ಕೊರಟಗೆರೆ : ರಾಜ್ಯ ಹೆದ್ದಾರಿ ಸಮೀಪದ ಎಲೈಟ್ ಫ್ಯಾಮಿಲಿ ರೇಸಾರ್ಟ್ ನಲ್ಲಿ ನಡೆಯುತ್ತಿದ್ದ ಹೈಟೆಕ್ ಜೂಜು ಅಡ್ಡೆಯ ಮೇಲೆ ಮಧುಗಿರಿ ಡಿವೈಎಸ್ಪಿ ರಾಮಕೃಷ್ಣಯ್ಯ ಮತ್ತು ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ನೇತೃತ್ವದ ಪೊಲೀಸರ ತಂಡದದಿಂದ ದಾಳಿ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಹಂಚಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ರಾಜ್ಯ ಹೆದ್ದಾರಿಗೆ ಹೊಂದಿಕೊಡಿರುವ ಎಲೈಟ್ ಫ್ಯಾಮಿಲಿ ರೆಸಾರ್ಟ್ ನಲ್ಲಿ ಅಕ್ರಮವಾಗಿ ಜೂಜು ಆಟ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊರಟಗೆರೆ ಪೊಲೀಸರ ತಂಡ ದಾಳಿ ನಡೆಸಿ 15 ಜನ ಹೈಟೆಕ್ ಜೂಜು ಆಟಗಾರರನ್ನು ಬಂಧಿಸಿದ್ದಾರೆ.
ಎಲೈಟ್ ಫ್ಯಾಮಿಲಿ ರೆಸಾರ್ಟ್ ನಲ್ಲಿ ಇಸ್ಪಿಟ್ ಆಟ ಆಡುತ್ತಿದ್ದ ಬೆಂಗಳೂರು, ತುಮಕೂರು, ಮಧುಗಿರಿ ಮತ್ತು ಕೋಳಾಲದ ಹೈಟೇಕ್ ಜೂಜು ಕೋರರಿಂದ 7 ಲಕ್ಷದ 650 ರೂ. ನಗದು, 15 ಮೊಬೈಲ್ ಮತ್ತು 4 ಕಾರುಗಳನ್ನು ಕೊರಟಗೆರೆ ಪೊಲೀಸರ ತಂಡ ವಶಕ್ಕೆ ಪಡೆದು 15 ಜನ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಎಲೈಟ್ ಫ್ಯಾಮಿಲಿ ರೇಸಾರ್ಟ್ ಮೇಲೆ ನಡೆದ ದಾಳಿಯಲ್ಲಿ ಮಧುಗಿರಿ ಡಿವೈಎಸ್ಪಿ ರಾಮಕೃಷ್ಣಯ್ಯ, ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ, ಬಡವನಹಳ್ಳಿ ಸಿಪಿಐ ಹನುಮಂತರಾಯಪ್ಪ, ಸಿಬ್ಬಂದಿಗಳಾದ ಧರ್ಮಪಾಲನಾಯ್ಕ, ಶಶಿಕುಮಾರ್, ಸತೀಶ್ ಸೇರಿದಂತೆ ಇತರರು ಭಾಗವಹಿಸಿದ್ದಾರೆ.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB