ಹಿರಿಯೂರು: ಅಭಿಮತ ವಾರಪತ್ರಿಕೆ ಯ ಹದಿನಾರನೇಯ ವರ್ಷದ ಪತ್ರಿಕೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾಜಿ ಸಚಿವ ಜಿ.ಎಸ್.ಮಂಜುನಾಥ್ ಕೊರೊನಾ ವಾರಿಯರ್ಸ್ ಗೆ ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಅವರು, ಪೌರಕಾರ್ಮಿಕರು ಹಗಲಿರುಳು ಸ್ವಚ್ಚತೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಳೆದ 2019 ರಲ್ಲಿ ಪ್ರಥಮವಾಗಿ ಕೊರೊನಾ ಎಂಬ ಮಹಾಮಾರಿಯು ಅಪ್ಪಳಿಸಿದಾಗ ಎರಡೂವರೆ ತಿಂಗಳು , ಮೂರು ತಿಂಗಳು ನಾವು ಯಾರು ಸಹ ಮನೆಯಿಂದ ಹೊರಗಡೆ ಬರಲು ಸಹ ಭಯ ಪಡುತ್ತಿದ್ದೆವು . ಆ ಸಮಯದಲ್ಲಿಯೂ ಪೌರಕಾರ್ಮಿಕರು ಹಗಲಿರುಳು ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಡಾಕ್ಟರ್ ಗಳು , ನರ್ಸ್ ಗಳು , ರಾಜಕೀಯ ವ್ಯಕ್ತಿಗಳು, ಬಿಟ್ಟರೆ ಯಾರು ಸಹ ಅಂತಹ ಸಂದರ್ಭದಲ್ಲಿ ಹೊರಗಡೆ ಬರಲು ಸಾಧ್ಯವೆ ಇಲ್ಲ. ಐದು ಮೀಟರ್ , ಹತ್ತು ಮೀಟರ್ ದೂರ ಇರುವಂತಹ ಪರಿಸ್ಥಿತಿ ಉಂಟಾಗಿತ್ತು. ಅಂತಹ ಸಂದರ್ಭದಲ್ಲಿ ಪೌರಕಾರ್ಮಿಕರು ದಿನನಿತ್ಯ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಯಾವುದೇ ಸರ್ಕಾರಗಳು ಬಂದರೂ, ಪೌರಕಾರ್ಮಿಕರ ಸಮಸ್ಯೆಗಳು ಪರಿಹಾರವಾಗದೇ ಬೆಟ್ಟದಂತೆ ನಿಂತಿದೆ. ರಾಜಕಾರಣಿಗಳಿಗೆ ಬೇಕಾಗಿರುವುದು ಓಟು ಅಷ್ಟೇ ಜನಗಳ ಸಮಸ್ಯೆಗಳಲ್ಲ , ಪೌರಕಾರ್ಮಿಕರು ಮಾಡುವಂತಹ ಕೆಲಸ ಮತ್ತೊಬ್ಬರು ಮಾಡಲು ಸಾಧ್ಯವಿಲ್ಲ ಎಂದರು.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ-ದಾವಣಗೆರೆ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB