ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಟ್ಟ ಶಂಭೋನಹಳ್ಳಿ ಗ್ರಾಮದ ಸರ್ವೇ ನಂಬರ್ 52,10,11,14 ,15 ರ ಜಾಮೀನಿನ ರೈತರು ಜಮೀನಿಗೆ ಸಂಚಾರ ಮಾಡಲು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದ ರೈತರು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ನಮ್ಮತುಮಕೂರು ವರದಿ ಬೆನ್ನಲ್ಲೇ ಒತ್ತುವರಿ ತೆರವು ಮಾಡುವಲ್ಲಿ ಕೊರಟಗೆರೆ ತಾಲ್ಲೂಕು ಆಡಳಿತ ಯಶಸ್ವಿಯಾಗಿದೆ .
ಗ್ರಾಮದ ರೈತರು ಮತ್ತು ಸಾರ್ವಜನಿಕರು ತಹಶೀಲ್ದಾರ್ ರವರಿಗೆ ದಿನಾಂಕ : 17/06/2020 ರ ಹಿಂದಿನಿಂದಲೂ ಮನವಿ ಸಲ್ಲಿಸಿದ್ದರೂ ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಮೂರ್ನಾಲ್ಕು ಬಾರಿ ಸರ್ವೆ ಮಾಡಿ ನಕಾಶೆ ರಸ್ತೆಯನ್ನು ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದಾಗ ಸರ್ವೇ ನಂಬರ್ 52 ರ ಖಾತೆ ಮಾಲೀಕ ಮತ್ತು ಅವರ ಕುಟುಂಬಸ್ತರು ತೊಂದರೆ ಮಾಡುತ್ತಿದ್ದರು. ಈ ಎಲ್ಲಾ ಸಮಸ್ಯೆಗಳು ತಹಶೀಲ್ದಾರ್ ನಹೀದಾ ಜಂ ಜಂ ರವರ ಗಮನಕ್ಕೆ ನಮ್ಮ ವಾಹಿನಿಯ ವರದಿಗಾರರು ತಂದಿದ್ದರು. ನಂತರ ತಹಶೀಲ್ದಾರ್ ಅವರು ದಿನಾಂಕವನ್ನು ನಿಗದಿಪಡಿಸಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಿ ಕಾನೂನು ರೀತಿಯ ಕ್ರಮ ಕೈಗೊಂಡು ನಕಾಶೆ ರಸ್ತೆ ಒತ್ತುವರಿ ತೆರವು ಮಾಡಿಸಿದರು.
ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದ ಅಧಿಕಾರಿಗಳನ್ನು ಅಡ್ಡಿಪಡಿಸಿದ ಬಿಗುವಿನ ವಾತಾವರಣ ಸೃಷ್ಟಿಸಿದ ಗ್ರಾಮ ಪಂಚಾಯತಿ ಸದಸ್ಯ ನಟೇಶ್ ಮತ್ತು ಅವರ ತಾಯಿಯನ್ನು ಸ್ಥಳದಲ್ಲೇ ಇದ್ದ ಕೊರಟಗೆರೆ ಪೋಲೀಸ್ ಅಧಿಕಾರಿ ಬಂಧಿಸಿ ತೆರವು ಕಾರ್ಯಾಚರಣೆ ಮುಗಿದ ನಂತರ ಅವರಿಗೆ ತಿಳುವಳಿಕೆಯನ್ನು ನೀಡಿ ಬಿಡುಗಡೆ ಮಾಡಿದರು.
ಜೆಸಿಬಿ ಯಂತ್ರ ಮೂಲಕ ಒತ್ತುವರಿ ತೆರವು ಮಾಡಿ, ಗ್ರಾಮದ ರೈತರಿಗೆ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ಗಲಾಟೆಗಳನ್ನೂ ಮಾಡಿಕೊಳ್ಳದಂತೆ ಅನ್ಯೋನ್ಯವಾಗಿರಲು ತಹಶೀಲ್ದಾರ್ ನಾಹೀದ ಜಂ ಜಂ ಮತ್ತು ಸಿಪಿಐ ಸಿದ್ದರಾಮೇಶ್ವರ್ ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎ ಜಿ ರಾಜು, ಪಿಎಸ್ ಐ ನಾಗರಾಜು, ಎಎಸ್ ಐ ರಾಮಚಂದ್ರಯ್ಯ, ಕಂದಾಯ ಇಲಾಖೆ ಅಧಿಕಾರಿಗಳಾದ ಪ್ರತಾಪ್, ತಾಲ್ಲೂಕು ಸರ್ವೇ ಅಧಿಕಾರಿ ನಾಗರಾಜು, ರಮೇಶ್,ಕಲ್ಪನಾ, ವೀಣಾ, ಕಾಳಸೆ ಗೌಡ,ಸುನೀಲ್, ಗ್ರಾಮ ಸಹಾಯಕರು,ಪೋಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ರೈತರು,ಸಾರ್ವಜನಿಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz