ಸ್ಪರ್ಧೆಯ ಸಂಸ್ಕೃತಿ ,ಸಂಸ್ಕಾರಗಳನ್ನು ಉಳಿಸಲು ಸಾಧ್ಯವಾಗಿದೆ ಇದಕ್ಕೆ ದಿಲೀಪ್ ಸುರಾನರವರ ಸೇವೆ ಹಾಗೂ ಕರ್ನಾಟಕ ಜೈನ ಅಸೋಸಿಯೇಷನ್ ಸಹಕಾರ ಸ್ಮರಿಸಿದರು.

    ಜಿನ ಭಜನೆ ವರ್ಷದಿಂದ ವರ್ಷಕ್ಕೆ ಸುಧಾರಣೆ ಕಾಣುತ್ತಿದೆ , ಅನುತೀರ್ಣರಾದವರನ್ನ ಪ್ರೋತ್ಸಾಹಿಸ ಲಾಗುತ್ತಿದೆ, ಸ್ವಯಂ ಭೂ ಸ್ತೋತ್ರ, 24  ತೀರ್ಥಂಕರರ ಸ್ತೋತ್ರ ದೇವರಿಗೆ ಅರ್ಪಿತವಾಗುತ್ತಿದೆ ಎಂದರು.

    ಈ ಹಿಂದೆ ಸ್ಪರ್ಧೆಗೆ ಬಂದವರು ತೀರ್ಪುಗಾರರಾಗಿರುವುದು ಸಂತಸದ ವಿಷಯ. ಸ್ವಯಂ ಭೂಸ್ತೋತ್ರ ಆಚರಣೆಗೆ ತರುವ ಪ್ರಯತ್ನ ಯಶಸ್ವಿಯಾಗಿ ಮುನ್ನಡೆದಿದೆ. ನಮ್ಮ ಸಂಸ್ಕೃತಿಯಲ್ಲಿ ಸಂಗೀತಕ್ಕೆ ಮಹತ್ವದ ಸ್ಥಾನವಿದೆ ಎಂದರು. ಸಂಗೀತದಿಂದ ಸಂಸ್ಕೃತಿ ಪ್ರಚಲಿತವಾಗಲಿದೆ. ಮಕ್ಕಳು ಮೊಬೈಲ್ ಬಿಟ್ಟು ಜಿನ ಸಂಸ್ಕೃತಿಗೆ ಬರುತ್ತಿರುವುದು ಸಂತಸದ ವಿಷಯ, ಇದು ಪರಂಪರೆ ಉಳಿಸುವ ಕೆಲಸವಾಗಿದೆ ಎಂದರು.

    ಈ ಹಿಂದೆ ಜಿನಭಜನೆಗೆ ಮಹತ್ವ ವಿತ್ತು, ಕಾಲ ನಂತರದಲ್ಲಿ ಅನ್ಯ ಸಂಸ್ಕೃತಿಯ ದಾಳಿಯಿಂದ ನಶಿಸಿದ್ದು, ಈಗ ಜಿನಭಜನ ಸಂಸ್ಕೃತಿ ಮರುಕಳಿಸಿದೆ , ಇದು ದೇಶದಲ್ಲಿನ  ಕೆಟ್ಟ ಕೊಬ್ಬಿನ ಅಂಶ ತೊಡೆದು ಉತ್ತಮ ಆರೋಗ್ಯ, ಮಾನಸಿಕ ಅಂಶ ರೂಪಿಸಲಿದೆ ಎಂದ ಅವರು ,ಈ ಬಗ್ಗೆ ಸಂಶೋಧನೆಗಳು ಉತ್ತಮ ಫಲಿತಾಂಶ ನೀಡುವೆ ಎಂದರು .

    ಇದೇ ಸಂದರ್ಭದಲ್ಲಿ ಉಜಿರೆಯ ಸೋನಿವರ್ಮ ಕಲಾ ವೈಭವ ತಂಡದ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಕಾಲ ವೈಭವ ತಂಡದ ಸೋನಿವರ್ಮ,   ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾಧಾ ಧರ್ಮಸ್ಥಳ ಸುರೇಂದ್ರ ಕುಮಾರ್   ಕಾರ್ಯಕ್ರಮ ಉದ್ಘಾಟಿಸಿದರು .

