ತುಮಕೂರು: ನಮ್ಮ ಭಾರತೀಯ ಸಂಪ್ರದಾಯ ಮತ್ತು ಜ್ಞಾನವು ಅತ್ಯಂತ ಉತ್ಕೃಷ್ಟವಾದದ್ದು, ಜೊತೆಗೆ ವೈಜ್ಞಾನಿಕತೆಯನ್ನು ಹೊಂದಿರುವಂತಹದು, ಇಂತಹ ಉತ್ಕೃಷ್ಟವಾದ ಜ್ಞಾನವನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಹಾಗೂ ಈ ಭಾರತೀಯ ಸಂಸ್ಕೃತಿಯ ಅನಾವರಣಕ್ಕಾಗಿ ಒಂದು ಆಶ್ರಮವನ್ನು ಸ್ಥಾಪನೆ ಮಾಡಬೇಕು ಎನ್ನುವ ಉದ್ದೇಶದಿಂದ 21 ದಿನಗಳ ಕಾಲ ಉಪವಾಸ ಮತ್ತು ಧ್ಯಾನ ಅನುಷ್ಠಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವ ಯೋಗಿ ತಿಳಿಸಿದರು.
ಮಾಚ್೯ 10 ರಿಂದ 30 ರವರಿಗೆ ನಿರಂತರವಾಗಿ 21 ದಿನಗಳ ಈ ವಿಶೇಷ ಅನುಷ್ಠಾನ ಇರುತ್ತದೆ. ಈ ಅನುಷ್ಠಾನದ ನಂತರ ಮಾಚ್೯ 31 ಮತ್ತು ಏಪ್ರಿಲ್ 1 ಮತ್ತು 2 ರಂದು ಈ 3 ದಿನಗಳ ಕಾಲ ಸಂಪೂರ್ಣ ನಿಸರ್ಗದಲ್ಲಿ ಅಗಾಧವಾದ ಬದಲಾವಣೆ ಆಗುವಂತಹದು. ಏಕೆಂದರೆ ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ಯುಗಾದಿಯೇ ನಮಗೆಲ್ಲ ಹೊಸ ವಷ೯ ಅಂದು ಸಂಪೂರ್ಣ ನಿಸರ್ಗವೇ ಬದಲಾವಣೆಯನ್ನು ಹೊಂದುತ್ತಿರುವ ಸಮಯ ಅಂತಹ ಸಮಯದಲ್ಲಿ ಅತ್ಯಂತ ಉತ್ಕೃಷ್ಟವಾದ ಶಕ್ತಿ ಈ ನಿಸರ್ಗದಲ್ಲಿ ಇರುವಂತಹದು. ಹೀಗಾಗಿ ಈ 3 ದಿನಗಳ ಕಾಲ ತುಮಕೂರು ಜಿಲ್ಲೆಯ ಸಿದ್ಧರ ಬೆಟ್ಟದ ನಾಡಿನಲ್ಲಿ ಗುಹೆಯಲ್ಲಿ ತಪಸ್ಸು ಧ್ಯಾನವನ್ನು ಈ ನಾಡಿಗಾಗಿ, ಲೋಕ ಕಲ್ಯಾಣಕ್ಕಾಗಿ, ಈ ನಾಡಿಗೆ ಮಳೆ, ಬೆಳೆ ಸಮೃದ್ಧವಾಗಿ ಸವ೯ ಜನಾಂಗದವರು ಶಾಂತಿಯಿಂದ ಬದುಕನ್ನು ಸಾಗಿಸಲಿ ಎನ್ನುವ ಉದ್ದೇಶದಿಂದ ಈ ಅನುಷ್ಠಾನ ಮತ್ತು ಧ್ಯಾನವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ 3 ದಿನಗಳ ಕಾಲ ಗುಹೆಯನ್ನು ಪ್ರವೇಶ ಮಾಡಿ 3 ದಿನಗಳ ನಂತರ ಗುರುಗಳು ಭಕ್ತರಿಗೆ ದಶ೯ನ ನೀಡುವಂತಹದಾಗಿದೆ. ನಂತರ ಆ 3 ದಿನಗಳ ಕಾಲ ಆ ಗುಹೆಯಲ್ಲಿ ಧ್ಯಾನದಲ್ಲಿ ಪಡೆದ ಜ್ಞಾನವನ್ನು ನಾಡಿನ ಎಲ್ಲಾ ಜನರಿಗೆ ಹಂಚುವ ಸದುದ್ದೇಶವನ್ನು ನಾವು ಹೊಂದಿದೇವಿ, ಕಾರಣ ತಾವೆಲ್ಲರೂ ಈ 21 ದಿನಗಳ ಅನುಷ್ಠಾನ ಮತ್ತು 3 ದಿನಗಳ ಧ್ಯಾನ ಪ್ರಕ್ರಿಯೆಯಲ್ಲಿ ತಾವುಗಳೆಲ್ಲರೂ ಕೈಜೋಡಿಸಿ ಈ ಒಂದು ಜ್ಞಾನವನ್ನು ನಮ್ಮ ಭಾರತೀಯ ಸಂಪ್ರದಾಯದ ಸಂಸ್ಕೃತಿಯ ಜ್ಞಾನವನ್ನು ಪಸರಿಸಲು ನಮ್ಮೊಂದಿಗೆ ಕೈಜೋಡಿಸಿ ಎಂದು ಅವರು ಮನವಿ ಮಾಡಿಕೊಂಡರು.
ವರದಿ: ವರದಿ: ದಿನೇಶ್ ಡಿ.ಎನ್. ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5