ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಜೈನ ಸಮಾಜದ ವತಿಯಿಂದ 2621 ನೇ ಶ್ರೀ ಭಗವಾನ್ ಮಹಾವೀರ ಜಯಂತಿ ಆಚರಣೆಯನ್ನು ಬಹಳ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಬೆಳ್ಳಿ ರಥದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ, ತಮ್ಮ ಧರ್ಮದ ತತ್ವ ಸಿದ್ಧಾಂತಗಳ ಘೋಷಣೆಯೊಂದಿಗೆ, ಅಹಿಂಸಾ ಪರಮೋಧರ್ಮ, ಬದುಕಿ ಬದುಕಲು ಬಿಡಿ, ಎಂಬ ಸಂದೇಶವನ್ನು ಸಾರುತ್ತ, ಮಹಿಳಾ ಸಮಾಜದ ಪದಾಧಿಕಾರಿಗಳು, ವಿಶೇಷವಾದ ಉಡುಗೆಗಳನ್ನು ಧರಿಸಿ ಬಹಳ ವಿಶೇಷವಾಗಿ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಮಾಯಸಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರಿಗೆ, ಮಜ್ಜಿಗೆ, ಕೋಸಂಬರಿ, ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೈನ ಸಮಾಜದ ಅಧ್ಯಕ್ಷರಾದ ಚಂದ್ರಪ್ರಭು. ಕಾರ್ಯದರ್ಶಿ ಎಂ.ಪಿ.ಮದನ್ ಕುಮಾರ್. ಉಪಾಧ್ಯಕ್ಷ ಮಹಾವೀರ ಬಾಬು. ಮುಖಂಡರಾದ ವಿಪುಲ್ ಜೈನ್. ಎಂ.ಬಿ.ಪ್ರಕಾಶ್ ಮತ್ತು ಮಹಿಳಾ ಸಮಾಜದ ಅಧ್ಯಕ್ಷರಾದ ಸುಮತಿ ಪ್ರಕಾಶ್, ಶಾಂತಲಾ ಪ್ರಭು, ಆಶಾ ಚಂದು, ಆನಂದ ಮದನ್ ಕುಮಾರ್, ಶೈಲ ಪ್ರಸಾದ್ ಜೈನ್, ಸೇರಿದಂತೆ ಇನ್ನೂ ಹಲವಾರು ಜೈನ ಸಮಾಜದ ಮುಖಂಡರು, ಗ್ರಾಮಸ್ಥರು, ಪಾಲ್ಗೊಂಡಿದ್ದರು.
ವರದಿ: ಸಚಿನ್ ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5