    ಈ ಸಂದರ್ಭದಲ್ಲಿ   ಕಲಾ ವೈಭವ ತಂಡದ ಸೋನಿ ವರ್ಮ,   ಶ್ರದ್ಧಾ ಅಮಿತ್, ವಿಲಾಸ್ ಪಾಸಣ್ಣನವರ್,   ಶೀಲಾ  ಅನಂತರಾಜು  , ಹುಬ್ಬಳ್ಳಿ ಜೈನ ಮಹಿಳಾ ಸಮಾಜದ ತ್ರಿಶಾಲ ಮಾಲಗುತ್ತಿ,ಭಾರತೀಯ ಜೈನ್ ಮಿಲನ್ ವಲಯ ಎಂಟರ ಸುದರ್ಶನ್ ಜೈನ್, ಸೋಮಶೇಖರ ಶೆಟ್ಟಿ ,ಸುಭಾಷ್ ಚಂದ್ರ ಜೈನ್ ,ಜೀವoದರ್ ಕುಮಾರ್ , ಶ್ಯಾಮಲಾ ಧರಣಿಂದ್ರಿಯ್ಯಾ, ಪ್ರಶಾಂತ್ ಉಪಾಧ್ಯಾಯ, ಅಶೋಕ್ ಬಾಳೆಕಾಯಿ, ಸುಮತಿ ಕುಮಾರ್ ಎಚ್ .ಪಿ.,ಭರತ್ ರಾಜ್ ಹಜಾರೆ, ಯಶೋಧರ ಹೆಗಡೆ ,ಪೂರ್ಣಿಮಾ ಅಶೋಕ್ ಕುಮಾರ್, ಮಹಾವೀರ್ ಶಹಪುರ, ಸಿ.ಎಸ್ .ನಾಗರಾಜ್ , ಚಂದ್ರಪ್ರಕಾಶ್, ಕೆ ಯುವರಾಜ್ ಬಂಡಾರಿ, ಡಾ. ಭರತೇಶ್ ಜಗ ಶೆಟ್ಟಿ ,ಎಂ ರತ್ನ ರಾಜು , ಬೆಂಗಳೂರು  ಜೈನ  ಅಸೋಸಿಯೇಷನ ನ ನಿರ್ದೇಶಕರು ಗಳಾದ.    ಎಂ.ಎಂ .ಜಿನೇಂದ್ರ, ಮಾಳ ಹರ್ಷೇಂದ್ರ ಕುಮಾರ್, ಮಂಚಿನಹಳ್ಳಿ ರಾಜೇಶ್,   ಡಾ.ನೀರಜಾ ನಾಗೇಂದ್ರ ಕುಮಾರ್  ,ಕರ್ನಾಟಕ ಜೈನ ಅಸೋಸಿಯೇಷನ್  ಹಲವಾರು ನಿರ್ದೇಶಕರುಗಳು, ಜೈನ ಸಮಾಜದ ಮುಖಂಡರುಗಳು ,ವಿವಿಧ ಜಿಲ್ಲಾ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ,ವಿವಿಧ ಮಹಿಳಾ ಸಂಘಟನೆಗಳು ಮುಖ್ಯಸ್ಥರುಗಳು, ಪದಾಧಿಕಾರಿಗಳು ಸೇರಿದಂತೆ ಶ್ರಾವಕ- ಶ್ರಾವಕಿಯರು ಭಾಗವಹಿಸಿದ್ದರು.  ಇದೇ ಸಂದರ್ಭದಲ್ಲಿ ಸ್ವಯಂ ಭೂ ಸ್ತೋತ್ರ ಪಠಣ ಮಾಡಲಾಯಿತು. ಟಿ.ವಿ .ನಿರೂಪಕಿ ನಮಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.  ಸೋನಿ ವರ್ಮ ತಂಡದಿಂದ ನೃತ್ಯ ರೂಪಕ ಪ್ರದರ್ಶಿಸಲಾಯಿತು.

    ವರದಿ: ಜೆ.ರಂಗನಾಥ ತುಮಕೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಭೇಟಿ: ಶಾಶ್ವತ ಆಸ್ತಿ ನಿರ್ಮಾಣಕ್ಕೆ ಒತ್ತು ನೀಡಲು ಸೂಚನೆ

    August 8, 2026

    ಸ್ತನ್ಯಪಾನ ಬೆಂಬಲಿಸಿ, ಸದೃಢ ಜಗತ್ತು ನಿರ್ಮಿಸಿ: ಡಾ.ರವಿಕುಮಾರ್ ಕರೆ

    August 7, 2026

    ಆಗಸ್ಟ್ 8ರಂದು ಸರಗೂರಿನಲ್ಲಿ ಹೆಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕು ಮಾದರ ಮಹಾಸಭಾ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ

    August 7, 2026

    Comments are closed.

    Our Picks

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ವೆಚ್ಚ 2021 ರಿಂದ ಐದು ಪಟ್ಟು ಹೆಚ್ಚಾಗಿದೆ. ರಾಜ್ಯಸಭೆಗೆ ವಿದೇಶಾಂಗ…

    ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ:  ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ

    August 8, 2026

    ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್‌ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ

    August 8, 2026

    ರಾಹುಲ್ ಗಾಂಧಿ ಪ್ರಧಾನಿಯಾಗಲಿ:  ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ

    August 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.